AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಶವಾಗುತ್ತಿರುವ ಇರಾನ್​ನ ಚಾಬಹಾರ್ ಪೋರ್ಟ್; ಪಾಕಿಸ್ತಾನ್, ಚೀನಾ ಅಸ್ತ್ರಕ್ಕೆ ಭಾರತದ ಪ್ರತ್ಯಸ್ತ್ರ

Iran's Chabahar port to be managed by India: ಇರಾನ್​ನ ಚಾಬಹಾರ್ ಪೋರ್ಟ್ ಅನ್ನು 10 ವರ್ಷ ನಿರ್ವಹಿಸುವ ಗುತ್ತಿಗೆಯನ್ನು ಭಾರತ ಪಡೆಯಲಿದೆ. ಈ ಸಂಬಂಧ ಎರಡೂ ದೇಶಗಳ ಮಧ್ಯೆ ಇಂದು ಒಪ್ಪಂದವಾಗಲಿದೆ. ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ ಅವರು ಇರಾನ್ ದೇಶಕ್ಕೆ ಭೇಟಿ ನೀಡಲಿದ್ದು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಯೋಜನೆಯು ಪಾಕಿಸ್ತಾನದ ಗ್ವಾದರ್ ಪೋರ್ಟ್ ಅನ್ನು ಬಳಸಲಿದೆ. ಅದರ ಸಮೀಪದಲ್ಲೇ ಇರುವ ಚಾಬಹಾರ್ ಪೋರ್ಟ್ ಭಾರತಕ್ಕೆ ಬಹಳ ಮುಖ್ಯವಾಗಿದೆ.

ಭಾರತದ ವಶವಾಗುತ್ತಿರುವ ಇರಾನ್​ನ ಚಾಬಹಾರ್ ಪೋರ್ಟ್; ಪಾಕಿಸ್ತಾನ್, ಚೀನಾ ಅಸ್ತ್ರಕ್ಕೆ ಭಾರತದ ಪ್ರತ್ಯಸ್ತ್ರ
ಚಾಬಹಾರ್ ಪೋರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2024 | 2:05 PM

Share

ನವದೆಹಲಿ, ಮೇ 13: ಇರಾನ್​ನಲ್ಲಿರುವ ಚಾಬಹಾರ್ ಬಂದರುವನ್ನು (chhabahar port) ಮುಂದಿನ 10 ವರ್ಷ ಕಾಲ ನಿರ್ವಹಣೆ ಮಾಡುವ ಭಾರತಕ್ಕೆ ಅವಕಾಶ ನೀಡುವಂತಹ ಒಪ್ಪಂದ ಆಗಲಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ (Central shipping minister Sarbanand Sonowal) ಅವರು ಇಂದು ಸೋಮವಾರ ಇರಾನ್​ಗೆ ತೆರಳುತ್ತಿದ್ದಾರೆ. ಚಾಬಹಾರ್ ಪೋರ್ಟ್ ಸಂಬಂಧ ಇಂದೇ ಎರಡೂ ದೇಶಗಳ ಮಧ್ಯೆ ಒಪ್ಪಂದಕ್ಕೆ ಸಹಿ ಬೀಳಲಿದೆ. ಈ ಬೆಳವಣಿಗೆ ಆಗಿದ್ದೇ ಆದಲ್ಲಿ ಇದೊಂದು ಮಹತ್ವದ ಐತಿಹಾಸಿಕ ನಡೆಯಾಗಿರುತ್ತದೆ. ಭಾರತದ ಅಂತಾರಾಷ್ಟ್ರೀಯ ವಹಿವಾಟಿಗೆ (international trade) ಇದು ಪುಷ್ಟಿ ಕೊಡಲಿದೆ. ವಿದೇಶದಲ್ಲಿರುವ ಪೋರ್ಟ್​ವೊಂದರ ಮ್ಯಾನೇಜ್ಮೆಂಟ್ ಅನ್ನು ಭಾರತ ಇದೇ ಮೊದಲ ಬಾರಿಗೆ ಪಡೆಯಲಿರುವುದು.

ಇರಾನ್​ನ ಚಾಬಹಾರ್ ಪೋರ್ಟ್ ಭಾರತಕ್ಕೆ ಯಾಕೆ ಮುಖ್ಯ?

ಮಧ್ಯ ಏಷ್ಯನ್ ದೇಶಗಳು, ಯೂರೋಪ್​ಗಳೊಂದಿಗೆ ಭಾರತ ವ್ಯಾಪಾರ ವಹಿವಾಟು ನಡೆಸಲು ಸರಕು ಸಾಗಣೆ ಮಾರ್ಗ ಬಹಳ ಮುಖ್ಯ. ಇದರಲ್ಲಿ ಬಂದರುಗಳು ಮಹತ್ವದ ಪಾತ್ರ ವಹಿಸುತ್ತವೆ. ಸಮುದ್ರ ಮಾರ್ಗ ಮತ್ತು ನೆಲ ಮಾರ್ಗಗಳ ಮೂಲಕ ಸರಕು ಸಾಗಣೆ ಆಗುತ್ತದೆ. ಮಧ್ಯ ಏಷ್ಯನ್ ದೇಶಗಳನ್ನು ತಲುಪಲು ಭಾರತಕ್ಕೆ ಈಗ ಚಾಬಹಾರ್ ಪೋರ್ಟ್ ಸಹಾಯವಾಗುತ್ತದೆ.

ಇರಾನ್​ನ ದಕ್ಷಿಣ ಭಾಗದಲ್ಲಿರುವ ಚಾಬಹಾರ್ ಪೋರ್ಟ್ ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಗ್ವಾದರ್ ಪೋರ್ಟ್ ಎರಡೂ ಬಹಳ ಸಮೀಪ ಇದೆ. ಗ್ವಾದರ್ ಪೋರ್ಟ್ ಚೀನಾದ ಮಹತ್ವಾಕಾಂಕ್ಷೆಯ ಬಿಆರ್​ಐ ಯೋಜನೆಯ ಭಾಗವಾಗಿದೆ. ಭಾರತಕ್ಕೆ ಪರ್ಯಾಯ ಆಯ್ಕೆ ಎದರೆ ಚಾಬಹಾರ್ ಪೋರ್ಟ್. ಆಫ್ಘಾನಿಸ್ತಾನ್ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳನ್ನು ತಲುಪಲು ಈ ಪೋರ್ಟ್ ಸಹಕಾರಿ ಆಗುತ್ತದೆ.

ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ ಮಧ್ಯೆ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆದ ಬೆಂಗಳೂರಿನ ಇಂಡಿಜೀನ್ ಷೇರು

ಭಾರತ, ಸೌದಿ ಮತ್ತಿತರ ದೇಶಗಳು ಕೈಗೊಂಡಿರುವ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್​ಪೋರ್ಟ್ ಕಾರಿಡಾರ್ ಯೋಜನೆಯಲ್ಲಿ ಚಾಬಹಾರ್ ಕೂಡ ಸೇರ್ಪಡೆಯಾಗಬಹುದು. ಇರಾನ್ ಮೂಲಕ ರಷ್ಯಾ ಮತ್ತು ಭಾರತಕ್ಕೆ ಈ ಪೋರ್ಟ್ ಕೊಂಡಿಯಾಗಲಿದೆ. ಭಾರತವು ಅಫ್ಗಾನಿಸ್ತಾನಕ್ಕೆ ಹೋಗಬೇಕೆಂದರೆ ಪಾಕಿಸ್ತಾನದ ಮೂಲಕ ಹಾದುಹೋಗಬೇಕಿತ್ತು. ಈಗ ನೇರವಾಗಿ ಚಾಬಹಾರ್ ಪೋರ್ಟ್​ಗೆ ಹೋಗಿ ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಹೋಗಬಹುದು. ಬೇರೆ ಮಧ್ಯ ಏಷ್ಯನ್ ದೇಶಗಳನ್ನೂ ತಲುಪಬಹುದು.

India to Get Iran's Chhabahar Port Management for 10 Years

ಚಾಬಹಾರ್ ಪೋರ್ಟ್

ಹಲವು ವರ್ಷಗಳ ನಿರಂತರ ಮಾತುಕತೆಯ ಫಲಶೃತಿ ಚಾಬಹಾರ್ ಪೋರ್ಟ್

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್​ಗೆ ಭೇಟಿ ನೀಡಿದಾಗ ಚಾಬಹಾರ್ ಪೋರ್ಟ್ ನಿರ್ವಹಣೆ ಸಂಬಂಧ ಒಪ್ಪಂದ ಆಗಿತ್ತು. ಆ ಒಪ್ಪಂದದ ಪ್ರಕಾರ ಚಾಬಹಾರ್ ಪೋರ್ಟ್​ನಲ್ಲಿರುವ ಶಾಹಿದ್ ಬೆಹೇಶ್ಟಿ ಟರ್ಮಿನಲ್​ನ ನಿರ್ವಹಣೆಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದೀಗ ಇಡೀ ಬಂದರನ್ನು ಭಾರತವೇ 10 ವರ್ಷ ನಿರ್ವಹಿಸಲಿದೆ. ಮೂಲ ಒಪ್ಪಂದಂತೆ ಪ್ರತೀ ವರ್ಷ ನವೀಕರಿಸುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ: ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಖರೀದಿಸಲು ಅಮೆರಿಕ ಯಾಕೆ ಆಕ್ಷೇಪಿಸಲಿಲ್ಲ? ಇಲ್ಲಿದೆ ಅದರ ರಾಯಭಾರಿ ಕೊಟ್ಟ ಉತ್ತರ

ಕಜಕಸ್ತಾನ್, ಉಜ್ಬೆಕಿಸ್ತಾನ್ ಇತ್ಯಾದಿ ಸೆಂಟ್ರಲ್ ಏಷ್ಯನ್ ದೇಶಗಳು ಸದ್ಯ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಕಷ್ಟವಾಗುತ್ತಿದೆ. ಈಗ ಚಾಬಹಾರ್ ಪೋರ್ಟ್ ಸಿದ್ಧವಾದಲ್ಲಿ ಭಾರತದ ಜೊತೆ ವ್ಯಾಪಾರ ವಹಿವಾಟು ನಡೆಸಲು ಅವುಗಳಿಗೆ ಸುಲಭವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್