AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible Oil: ಮೇ 23ರಿಂದ ಅನ್ವಯಿಸುವಂತೆ ತಾಳೆ ಎಣ್ಣೆ ಮೇಲಿನ ರಫ್ತು ನಿಷೇಧ ತೆಗೆದ ಇಂಡೋನೇಷ್ಯಾ

ಇದೇ 23ನೇ ತಾರೀಕಿನಿಂದ ತಾಳೆ ಎಣ್ಣೆ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸುವುದಕ್ಕೆ ಇಂಡೋನೇಷ್ಯಾ ಸರ್ಕಾರವು ನಿರ್ಧಾರ ಮಾಡಿದೆ.

Edible Oil: ಮೇ 23ರಿಂದ ಅನ್ವಯಿಸುವಂತೆ ತಾಳೆ ಎಣ್ಣೆ ಮೇಲಿನ ರಫ್ತು ನಿಷೇಧ ತೆಗೆದ ಇಂಡೋನೇಷ್ಯಾ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 20, 2022 | 7:30 AM

Share

ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ತೈಲ (Edible Oil) ಪೂರೈಕೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಮೂರು ವಾರಗಳ ಹಿಂದೆ ವಿಧಿಸಲಾದ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ಸೋಮವಾರ, ಮೇ 23ರಂದು ತೆಗೆದುಹಾಕಲಾಗುವುದು ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ರಾಷ್ಟ್ರವನ್ನು ಉದ್ದೇಶಿಸಿ ವರ್ಚುವಲ್ ಭಾಷಣದಲ್ಲಿ ಹೇಳಿದ್ದಾರೆ. ಬೃಹತ್ ಅಡುಗೆ ಎಣ್ಣೆಯ ಪೂರೈಕೆಯು “ಅಗತ್ಯಕ್ಕಿಂತ ಹೆಚ್ಚಿನ ಮಟ್ಟವನ್ನು” ತಲುಪಿದೆ, ಆದರೂ ಬೃಹತ್ ಬೆಲೆಗಳು ಇನ್ನೂ ಪ್ರತಿ ಲೀಟರ್‌ಗೆ ಗುರಿಪಡಿಸಿದ 14,000 ರೂಪಾಯಿಗಳಿಗೆ ಇಳಿದಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ. “ಹಲವಾರು ಪ್ರದೇಶಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಹೋಲಿಕೆ ಮಾಡಿದಲ್ಲಿ ಹೆಚ್ಚಿವೆ ಎಂದು ನನಗೆ ತಿಳಿದಿದೆ. ಆದರೆ ಮುಂಬರುವ ವಾರಗಳಲ್ಲಿ ಅವು ಹೆಚ್ಚು ಕೈಗೆ ಎಟುಕುವವು ಎಂದು ನಾನು ನಂಬುತ್ತೇನೆ,” ಎಂಬುದಾಗಿ ವಿಡೋಡೋ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ.

ಉತ್ಪಾದನೆಯಲ್ಲಿ ತೊಡಗಿರುವ ರೈತರು ಮತ್ತು ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ತಾಳೆ ಎಣ್ಣೆಯ ರಫ್ತಿನ ಮೇಲಿನ ನಿಷೇಧವನ್ನು ಪರಿಶೀಲಿಸುವಂತೆ ಇಂಡೋನೇಷ್ಯಾದ ಶಾಸಕರು ಮೇ 19ರಂದು ಸರ್ಕಾರವನ್ನು ಒತ್ತಾಯಿಸಿದ ಸ್ವಲ್ಪ ಸಮಯದ ನಂತರ ಈ ಪ್ರಕಟಣೆ ಬಂದಿದೆ. ಶಾಸಕರು ತಮ್ಮ ವಿನಂತಿಯಲ್ಲಿ, ದೇಶದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾದ ತಾಳೆ ಎಣ್ಣೆ ಉತ್ಪಾದನೆಯು ಮುಂದಿನ ವಾರಗಳಲ್ಲಿ ಸಂಗ್ರಹಣೆಯು ಪೂರ್ಣ ಸಾಮರ್ಥ್ಯವನ್ನು ಸಮೀಪಿಸುವುದರಿಂದ ಸ್ಥಗಿತಗೊಳ್ಳಬಹುದು ಎಂದು ಹೇಳುವ ಉದ್ಯಮ ಗುಂಪುಗಳ ಎಚ್ಚರಿಕೆಯನ್ನು ಉಲ್ಲೇಖಿಸಿದ್ದಾರೆ. ವಿಶ್ವದ ಅಗ್ರ ತಾಳೆ ಎಣ್ಣೆ ಉತ್ಪಾದಕ ಇಂಡೋನೇಷ್ಯಾ ಏಪ್ರಿಲ್ 28ರಿಂದ ಕಚ್ಚಾ ತಾಳೆ ಎಣ್ಣೆ (ಸಿಪಿಒ) ಮತ್ತು ಕೆಲವು ಉತ್ಪನ್ನಗಳ ರಫ್ತುಗಳನ್ನು ದೇಶೀಯ ಅಡುಗೆ ಎಣ್ಣೆಯ ಗಗನಕ್ಕೇರುತ್ತಿರುವ ಬೆಲೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ನಿಲ್ಲಿಸಿದೆ.

ಈ ನಿರ್ಧಾರವು ಹಲವಾರು ಆಮದು ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು, ಇದು ಅಡುಗೆ ತೈಲ ದರಗಳಲ್ಲಿ ಏರಿಕೆಗೆ ಸಾಕ್ಷಿಯಾಯಿತು. ಇಂಡೋನೇಷ್ಯಾದ ಹಣಕಾಸು ಸಚಿವ ಮುಲ್ಯಾನಿ ಇಂದ್ರಾವತಿ ಅವರೊಂದಿಗಿನ ಮಾತುಕತೆಯಲ್ಲಿ, ದೇಶದ ಸಂಸದೀಯ ಬಜೆಟ್ ಸಮಿತಿ ಸದಸ್ಯರು “CPO ರಫ್ತು ನಿಷೇಧವನ್ನು ಮೌಲ್ಯಮಾಪನ ಮಾಡಲು” ಸರ್ಕಾರವನ್ನು ಒತ್ತಾಯಿಸಿದರು, ಆದರೂ ಅವರು ನೀತಿಯನ್ನು ವಿವರವಾಗಿ ಚರ್ಚಿಸಲಿಲ್ಲ. ರಫ್ತು ನಿಷೇಧವು ತಿಂಗಳಿಗೆ 6 ಟ್ರಿಲಿಯನ್ ರುಪೈಗಳಷ್ಟು (407.33 ಮಿಲಿಯನ್ ಡಾಲರ್) ಆದಾಯವನ್ನು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ ಎಂಬುದಾಗಿ ಸರ್ಕಾರಕ್ಕೆ ತಿಳಿದಿದೆ ಎಂದು ಮುಲ್ಯಾನಿ ಅವರು ಅಧ್ಯಕ್ಷ ಜೋಕೊ ವಿಡೋಡೊ ಅವರೊಂದಿಗೆ ತಮ್ಮ ವಿನಂತಿಯನ್ನು ಎತ್ತುವುದಾಗಿ ಹೇಳಿದ್ದರು.

ಇನ್ನು ಈ ಮಧ್ಯೆ, ತಾಳೆ ಎಣ್ಣೆ ಉದ್ಯಮವು ತಿಂಗಳ ಅಂತ್ಯದೊಳಗೆ ರಫ್ತು ನಿಷೇಧವನ್ನು ತೆಗೆದುಹಾಕದಿದ್ದರೆ ಕಾರ್ಯಾಚರಣೆ ನಿಲ್ಲಿಸುವ ನಿರೀಕ್ಷೆಯನ್ನು ಎದುರಿಸುತ್ತಿದೆ ಎಂದು ಇಂಡೋನೇಷ್ಯಾ ತರಕಾರಿ ತೈಲ ಉದ್ಯಮ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಸಹತ್ ಸಿನಾಗಾ ರಾಯಿಟರ್ಸ್​ಗೆ ತಿಳಿಸಿದ್ದಾರೆ. “ನಮ್ಮ ಅಂದಾಜಿನ ಪ್ರಕಾರ ಮೇ ಅಂತ್ಯದ ವೇಳೆಗೆ ರಫ್ತು ಇಲ್ಲದಿದ್ದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ, ಟ್ಯಾಂಕ್‌ಗಳು ತುಂಬಿರುತ್ತವೆ,” ಎಂದು ಸಹತ್ ಹೇಳಿದ್ದಾರೆ. ಇಂಡೋನೇಷ್ಯಾವು ಬಂದರುಗಳನ್ನು ಒಳಗೊಂಡಂತೆ ಸುಮಾರು 6 ಮಿಲಿಯನ್ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮೇ ತಿಂಗಳ ಆರಂಭದಲ್ಲಿ ದೇಶೀಯ ಷೇರುಗಳು ಸುಮಾರು 5.8 ಮಿಲಿಯನ್ ಟನ್‌ಗಳನ್ನು ತಲುಪಿದೆ ಎಂದು ಸಹತ್ ಅಂದಾಜಿಸಿದ್ದಾರೆ.

ಮಾರ್ಚ್ ಅಂತ್ಯದ ವೇಳೆಗೆ ದೇಶೀಯ ಷೇರುಗಳು 5.68 ಮಿಲಿಯನ್ ಟನ್‌ಗಳಿಗೆ ಏರಿದೆ, ಇದು ಒಂದು ತಿಂಗಳ ಹಿಂದೆ 5.05 ಮಿಲಿಯನ್ ಟನ್‌ಗಳಿಂದ ಹೆಚ್ಚಾಗಿದೆ ಎಂದು ಇಂಡೋನೇಷ್ಯಾ ಪಾಮ್ ಆಯಿಲ್ ಅಸೋಸಿಯೇಷನ್ ​​(GAPKI) ಡೇಟಾ ಗುರುವಾರ ತೋರಿಸಿದೆ. ಇಂಡೋನೇಷ್ಯಾ ಸಾಮಾನ್ಯವಾಗಿ ತನ್ನ ವಾರ್ಷಿಕ ತಾಳೆ ಎಣ್ಣೆಯ ಉತ್ಪಾದನೆಯ ಶೇ 35ರಷ್ಟನ್ನು ಮಾತ್ರ ಸ್ವಂತಕ್ಕಾಗಿ ಬಳಸುತ್ತದೆ, ಅದು ಹೆಚ್ಚಾಗಿ ಆಹಾರ ಮತ್ತು ಇಂಧನಕ್ಕಾಗಿ. GAPKI ಸೆಕ್ರೆಟರಿ ಜನರಲ್ ಎಡ್ಡಿ ಮಾರ್ಟೊನೊ ಮಾತನಾಡಿ, ಕೆಲವು ಕಂಪೆನಿಗಳು ಈಗಾಗಲೇ ತಮ್ಮ ತೋಟಗಳ ಹೊರಗೆ ತಾಳೆ ಹಣ್ಣುಗಳನ್ನು ಖರೀದಿಸುವುದನ್ನು ನಿಲ್ಲಿಸಿವೆ ಮತ್ತು ತಮ್ಮದೇ ಆದ ಕೊಯ್ಲುಗಳನ್ನು ನಿಧಾನಗೊಳಿಸುತ್ತಿವೆ ಎಂದು ಹೇಳಿದ್ದಾರೆ. ತಾಳೆ ಹಣ್ಣಿನ ಉತ್ಪಾದನೆಯು ಸಾಮಾನ್ಯವಾಗಿ ಅಧಿಕವಾಗಿದ್ದಾಗ ನಿಷೇಧವನ್ನು ವಿಧಿಸಲಾಯಿತು ಎಂದು ಸಹತ್ ಗಮನ ಸೆಳೆದರು. ಆದರೆ ರಫ್ತು ನಿಷೇಧದ ಕಾರಣದಿಂದಾಗಿ ಅರ್ಧದಷ್ಟು ಹಣ್ಣುಗಳನ್ನು ಮಾತ್ರ ಬಳಸಲಾಗುವುದು. ಇದು ರೈತರಿಗೆ 17 ಟ್ರಿಲಿಯನ್ ರುಪೈಗಳನ್ನು (1.15 ಶತಕೋಟಿ ಯುಎಸ್​ಡಿ) ನಷ್ಟವನ್ನು ಉಂಟುಮಾಡುತ್ತದೆ.

ಈ ವಾರ ನೂರಾರು ತಾಳೆ ಎಣ್ಣೆ ರೈತರು ಹಲವಾರು ನಗರಗಳಲ್ಲಿ ಪಾದಯಾತ್ರೆ ನಡೆಸಿ ಆದಾಯ ಕುಸಿತದ ವಿರುದ್ಧ ಪ್ರತಿಭಟಿಸಿದರು. ಕಳೆದ ಕೆಲವು ದಿನಗಳಿಂದ ಪಶ್ಚಿಮ ಸುಲವೆಸಿಯ ತಾಳೆ ಎಣ್ಣೆ ಮಿಲ್‌ನ ಹೊರಗೆ ತಾಳೆ ಹಣ್ಣುಗಳನ್ನು ತುಂಬಿದ ಟ್ರಕ್‌ಗಳು ದೀರ್ಘ ಸರದಿಯಲ್ಲಿ ಸಿಲುಕಿಕೊಂಡಿವೆ ಎಂದು ಸ್ಥಳೀಯ ತಾಳೆ ಎಣ್ಣೆ ರೈತ ಇರ್ಫಾನ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಹೆಚ್ಚಿನ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ರೈತರು ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಮಿಲ್‌ಗಳಿಗೆ ತಾಳೆ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. “ಆದರೆ ಗಿರಣಿಯು ತಮ್ಮ ಪಾಲುದಾರರಿಗೆ ಆದ್ಯತೆ ನೀಡುತ್ತಿದೆ, ಆದ್ದರಿಂದ ಪಾಲುದಾರರಲ್ಲದ ರೈತರ ಸಂಖ್ಯೆ ಹೆಚ್ಚುತ್ತಿದೆ ಮತ್ತು ದೀರ್ಘ ಸರದಿಯಲ್ಲಿ ಕಾಯುತ್ತಿದೆ,” ಎಂದು ಇರ್ಫಾನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Edible Oil: ಏಪ್ರಿಲ್ 28ರಿಂದ ಇಂಡೋನೇಷ್ಯಾ ನಿಲ್ಲಿಸಲಿದೆ ತಾಳೆ ಎಣ್ಣೆ ರಫ್ತು; ಭಾರತದಲ್ಲಿ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ