Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್ಮೆಂಟ್ ಮೈಂಟೆನ್ಸ್ ಹಣ ತಿಂಗಳಿಗೆ 7,500 ರೂ ಮೀರಿದರೆ ಶೇ. 18 ಜಿಎಸ್​​ಟಿ; ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವೂ ಲಭ್ಯ

18% GST on Apartment maintenance fees: ಪ್ರತೀ ಅಪಾರ್ಟ್ಮೆಂಟ್​​ನ್ಲಲಿ ನಿವಾಸಿಗಳು ಮಾಸಿಕವಾಗಿ ಮೈಂಟೆನೆನ್ಸ್ ಶುಲ್ಕ ಪಾವತಿಸಬೇಕು. ಈ ಶುಲ್ಕ 7,500 ರೂಗಿಂತ ಹೆಚ್ಚಾಗಿದ್ದರೆ ಶೇ. 15ರಷ್ಟು ಜಿಎಸ್​​ಟಿ ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಹಣಕ್ಕೆ ಮಾತ್ರವೇ ಅಲ್ಲ, ಇಡೀ ಹಣಕ್ಕೆ ಜಿಎಸ್​​ಟಿ ಅನ್ವಯ ಆಗುತ್ತದೆ. ಇಡೀ ಅಪಾರ್ಟ್ಮೆಂಟ್​​ನ (ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ) ವಾರ್ಷಿಕ ಟರ್ನೋವರ್ 20 ಲಕ್ಷ ರೂಗಿಂತ ಒಳಗಿದ್ದರೆ ಜಿಎಸ್​​ಟಿ ಅನ್ವಯ ಆಗುವುದಿಲ್ಲ.

ಅಪಾರ್ಟ್ಮೆಂಟ್ ಮೈಂಟೆನ್ಸ್ ಹಣ ತಿಂಗಳಿಗೆ 7,500 ರೂ ಮೀರಿದರೆ ಶೇ. 18 ಜಿಎಸ್​​ಟಿ; ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವೂ ಲಭ್ಯ
ಅಪಾರ್ಟ್ಮೆಂಟ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 13, 2025 | 12:00 PM

ನವದೆಹಲಿ, ಏಪ್ರಿಲ್ 13: ಅಪಾರ್ಟ್ಮೆಂಟ್​ಗಳ ನಿವಾಸಿಗಳು ಗಮನಿಸಬೇಕಾದ ಸುದ್ದಿ ಇದು. ತಿಂಗಳಿಗೆ 7,500 ರೂಗಿಂತ ಹೆಚ್ಚು ಮೈಂಟೆನೆನ್ಸ್ ಶುಲ್ಕ (Monthly Apartment maintenance fees) ಪಾವತಿಸುತ್ತಿದ್ದರೆ ಇನ್ಮುಂದೆ ಸಂಪೂರ್ಣ ಶುಲ್ಕಕ್ಕೆ ಶೇ. 18 ಜಿಎಸ್​​ಟಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ಮುಂಚೆ 7,500 ರೂಗಿಂತ ಹೆಚ್ಚು ಶುಲ್ಕ ಇದ್ದರೆ, ಹೆಚ್ಚುವರಿ ಶುಲ್ಕಕ್ಕೆ ಮಾತ್ರವೇ ಜಿಎಸ್​​ಟಿ ಕಟ್ಟಬೇಕಾಗುತ್ತಿತ್ತು. ಇನ್ಮುಂದೆ ಪೂರ್ಣ ಮೊತ್ತಕ್ಕೆ ತೆರಿಗೆ ಅನ್ವಯ ಆಗುತ್ತದೆ. ಇದು ಇಡೀ ಹೌಸಿಂಗ್ ಸೊಸೈಟಿ ಅಥವಾ ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಶನ್​ನ (RWAs) ವಾರ್ಷಿಕ ವಹಿವಾಟು 20 ಲಕ್ಷ ರೂ ಮೀರಿದ್ದರೆ ಮಾತ್ರವೇ ವ್ಯಕ್ತಿಗತ ಮನೆಗಳಿಗೆ ಜಿಎಸ್​​ಟಿ ಅನ್ವಯ ಆಗುತ್ತದೆ.

2018ರ ಜನವರಿಯಲ್ಲಿ ನಡೆದ 25ನೇ ಜಿಎಸ್​​ಟಿ ಕೌನ್ಸಿಲ್ ಸಭೆಯಲ್ಲಿ ತಿಂಗಳಿಗೆ 7,500 ರೂವರೆಗೆ ಮೈಂಟೆನೆನ್ಸ್ ಶುಲ್ಕ ಪಾವತಿಸುವ ಮನೆಗಳಿಗೆ ಜಿಎಸ್​​ಟಿಯಿಂದ ವಿನಾಯಿತಿ ನೀಡಲಾಗಿತ್ತು. ಅದಕ್ಕೂ ಮುನ್ನ, ಈ ವಿನಾಯಿತಿ ಮಿತಿ 5,000 ರೂಗೆ ನಿಗದಿಯಾಗಿತ್ತು. ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಈಗ ಮಾಸಿಕ ಮೈಂಟೆನೆನ್ಸ್ ಶುಲ್ಕ 7,500 ರೂ ಮೀರಿದರೆ, ಅಷ್ಟೂ ಮೊತ್ತಕ್ಕೆ ಶೇ. 18 ಜಿಎಸ್​ಟಿ ವಿಧಿಸಲಾಗುತ್ತದೆ.

ಇದನ್ನೂ ಓದಿ: ನಿನ್ನಂಥ ಅಪ್ಪ ಇಲ್ಲ… ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

ಇದನ್ನೂ ಓದಿ
Image
ಗೊತ್ತಿಲ್ಲದೆ ಕಂಪನಿ ನಿರ್ದೇಶಕನಾದ ಅಟೆಂಡರ್​​ನ ಫಜೀತಿ
Image
ಹಣಕಾಸು ಭದ್ರತೆಗೆ 1% ತಂತ್ರ: ನಿತಿನ್ ಕಾಮತ್
Image
ಫೆಬ್​ರುವರಿಯಲ್ಲಿ ನಿವ್ವಳ ಜಿಎಸ್​ಟಿ 1.63 ಲಕ್ಷ ಕೋಟಿ ರೂ
Image
ಇನ್ಷೂರೆನ್ಸ್​ಗೆ ಟ್ಯಾಕ್ಸ್ ವಿನಾಯಿತಿ ಕೊಟ್ಟರೆ ದುಬಾರಿಯಾಗುತ್ತಾ?

ಜಿಎಸ್​​ಟಿ ಹೇಗೆ ಅನ್ವಯ ಆಗುತ್ತದೆ, ಇಲ್ಲಿದೆ ಉದಾಹರಣೆ

ಉದಾಹರಣೆಗೆ, ನೀವು ಒಂದು ಅಪಾರ್ಟ್ಮೆಂಟ್​​ನಲ್ಲಿ ಮನೆ ಹೊಂದಿರುತ್ತೀರಿ. ಅದರಲ್ಲಿ ಅಪಾರ್ಟ್ಮೆಂಟ್ ವೆಲ್ಫೇರ್ ಸಂಸ್ಥೆಯು ಮೈಂಟೆನೆನ್ಸ್ ಶುಲ್ಕವಾಗಿ ನಿಮ್ಮಿಂದ ತಿಂಗಳಿಗೆ 7,500 ರೂ ಶುಲ್ಕ ಪಡೆಯುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು ಆ ಹಣಕ್ಕೆ ಜಿಎಸ್​​ಟಿ ಕಟ್ಟುವಂತಿಲ್ಲ. ಒಂದು ವೇಳೆ ಈ ಶುಲ್ಕವು 10,000 ರೂ ಆಗಿದ್ದರೆ, ಆಗ 7,500ಕ್ಕೆ ಹೆಚ್ಚುವರಿಯಾದ 2,500 ರೂಗೆ ಮಾತ್ರ ಜಿಎಸ್​​ಟಿ ಕಟ್ಟಿದರೆ ಸಾಕು ಎನ್ನುವಂತಿಲ್ಲ. ಎಲ್ಲಾ 10,000 ರೂಗೂ ಜಿಎಸ್​​ಟಿ ಅನ್ವಯ ಆಗುತ್ತದೆ. ಅಂದರೆ, 10,000 ರೂ + 1,800 ರೂ ಆಗುತ್ತದೆ. 11,800 ರೂ ಶುಲ್ಕ ಪಾವತಿಸಬೇಕು.

ಆರ್​​ಡಬ್ಲ್ಯುಎಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅವಕಾಶ

ಇಲ್ಲಿ ಆರ್​​ಡಬ್ಲ್ಯುಎ ಅಥವಾ ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಶನ್​​ನ ವಾರ್ಷಿಕ ಮೈಂಟೆನೆನ್ಸ್ ಟರ್ನೋವರ್ 20 ಲಕ್ಷ ರೂಗಿಂತ ಕಡಿಮೆ ಇದ್ದಲ್ಲಿ ಜಿಎಸ್​​ಟಿ ಅನ್ವಯ ಆಗೊಲ್ಲ ಎಂಬುದನ್ನು ಗಮನಿಸಬೇಕು.

ಒಂದು ವೇಳೆ, 20 ಲಕ್ಷ ರೂಗಿಂತ ಮೇಲ್ಪಟ್ಟ ವಹಿವಾಟು ಇದ್ದಲ್ಲಿ ಅದು ಜಿಎಸ್​​ಟಿಗೆ ನೊಂದಾಯಿಸಿಕೊಳ್ಳಬೇಕು. ಮೈಂಟೆನ್ಸ್ ಶುಲ್ಕಕ್ಕೆ ಕಟ್ಟಲಾದ ಜಿಎಸ್​​ಟಿಯನ್ನು ಆರ್​​ಡಬ್ಲ್ಯುಎಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಬಳಸಿಕೊಳ್ಳಬಹುದು.

ಇದನ್ನೂ ಓದಿ: 2024-25ರಲ್ಲಿ ಭಾರತದ ರಫ್ತು ದಾಖಲೆ; 820 ಬಿಲಿಯನ್ ಡಾಲರ್ ದಾಟಿದ ಸರಕು ಮತ್ತು ಸೇವಾ ರಫ್ತು

ಉದಾಹರಣೆಗೆ, ಅಪಾರ್ಟ್ಮೆಂಟ್​​ನ ಮೈಂಟೆನೆನ್ಸ್​​ಗಾಗಿ ಜನರೇಟರ್, ವಾಟರ್ ಪಂಪ್, ಗಾರ್ಡನ್, ಪೀಠೋಪಕರಣ, ಕೊಳವೆ, ಸ್ಯಾನಿಟರಿ ಇತ್ಯಾದಿ ಸರಕು ಮತ್ತು ಸೇವೆಗಳಿಗೆ ಕಟ್ಟುವ ಜಿಎಸ್​​ಟಿಗೆ ಇದನ್ನು ವಜಾಗೊಳಿಸಬಹುದು.

ಒಂದೇ ಸಂಕೀರ್ಣದಲ್ಲಿ ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಮನೆಗಳಿದ್ದರೆ?

ಈಗ ಒಂದು ಅಪಾರ್ಟ್ಮೆಂಟ್​​​ನಲ್ಲಿ ಒಬ್ಬ ವ್ಯಕ್ತಿ ಎರಡು ಮನೆಗಳನ್ನು ಹೊಂದಿದ್ದು, ಪ್ರತೀ ಮನೆಗೆ ಮಾಸಿಕ ಮೈಂಟೆನೆನ್ಸ್ ಶುಲ್ಕವಾಗಿ 7,500 ರೂ ಪಾವತಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಎರಡು ಮನೆಗಳಿಂದ 15,000 ರೂ ಶುಲ್ಕವಾಗುತ್ತದೆ. ಇಲ್ಲಿ 15,000 ರೂಗೆ ಜಿಎಸ್​​ಟಿ ಕಟ್ಟಬೇಕಿಲ್ಲ. ಪ್ರತೀ ಮನೆಯ ಮೈಂಟೆನೆನ್ಸ್ ಶುಲ್ಕ 7,500 ರೂ ಮೀರಿದರೆ ಮಾತ್ರವೇ ಜಿಎಸ್​​ಟಿ ಅನ್ವಯ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ