AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಸೆಟಿಲೈಟ್​​ಗಳನ್ನು ಹೊತ್ತೊಯ್ಯುವ ಎಸ್​​ಎಸ್​​ಎಲ್​​ವಿ ರಾಕೆಟ್​​​ಗಳನ್ನು ತಯಾರಿಸುವ ಗುತ್ತಿಗೆ ಎಚ್​​ಎಎಲ್​​ಗೆ

HAL gets contract to build SSLV rockets: ಬೆಂಗಳೂರಿನ ಏರೋಸ್ಪೇಸ್ ಕಂಪನಿಯಾದ ಎಚ್​​ಎಎಲ್ ಈಗ ಎಸ್​​ಎಸ್​​ಎಲ್​​ವಿ ರಾಕೆಟ್ ತಯಾರಿಸುವ ಗುತ್ತಿಗೆಯನ್ನು ಪಡೆದಿದೆ. ಇಸ್ರೋ ಹಾಗೂ ಇನ್​​ಪಸ್ಪೇಸ್ ಕರೆದಿದ್ದ ಬಿಡ್​​ನಲ್ಲಿ ಒಂಬತ್ತು ಕಂಪನಿಗಳ ಪೈಕಿ ಎಚ್​​ಎಎಲ್ ಆಯ್ಕೆಯಾಗಿದೆ. ಇದು 511 ಕೋಟಿ ರೂ ಬಿಡ್ ಸಲ್ಲಿಸಿತ್ತು. ವರ್ಷಕ್ಕೆ 6-12 ಎಸ್​​ಎಸ್​​ಎಲ್​​ವಿ ರಾಕೆಟ್​​ಗಳನ್ನು ನಿರ್ಮಿಸುವ ಗುರಿಯನ್ನು ಎಚ್​​ಎಎಲ್ ಹೊಂದಿದೆ.

ಸಣ್ಣ ಸೆಟಿಲೈಟ್​​ಗಳನ್ನು ಹೊತ್ತೊಯ್ಯುವ ಎಸ್​​ಎಸ್​​ಎಲ್​​ವಿ ರಾಕೆಟ್​​​ಗಳನ್ನು ತಯಾರಿಸುವ ಗುತ್ತಿಗೆ ಎಚ್​​ಎಎಲ್​​ಗೆ
ಎಸ್​​ಎಸ್​​​ಎಲ್​​ವಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 20, 2025 | 6:03 PM

Share

ನವದೆಹಲಿ, ಜೂನ್ 20: ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (HAL) ಇದೀಗ ಸಣ್ಣ ರಾಕೆಟ್​​ಗಳನ್ನು ಅಥವಾ ಉಡಾವಣಾ ವಾಹನಗಳನ್ನು (SSLV- Small Satellite Launch Vehicles) ತಯಾರಿಸುವ ಗುತ್ತಿಗೆ ಗಿಟ್ಟಿಸಿದೆ. ಸಣ್ಣ ಸೆಟಿಲೈಟ್​​ಗಳನ್ನು ಹೊತ್ತು ಹೋಗಬಲ್ಲ ಎಸ್​​ಎಸ್​​​ಎಲ್​​ವಿ ರಾಕೆಟ್​​ಗಳನ್ನು (SSLV rockets) ತಯಾರಿಸುವ ಗುತ್ತಿಗೆಗಾಗಿ ನಡೆಸಲಾದ ಬಿಡ್ ಅನ್ನು ಎಚ್​​ಎಎಲ್ ಗೆದ್ದಿದೆ. ಬೆಂಗಳೂರಿನ ಮತ್ತೊಂದು ಕಂಪನಿಯಾದ ಆಲ್ಫಾ ಡಿಸೈನ್ ಹಾಗೂ ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿಗಳ ನೇತೃತ್ವದ ಇನ್ನೆರಡು ಗುಂಪುಗಳು ಕೂಡ ಈ ಗುತ್ತಿಗೆಗಾಗಿ ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಅತಿಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಎಚ್​​ಎಎಲ್​​ಗೆ ಗುತ್ತಿಗೆ ಸಿಕ್ಕಿದೆ. ಎಚ್​​ಎಎಲ್ 511 ಕೋಟಿ ರೂ ಮೊತ್ತವನ್ನು ಆಫರ್ ಮಾಡಿತ್ತು.

ಈ ಗುತ್ತಿಗೆಯೊಂದಿಗೆ, ಎಚ್​​ಎಎಲ್ ರಾಕೆಟ್ ತಯಾರಿಸುವ ಮೂರನೇ ಕಂಪನಿ ಎನಿಸಿದೆ. ಈಗಾಗಲೇ ಹೈದರಾಬಾದ್​​ನ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಹಾಗೂ ಚೆನ್ನೈನ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಎನ್ನುವ ಖಾಸಗಿ ಕಂಪನಿಗಳು ರಾಕೆಟ್​​ಗಳನ್ನು ತಯಾರಿಸಲು ಆರಂಭಿಸಿವೆ.

ಇದನ್ನೂ ಓದಿ: ಫ್ರಾನ್ಸ್​ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ

ಎಸ್​​ಎಸ್​​ಎಲ್​​ವಿ ರಾಕೆಟ್ ತಯಾರಿಸುವ ಗುತ್ತಿಗೆಗಾಗಿ ಎರಡು ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಇಸ್ರೋ ಹಾಗೂ ಇನ್​​ಸ್ಪೇಸ್ (In-SPACE) (ಬಾಹ್ಯಾಕಾಶ ನಿಯಂತ್ರಕ ಸಂಸ್ಥೆ) ಜಂಟಿಯಾಗಿ ಈ ಬಿಡ್ ಕರೆದಿದ್ದುವು. ಒಟ್ಟು 9 ಬಿಡ್​​ಗಳು ಸಲ್ಲಿಕೆಯಾಗಿದ್ದವು. ಮೊದಲ ಹಂತದ ಪರಿಶೀಲನೆ ಬಳಿಕ ಆರು ಕಂಪನಿಗಳನ್ನು ಶಾರ್ಟ್​​ಲಿಸ್ಟ್ ಮಾಡಲಾಯಿತು. ಎರಡನೇ ಹಂತದಲ್ಲಿ ಎಚ್​​ಎಎಲ್, ಆಲ್ಫಾ ಡಿಸೈನ್ ಮತ್ತು ಬಿಡಿಎಲ್ ಶಾರ್ಟ್​ಲಿಸ್ಟ್ ಆದವು. ತಜ್ಞರ ಸಮಿತಿಯನ್ನು ಇದಕ್ಕಾಗಿ ನೇಮಿಸಲಾಗಿತ್ತು. ಅಂತಿಮವಾಗಿ ಎಚ್​ಎಎಲ್​​ಗೆ ಬಿಡ್ ಒಲಿದುಬಂದಿತು.

ಎಚ್​​ಎಎಲ್​​ಗೆ ಇಸ್ರೋದಿಂದ ತಂತ್ರಜ್ಞಾನ ರವಾನೆ

ಸದ್ಯ ರಾಕೆಟ್ ತಂತ್ರಜ್ಞಾನವು ಇಸ್ರೋ ಬಳಿ ಇದೆ. ಮುಂದಿನ ಎರಡು ವರ್ಷದಲ್ಲಿ ಇಸ್ರೋ ಈ ತಂತ್ರಜ್ಞಾನವನ್ನು ಎಚ್​​ಎಎಲ್​​ಗೆ ರವಾನಿಸಲಿದೆ. ಈ ಅವಧಿಯಲ್ಲಿ ಎಚ್​​ಎಎಲ್ ಎರಡು ರಾಕೆಟ್ ಪ್ರೋಟೋಟೈಪ್ ಸಿದ್ಧಪಡಿಸಬೇಕು. ಈ ಪ್​ರೋಟೋಟೈಪ್ ನಿರ್ಮಾಣದ ವೇಳೆ ಎಚ್​​ಎಎಲ್ ಸಂಸ್ಥೆ ಇಸ್ರೋದ ಸರಬರಾಜು ಮೂಲಗಳನ್ನೇ ಬಳಸಿಕೊಳ್ಳಬೇಕು. ಅದು ಹೇಳಿದ ರೀತಿಯಲ್ಲೇ ಪ್ರೋಟೋಟೈಪ್ ಡಿಸೈನ್ ಇರಬೇಕು.

ಇದನ್ನೂ ಓದಿ: India’s Power: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು

ಪ್ರೋಟೋಟೈಪ್ ನಿರ್ಮಾಣದ ಬಳಿಕ ಎಚ್​​ಎಎಲ್ ತನ್ನದೇ ಸರಬರಾಜು ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಕೆಟ್ ವಿನ್ಯಾಸವನ್ನೂ ಬದಲಾಯಿಸಬಹುದು. ಈ ಕಾರ್ಯದಲ್ಲಿ ಇಸ್ರೋ ನೆರವನ್ನೂ ಪಡೆಯಲು ಅವಕಾಶ ಇರುತ್ತದೆ. ಉತ್ಪಾದನಾ ಹಂತ ಬಂದಾಗ ಎಚ್​​ಎಎಲ್ ಒಂದು ವರ್ಷದಲ್ಲಿ 6-12 ಎಸ್​​ಎಸ್​​ಎಲ್​​ವಿ ರಾಕೆಟ್​​ಗಳನ್ನು ತಯಾರಿಸಲು ಗುರಿ ಇಟ್ಟುಕೊಂಡಿದೆ. ಕಡಿಮೆ ಬೆಲೆಗೆ ರಾಕೆಟ್ ತಯಾರಿಸುವುದಾಗಿಯೂ ಅದು ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ