ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್

Interim Budget 2024: ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡನೆ ಆಗಲಿದೆ. ಪ್ರಮುಖ ಘೋಷಣೆ ಸಾಧ್ಯತೆ ಇಲ್ಲವಾದರೂ ಕೆಲವಿಷ್ಟು ಮಹತ್ವದ ಸಂಗತಿಗಳನ್ನು ನಿರೀಕ್ಷಿಸಬಹುದು. ರೈಲ್ವೆ ಮತ್ತು ಕೃಷಿ ವಲಯಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಹಣ ನಿಯೋಜನೆ ಆಗಬಹುದು.

ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್
ಬಜೆಟ್​

Updated on: Jan 11, 2024 | 1:00 PM

ನವದೆಹಲಿ, ಜನವರಿ 11: ಮುಂದಿನ ತಿಂಗಳ ಆರಂಭದಲ್ಲಿ (ಫೆ. 1) ಬಜೆಟ್ ಮಂಡನೆಯಾಗಲಿದೆ. ಚುನಾವಣೆಗೆ ಮುಂಚಿನ ಬಜೆಟ್ ಆಗಿರುವ ಇದು ಮಧ್ಯಂತರ ಬಜೆಟ್ (Interim Budget 2024) ಮಾತ್ರವೇ ಆಗಿರುತ್ತದೆ. ನಿಯಮದ ಪ್ರಕಾರ ಮತದಾರರನ್ನು ಸೆಳೆಯುವಂತಹ ಯಾವ ಸ್ಕೀಮ್ ಅನ್ನೂ ಬಜೆಟ್​ನಲ್ಲಿ ಪ್ರಕಟಿಸುವಂತಿಲ್ಲ. ಆರ್ಥಿಕ ಸಮೀಕ್ಷೆಯ (economic survey) ವರದಿಯನ್ನೂ ಬಿಡುಗಡೆ ಮಾಡುವಂತಿಲ್ಲ. ಚುನಾವಣೆ ಮುಗಿದು ಹೊಸ ಬಜೆಟ್ ಮಂಡನೆ ಆಗುವವರೆಗೂ ವೆಚ್ಚಕ್ಕೆಂದು ವೋಟ್ ಆನ್ ಅಕೌಂಟ್ ಮಾತ್ರವೇ ಮಧ್ಯಂತರ ಬಜೆಟ್​ನ ಗುರಿಯಾಗಿರುತ್ತದೆ.

ಆದಾಗ್ಯೂ ಮಧ್ಯಂತರ ಬಜೆಟ್​ನಲ್ಲೂ ಒಂದಷ್ಟು ಮಹತ್ವದ ನಿರ್ಧಾರಗಳಿಗೆ ಅವಕಾಶ ಇರುತ್ತದೆ. ತಜ್ಞರು ಕೆಲ ಪ್ರಮುಖ ಘೋಷಣೆಗಳ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಸಂಭವನೀಯ ಘೋಷಣೆಗಳ ವಿವರ ಇಲ್ಲಿದೆ:

ರಫ್ತು ಮತ್ತು ಆಮದು ನಿಯಮ

ಆಹಾರ ಬೆಲೆಗಳ ಹಣದುಬ್ಬರ ಬಹಳ ಹೆಚ್ಚಿನ ಮಟ್ಟದಲ್ಲಿ ಇದೆ. ಇದನ್ನು ತಗ್ಗಿಸಲು ಸರ್ಕಾರ ಅಗತ್ಯ ಆಹಾರ ವಸ್ತುಗಳಿಗೆ ರಫ್ತು ಸುಂಕ ವಿಧಿಸುತ್ತದೆ. ಅಂತೆಯೇ, ಕೆಲ ಆಹಾರವಸ್ತುಗಳಿಗೆ ಈ ಸುಂಕದಲ್ಲಿ ವಿನಾಯಿತಿ ನೀಡುತ್ತಿದೆ. ಈ ಸಂಬಂಧ ಬಜೆಟ್​ನಲ್ಲಿ ಮಹತ್ವದ ನಿರ್ಧಾರ ಬರುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ: Inflation: ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಿಕೆಯಾಗಿರುವ ಸಾಧ್ಯತೆ: 18 ಆರ್ಥಿಕ ತಜ್ಞರ ಸರಾಸರಿ ಅಂದಾಜು

ಇಂಧನ ಬೆಲೆ ಹೆಚ್ಚಳ

ಜಾಗತಿಕ ತೈಲಬೆಲೆಯಲ್ಲಿ ಏರಿಳಿತಗಳಾಗುತ್ತಿದ್ದರೂ ಭಾರತದಲ್ಲಿ ಕಳೆದ ಒಂದು ವರ್ಷದಿಂದ ಇಂಧನ ಬೆಲೆ ಸ್ಥಿರವಾಗಿದೆ. ಹೆಚ್ಚಿನ ಮಟ್ಟದಲ್ಲಿರುವ ಇಂಧನ ಬೆಲೆಯನ್ನು ಇಳಿಸುವ ಸಾಧ್ಯತೆ ಇದೆ. ಬಜೆಟ್​ನಲ್ಲಿ ಸೆಸ್ ದರ ಕಡಿಮೆ ಮಾಡುವ ಘೋಷಣೆ ಆಗಬಹುದು.

ರೈಲ್ವೆಗೆ ಹೆಚ್ಚು ಹಣ ವಿನಿಯೋಗ

ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ವಲಯಕ್ಕೆ ಹೆಚ್ಚಿನ ಹಣ ನಿಯೋಜನೆ ಮಾಡಬಹುದು. ದೇಶಾದ್ಯಂತ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ. ಬಹಳ ಹೆಚ್ಚಿನ ಜನರನ್ನು ಮತ್ತು ಸರಕುಗಳನ್ನು ಸಾಗಿಸುವ ರೈಲುಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

ಕೃಷಿಗೆ ಹೆಚ್ಚು ಹಣ

ಕಳೆದ 10 ವರ್ಷಗಳಿಂದ ಕೇಂದ್ರ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ನೀಡುತ್ತಿರುವ ಹಣ ಹಲವು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ ಕೃಷಿ ವಲಯಕ್ಕೆ 22,652 ಕೋಟಿ ರೂ ನೀಡಲಾಗಿತ್ತು. 2023-24ರಲ್ಲಿ ಇದು 1.15 ಲಕ್ಷ ಕೋಟಿ ರೂ ಆಗಿದೆ. ಈ ಏರಿಕೆಯ ಟ್ರೆಂಡ್ ಈ ವರ್ಷವೂ ಮುಂದುವರಿಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Thu, 11 January 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us