Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ?

China Deflation Problem: ಚೀನಾ ದೇಶದಲ್ಲಿ ಜುಲೈನಲ್ಲಿ ಹಣದುಬ್ಬರ ಮೈನಸ್​ಗೆ ಹೋಗಿದೆ. 2021ರಿಂದ ಮೊದಲ ಬಾರಿಗೆ ಚೀನಾದಲ್ಲಿ ಇಂಥ ಸ್ಥಿತಿ ಇದೆ. ಹಣದುಬ್ಬರ ಹೆಚ್ಚಾದರೆ ಸಮಸ್ಯೆಯಾಗುವಂತೆ, ಹಣದುಬ್ಬರ ಮೈನಸ್​ಗೆ ಹೋದರೂ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ.

Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ?
ಚೀನೀ ವ್ಯಕ್ತಿಯ ಸಾಂದರ್ಭಿಕ ಚಿತ್ರImage Credit source: Photo by zhang kaiyv: https://www.pexels.com/photo/man-working-inside-the-kitchen-3603453/
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 09, 2023 | 12:24 PM

ಬೀಜಿಂಗ್, ಆಗಸ್ಟ್ 9: ವಿಶ್ವದ ಹಲವು ದೇಶಗಳು ಹಣದುಬ್ಬರದಿಂದ (Inflation) ಬಳಲುತ್ತಿವೆ. ಬಡಬಗ್ಗರಿಗೆ ಬೆಲೆ ಏರಿಕೆಯ ಬಿಸಿ ಚಾಟಿ ಏಟಿನಂತೆ ಭಾರಿಸುತ್ತಿದೆ. ಕೆಲ ರಾಷ್ಟ್ರಗಳಲ್ಲಿ ಹಣಕುಸಿತ ಅಥವಾ ಡೀಫ್ಲೇಷನ್ ಪರಿಸ್ಥಿತಿಗೆ ಸಿಲುಕಿವೆ. ಈ ಪಟ್ಟಿಗೆ ಚೀನಾ ಸೇರ್ಪಡೆಯಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಚೀನಾದಲ್ಲಿ ಈಗ ಹಿಮ್ಮುಖ ಹಣದುಬ್ಬರ (Deflation) ಎರಗಿದೆ. ಹಣದುಬ್ಬರದ ಪ್ರಮುಖ ಮಾನದಂಡವಾಗಿರುವ ಗ್ರಾಹಕ ಬೆಲೆ ಅನುಸೂಚಿ (CPI- Consumer Price Index) ಜುಲೈ ತಿಂಗಳಲ್ಲಿ 30 ಪ್ರತಿಶತ ಅಂಕಗಳಷ್ಟು ಕುಸಿದಿದೆ. ಇನ್ನು, ಉತ್ಪಾದಕ ಬೆಲೆ ಅನುಸೂಚಿ ಮೈನಸ್ 4.4 ಪ್ರತಿಶತಕ್ಕೆ ಕುಸಿದಿದೆ. ಅಂದರೆ ಚೀನಾದಲ್ಲಿ ಸರಾಸರಿ ಬೆಲೆ ಕುಸಿತ ಕಂಡಿದೆ.

2021ರ ಫೆಬ್ರುವರಿಯಲ್ಲಿ ಚೀನಾದಲ್ಲಿ ಬೆಲೆಗಳು ಮೈನಸ್ ಸ್ಥಿತಿಗೆ ಜಾರಿದ್ದವು. ಅದಾದ ಬಳಿಕ ಈಗಲೇ ಈ ಪರಿಸ್ಥಿತಿ ಬಂದಿರುವುದು. ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಂದಾಗಿನಿಂದಲೂ ಹಣದುಬ್ಬರ ಬಹಳ ಕಡಿಮೆ ಮಟ್ಟದಲ್ಲೇ ಇದೆ. ಉತ್ಪನ್ನಗಳ ಸಂಗ್ರಹಕ್ಕೂ ಅವುಗಳಿಗೆ ಇರುವ ಬೇಡಿಕೆಗೂ ಹೊಂದಿಕೆಯಾಗದ ಪರಿಣಾಮವು ಚೀನಾವನ್ನು ಈ ವಿಚಿತ್ರ ಸ್ಥಿತಿಗೆ ನೂಕಿದೆ. ಲಾಕ್ ಡೌನ್ ಇತ್ಯಾದಿ ಎಲ್ಲವೂ ತೆರವುಗೊಂಡು ಸಹಜ ಸ್ಥಿತಿಗೆ ಮರಳಿದ ಬಳಿಕ ದೇಶದಲ್ಲಿ ಜನರು ಖರೀದಿ ಭರಾಟೆಗೆ ಇಳಿದು, ಅನುಭೋಗ ಹೆಚ್ಚಬಹುದು ಎಂದು ಸರ್ಕಾರ ಹಾಗೂ ಅಲ್ಲಿಯ ಉದ್ಯಮ ವಲಯ ಇರಿಸಿದ್ದ ನಿರೀಕ್ಷೆ ಹುಸಿಯಾಗಿದೆ.

ಉತ್ಪನ್ನಗಳಿಗೆ ಬೇಡಿಕೆ ಕೊರತೆಯಿಂದ ಉದ್ದಿಮೆಗಳು ತಮ್ಮ ಉತ್ಪನ್ನಗಳ ಬೆಲೆ ಕಡಿತಗೊಳಿಸುತ್ತಿವೆ. ಆದರೂ ನಿರೀಕ್ಷಿತ ವಹಿವಾಟುಗಳು ನಡೆಯುತ್ತಿಲ್ಲ. ಚೀನಾದಲ್ಲಿ ಟೆಸ್ಲಾ ಸಂಸ್ಥೆ ತನ್ನ ಕಾರು ಬೆಲೆ ಇಳಿಸಿ ಆಟೊಮೊಬೈಲ್ ಉದ್ಯಮದಲ್ಲಿ ಬೆಲೆ ಸಮರಕ್ಕೆ ನಾಂದಿಹಾಡಿತು. ಪರಿಣಾಮವಾಗಿ ಚೀನಾದ ವಾಹನ ಕಂಪನಿಗಳು ಸಾಲುಸಾಲಾಗಿ ಬೆಲೆಕಡಿತ ಮಾಡುತ್ತಿವೆ. ಇವೆಲ್ಲವೂ ಡೀಫ್ಲೇಶನ್ ಸ್ಥಿತಿಗೆ ದೇಶವನ್ನು ನೂಕಿವೆ.

ಇದನ್ನೂ ಓದಿ: ಬಲಿಷ್ಠ ಬ್ಯಾಂಕ್; ಲಾಭದ ಓಟದಲ್ಲಿ ರಿಲಾಯನ್ಸ್ ಸಾಮ್ರಾಜ್ಯವನ್ನೇ ಹಿಂದಿಕ್ಕಿದ ಎಸ್​ಬಿಐ; ಎರಡು ದಶಕಗಳಲ್ಲಿ ಇದು ಎರಡನೇ ಸಲ

ಇನ್​ಫ್ಲೇಶನ್ ಎಂದರೇನು?

ಇನ್​ಫ್ಲೇಶನ್ ಅಥವಾ ಹಣದುಬ್ಬರ ಎಂದರೆ ಒಂದು ನಿರ್ದಿಷ್ಟ ಅಂತರದಲ್ಲಿ ಗ್ರಾಹಕ ವಸ್ತುಗಳ ಬೆಲೆ ಎಷ್ಟು ಏರಿದೆ ಎಂಬ ಲೆಕ್ಕ. ಆಹಾರವಸ್ತು, ಪೆಟ್ರೋಲ್ ಇತ್ಯಾದಿ ಜನರು ಸಾಮಾನ್ಯವಾಗಿ ಉಪಯೋಗಿಸುವ ವಸ್ತುಗಳ ಬೆಲೆಗಳ ಸರಾಸರಿಯನ್ನು ಇಲ್ಲಿ ಪರಿಗಣಿಸಿ ಗ್ರಾಹಕ ಬೆಲೆ ಅನುಸೂಚಿ ಎಂಬ ಪಟ್ಟಿ ಮಾಡಲಾಗುತ್ತದೆ. 2022ರ ಜುಲೈನಲ್ಲಿ ಸಿಪಿಐ ಎಷ್ಟಿತ್ತು, 2023ರ ಜುಲೈನಲ್ಲಿ ಸಿಪಿಐ ಎಷ್ಟಿದೆ, ಅದರ ನಡುವಿನ ಅಂತರ ಎಷ್ಟಿದೆ ಎಂಬುದರ ಹಣದುಬ್ಬರ ಎಷ್ಟಿದೆ ಅಥವಾ ಡೀಫ್ಲೇಶನ್ ಎಷ್ಟಿದೆ ಎಂಬುದನ್ನು ಅಳೆಯಲಾಗುತ್ತದೆ. ಇದರ ಸಂಖ್ಯೆ ಶೂನ್ಯಕ್ಕಿಂತ ಹೆಚ್ಚಿದ್ದರೆ ಅದು ಹಣದುಬ್ಬರ. ಇದು ಮೈನಸ್ ಇದ್ದರೆ ಅದು ಡೀಫ್ಲೇಶನ್ ಎನಿಸುತ್ತದೆ.

ಹಣದುಬ್ಬರ ಅಗತ್ಯವಾ?

ವ್ಯಾಪಾರ ಅಥವಾ ಉದ್ಯಮಗಳು ಆರೋಗ್ಯವಾಗಿರಬೇಕಾದರೆ ಹಣದುಬ್ಬರ ಆರೋಗ್ಯಕರ ಮಟ್ಟದಲ್ಲಿರಬೇಕು. ಯಾಕೆಂದರೆ ಉತ್ಪನ್ನ ತಯಾರಿಸುವ ಸಂಸ್ಥೆಗಳಿಗೆ ಅದು ಲಾಭದಾಯಕವಾಗಬೇಕಾದರೆ ಬೆಲೆ ಹೆಚ್ಚಳ ಆಗಲೇ ಬೇಕು. ಇಲ್ಲವಾದರೆ ಉದ್ಯಮ ನಷ್ಟ ಹೊಂದುತ್ತದೆ. ಹಣದುಬ್ಬರ ಶೇ. 2ರಿಂದ 5ರ ಆಸುಪಾಸಿನಲ್ಲಿದ್ದರೆ ಅದು ಉತ್ತಮ ಸ್ಥಿತಿ ಎಂದು ಭಾವಿಸಲಾಗಿದೆ. ಹಣದುಬ್ಬರ ತೀರಾ ಹೆಚ್ಚಾದರೆ ಜನಸಾಮಾನ್ಯರು ಖರೀದಿಗೆ ಮುಂದಾಗುವುದಿಲ್ಲ. ಇದೂ ಕೂಡ ಆರ್ಥಿಕ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ.

ಇದನ್ನೂ ಓದಿ: Ambiga Subramanian: ಹೆಮ್ಮೆಯ ಬೆಂಗಳೂರು ನಾರಿ ಅಂಬಿಗಾ ಸುಬ್ರಮಣಿಯನ್; ಸ್ವಂತವಾಗಿ ಬೆಳೆದು ಯಶಸ್ವಿ ಉದ್ಯಮಿಯಾದ ಈ ಮಹಿಳೆಯ ಸಾಧನೆ ಏನು?

ಡೀಫ್ಲೇಶನ್ ಆದರೆ ಏನು ಸಮಸ್ಯೆ?

ಬ್ಲಡ್ ಪ್ರೆಷರ್​ನಲ್ಲಿ ಹೈಬಿಪಿ ಮತ್ತು ಲೋಬಿಪಿ ಎರಡೂ ಕೂಡ ಡೇಂಜರಸ್ ಎನ್ನಲಾಗುವಂತೆ ಹಣದುಬ್ಬರ ವಿಷಯದಲ್ಲಿ ಇನ್​ಫ್ಲೇಷನ್ ಮತ್ತು ಡೀಫ್ಲೇಶನ್ ಎರಡೂ ಅಪಾಯಕಾರಿಯೇ. ನಿರ್ದಿಷ್ಟ ಅವಧಿಯಲ್ಲಿ ಗ್ರಾಹಕ ಬೆಲೆ ಅನುಸೂಚಿಯಲ್ಲಿ ಕುಸಿತ ಉಂಟಾದರೆ ಅದು ಡೀಫ್ಲೇಶನ್ ಎನಿಸುತ್ತದೆ. ಇದರಿಂದ ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತದಾದರೂ ಉದ್ಯಮವಲಯ ಲಾಭ ಇಲ್ಲದೇ ಕಂಗಾಲಾಗುತ್ತದೆ. ನಷ್ಟಕ್ಕೆ ಸಿಲುಕುತ್ತದೆ. ಮೂರ್ನಾಲ್ಕು ತಿಂಗಳು ಇದೇ ಸ್ಥಿತಿ ಮುಂದುವರಿದರೆ ಆರ್ಥಿಕ ಹಿಂಜರಿತದ ಪರಿಸ್ಥಿತಿಗೆ ಎಡೆಯಾಗುತ್ತದೆ.

ಬೇಡಿಕೆಯ ಕೊರತೆ, ಮಾರುಕಟ್ಟೆ ಕ್ಷಮತೆಯ ಕೊರತೆ ಇತ್ಯಾದಿ ನಕಾರಾತ್ಮಕ ಕಾರಣಳಿಂದ ಡೀಫ್ಲೇಶನ್ ಆಗಿದ್ದರೆ ಅದು ಆರ್ಥಿಕ ಅನಾರೋಗ್ಯದ ಸೂಚಕವಾಗಿರುತ್ತದೆ. ಇನ್ನು, ತಂತ್ರಜ್ಞಾನ ಅಭಿವೃದ್ಧಿ ಕಾರಣಕ್ಕೆ ಬೆಲೆಗಳು ಕಡಿಮೆ ಆಗಿ ಆ ಮೂಲಕ ಡೀಫ್ಲೇಶನ್ ಆಗಿದ್ದಲ್ಲಿ, ಅದು ಉತ್ತಮ ಆರ್ಥಿಕ ಭವಿಷ್ಯಕ್ಕೆ ಸೂಚಕವೆಂದು ತಜ್ಞರು ಭಾವಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಗೆ ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Wed, 9 August 23

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ