AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ವಿಶ್ವಾಸ; ವಿತ್ತ ಸಚಿವಾಲಯದಿಂದ ಸರಣಿ ಟ್ವೀಟ್

2021-22ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ದರ ಎರಡಂಕಿಯನ್ನು ಮುಟ್ಟಲಿದೆ ಎಂದು ಹಣಕಾಸು ಸಚಿವಾಲಯ ನಿರೀಕ್ಷೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಅಂಕಿ-ಅಂಶಗಳ ಸರಣಿ ಟ್ವೀಟ್ ಮಾಡಿದೆ.

GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ವಿಶ್ವಾಸ; ವಿತ್ತ ಸಚಿವಾಲಯದಿಂದ ಸರಣಿ ಟ್ವೀಟ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Dec 01, 2021 | 1:02 PM

2021-22ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟೆಂಬರ್​ ತನಕದ ಜಿಡಿಪಿ ಬೆಳವಣಿಗೆ ದರವನ್ನು ನವೆಂಬರ್ 30ನೇ ತಾರೀಕಿನ ಮಂಗಳವಾರದಂದು ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರವಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಡಿಪಿ ಶೇ 8.4ರಷ್ಟು ಪ್ರಗತಿ ದಾಖಲಿಸಿದೆ. ಇನ್ನು ಕೇಂದ್ರ ಹಣಕಾಸು ಸಚಿವಾಲಯದಿಂದ ಸರಣಿ ಟ್ವೀಟ್​ಗಳನ್ನು ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ಸಲುವಾಗಿ ಪೂರೈಕೆ ಹಾಗೂ ಬೇಡಿಕೆ ಎರಡರ ಮೇಲೂ ದೇಶದ ನೀತಿ ಗಮನ ಕೇಂದ್ರೀಕರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ಬೇಡಿಕೆ ಸೃಷ್ಟಿಯ ಕಡೆಗೆ ಮಾತ್ರ ನೀತಿಗಳು ಗಮನ ಕೇಂದ್ರೀಕರಿಸಿದ್ದರಿಂದ ಹಣದುಬ್ಬರ ಬಹಳ ಹೆಚ್ಚಾಯಿತು ಎನ್ನಲಾಗಿದೆ. ಪೂರೈಕೆ ಕಡೆಯ ಅಗತ್ಯ ಕ್ರಮಗಳು ಮತ್ತು ಬೇಡಿಕೆ ವಿಸ್ತರಣೆ ಈ ಎರಡೂ ಕಡೆ ಭಾರತದ ಗಮನ ಇದೆ. ಆದ್ದರಿಂದ ಹಣದುಬ್ಬರ ನಿಯಂತ್ರಣದಲ್ಲಿ ಇರಿಸಿಕೊಳ್ಳಲೇ ಬೇಕು ಎಂದು ಹೇಳಲಾಗಿದೆ.

ಮತ್ತೊಂದು ಟ್ವೀಟ್​ನಲ್ಲಿ, ಭಾರತವೇನೋ ಪೂರೈಕೆ ಹಾಗೂ ಬೇಡಿಕೆ ಎರಡೂ ಕಡೆ ಗಮನ ಇಟ್ಟಿದೆ. ಆದರೆ ಜಾಗತಿಕವಾಗಿ ಹಣದುಬ್ಬರ ಕಾಣಿಸಿಕೊಳ್ಳಲು ಕಾರಣ ಏನೆಂದರೆ, ಈಗಲೂ ಬೇಡಿಕೆ ಕಡೆಯೇ ಎಕ್ಸ್​ಕ್ಲೂಸಿವ್ ಆಗಿ ದೃಷ್ಟಿ ನೆಡಲಾಗಿದೆ. ಒಇಸಿಡಿ ಮೂಲಗಳನ್ನು ಉದಾಹರಿಸಿ ನೀಡಿರುವ ಅಂಕಿ-ಅಂಶದ ಪ್ರಕಾರ, ಭಾರತವನ್ನು ಹೊರತುಪಡಿಸಿದಂತೆ ಕೆನಡಾ, ಜರ್ಮನಿ, ಇಟಲಿ, ಬ್ರಿಜಿಲ್, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ರಷ್ಯಾ ಹಾಗೂ ಟರ್ಕಿ ಇಲ್ಲೆಲ್ಲ ಟ್ರೆಂಡ್ ಏರಿಕೆಯಲ್ಲೇ ಇದೆ.

ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧ, ಅಂದರೆ FY22-H1ರಲ್ಲಿ ಬಂಡವಾಳ ವೆಚ್ಚ ತುಂಬ ಜಾಸ್ತಿ ಮಾಡಲಾಗಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 38.3ಕ್ಕೆ ಏರಿಕೆ ಆಗಿದೆ. FY20-H1ರಲ್ಲಿ ಇದು ಶೇ 22.3ರಷ್ಟಿತ್ತು. ಖಾಸಗಿಯಿಂದ ಬಂದ ಬಂಡವಾಳ ಹೂಡಿಕೆ ಕೂಡ ಇದರಲ್ಲಿ ಭಾಗವಾಗಿದೆ. ಸಂಘಟಿತ ವಲಯಗಳು (ಇದರ ಉತ್ಪಾದನೆ ಬಹುತೇಕ ಕಾರ್ಮಿಕರು ಮತ್ತು ಬಂಡವಾಳದ ಮೇಲೆ ನಿಂತಿರುವುದರಿಂದ ಹೆಚ್ಚು ದುರ್ಬಲವಾಗುತ್ತದೆ) ಕೊವಿಡ್​ ನಂತರ ಹೆಚ್ಚು ಬಲಿಷ್ಠವಾಗಿದೆ. ಆದರೆ ಅಸಂಘಟಿತ ವಲಯಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಆದರೆ ಇದು ಮುಖ್ಯವಾಗಿ ಉತ್ಪಾದನೆಗಾಗಿ ಕಾರ್ಮಿಕರನ್ನೇ ಅವಲಂಬಿಸಿರುತ್ತದೆ.

ಹಣಕಾಸು ವಲಯವು ಪ್ರಬಲವಾಗಿ ಹೊರಹೊಮ್ಮಿದೆ. ಉತ್ತಮವಾದ ಆಸ್ತಿ ಗುಣಮಟ್ಟ, ಬ್ಯಾಡ್​ ಲೋನ್​ನಿಂದ ರಕ್ಷಣೆ ಪಡೆಯಲು ಅದ್ಭುತ ಪ್ರಾವಿಷನ್ ಕವರೇಜ್, ಜತೆಗೆ ಬಂಡವಾಳ ಕಾಪಾಡಿಕೊಳ್ಳಲು ಬೇಕಾದಂಥ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಹೂಡಿಕೆಗೆ ಇದು ಮುಖ್ಯವಾಗಲಿದೆ. ಸಾರ್ವಜನಿಕ ಬ್ಯಾಂಕ್​ಗಳ ಲಾಭ 2021ರ ಜೂನ್​ನಲ್ಲಿ 14,012 ಕೋಟಿ ರೂಪಾಯಿ ಇತ್ತು. 2020ರ ಜೂನ್​ಗೆ ಹೋಲಿಸಿದರೆ ಇದು ಶೇ 140ರಷ್ಟು ಹೆಚ್ಚು, ಇನ್ನು 2019ರ ಜೂನ್​ಗೆ ಹೋಲಿಸಿದರೆ ಶೇ 255ರಷ್ಟು ಜಾಸ್ತಿ. ಇನ್ನು ಗ್ರಾಸ್ ಎನ್​ಪಿಎ 2018ರ ಮಾರ್ಚ್​ನಲ್ಲಿ ಇದ್ದ ಶೇ 11.2ರಿಂದ 2021ರ ಜೂನ್​ನಲ್ಲಿ ಶೇ 7.4ಕ್ಕೆ ಬಂದಿದೆ. ನಿವ್ವಳ ಎನ್​ಪಿಎ ಇದೇ ಅವಧಿಯಲ್ಲಿ ಶೇ 5.9ರಿಂದ ಶೇ 2.4ಕ್ಕೆ ಇಳಿದಿದೆ. ಪಿಸಿಎಆರ್ ಶೇ 62.7ರಿಂದ ಶೇ 84ಕ್ಕೆ ಹೆಚ್ಚಳವಾಗಿದೆ.

ಕ್ಯಾಪಿಟಲ್ ಅಡಿಕ್ವಸಿ: ಎಸ್​ಸಿಬಿಗಳ ಸಿಆರ್​ಎಆರ್​ ಸಾರ್ವಜನಿಕ ಗರಿಷ್ಠ ಮಟ್ಟವಾದ ಶೇ 16.4ರಷ್ಟಿದೆ. ಜೂನ್​ 30, 2021ಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಸಿಆರ್​ಎಆರ್ ಶೇ 14.3ರಷ್ಟಿತ್ತು. ಹಣಕಾಸು ವರ್ಷ 20-21ರಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು 58,697 ಕೋಟಿ ರೂಪಾಯಿ ಬಂಡವಾಳ ನಿಧಿ ಸಂಗ್ರಹಿಸಿವೆ. ಒಂದು ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಅತಿ ಹೆಚ್ಚಿನ ಮೊತ್ತ ಇದು.

2005-2010 ಹಾಗೂ 2010ರಿಂದ 2015ರಂತೆ ಅಲ್ಲದೆ, 2015ರಿಂದ 2019ರ ಅವಧಿಯಲ್ಲಿ ಭಾರತದಲ್ಲಿನ ಉತ್ಪಾದನಾ ಬೆಳವಣಿಗೆ ಚೀನಾವನ್ನೂ ಮೀರಿಸಿದೆ. ವಿದ್ಯುತ್, ಸರಕು ಸಾಗಣೆ ಬೆಲೆಯಲ್ಲಿನ ಇಳಿಕೆ ಮತ್ತು ಇತರ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ಸ್ಪರ್ಧಾತ್ಮಕ ಎನಿಸುವ ತೆರಿಗೆ ಪರಿಸರದಿಂದಾಗಿ ಇದು ಸಾಧ್ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: GDP: ಜುಲೈನಿಂದ ಸೆಪ್ಟೆಂಬರ್ ಎರಡನೇ ತ್ರೈಮಾಸಿಕ ಜಿಡಿಪಿ ಶೇ 8.4ರಷ್ಟು ಬೆಳವಣಿಗೆ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ