AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 Yr Warranty: ಹೊಂಡಾ ಸ್ಕೂಟರ್ ಮತ್ತು ಬೈಕ್​ಗಳ ಈ ಮಾಡೆಲ್​ಗಳಿಗೆ 10 ವರ್ಷದವರೆಗೂ ವಾರಂಟಿ; ಹೆಚ್ಚಿನ ಮಾಹಿತಿ ಇಲ್ಲಿದೆ

Honda Scooters and Bike Warranty Extension: 250 ಸಿಸಿವರೆಗಿನ ತನ್ನ ದ್ವಿಚಕ್ರ ವಾಹನಗಳಿಗೆ 10 ವರ್ಷದವರೆಗೆ ವಾರಂಟ್ ವಿಸ್ತರಿಸುವ ಸ್ಕೀಮ್ ಅನ್ನು ಹೀರೋ ಮೋಟಾರ್​ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಘೋಷಿಸಿದೆ...

10 Yr Warranty: ಹೊಂಡಾ ಸ್ಕೂಟರ್ ಮತ್ತು ಬೈಕ್​ಗಳ ಈ ಮಾಡೆಲ್​ಗಳಿಗೆ 10 ವರ್ಷದವರೆಗೂ ವಾರಂಟಿ; ಹೆಚ್ಚಿನ ಮಾಹಿತಿ ಇಲ್ಲಿದೆ
ಹೊಂಡಾ ಬೈಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2023 | 3:39 PM

Share

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಸಾಮಾನ್ಯವಾಗಿ 3ರಿಂದ 5 ವರ್ಷ ವಾರಂಟಿ (Warranty) ಇರುತ್ತದೆ. ಆದರೆ, ಹೊಂಡಾ ಸಂಸ್ಥೆಯ ಬೈಕ್ ಮತ್ತು ಸ್ಕೂಟರ್​ಗಳಿಗೆ 10 ವರ್ಷದವರೆಗೆ ವಾರಂಟಿ ಇದೆ. 250 ಸಿಸಿವರೆಗಿನ ತನ್ನ ದ್ವಿಚಕ್ರ ವಾಹನಗಳಿಗೆ 10 ವರ್ಷದವರೆಗೆ ವಾರಂಟ್ ಆಫರ್ ಕೊಡುವ ಇಡಬ್ಲ್ಯೂ ಪ್ಲಸ್ (Extended Warraty Plus) ಸ್ಕೀಮ್ ಅನ್ನು ಹೀರೋ ಮೋಟಾರ್​ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (HMSI) ತಿಳಿಸಿದೆ.

ಹೊಂಡಾದ ಎಕ್ಸ್​ಟೆಂಡೆಡ್ ವಾರಂಟಿ ಪ್ಲಸ್ ಹಳೆಯ ಹೊಂಡಾ ದ್ವಿಚಕ್ರ ವಾಹನಗಳಿಗೆ ವಾರಂಟಿ ಕವರೇಜ್ ವಿಸ್ತರಿಸುವ ಸ್ಕೀಮ್ ಆಗಿದೆ. 150 ಸಿಸಿ ಯಿಂದ ಹಿಡಿದು 250 ಸಿಸಿವರೆಗಿನ ಅದರ ಟೂ ವೀಲರ್​ಗಳಿಗೆ ಈ ವಾರಂಟಿ ವಿಸ್ತರಣೆಯ ಅವಕಾಶ ಇದೆ.

ಹೊಂಡಾ ಸ್ಕೂಟರ್ ಅಥವಾ ಬೈಕ್ ಖರೀದಿಸಿದ ಏಳರಿಂದ ಒಂಬತ್ತನೇ ವರ್ಷದಲ್ಲಿ ವಾರಂಟಿ ವಿಸ್ತರಣೆ ಮಾಡಬಹುದು. ನೀವು ವಾಹನ ಮಾರಿದಾಗಲೂ ಈ ವಾರಂಟಿಯನ್ನೂ ವರ್ಗಾವಣೆ ಮಾಡಬಹುದು. ರಿನಿವಲ್ ಕೂಡ ಸಾಧ್ಯವಿದೆ.

ಇದನ್ನೂ ಓದಿHonda Dio H-Smart: ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ

ಹೊಂಡಾ ಎಕ್ಸ್​ಟೆಂಡೆಡ್ ವಾರಂಟಿ ಪ್ಲಸ್ ಪ್ರೋಗ್ರಾಮ್ ಅಡಿಯಲ್ಲಿ ನೀವು ವಾಹನ ಖರೀದಿಸಿದ 7ನೇ ವರ್ಷದಲ್ಲಿ 3 ವರ್ಷ ವಾರಂಟಿ ವಿಸ್ತರಿಸುವ ಆಯ್ಕೆ ಆರಿಸಿಕೊಳ್ಳಬಹುದು. 8ನೇ ವರ್ಷದಲ್ಲಿ 2 ವರ್ಷದ ಪಾಲಿಸಿ ಪಡೆಯಬಹುದು. 9ನೇ ವರ್ಷದಲ್ಲಿ ಒಂದು ವರ್ಷದ ಪಾಲಿಸಿ ಪಡೆಯಬಹುದು. ಈ ಸ್ಕೀಮ್​ನಲ್ಲಿ ಹೊಂಡಾ ಸ್ಕೂಟರ್​ಗಳಾದರೆ 1,20,000 ಕಿಮೀವರೆಗೂ ವಾರಂಟಿ ಕವರೇಜ್ ಇರುತ್ತದೆ. ಬೈಕ್​ಗಳಾದರೆ 1,30,000 ಕಿಮೀವರೆಗೂ ಆಗುತ್ತದೆ.

ಹೊಂಡಾ ಎಕ್ಸ್​ಟೆಂಡೆಡ್ ವಾರಂಟಿ ಪ್ಲಸ್ ಬೆಲೆ ಎಷ್ಟು?

ಹೊಸ ಹೊಂಡಾ ವಿಸ್ತರಿತ ವಾರಂಟಿ ಪ್ಲಸ್ ಸ್ಕೀಮ್ 150 ಸಿಸಿ ಬೈಕ್ ಮಾಡಲ್​ಗಳಿಗಾದರೆ 1,317 ರೂ ಬೆಲೆ ಇದೆ. 150ಸಿಸಿ ಮೇಲ್ಟಟ್ಟು 250 ಸಿಸಿವರೆಗಿನ ಮಾಡೆಲ್​ಗಳಾದರೆ ವಿಸ್ತೃತ ವಾರಂಟಿಯ ಬೆಲೆ ಅಂದಾಜು 1,667 ರೂ ಇದೆ.

ಇನ್ನಷ್ಟು ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!