AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Education Policy: ಕೇಂದ್ರೀಯ ವಿ.ವಿ. ನೇಮಕಾತಿಯಲ್ಲಿ ಬದಲಾವಣೆ; ವೃತ್ತಿಪರರು, ಕೈಗಾರಿಕೆ ಪರಿಣತರಿಂದಲೂ ಪಾಠ

ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕೈಗಾರಿಕೆ ತಜ್ಞರು, ವೃತ್ತಿಪರರನ್ನು ಪ್ರಾಕ್ಟೀಸ್ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ನಿಯಮ ಬದಲಾವಣೆ ಮಾಡಲು ಯುಜಿಸಿ​ ಮುಂದಾಗಿದೆ ಎಂದು ತಿಳಿಸಲಾಗಿದೆ.

National Education Policy: ಕೇಂದ್ರೀಯ ವಿ.ವಿ. ನೇಮಕಾತಿಯಲ್ಲಿ ಬದಲಾವಣೆ; ವೃತ್ತಿಪರರು, ಕೈಗಾರಿಕೆ ಪರಿಣತರಿಂದಲೂ ಪಾಠ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 12, 2022 | 2:29 PM

Share

ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ನೇಮಕಾತಿ ಮಾಡುವುದರಲ್ಲಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ವೃತ್ತಿಪರರು ಮತ್ತು ಕೈಗಾರಿಕೆ ಪರಿಣತರನ್ನು ಪ್ರಾಕ್ಟೀಸ್ ಪ್ರಾಧ್ಯಾಪಕರಾಗಿ, ಪ್ರಾಕ್ಟೀಸ್ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡುವುದಕ್ಕೆ ನಿಯಮ ತರುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಈಚೆಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy) 2020ರ ಅನುಷ್ಠಾನದ ಭಾಗವಾಗಿ ಈ ನಿಯಮಾವಳಿಯನ್ನು ತರಲು ಮುಂದಾಗುತ್ತಾರೆ ಎಂಬುದು ಸದ್ಯದ ಸುದ್ದಿ. ವಿಶ್ವವಿದ್ಯಾಲಯದ ಶಿಕ್ಷಣ ವ್ಯವಸ್ಥೆಯಲ್ಲಿ ವೈವಿಧ್ಯ ತರುವ ಉದ್ದೇಶದಿಂದ ವಿಶ್ವವಿದ್ಯಾಲಯದ ಅನುದಾನ ಆಯೋಗವು (University Grants Commission) ಈಗಿನ ನಿಯಮ ಪರಿಷ್ಕೃತಗೊಳಿಸಲು ತಜ್ಞರ ಸಮಿತಿಯನ್ನು ನೇಮಿಸಲಾಗುವುದು. ಗುರುವಾರದಂದು ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಯುಜಿಸಿಯ ಅಧ್ಯಕ್ಷ ಜಗದೀಶ್​ ಕುಮಾರ್​ ಈ ಪ್ರಸ್ತಾವದ ಬಗ್ಗೆ ಚರ್ಚಿಸಿದ್ದಾರೆ.

“ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉದ್ಯಮದೊಂದಿಗೆ ಸಹಯೋಗದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಉದ್ಯಮದ ಕಡೆಯಿಂದ ಬಹಳಷ್ಟು ಜನರು ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಲು ಬಯಸುತ್ತಾರೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರ ನೇಮಕಾತಿಗಾಗಿ ನಮ್ಮ ಪ್ರಸ್ತುತ ನಿಯಂತ್ರಕ ವ್ಯವಸ್ಥೆಯನ್ನು ನೀವು ನೋಡಿದರೆ, ಇದೀಗ ಉದ್ಯಮದಿಂದ ತಜ್ಞರನ್ನು ನೇಮಿಸಲು ನಮಗೆ ಅನುಮತಿ ನೀಡುವುದಿಲ್ಲ,” ಎಂದು ಅವರು ಹೇಳಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗಳಲ್ಲಿ ನೇಮಕಾತಿಗಾಗಿ ಪಿಎಚ್‌.ಡಿ., ಹೊಂದಿರುವುದು ಕಡ್ಡಾಯವಾಗಿದೆ. ಶೀಘ್ರದಲ್ಲೇ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳಲ್ಲಿ ಪ್ರವೇಶ ಮಟ್ಟದ ಹುದ್ದೆಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್‌.ಡಿ., ಕಡ್ಡಾಯವಾಗಲಿದೆ.

“ಖ್ಯಾತ ಮಾಧ್ಯಮ ವ್ಯಕ್ತಿ, ವಾಣಿಜ್ಯೋದ್ಯಮಿ, ರಾಜತಾಂತ್ರಿಕ ಅಥವಾ ಬ್ಯಾಂಕರ್ ಸೇರಿದಂತೆ ಈ ಉದ್ಯಮದ ತಜ್ಞರಲ್ಲಿ ಹೆಚ್ಚಿನವರು ಪಿಎಚ್‌.ಡಿ., ಹೊಂದಿಲ್ಲ. ಆದರೆ ಅವರು ಸಂಪೂರ್ಣ ಜ್ಞಾನ ಮತ್ತು ಅತ್ಯುತ್ತಮ ಅನುಭವ ಹೊಂದಿದ್ದಾರೆ. ನಾವು ಕಡ್ಡಾಯ ಪಿಎಚ್‌.ಡಿ., ಅಗತ್ಯ ಎಂದು ಇಟ್ಟುಕೊಂಡರೆ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ಅಂತಹ ವೈವಿಧ್ಯ ತರಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ ನಮ್ಮ ಪ್ರಸ್ತುತ ನಿಯಮಾವಳಿಗಳನ್ನು ಪರಿಷ್ಕರಿಸಲು ಮತ್ತು ಪ್ರಾಕ್ಟೀಸ್ ಪ್ರಾಧ್ಯಾಪಕರು ಮತ್ತು ಪ್ರಾಕ್ಟೀಸ್ ಸಹ ಪ್ರಾಧ್ಯಾಪಕರು ಎಂದು ಕರೆಯುವ ಹೊಸ ಹುದ್ದೆಗಳನ್ನು ಪರಿಚಯಿಸಲು ನಾವು ಪರಿಗಣಿಸುತ್ತಿದ್ದೇವೆ,” ಎಂದು ಕುಮಾರ್ ಹೇಳಿದ್ದಾರೆ.

ಪ್ರಾಕ್ಟೀಸ್ ವಿಭಾಗದ ಪ್ರೊಫೆಸರ್ ಅಥವಾ ಅಸೋಸಿಯೇಟ್ ಪ್ರೊಫೆಸರ್‌ ಆಗಿ ನೇಮಕಗೊಂಡವರು ವಿಶಿಷ್ಟ ವೃತ್ತಿಪರರು, ಪ್ರಾಕ್ಟೀಸ್ ಮಾಡುವವರು ಅಥವಾ ನಿವೃತ್ತರು ಆಗಿರುತ್ತಾರೆ. ಈ ಪ್ರಾಧ್ಯಾಪಕರನ್ನು ಅಥವಾ ಅಭ್ಯಾಸದ ಸಹ ಪ್ರಾಧ್ಯಾಪಕರನ್ನು ಸಂದರ್ಶಕ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಲು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ನಿಯಮಗಳನ್ನು ಮಾಡಲು ಯುಜಿಸಿ ಪರಿಗಣಿಸುತ್ತಿದೆ. “ಸಮಿತಿಯನ್ನು ರಚಿಸಿದ ಮೇಲೆ ಮತ್ತು ಅಸ್ತಿತ್ವದಲ್ಲಿ ಇರುವ ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿದ ನಂತರ ಈ ಶಿಫಾರಸುಗಳನ್ನು ಯುಜಿಸಿಯಲ್ಲಿ ಹಾಕಲಾಗುತ್ತದೆ ಮತ್ತು ಅಂಗೀಕರಿಸಲಾಗುತ್ತದೆ. ಒಮ್ಮೆ ಅನುಮೋದನೆ ಸಿಕ್ಕ ನಂತರ, ಯಾವುದೇ ವಿಶ್ವವಿದ್ಯಾನಿಲಯ, ಕೇಂದ್ರೀಯ ವಿಶ್ವವಿದ್ಯಾಲಯಗಳ ಅಗತ್ಯವಿಲ್ಲ, ತಮ್ಮ ವ್ಯವಸ್ಥೆಯಲ್ಲಿ ವೈವಿಧ್ಯಮಯ ಜ್ಞಾನವನ್ನು ತರಬಹುದು,” ಎಂದು ಕುಮಾರ್ ಹೇಳಿದ್ದಾರೆ.

ಈ ಹೊಸ ಹುದ್ದೆಗಳು ಪ್ರತಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅಸ್ತಿತ್ವದಲ್ಲಿ ಇರುವ ಅಧ್ಯಾಪಕರ ಹುದ್ದೆಗಳ ಮೇಲೆ ಪರಿಣಾಮ ಬೀರುತ್ತವೆಯೇ ಎಂದು ಕೇಳಿದಾಗ, “ಅಸ್ತಿತ್ವದಲ್ಲಿರುವ ಯಾವುದೇ ಬೋಧನಾ ಅಧ್ಯಾಪಕರ ಸ್ಥಾನದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಮಾನದಂಡಗಳನ್ನು ರೂಪಿಸಲು ಸಮಿತಿಯನ್ನು ಕೇಳಲಾಗುತ್ತದೆ,” ಎಂದು ಅವರು ಹೇಳಿದ್ದಾರೆ. ಉಪ ಕುಲಪತಿಗಳು ಪ್ರಸ್ತಾವನೆಯನ್ನು ಸ್ವಾಗತಿಸಿದ್ದಾರೆ. ಡಿಯು ಉಪ ಕುಲಪತಿ ಯೋಗೇಶ್ ಸಿಂಗ್ ಮಾತನಾಡಿ, ಜಾಗತಿಕವಾಗಿ ವಿಶ್ವವಿದ್ಯಾನಿಲಯಗಳು ಈಗಾಗಲೇ ಪ್ರಾಕ್ಟೀಸ್ ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರನ್ನು ನೇಮಿಸುತ್ತಿವೆ. “ಯುಜಿಸಿ ಅದನ್ನು ಭಾರತೀಯ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಉತ್ತೇಜಿಸಲು ಪ್ರಯತ್ನಿಸುತ್ತಿದ್ದು, ಅದು ಸ್ವಾಗತಾರ್ಹ ಹೆಜ್ಜೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೀಗಿರುತ್ತದೆ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ