AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

E- Passports: ಮೈಕ್ರೋಚಿಪ್​ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್​ಪೋರ್ಟ್​; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?

ಭಾರತ ಸರ್ಕಾರವು ಇ-ಪಾಸ್​ಪೋರ್ಟ್ ಜಾರಿಗೆ ತರುವುದಕ್ಕೆ ಮುಂದಾಗಿದೆ. ಇದು ಹೇಗೆ ಸಾಮಾನ್ಯ ಪಾಸ್​ಪೋರ್ಟ್​ಗಿಂತ ಭಿನ್ನ ಎಂಬುದರ ಮಾಹಿತಿ ಇಲ್ಲಿದೆ.

E- Passports: ಮೈಕ್ರೋಚಿಪ್​ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್​ಪೋರ್ಟ್​; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 10, 2022 | 8:05 PM

Share

ಪದೇಪದೇ ಪ್ರಯಾಣ ಮಾಡುವಂಥ ಪ್ರಯಾಣಿಕರಿಗಾಗಿ ಶೀಘ್ರದಲ್ಲೇ ಚಿಪ್​ ಇರುವಂಥ ಇ-ಪಾಸ್​ಪೋರ್ಟ್ ಪರಿಚಯಿಸುವುದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯೋಜನೆ ಇರುವುದಾಗಿ ಹೇಳಿಕೊಂಡಿದೆ. “ಪಾಸ್​ಪೋರ್ಟ್​ ಸೇವೆಯನ್ನು ನಿರಂತರವಾಗಿ ವಿಸ್ತರಿಸಲು ಸಚಿವಾಲಯದ ಪ್ರಯತ್ನ ಇದು. ವಾಸ್ತವದಲ್ಲಿ ಎಲ್ಲ ನಾಗರಿಕ ಸೇವೆಗಳು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ವ್ಯವಸ್ಥೆಗಳು ಹಾಗೂ ನಮ್ಮ ಪಾಸ್​ಪೋರ್ಟ್ ಸೇವೆಗಳನ್ನು ಒದಗಿಸುತ್ತೇವೆ,” ಎಂದು ವಿದೇಶಾಂಗ ಸಚಿವಾಲಯಗಳ ವಕ್ತಾರರಾದ ಅರಿಂದಮ್ ಬಗ್ಚಿ ಈಚೆಗೆ ಹೇಳಿದ್ದಾರೆ. “ಸದ್ಯದಲ್ಲೇ ಭಾರತ ಮುಂದಿನ- ತಲೆಮಾರಿನ ಇ-ಪಾಸ್​ಪೋರ್ಟ್​ಗಳನ್ನು ನಾಗರಿಕರಿಗಾಗಿ ಪರಿಚಯಿಸಲಿದೆ,” ಎಂದು ವಿದೇಶಾಂಗ ಸಚಿವಾಲಯ ಪಾಸ್​ಪೋರ್ಟ್ ಮತ್ತು ವೀಸಾ (CPV) ವಿಭಾಗದಲ್ಲಿ ರಾಯಭಾರ ಕಚೇರಿಯ ಕಾರ್ಯದರ್ಶಿಯಾದ ಸಂಜಯ್ ಭಟ್ಟಾಚಾರ್ಯ ಟ್ವೀಟ್​ನಲ್ಲಿ ಹೇಳಿದ್ದಾರೆ. ಬಗ್ಚಿ ಇನ್ನೂ ಮುಂದುವರಿದು, ಈ ಯೋಜನೆಯ ಅನುಷ್ಠಾನದ ಪ್ರಕ್ರಿಯೆಯಲ್ಲಿ ಸರ್ಕಾರವಿದೆ ಎಂದು ತಿಳಿಸಿದ್ದಾರೆ. ಇಲ್ಲಿಯ ತನಕ ಭಾರತದ ಇ-ಪಾಸ್​ಪೋರ್ಟ್​ ಯೋಜನೆ ಪ್ರಕ್ರಿಯೆ ಬಗ್ಗೆ ಗೊತ್ತಿರುವ ಸಂಗತಿಗಳು ಇಲ್ಲಿವೆ.

– ಹೊಸ ಇ-ಪಾಸ್​ಪೋರ್ಟ್​ಗಳು ಸುರಕ್ಷಿತ ಬಯೋಮೆಟ್ರಿಕ್ ಡೇಟಾ ಮೇಲೆ ಆಧಾರವಾಗಿದೆ ಮತ್ತು ಜಾಗತಿಕವಾಗಿ ಸುಲಲಿತವಾದ ವಲಸೆ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ, ಎಂದು ಭಟ್ಟಾಚಾರ್ಯ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ವಲಸೆ ಪ್ರಕ್ರಿಯೆಯಲ್ಲಿ ನಕಲಿ ಸಹಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ತೆಗೆದುಕೊಂಡಿರುವ ಪ್ರಯತ್ನದ ಭಾಗವಿದು.

– ಇ-ಪಾಸ್​ಪೋರ್ಟ್​ ಐಸಿಎಒ ನಿಯಮಾವಳಿಗಳಿಗೆ ತಕ್ಕಂತೆ ಇರುತ್ತದೆ. ಇಂಡಿಯಾ ಸೆಕ್ಯೂರಿಟಿ ಪ್ರೆಸ್, ನಾಸಿಕ್​ಗೆ ಇ-ಪಾಸ್​ಪೋರ್ಟ್ ಉತ್ಪಾದನೆಗೆ ಎಲೆಕ್ಟ್ರಾನಿಕ್ ಕಾಂಟ್ಯಾಕ್ಟ್​ಲೆಸ್ ಇನ್​ಲೇಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಜಾಗತಿಕ ಟೆಂಡರ್ ಕರೆಯುವುದಕ್ಕೆ ನಾಸಿಕ್​ನ ಐಎಸ್​ಪಿ ಅಧಿಕೃತವಾಗಿ ಅನುಮತಿ ಪಡೆದಿದೆ. ಇ-ಪಾಸ್​ಪೋರ್ಟ್​ಗಾಗಿ ಇದು ಅತ್ಯಗತ್ಯ. ಪ್ರೆಸ್​ನಿಂದ ಯಶಸ್ವಿಯಾಗಿ ಟೆಂಡರ್ ಮತ್ತು ಖರೀದಿ ಮುಗಿದ ಮೇಲೆ ಇ-ಪಾಸ್​ಪೋರ್ಟ್ ಉತ್ಪಾದನೆ ಶುರುವಾಗುತ್ತದೆ ಎಂದು ವರದಿಯಾಗಿದೆ.

– ವಿದೇಶಗಳಿಗೆ ಪ್ರಯಾಣ ಮಾಡುವವರಿಗೆ ಪಾಸ್​ಪೋರ್ಟ್​ ಆಗಿ ಸಾಂಪ್ರದಾಯಿಕ ಬುಕ್​ಲೆಟ್ಸ್ ನೀಡುತ್ತದೆ. ಪಾಸ್​ಪೋರ್ಟ್ ವಿತರಣೆ ಪ್ರಾಧಿಕಾರದಿಂದ 2019ರಲ್ಲಿ 1.28 ಕೋಟಿಗು ಹೆಚ್ಚು ಪಾಸ್​ಪೋರ್ಟ್ ವಿತರಣೆ ಮಾಡಲಾಗಿತ್ತು ಎಂದು ವೆಬ್​ಸೈಟ್​ವೊಂದು ವರದಿ ಮಾಡಿತ್ತು. ಆ ಸಮಯದಲ್ಲಿ ಚೀನಾದ ನಂತರ ಅತಿ ಹೆಚ್ಚು ಪಾಸ್​ಪೋರ್ಟ್ ವಿತರಿಸಿದ ದೇಶ ಭಾರತ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಆದರೆ ಸಾಂಪ್ರದಾಯಿಕವಾಗಿ ಬಳಸುವ ಪಾಸ್​ಪೋರ್ಟ್​ನಲ್ಲಿ ವಂಚನೆ ಸಾಧ್ಯತೆ ಹೆಚ್ಚು. ಅದನ್ನು ಇ-ಪಾಸ್​ಪೋರ್ಟ್ ತಡೆಯುತ್ತದೆ ಎಮಬ ಗುರಿ ಇದೆ. ಪಾಸ್​ಪೋರ್ಟ್​ ನಲ್ಲಿ ಇರುವ ಚಿಪ್​ ಹಲವು ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅದು ಪಾಸ್​ಪೋರ್ಟ್​ನ ಎರಡನೇ ಪುಟದಲ್ಲಿ ಇದ್ದು, ಅದರಲ್ಲಿ ಡಿಜಿಟಲ್ ಸುರಕ್ಷತೆ ವೈಶಿಷ್ಟ್ಯ ಇರುತ್ತದೆ. ಇದರರ್ಥ ಏನೆಂದರೆ, ಆ ಚಿಪ್​ನಲ್ಲಿ ಪ್ರತಿ ದೇಶದ ವಿಶಿಷ್ಟ ಸಹಿ ಇದ್ದು, ಅದನ್ನು ಅವರ ಪ್ರಮಾಣಪತ್ರಗಳನ್ನು ದೃಢೀಕರಿಸಬಹುದು.

– ಮೊದಲ ಬಾರಿಗೆ ಇ-ಪಾಸ್​ಪೋರ್ಟ್​ಗಳನ್ನು ಆರಂಭಿಸಿದ್ದು 2017ರಲ್ಲಿ. ಆ ನಂತರ ಪ್ರಾಯೋಗಿಕವಾಗಿ 20 ಸಾವಿರ ರಾಜತಾಂತ್ರಿಕರಿಗೆ ಹಾಗೂ ಅಧಿಕಾರಿಗಳಿಗೆ ಇ-ಪಾಸ್​ಪೋರ್ಟ್​ಗಳನ್ನು ವಿತರಿಸಲಾಗಿದೆ. ಇವೆಲ್ಲದರಲ್ಲಿ ಚಿಪ್ ಇವೆ. ಪೂರ್ತಿಯಾಗಿ ಡಿಜಿಟಲ್ ಆದ ಪಾಸ್​ಪೋರ್ಟ್ ಪರಿಚಯಿಸುವ ಗುರಿ ಸರ್ಕಾರಕ್ಕೆ ಇದೆ. ಇದನ್ನು ಮೊಬೈಲ್​ಫೋನ್​ನಂಥ ಸಾಧನದಲ್ಲಿ ಸಂಗ್ರಹಿಸಬಹುದು. ಕೇಂದ್ರೀಯ ವ್ಯವಸ್ಥೆ ಅಡಿಯಲ್ಲಿ ಭಾರತದ ನಾಗರಿಕರಿಗೆ ಕೇಂದ್ರೀಕೃತ ವ್ಯವಸ್ಥೆ ಅಡಿಯಲ್ಲಿ ಭಾರತೀಯ ನಾಗರಿಕರಿಗೆ ಇ-ಪಾಸ್​ಪೋರ್ಟ್​ಗಳನ್ನು ವಿತರಿಸುವ ಕೆಲ ನಡೆಯುತ್ತಿದೆ ಎಂದು 2019ರಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

– ಎರಡನೇ ಹಂತದ ಪಾಸ್​ಪೋರ್ಟ್ ಸೇವಾ ಕಾರ್ಯಕ್ರಮಕ್ಕೆ ಟಿಸಿಎಸ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಈ ಕಾರ್ಯಕ್ರಮ 2008ರಲ್ಲಿ ಆರಂಭವಾಗಿತ್ತು. ಆಗ ಪಾಸ್​ಪೋರ್ಟ್ ದೊರೆಯುವುದನ್ನು ಡಿಜಿಟಲ್ ಆಗಿ ಬದಲಾವಣೆ ಮಾಡಿತ್ತು. ಆನ್​ಲೈನ್​ನಲ್ಲಿ ಸೇವೆ, ಜಾಗತಿಕ ಮಟ್ಟದಲ್ಲಿ ಸಮಾನವಾದ ವಿಶ್ವಾಸಾರ್ಹತೆ ಹಾಗೂ ಕಾಲಾವಧಿಯನ್ನು ನಿಗದಿ ಮಾಡಿತ್ತು. ಈಗಿನ ಹಂತದಲ್ಲಿ ಟಿಸಿಎಸ್​ನಿಂದ ಇ-ಪಾಸ್​ಪೋರ್ಟ್ ವಿತರಣೆಗೆ ಹೊಸ ವೈಶಿಷ್ಟ್ಯ ಸೇರ್ಪಡೆ ಮಾಡಲಿದೆ.

ಇದನ್ನೂ ಓದಿ: World’s Powerful Passports: ವಿಶ್ವದ ಪ್ರಬಲ ಪಾಸ್​ಪೋರ್ಟ್ಸ್ ಟಾಪ್ ಟೆನ್ ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ