AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cigarette Lighter Policy: ಧೂಮಪಾನಿಗಳ ಗಮನಕ್ಕೆ..! ಸಿಗರೇಟ್ ಲೈಟರ್ ಆಮದು ನೀತಿಯಲ್ಲಿ ಬದಲಾವಣೆ; ಲೈಟರ್​ನಿಂದ ಅನಾಹುತಗಳೇನು?

How Cigarette Lighter Damages Economy: ಆಮದು ಮಾಡಿಕೊಳ್ಳಲಾಗುವ ಸಿಗರೇಟ್ ಲೈಟರ್​ನ ಸಿಐಎಫ್ ಮೌಲ್ಯ 20 ರೂಗಿಂತ ಕಡಿಮೆ ಇದ್ದರೆ ಅದರ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಕೇಂದ್ರದ ಡಿಜಿಎಫ್​ಟಿ ಜೂನ್ 29ರಂದು ಅಧಿಸೂಚನೆ ಹೊರಡಿಸಿದೆ.

Cigarette Lighter Policy: ಧೂಮಪಾನಿಗಳ ಗಮನಕ್ಕೆ..! ಸಿಗರೇಟ್ ಲೈಟರ್ ಆಮದು ನೀತಿಯಲ್ಲಿ ಬದಲಾವಣೆ; ಲೈಟರ್​ನಿಂದ ಅನಾಹುತಗಳೇನು?
ಸಿಗರೇಟ್ ಲೈಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 30, 2023 | 1:18 PM

Share

ನವದೆಹಲಿ: ಸಿಗರೇಟ್ ಲೈಟರ್​ಗಳ (Cigarette Lighters) ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀತಿ ಪರಿಷ್ಕರಣೆ (Policy Revision) ಮಾಡಿದೆ. 20 ರೂಗಿಂತ ಕಡಿಮೆ ಬೆಲೆಯ ಲೈಟರ್​ಗಳ ಆಮದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಜೂನ್ 29ರಂದು ಅಧಿಸೂಚನೆ ಹೊರಡಿಸಿರುವುದು ತಿಳಿದುಬಂದಿದೆ. ಒಂದು ಲೈಟರ್​ಗೆ ಸಿಐಎಫ್ ಮೌಲ್ಯ (CIF Value) 20 ರೂಗಿಂತ ಹೆಚ್ಚು ಇದ್ದರೆ ಅದರ ಆಮದು ಮಾಡಿಕೊಳ್ಳಬಹುದು ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (DGFT) ಹೇಳಿದೆ. ಇದು ಪಾಕೆಟ್ ಲೈಟರ್, ಗ್ಯಾಸ್ ಲೈಟರ್​ಗಳಿಗೆ ಅನ್ವಯ ಆಗುತ್ತದೆ.

ಸಿಐಎಫ್ ಎನ್ನುವುದು ಕಾಸ್ಟ್, ಇನ್ಷೂರೆನ್ಸ್ ಮತ್ತು ಫ್ರೀಟ್​ನ ಕಿರುರೂಪ. ಬೆಲೆ, ವಿಮೆ ಮತ್ತು ಸಾಗಣೆ ವೆಚ್ಚಕ್ಕೆ ಸಿಐಎಫ್ ಎನ್ನುತ್ತಾರೆ. ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮದಲ್ಲಿ ಆಮದು ಮಾಡಿಕೊಳ್ಳಲಾಗುವ ಸರಕುಗಳ ಒಟ್ಟು ಮೌಲ್ಯ ಗಣಿಸಲು ಸಿಐಎಫ್ ನಿರ್ಧಾರ ಮಾಡಲಾಗುತ್ತದೆ.

2022-23ರ ಹಣಕಾಸು ವರ್ಷದಲ್ಲಿ 0.66 ಮಿಲಿಯನ್ ಡಾಲರ್ (ಸುಮಾರು 5.42 ಕೋಟಿ ರೂ) ಮೊತ್ತದಷ್ಟು ಲೈಟರ್​ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸ್ಪೇನ್, ಟರ್ಕಿ ಮತ್ತು ಯುಎಇ ದೇಶಗಳಿಂದ ಈ ಸಿಗರೇಟ್ ಲೈಟರ್​ಗಳು ಹೆಚ್ಚಾಗಿ ಆಮದಾಗುತ್ತವೆ.

ಇದನ್ನೂ ಓದಿRules Change in July 2023: ಎಲ್​ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು

ಸಿಗರೇಟ್ ಲೈಟರ್​ಗಳಿಂದ ಏನು ಸಮಸ್ಯೆ?

ಕಳೆದ ವರ್ಷ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕೇಂದ್ರ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯಕ್ಕೆ ಬರೆದ ಒಂದು ಪತ್ರ ಬಹಳ ಪ್ರಸ್ತುತ ಎನಿಸುತ್ತದೆ. ಅದರಲ್ಲಿ ಅವರು ಸಿಗರೇಟು ಲೈಟರ್​ಗಳ ಆಮದನ್ನೇ ನಿಷೇಧಿಸುವಂತೆ ಒತ್ತಾಯಿಸಿದ್ದರು. ಲೈಟರ್​ಗಳಿಂದ ಭಾರತದ ಸಾಂಪ್ರದಾಯಿಕ ಬೆಂಕಿ ಕಡ್ಡಿ (ಮ್ಯಾಚ್ ಬಾಕ್ಸ್) ತಯಾರಕರಿಗೆ ಅದೆಷ್ಟು ಹೊಡೆತ ಬೀಳುತ್ತದೆ ಎಂದು ಅವರು ಆ ಪತ್ರದಲ್ಲಿ ವಿವರಿಸಿರುವುದು ಗಮನಾರ್ಹ.

ಭಾರತದ ಹೆಚ್ಚಿನ ಮ್ಯಾಚ್ ಬಾಕ್ಸ್​ಗಳು ತಯಾರಾಗುವುದು ತಮಿಳುನಾಡಿನಲ್ಲೇ. ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಉದ್ಯಮ ಕೆಲಸ ನೀಡಿದೆ. ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಪಟಾಕಿ ಹೆಚ್ಚಾಗಿ ತಯಾರಾಗುವ ಶಿವಕಾಶಿ ಜಿಲ್ಲೆಯಲ್ಲೇ ಅತಿಹೆಚ್ಚು ಮ್ಯಾಚ್ ಬಾಕ್ಸ್ ತಯಾರಕರು ಇರುವುದು. ಮದುರೈನಿಂದ ಕೆಳಗಿನ ಹಲವು ಪ್ರದೇಶಗಳಲ್ಲಿ ಈ ಉದ್ಯಮ ಹರಡಿದೆ. ಸ್ಥಳೀಯ ಆರ್ಥಿಕತೆ ವೃದ್ಧಿಗೆ ಸಹಾಯಕವಾಗಿದೆ. ಹಲವು ದೇಶಗಳಿಗೆ ಮ್ಯಾಚ್ ಬಾಕ್ಸ್​ಗಳು ರಫ್ತಾಗಲಿದ್ದು ಅದರ ಮೌಲ್ಯ ವರ್ಷಕ್ಕೆ 400 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿMost Valuable Banks: ಎಚ್​ಡಿಎಫ್​ಸಿಗಳ ವಿಲೀನದ ಬಳಿಕ ಸೃಷ್ಟಿಯಾಗಲಿದೆ ವಿಶ್ವದ ಅಗ್ರಗಣ್ಯ ಬ್ಯಾಂಕ್; ಜರ್ಮನಿ ಜನಸಂಖ್ಯೆಗಿಂತಲೂ ಹೆಚ್ಚಿನ ಗ್ರಾಹಕರು, ಅಗಾಧ ಷೇರುಸಂಪತ್ತು

ಸಿಎಂ ಸ್ಟಾಲಿನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ ಇನ್ನೊಂದ ಸಂಗತಿ ಎಂದರೆ ಸಿಗರೇಟ್ ಲೈಟರ್​ನಿಂದ ಮ್ಯಾಚ್ ಬಾಕ್ಸ್ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತಿದೆ. 10 ರುಪಾಯಿಗೆ ಸಿಗುವ ಲೈಟರ್ 20 ಮ್ಯಾಚ್​ಬಾಕ್ಸ್​ಗಳಿಗೆ ಸಮವಾಗಿದೆ. ಅಲ್ಲದೇ ಸಿಗರೇಟ್ ಲೈಟರ್​ನಿಂದ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಸೃಷ್ಟಿಯಾಗುತ್ತದೆ. ಈ ಲೈಟರ್​ಗಳನ್ನು ಉತ್ತೇಜಿಸಿದರೆ ಆರ್ಥಿಕತೆಗೆ ಹೊಡೆತ ಬೀಳುವುದರ ಜೊತೆಗೆ ಪರಿಸರಕ್ಕೆ ಹಾನಿಯೂ ಆಗುತ್ತದೆ ಎಂದು ತಮಿಳುನಾಡು ಸಿಎಂ ವಾದಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Fri, 30 June 23

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು