Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinay Kashappanavar

Vinay Kashappanavar

Author - TV9 Kannada

vinaykumar.kashappanavar@tv9.com
ಐಸ್ ಕ್ರೀಂ ಪ್ರಿಯರೇ ಎಚ್ಚರ..ಎಚ್ಚರ: ಸಿಕ್ಕಾಪಟೆ ಬಿಸಿಲೆಂದು ಬಾಯಿ ಚಪ್ಪರಿಸಿವ ಮುನ್ನ ಹುಷಾರ್..!

ಐಸ್ ಕ್ರೀಂ ಪ್ರಿಯರೇ ಎಚ್ಚರ..ಎಚ್ಚರ: ಸಿಕ್ಕಾಪಟೆ ಬಿಸಿಲೆಂದು ಬಾಯಿ ಚಪ್ಪರಿಸಿವ ಮುನ್ನ ಹುಷಾರ್..!

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಐಸ್ ಕ್ರೀಂ ಫೆವರೇಟ್ . ಬೇಸಿಗೆ ಶುರುವಾದ್ರೆ ಎಲ್ಲರೂ ಐಸ್ ಕ್ರೀಂ ಮೊರೆ ಹೋಗುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಐಸ್ ಕ್ರೀಂ ಬಗ್ಗೆಯೂ ಸಾಕಷ್ಟು ದೂರು ಕೇಳಿ ಬಂದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯು ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಐಸ್ ಕ್ರೀಂ ಸ್ಯಾಂಪಲ್ಸ್ ಪಡೆಯಲು ಮುಂದಾಗಿದೆ. hಈಗಾಗಿ ಬೇಸಿಗೆ ಟೈಮ್ ನಲ್ಲಿ ಬಾಯಾರಿಕೆ ಎಂದು ಬಾಯಿ ಚಪ್ಪರಿಸಿ ಕೂಲ್ ಕೂಲ್ ಐಸ್ ಕ್ರೀಂ ತಿನ್ನುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸುವುದು ಬೆಸ್ಟ್ ಎನ್ನುವಂತಾಗಿದೆ.

ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ

ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ

ಬೆಂಗಳೂರು ಸೇರಿ ಹಲವೆಡೆ ಆಹಾರ ಇಲಾಖೆ ಪನ್ನೀರ್​ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್​ಗೆ ಕಳುಹಿಸಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದೀಗ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆ ಕೈಸೇರಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ. ಹೀಗಾಗಿ ಪನ್ನೀರ್​​​​​ ಪ್ರಿಯರಿಗೆ ಶಾಕ್​ ಉಂಟಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ: ವೈರಲ್ ಆಗ್ತಿವೆ ಎಸ್​ಎಸ್​ಎಲ್​ಸಿ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ

ವಿದ್ಯಾರ್ಥಿಗಳೇ ಗಮನಿಸಿ: ವೈರಲ್ ಆಗ್ತಿವೆ ಎಸ್​ಎಸ್​ಎಲ್​ಸಿ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ

ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ ಎಸ್​ಎಸ್​​ಎಲ್​​ಸಿ ಪರೀಕ್ಷೆ. ಈ ಪರೀಕ್ಷೆಗಳು ರಾಜ್ಯದಲ್ಲಿ ಶುರುವಾಗಿದ್ದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮುಂದಾಗಿದ್ದಾರೆ. ಆದರೆ, ಈ ನಡವೆ ಕೆಲ ಕಿಡಗೇಡಿಗಳು ಎಸ್ಎಸ್ಎಲ್​ಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಟವಾಡಲು ಮಂದಾಗಿದ್ದಾರೆ. ನಕಲಿ ಪ್ರಶ್ನೆಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ವಂಚನೆ ಎಸಗುತ್ತಿದ್ದಾರೆ.

‘ತುಂಡು ಬಟ್ಟೆ ಧರಿಸಿದರೆ ನರಕಕ್ಕೆ ಹೋಗುತ್ತಿ’: ಶಾಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯ ಮಾತು ವೈರಲ್​

‘ತುಂಡು ಬಟ್ಟೆ ಧರಿಸಿದರೆ ನರಕಕ್ಕೆ ಹೋಗುತ್ತಿ’: ಶಾಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯ ಮಾತು ವೈರಲ್​

ಚಾಮರಾಜನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ವಿಜ್ಞಾನ ಪ್ರದರ್ಶನದ ಮಾದರಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಬುರ್ಖಾ ಮತ್ತು ತುಂಡು ಬಟ್ಟೆಗಳನ್ನು ಧರಿಸಿದ ಎರಡು ಗೊಂಬೆಗಳನ್ನು ಬಳಸಿ, ಈ ರೀತಿಯಾದ ಉಡುಪುಗಳನ್ನು ಧರಿಸಿದರೇ ಸಾವಿನ ನಂತರ ಏನೆಲ್ಲ ಆಗುತ್ತದೆ ಎಂದು ವಿದ್ಯಾರ್ಥಿನಿ ವಿವರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆ ಶಾಲೆಯ ಶಿಕ್ಷಣ ಪದ್ಧತಿಯನ್ನು ಪ್ರಶ್ನಿಸಿದ್ದಾರೆ.

ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ

ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ

ತೊಗರಿ ಬೇಳೆಯಲ್ಲಿ ಕೇಸರಿ ಬೇಳೆ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಕೇಸರಿ ಬೇಳೆ ವಿಷಕಾರಿಯಾಗಿದ್ದು, ಅದರ ಸೇವನೆಯಿಂದ ಪಾರ್ಶ್ವವಾಯು, ಅಂಗವೈಕಲ್ಯ, ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಸಿದೆ. ಜೇನುತುಪ್ಪದಲ್ಲೂ ರಾಸಾಯನಿಕ ಬಣ್ಣ ಬಳಕೆಯ ಬಗ್ಗೆಯೂ ದೂರುಗಳು ಬಂದಿವೆ. ಆದ್ದರಿಂದ, ಆಹಾರ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್​ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ

ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್​ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ

ಹೋಳಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕೆಮಿಕಲ್ ಮಿಶ್ರಿತ ಹಾನಿಕಾರಕ ಬಣ್ಣಗಳ ಮಾರಾಟ ಹೆಚ್ಚಾಗಿವೆ. ಇವು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರು ಚರ್ಮದ ರಕ್ಷಣೆಗೆ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಬಳಸಲು ಸಲಹೆ ನೀಡಿದ್ದಾರೆ. ಕೃತಕ ಬಣ್ಣಗಳ ಬಳಕೆಯನ್ನು ಕಡಿಮೆ ಮಾಡಿ, ಸುರಕ್ಷಿತ ಹಬ್ಬ ಆಚರಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ಫಿಟ್ನೆಸ್​, ಅತಿಯಾದ ಮದ್ಯಪಾನ ಕಿಡ್ನಿ ಸಮಸ್ಯೆಗೆ ಕಾರಣವಾ? ತಜ್ಞರು ಹೇಳುವುದೇನು?

ಫಿಟ್ನೆಸ್​, ಅತಿಯಾದ ಮದ್ಯಪಾನ ಕಿಡ್ನಿ ಸಮಸ್ಯೆಗೆ ಕಾರಣವಾ? ತಜ್ಞರು ಹೇಳುವುದೇನು?

ಹೆಚ್ಚುತ್ತಿರುವ ಫಿಟ್‌ನೆಸ್ ಕ್ರೇಜ್, ಅತಿಯಾದ ಡಯಟ್ ಮತ್ತು ವ್ಯಾಯಾಮದಿಂದಾಗಿ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸ್ಲಿಮ್ ಆಗುವ ಹಠದಿಂದ ಅನೇಕ ಯುವಕರು ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಅತಿಯಾದ ಮದ್ಯಪಾನ ಮತ್ತು ಮಾತ್ರೆಗಳ ಸೇವನೆಯು ಕೂಡ ಮೂತ್ರಪಿಂಡಗಳಿಗೆ ಹಾನಿಕಾರಕ. ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಮೂಲಕ ಮೂತ್ರಪಿಂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಂದು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಸಿಂಚನ: ಇನ್ನೆಷ್ಟು ದಿನ ಇರಲಿದೆ ಮಳೆ?

ಇಂದು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಸಿಂಚನ: ಇನ್ನೆಷ್ಟು ದಿನ ಇರಲಿದೆ ಮಳೆ?

ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲ ಧಗೆಯಿಂದ ಬೇಸತ್ತ ಜನರಿಗೆ ನೆಮ್ಮದಿ ತಂದಿದೆ. ರಾಜ್ಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ. ಮಂಗಳೂರು ಮತ್ತು ಹಾಸನದಲ್ಲಿಯೂ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆಯಿದ್ದು, ಮಾರ್ಚ್ 15ರ ನಂತರ ಒಣ ಹವಾಮಾನ ಇರಲಿದೆ.

ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ

ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ

ಹೋಳಿ ಹಬ್ಬದ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಸಾಯನಿಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ರಾಸಾಯನಿಕ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅವುಗಳ ಮಾರಾಟವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳು ಮತ್ತು ಹಾಲಿನ ಉತ್ಪನ್ನಗಳಲ್ಲಿ ಕಲಬೆರಕೆ ಹೆಚ್ಚಾಗುವ ಸಾಧ್ಯತೆಯಿದ್ದು, ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪು, ಸೋಪುಗಳ ಮಾರಾಟ ನಿಷೇಧ: ಅರಣ್ಯ ಇಲಾಖೆ ಮಹತ್ವದ ಆದೇಶ

ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪು, ಸೋಪುಗಳ ಮಾರಾಟ ನಿಷೇಧ: ಅರಣ್ಯ ಇಲಾಖೆ ಮಹತ್ವದ ಆದೇಶ

ದೇವಸ್ಥಾನ, ಮಠ ಮಂದಿರಗಳ ಸಮೀಪದ ನದಿಗಳಲ್ಲಿ ಭಕ್ತರು ಶಾಂಪು, ಸೋಪು ಬಳಸಿ ಸ್ನಾನ ಮಾಡುವುದು ಹಾಗೂ ಬೇಡದ ವಸ್ತುಗಳನ್ನು ಎಸೆಯುವುದರಿಂದ ಉಂಟಾಗುತ್ತಿರುವ ಮಾಲಿನ್ಯ ಹಾಗೂ ಇದರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹೊಸ ಆದೇಶ ಹೊರಡಿಸಲಾಗಿದ್ದು, ವಿವರಗಳು ಇಲ್ಲಿವೆ.

ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಪತ್ತೆ: ಬಟಾಣಿ ಬ್ಯಾನ್​ ಆಗುತ್ತಾ?

ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಪತ್ತೆ: ಬಟಾಣಿ ಬ್ಯಾನ್​ ಆಗುತ್ತಾ?

ಬೋರ್ ಆದ್ರೆ ಬಾಯಾಡಿಸೋಕೆ ಬಟಾಣಿ ಬೇಕೇ ಬೇಕು. ಕಟುಮ್ ಕುಟುಮ್ ಅಂತಾ ಕರಿದ ಬಟಾಣಿ ತಿಂತಿದ್ರೆ ಇನ್ನೂ ಬೇಕು ಅನ್ನಿಸುತ್ತೆ.. ಆದ್ರೆ, ಇದೀಗ ಇದೇ ಬಟಾಣಿ ಜೀವಕ್ಕೂ ಕುತ್ತು ತರಲಿದೆ. ಕೃತಕ ಕಲರ್ ಮಿಕ್ಸ್ ಮಾಡಿ ಬಟಾಣಿ ಬ್ಯಾನ್​ಗೆ ಆಹಾರ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗಾದ್ರೆ, ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಬಟಾಣಿಯಲ್ಲಿ ಯಾವ ಅಂಶ ಪತ್ತೆಯಾಗಿದೆ ಎನ್ನುವ ವಿವರ ಇಲ್ಲಿದೆ.

ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ಕೊವಿಡ್ ಬಳಿಕ ಜನರ ಮಾನಸಿಕ ಚಿಂತನೆ ಅಷ್ಟೇ ಅಲ್ಲ.. ದೈಹಿಕ ಬೆಳವಣಿಗೆಯಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ಅದರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಅತಿಯಾದ ಬೇಕರಿ, ಫಾಸ್ಟ್ ಫುಡ್ ಅಭ್ಯಾಸ ಹಾಗೂ ಹೊರಾಂಗಣ ಆಟಗಳು ಮರೆತಿರುವ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು, ಈ ಬಗ್ಗೆ ಆತಂಕಕಾರಿಯಾದ ವರದಿಯೊಂದು ತಿಳಿಸಿದೆ.