AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yakshagana: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ

ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಮೊದಲು ಚೆಂಡೆ ಮತ್ತು ಚಕ್ರತಾಳಗಳ ಬಳಕೆ ಇರಲಿಲ್ಲ. ತಾಳ ಮತ್ತು ಮದ್ದಳೆ ಪ್ರಚಲಿತದಲ್ಲಿತ್ತು. ಮದ್ದಳೆಯನ್ನು ದೇವವಾದ್ಯ ಎಂದು ಕರೆಯಲಾಗುತ್ತದೆ. ಪುರಾಣ ಕಾಲದಲ್ಲಿ ಶಿವನ ತಾಂಡವ ನೃತ್ಯಕ್ಕೆ ಬಳಸಲಾಗುತ್ತಿತ್ತು.

Yakshagana: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jun 11, 2023 | 8:42 AM

Share

ಯಕ್ಷಗಾನ ದಕ್ಷಿಣ ಕನ್ನಡದ ಗಂಡು ಕಲಾ ಪ್ರಕಾರ. ನಿರ್ದಿಷ್ಟ ಕತೆಯನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ಬರೆದ ಪ್ರಸಂಗದ ಹಾಡುಗಳನ್ನು ಆಧರಿಸಿ ನೃತ್ಯ, ಅಭಿನಯ ಮತ್ತು ಮಾತುಗಳಿಂದ ಕತೆಯನ್ನು ನಿರೂಪಿಸುವುದು ಇದರ ಸ್ವಭಾವ. ಯಕ್ಷಗಾನದಲ್ಲಿ ಅನೇಕ ವಿಭಾಗಗಳಿವೆ. ತೆಂಕುತಿಟ್ಟು, ಬಡಗುತಿಟ್ಟು, ನಡುತಿಟ್ಟು ಇತ್ಯಾದಿ. ತಾಳ,ಚೆಂಡೆ, ಮದ್ದಳೆ, ಚಕ್ರತಾಳಗಳನ್ನು ಒಳಗೊಂಡ ಯಕ್ಷಗಾನದಲ್ಲಿ ಮದ್ದಳೆಯು ಪ್ರಮುವಾಗಿದೆ.

ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಮೊದಲು ಚೆಂಡೆ ಮತ್ತು ಚಕ್ರತಾಳಗಳ ಬಳಕೆ ಇರಲಿಲ್ಲ. ತಾಳ ಮತ್ತು ಮದ್ದಳೆ ಪ್ರಚಲಿತದಲ್ಲಿತ್ತು. ಮದ್ದಳೆಯನ್ನು ದೇವವಾದ್ಯ ಎಂದು ಕರೆಯಲಾಗುತ್ತದೆ. ಪುರಾಣ ಕಾಲದಲ್ಲಿ ಶಿವನ ತಾಂಡವ ನೃತ್ಯಕ್ಕೆ ಬಳಸಲಾಗುತ್ತಿತ್ತು. ಆ ಕಾಲದಿಂದ ಬಂದಂತಹ ವಾದ್ಯವೇ ಮದ್ದಳೆ. ಇದು ಒಂದು ಚರ್ಮವಾದ್ಯ. ಮದ್ದಳೆಯ ಮಧ್ಯ ಭಾಗದಲ್ಲಿರುವುದು ಕಳಸೆ,ಇದನ್ನು ಹಲಸಿನ ಮರದಿಂದ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮವಾದ ಮರಗಳನ್ನು ಆಯ್ದು ಕೊಂಡು ತಯಾರಿಸುತ್ತಾರೆ. ಕಳಸೆಯನ್ನು ಬಿಟ್ಟು ಉಳಿದ ಭಾಗಗಳನ್ನು ಚರ್ಮದಿಂದ ತಯಾರಿಸಲಾಗುತ್ತದೆ. ಇದಕ್ಕೆ ದಪ್ಪ ಚರ್ಮದ ಅವಶ್ಯಕತೆ ಇದೆ. ನೀರಿನ ಹನಿ ತಾಗಿದ್ದಲ್ಲಿ ಮದ್ದಳೆ ಹಾಳಾಗುತ್ತದೆ.

ಇದನ್ನೂ ಓದಿ:Yakshagana: ಯಕ್ಷಗಾನದ ಯುವಪ್ರತಿಭಾ ಕಲಶ ಪೂಜಾ ಆಚಾರ್ಯ

ಮದ್ದಳೆಯ ಮದ್ಯದ ಕಪ್ಪು ಭಾಗವನ್ನು ಕರ್ಣ ಎಂದು ಕರೆಯುತ್ತಾರೆ. ಕಲ್ಲನ್ನು ಅರಿದು ಹುಡಿ ಮಾಡಿ ಅವಲಕ್ಕಿ ಮತ್ತು ಗುಲಗಂಜಿಯನ್ನು ಸೇರಿಸಿ ಪೇಸ್ಟ್ ಮಾಡಿ ತಿಕ್ಕಬೇಕು. ತಿಕ್ಕಿದ ಬಳಿಕ ಕೊನೆಗೆ ಲೇಯರ್ ಉಬ್ಬಿ ನಿಲ್ಲಬೇಕು ಇದು ಚರ್ಮದ ಗುಣದ ಮೇಲೆ ಆಧಾರವಾಗಿರುತ್ತದೆ. ಸಾಮಾನ್ಯವಾಗಿ ಆರರಿಂದ ಏಳು ಲೇಯರ್ ಇರಬೇಕು. ಏಳು ಲೇಯರ್ ಇರುವುದು ಸಪ್ತ ಸ್ವರಗಳಿದ್ದಂತೆ. ತಾಂ, ಧೋಂ, ಧೋ, ತಾ, ಟಾ, ನಾ ಇವುಗಳಿಷ್ಟು ಬಲ ಭಾಗದಲ್ಲಿರುತ್ತವೆ. ಹಾಗೆಯೇ ಎಡಭಾಗದಲ್ಲಿಯು ಉಪಯೋಗಿಸುತ್ತಾರೆ. ಆದರೆ ಎಡಭಾಗದಲ್ಲಿ ಮಂದಸ್ವರ ಬೇಕಾಗುವುದರಿಂದ, ಧೀ, ಕೀ, ಕ ಬಾಯಿತಾಳಗಳು ಎಡಭಾಗದಲ್ಲಿ ಬರುತ್ತದೆ. ಇವು ಮದ್ದಳೆಯ ಭಾಗಗಳು. ಮದ್ದಳೆಯನ್ನು ತರಬೇತಿ ಹೊಂದಿರುವವರು ಬಾರಿಸಬೇಕಾಗುತ್ತದೆ, ಏಕೆಂದರೆ ಮದ್ದಳೆಯ ಶೃತಿಗಳು ಬದಲಾವಣೆಯನ್ನು ಹೊಂದುತ್ತದೆ. ಮದ್ದಳೆಯ ವಿಶೇಷತೆಗಳ ಬಗ್ಗೆ ವಿವರಣೆ ಕೊಡುತ್ತಾ ಹೋದರೆ ಅನೇಕ ವಿಷಯಗಳಿವೆ. ಒಟ್ಟಾರೆಯಾಗಿ ಯಕ್ಷಗಾನದ ಪ್ರತಿಯೊಂದು ಅಂಶವೂ ಆಳ ಮತ್ತು ವಿಸ್ತಾರ.

ಲೇಖನ: ಶ್ರಾವ್ಯ ಪ್ರಭು ಎ. ಎಸ್

ಪುತ್ತೂರು

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು