AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮರುಬಳಕೆ ಉದ್ಯಮದ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ಆಗಬಲ್ಲುದು: ಅಮಿತಾಭ್ ಕಾಂತ್

Circular Economy growth in India: 2047ರೊಳಗೆ ಭಾರತದಲ್ಲಿನ ವೃತ್ತೀಯ ಆರ್ಥಿಕತೆಯ ಗಾತ್ರವೇ 2 ಟ್ರಿಲಿಯನ್ ಡಾಲರ್ ಆಗಬಹುದು ಎಂದು ನೀತಿ ಆಯೋಗ್​ನ ಮಾಜಿ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ. ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಉದ್ಭವಿಸುವ ಹಲವು ಸಮಸ್ಯೆಗಳಿಗೆ ವೃತ್ತೀಯ ಆರ್ಥಿಕತೆ ಉತ್ತಮ ಪರಿಹಾರವಾಗಬಲ್ಲುದು ಎಂಬುದು ಅವರ ಅನಿಸಿಕೆ.

ಭಾರತದ ಮರುಬಳಕೆ ಉದ್ಯಮದ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ಆಗಬಲ್ಲುದು: ಅಮಿತಾಭ್ ಕಾಂತ್
ಅಮಿತಾಭ್ ಕಾಂತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2024 | 1:33 PM

ನವದೆಹಲಿ, ಡಿಸೆಂಬರ್ 17: ಮುಂದಿನ ಎರಡೂವರೆ ದಶಕದೊಳಗೆ ಭಾರತದ ವೃತ್ತೀಯ ಆರ್ಥಿಕತೆಯಿಂದ ಎರಡು ಟ್ರಿಲಿಯನ್ ಡಾಲರ್​ನ ಮಾರುಕಟ್ಟೆ ಮೌಲ್ಯ ಸೃಷ್ಟಿಯಾಗಬಲ್ಲುದು. ಒಂದು ಕೋಟಿ ಉದ್ಯೋಗಗಳನ್ನೂ ಸೃಷ್ಟಿಸಬಲ್ಲುದು ಎಂದು ಆರ್ಥಿಕ ತಜ್ಞ ಹಾಗು ಭಾರತದ ಜಿ20 ಶೆರ್ಪಾ ಆಗಿದ್ದ ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಸರ್ಕುಲಾರ್ ಎಕನಾಮಿ ಅಥವಾ ವೃತ್ತಾಕಾರದ ಆರ್ಥಿಕತೆ ಎಂದರೆ ಪರಿಸರಕ್ಕೆ ಪೂರಕವಾಗಿ ವಸ್ತುಗಳನ್ನು ಮರುಬಳಕೆ ಮಾಡಿ ಬಳಸುವ ಒಂದು ವ್ಯವಸ್ಥೆಯಾಗಿದೆ. ಅಮಿತಾಭ್ ಕಾಂತ್ ಪ್ರಕಾರ, ಈ ಮಾದರಿಯ ಆರ್ಥಿಕತೆಯಿಂದ ಹಣ ಉಳಿತಾಯ ಆಗುವುದು ಮಾತ್ರವಲ್ಲ, ದೇಶದ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೂಡ ನೀಡಬಲ್ಲುದು. ಜಾಗತಿಕ ವೃತ್ತೀಯ ಆರ್ಥಿಕತೆಯ ಮಾರುಕಟ್ಟೆಯಲ್ಲಿ ಭಾರತ ಹಿಡಿತ ಸಾಧಿಸಲು ಅನುಕೂಲವಾಗಬಹುದು.

ಸದ್ಯ ಭಾರತದ ಒಟ್ಟಾರೆ ಆರ್ಥಿಕತೆಯ ಗಾತ್ರ 3.7 ಟ್ರಿಲಿಯನ್ ಡಾಲರ್​ನಷ್ಟಿದೆ. ಇದರಲ್ಲಿ ವೃತ್ತೀಯ ಆರ್ಥಿಕತೆಯ ಗಾತ್ರವೇ 2025ರೊಳಗೆ ಎರಡು ಟ್ರಿಲಿಯನ್ ಡಾಲರ್​ಗೆ ಏರುವುದು ಎಂದರೆ ಸಣ್ಣ ವಿಷಯವಲ್ಲ. ‘ನಗರೀಕರಣ ಮತ್ತು ಕೈಗಾರಿಕೀರಣದಿಂದಾಗಿ ಸುಸ್ಥಿರವಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಮರುಬಳಕೆ ಆರ್ಥಿಕತೆಯು ಭರವಸೆಯ ಬೆಳಕಾಗಬಲ್ಲುದು’ ಎಂಬುದು ನೀತಿ ಆಯೋಗ್​ನ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರ ಅನಿಸಿಕೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್ ರಫ್ತು

ದೇಶದ ನೈಸರ್ಗಿಕ ಸಂಪನ್ಮೂಲಗಳು ಬಹಳ ವೇಗವಾಗಿ ನಶಿಸಿಹೋಗುತ್ತಿವೆ. ಸಾಕಷ್ಟು ತ್ಯಾಜ್ಯಗಳು ನಿರ್ಮಾಣವಾಗುತ್ತಿವೆ. ದಿನವೊಂದಕ್ಕೆ 1.6 ಲಕ್ಷ ಟನ್​ಗಳಷ್ಟು ಒಣತ್ಯಾಜ್ಯವು ನಿರ್ಮಾಣ ಆಗುತ್ತಿದೆ. ಹೀಗಾಗಿ, ವೃತ್ತೀಯ ಆರ್ಥಿಕತೆಗೆ ಒತ್ತು ಕೊಡುವುದು ಬಹಳ ಮುಖ್ಯ ಎನ್ನಲಾಗುತ್ತಿದೆ.

‘ಭಾರತದಲ್ಲಿ ವಾಸಿಸಲು ಅಯೋಗ್ಯ ಎನಿಸುವ ಪರಿಸ್ಥಿತಿ ಬರಬಹುದು. ನಗರೀಕರಣ ಮತ್ತು ಕೈಗಾರಿಕೀರಣದಿಂದ ಉದ್ಬವಿಸುತ್ತಿರುವ ಸಮಸ್ಯೆಗಳಿಗೆ ಸರ್ಕುಲಾರ್ ಎಕನಾಮಿ ಉತ್ತಮ ಪರಿಹಾರ ಅನಿಸಬಹುದು. ಇರುವ ಸಂಪನ್ಮೂಲಗಳನ್ನು ಸಾಧ್ಯವಾದಷ್ಟೂ ಹೆಚ್ಚು ಅವಧಿ ಮರುಬಳಕೆ ಮಾಡುವುದು ಉತ್ತಮ ವ್ಯವಸ್ಥೆ,’ ಎಂದು ಅಮಿತಾಭ್ ಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ…

ವೃತ್ತೀಯ ಆರ್ಥಿಕತೆಯ ವ್ಯವಸ್ಥೆಯು ತ್ಯಾಜ್ಯವನ್ನು ಮಾತ್ರವಲ್ಲ, ಪರಿಸರಕ್ಕೆ ಹಾನಿಯಾಗುವುದನ್ನೂ ಕಡಿಮೆ ಮಾಡುತ್ತದೆ. ಜೊತೆಗೆ, ಹೊಸ ಆರ್ಥಿಕ ಅವಕಾಶಗಳನ್ನೂ ಒದಗಿಸುತ್ತದೆ ಎಂಬುದು ಅವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ