AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

China: ಚೀನಾದ ಒಂದು ಕಾನೂನಿಂದ ರಿಯಲ್ ಎಸ್ಟೇಟ್ ಅಲ್ಲೋಲಕಲ್ಲೋಲ; ಎವರ್​ಗ್ರ್ಯಾಂಡ್​ಗೆ 81 ಬಿಲಿಯನ್ ಡಾಲರ್ ನಷ್ಟ

Real Estate Sector: 2020ರಲ್ಲಿ ಚೀನಾ ಸರ್ಕಾರ ತಂದ ಒಂದು ರಿಯಲ್ ಎಸ್ಟೇಟ್ ಕಾನೂನಿನಿಂದಾಗಿ ಅಲ್ಲಿನ ಆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಎಮರ್ ಗ್ರಾಂಡ್ ಎಂಬ ದೈತ್ಯ ಕಂಪನಿ 2 ವರ್ಷದಲ್ಲಿ 81 ಬಿಲಿಯನ್ ಡಾಲರ್ ಹಣ ನಷ್ಟ ಮಾಡಿಕೊಂಡಿದೆ.

China: ಚೀನಾದ ಒಂದು ಕಾನೂನಿಂದ ರಿಯಲ್ ಎಸ್ಟೇಟ್ ಅಲ್ಲೋಲಕಲ್ಲೋಲ; ಎವರ್​ಗ್ರ್ಯಾಂಡ್​ಗೆ 81 ಬಿಲಿಯನ್ ಡಾಲರ್ ನಷ್ಟ
ಚೀನಾ ರಿಯಲ್ ಎಸ್ಟೇಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2023 | 4:04 PM

Share

ನವದೆಹಲಿ, ಜುಲೈ 19: ಮೂರು ವರ್ಷಗಳ ಹಿಂದೆ ಚೀನಾ ಸರ್ಕಾರ ಜಾರಿಗೆ ತಂದ ಒಂದು ಕಾನೂನಿನಿಂದ ಅಲ್ಲಿನ ರಿಯಲ್ ಎಸ್ಟೇಟ್ (China Real Estate) ಉದ್ಯಮವೇ ಅಲ್ಲೋಲಕಲ್ಲೋಲಗೊಂಡಂತಿದೆ. ಕಳೆದ ವರ್ಷ ಚೀನಾದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್​ನ (Country Garden Holdings) ಲಾಭ ಗಳಿಕೆಯಲ್ಲಿ ಶೇ. 96ರಷ್ಟು ಕುಸಿತಗೊಂಡು, ಅದರ ಮಾಲಕಿ ಯಾಂಗ್ ಹುಯಾನ್ ಅವರ ಷೇರುಸಂಪತ್ತಿಗೆ ಭಾರೀ ಕತ್ತರಿಬಿದ್ದಿತ್ತು. ಇದೀಗ ಮತ್ತು ಚೀನೀ ಬಿಲ್ಡರ್ ಎವರ್​ಗ್ರ್ಯಾಂಡ್ (Evergrande) ಎರಡು ವರ್ಷದಲ್ಲಿ 81 ಬಿಲಿಯನ್ ಡಾಲರ್ (ಸುಮಾರು 6.65 ಲಕ್ಷಕೋಟಿ ರೂ) ನಷ್ಟ ಮಾಡಿಕೊಂಡಿರುವುದು ವರದಿಯಾಗಿದೆ. ಬಿಬಿಸಿ ಬವರದಿ ಪ್ರಕಾರ 2021 ಮತ್ತು 2022ರಲ್ಲಿ ಎವರ್​ಗ್ರಾಂಡ್ ಒಟ್ಟು 81 ಬಿಲಿಯಲ್ ಡಾಲರ್​ನಷ್ಟು ನಷ್ಟ ಮಾಡಿಕೊಂಡಿದೆ.

ಎವರ್​ಗ್ರಾಂಡ್ ಕಂಪನಿ 300 ಬಿಲಿಯನ್ ಡಾಲರ್​ನಷ್ಟು (24 ಲಕ್ಷಕೋಟಿ ರುಪಾಯಿ) ಸಾಲ ಮಾಡಿಕೊಂಡಿದೆ. ರಿಯಲ್ ಎಸ್ಟೇಟ್ ವಲಯ ಕುಸಿದಿರುವ ಕಾರಣಕ್ಕೆ ಎವರ್​ಗ್ರಾಂಡ್ ಸಂಸ್ಥೆಯ ಆದಾಯ ಕಳೆದ 2 ವರ್ಷದಲ್ಲಿ ಬಹಳ ಕಡಿಮೆ ಆಗಿದೆ. 2021ರಲ್ಲಿ 1.2 ಬಿಲಿಯನ್ ಡಾಲರ್​ಗಳ ಅಂತಾರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲೂ ಅದಕ್ಕೆ ಸಾಧ್ಯವಾಗಿರಲಿಲ್ಲ. ಷೇರುಪೇಟೆಗಳ ಲಿಸ್ಟ್​ಗಳಿಂದ ಎವರ್​ಗ್ರಾಂಡ್ ಕಂಪನಿಯ ಷೇರನ್ನು ತೆಗೆದುಹಾಕಲಾಗಿತ್ತು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು 2020ರಲ್ಲಿ ಚೀನಾ ಸರ್ಕಾರ ತಂದ ಹೊಸ ರಿಯಲ್ ಎಸ್ಟೇಟ್ ಕಾನೂನು.

ಇದನ್ನೂ ಓದಿHDFC: ಎಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ

ಚೀನಾದ ಹೊಸ ಕಾನೂನುಏನು ಹೇಳುತ್ತದೆ?

ಚೀನಾ ಸರ್ಕಾರ 2020ರಲ್ಲಿ ರಿಯಲ್ ಎಸ್ಟೇಟ್ ವಲಯದ ಸುಧಾರಣೆ ಹೆಸರಿನಲ್ಲಿ ಒಂದು ಕಾನೂನು ರೂಪಿಸಿತ್ತು. ಅದರಂತೆ, ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದು ಆ ನಿಯಮ. ಇದು ಅಲ್ಲಿಯ ರಿಯಲ್ ಎಸ್ಟೇಟ್ ವಲಯದ ಬುಡ ಅಲುಗಾಡಿಸಿತ್ತು.

ಎವರ್​ಗ್ರಾಂಡ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ್ದು ಅಲ್ಲಿಯ ಇತರ ರಿಯಲ್ ಎಸ್ಟೇಟ್ ಕಂಪನಿಗಳಿಗೂ ಪರಿಣಾಮ ಬೀರಿತ್ತು. ಒಂದೆಡೆ ಏರುತ್ತಿರುವ ಸಾಲ, ಇನ್ನೊಂದೆಡೆ ಹೊಸ ಸಾಲ ಪಡೆಯಲು ಸಾಧ್ಯವಾಗದೇ ಇರುವುದು, ಮಗದೊಂದೆಡೆ ಜನರು ಮನೆ ಖರೀದಿಗೆ ಆಸಕ್ತಿ ತೋರದೇ ಇರುವುದು ಇವೆಲ್ಲವೂ ರಿಯಲ್ ಎಸ್ಟೇಟ್ ಕಂಪನಿಗಳನ್ನು ನಡುಗಿಸಿದ್ದವು. ಕೈಹಾಕಿದ್ದ ನಿರ್ಮಾಣ ಪ್ರಾಜೆಕ್ಟ್​ಗಳನ್ನು ನಡುನೀರಿನಲ್ಲೇ ಬಿಟ್ಟು ಓಡಿ ಹೋಗಿದ್ದರು ಚೀನೀ ಬಿಲ್ಡರ್​ಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ