AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗಿಗಳಿಗೆ ನಿರಾಸೆ; ಡಿಎ ಹೆಚ್ಚಳ ಜಾರಿ ಮಾಡಿದರೂ ಶೇ. 25ರಷ್ಟು ಗ್ರಾಚುಟಿ ಹೆಚ್ಚಳ ಜಾರಿಯಾಗಿಲ್ಲ

No Gratuity rise now: ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ. ನಿಯಮ ಪ್ರಕಾರ ಡಿಎ ಶೇ. 50 ತಲುಪಿದರೆ ನಿವೃತ್ತಿ ಗ್ರಾಚುಟಿ ಗರಿಷ್ಠ ಮಿತಿ ಶೇ. 25ರಷ್ಟು ಹೆಚ್ಚಾಗಬೇಕಿತ್ತು. ಮೇ 30ರಂದು ಇಪಿಎಫ್​ಒ ಸಂಸ್ಥೆ ಈ ಸಂಬಂಧ ಆದೇಶ ಕೂಡ ಹೊರಡಿಸಿದೆ. ಆದರೆ, ಒಂದು ವಾರದ ಬಳಿ ಮೇ 7ರಂದು ಇಪಿಎಫ್​ಒ ಸುತ್ತೋಲೆ ಹೊರಡಿಸಿ, ಡೆತ್ ಗ್ರಾಚುಟಿ ಮತ್ತು ರಿಟೈರ್ಮೆಂಟ್ ಗ್ರಾಚುಟಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.

ಉದ್ಯೋಗಿಗಳಿಗೆ ನಿರಾಸೆ; ಡಿಎ ಹೆಚ್ಚಳ ಜಾರಿ ಮಾಡಿದರೂ ಶೇ. 25ರಷ್ಟು ಗ್ರಾಚುಟಿ ಹೆಚ್ಚಳ ಜಾರಿಯಾಗಿಲ್ಲ
ಗ್ರಾಚುಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 5:20 PM

Share

ನವದೆಹಲಿ, ಮೇ 20: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (DA- Dearness Allowance) ಶೇ. 50ಕ್ಕೆ ಹೆಚ್ಚಿಸಿದೆ. ಗ್ರಾಚುಟಿ ಮಿತಿಯನ್ನೂ ಕೂಡ ಶೇ. 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿತ್ತು. ಉದ್ಯೋಗಿಗಳಿಗೆ ಇದು ಡಬಲ್ ಖುಷಿಯ ಸಂಗತಿಯಾಗಿತ್ತು. ಆದರೆ, ಗ್ರಾಚುಟಿ ಹೆಚ್ಚಳ ಜಾರಿಯನ್ನು (Gratuity benefit maximum limit) ಇಪಿಎಫ್​ಒ ಸದ್ಯಕ್ಕೆ ತಡೆಯಲ್ಲಿಟ್ಟಿದೆ. ಡಿಎ ಹೆಚ್ಚಳದಿಂದಾಗಿ ಗ್ರಾಚುಟಿ ಮಿತಿ ಹೆಚ್ಚಳವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಮೇ 7ರಂದು ಇಪಿಎಫ್​ಒ ಹೊರಡಿಸಿದ ಸುತ್ತೋಲೆಯಲ್ಲಿ ಈ ಮಾಹಿತಿ ಪ್ರಕಟಿಸಲಾಗಿದೆ.

ಉದ್ಯೋಗಿಯ ನಿವೃತ್ತಿ ಮತ್ತು ಸಾವಿನ ಸಂದರ್ಭದಲ್ಲಿ ಗರಿಷ್ಠ 20 ಲಕ್ಷ ರೂವರೆಗೆ ಗ್ರಾಚುಟಿ ಕೊಡಲಾಗುತ್ತದೆ. ಈಗ ಈ ಗ್ರಾಚುಟಿ ಮಿತಿಯನ್ನು ಶೇ. 25ರಷ್ಟು, ಅಂದರೆ 20 ರಿಂದ 25 ಲಕ್ಷ ರೂಗೆ ಹೆಚ್ಚಿಸಲು ಇಪಿಎಫ್​ಒ ಏಪ್ರಿಲ್ 30ರಂದು ಆದೇಶ ಹೊರಡಿಸಿತ್ತು. ಅದಾಗಿ ಒಂದು ವಾರದಲ್ಲಿ ಈ ಆದೇಶವನ್ನು ಹಿಂಪಡೆಯುವ ಸುತ್ತೋಲೆ ಹೊರಡಿಸಿದೆ. ಡಿಎ ಹೆಚ್ಚಳದಿಂದಾಗಿ ಗ್ರಾಚುಟಿ ಮಿತಿ ಹೆಚ್ಚಳಕ್ಕೆ ತಡೆ ಇಟ್ಟಿರುವುದಾಗಿ ಹೇಳಲಾಗಿದೆಯಾದರೂ ಅದಕ್ಕೆ ಕಾರಣ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: ಇಪಿಎಫ್​ಒ ಅಪ್​ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ

ನಿಯಮಗಳ ಪ್ರಕಾರ ಡಿಎ ಅಥವಾ ತುಟ್ಟಿಭತ್ಯೆಯು ಶೇ. 50ರಷ್ಟು ಆದಾಗ ರಿಟೈರ್ಮೆಂಟ್ ಗ್ರಾಚುಟಿ ಮತ್ತು ಡೆತ್ ಗ್ರಾಚುಟಿಯ ಗರಿಷ್ಠ ಮಿತಿ ಶೇ. 25ರಷ್ಟು ಹೆಚ್ಚಾಗಬೇಕು. ಈಗ ಇದನ್ನು ಜಾರಿ ತರಲು ಸರ್ಕಾರ ಸದ್ಯಕ್ಕೆ ಹಿಂದೇಟು ಹಾಕಿದಂತೆ ಕಾಣುತ್ತಿದೆ.

ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಿತು. ಶೇ. 46ರಷ್ಟು ಇದ್ದ ಡಿಎ ಶೇ. 50ಕ್ಕೆ ಏರಿಕೆ ಆಗಿದೆ. ಈ ಡಿಎ ಹೆಚ್ಚಳದ ಪರಿಣಾಮವಾಗಿ ಉದ್ಯೋಗಿಯ ಸಂಬಳದ ಇತರ ಭಾಗಗಳೂ ಹೆಚ್ಚಳ ಕಂಡಿವೆ. ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟಲ್ ಸಬ್ಸಿಡಿ ಮೊದಲಾದ ಭತ್ಯೆಗಳೂ ಪರಿಷ್ಕರಣೆಗೆ ಒಳಪಟ್ಟಿವೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

ಏನಿದು ಡಿಎ, ಡಿಆರ್?

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್. ಇದನ್ನು ಸರ್ಕಾರಿ ಉದ್ಯೋಗಿಯ ಮೂಲವೇತನದ ಮೇಲೆ ಹೆಚ್ಚುವರಿಯಾಗಿ ಕೊಡುವ ಹಣ. ಡಿಆರ್ ಎಂಬುದ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಕೊಡುವ ಹಣ. ಬೆಲೆ ಏರಿಕೆ ಪರಿಣಾಮವು ಹಣದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಇದನ್ನು ತಪ್ಪಿಸಲು ಉದ್ಯೋಗಿಗೆ ಸಂಬಳಕ್ಕೆ ಹೆಚ್ಚುವರಿಯಾಗಿ ಹಣ ನೀಡುವುದೇ ತುಟ್ಟಿಭತ್ಯೆ ಅಥವಾ ಡಿಎ ಎನ್ನುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ