Inflation Down: ಮೇ ತಿಂಗಳ ಹಣದುಬ್ಬರ ಶೇ. 4.25; ಇನ್ನಷ್ಟು ಕಡಿಮೆ ಆಯಿತು ಬೆಲೆ ಏರಿಕೆ ಮಟ್ಟ

2023 May, Inflation 4.25%: ಭಾರತದಲ್ಲಿ ಹಣದುಬ್ಬರ ಸತತ ಮೂರನೇ ತಿಂಗಳೂ ಇಳಿಕೆಗೊಂಡಿದೆ. ಏಪ್ರಿಲ್ ತಿಂಗಳಲ್ಲಿ ಶೇ. 4.7ರಷ್ಟಿದ್ದ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.25ಕ್ಕೆ ಇಳಿದಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯು ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ.

Inflation Down: ಮೇ ತಿಂಗಳ ಹಣದುಬ್ಬರ ಶೇ. 4.25; ಇನ್ನಷ್ಟು ಕಡಿಮೆ ಆಯಿತು ಬೆಲೆ ಏರಿಕೆ ಮಟ್ಟ
ಹಣದುಬ್ಬರ
Follow us
|

Updated on: Jun 12, 2023 | 6:30 PM

ನವದೆಹಲಿ: ಮೇ ತಿಂಗಳ ವಾರ್ಷಿಕ ರೀಟೇಲ್ ಹಣದುಬ್ಬರ ದರ (Retail Inflation) ಶೇ. 4.25ರಷ್ಟು ಇದೆ ಎಂದು ಸರ್ಕಾರದ ದತ್ತಾಂಶ ತಿಳಿಸಿದೆ. ಹಿಂದಿನ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಶೇ. 4.7ರಷ್ಟಿತ್ತು. ಏಪ್ರಿಲ್​ಗಿಂತಲೂ ಮೇ ತಿಂಗಳಲ್ಲಿ ಹಣದುಬ್ಬರ ಏರಿಕೆ ಮಟ್ಟ ಕಡಿಮೆ ಆಗಿದೆ. ಈ ವಾರ್ಷಿಕ ಹಣದುಬ್ಬರವು ಕಳೆದ ಎರಡು ವರ್ಷದಲ್ಲೇ ಕಡಿಮೆ ಎಂದು ಹೇಳಲಾಗಿದೆ. ಇನ್ನೂ ಮುಖ್ಯ ಸಂಗತಿ ಹಣದುಬ್ಬರ ಇಳಿಕೆಯ ಹಾದಿಯಲ್ಲಿರುವುದು ಇದು ಸತತ ಮೂರನೇ ತಿಂಗಳು. ಮಾರ್ಚ್ ತಿಂಗಳಿಂದ ಹಣದುಬ್ಬರ ಸತತವಾಗಿ ಇಳಿಯುತ್ತಾ ಬರುತ್ತಿದೆ.

ಆರ್​ಬಿಐನ ಮೂಲ ಹಣದುಬ್ಬರ ಮಿತಿ ಗುರಿಯಾದ ಶೇ. 4ಕ್ಕೆ ಬಹಳ ಸಮೀಪಕ್ಕೆ ಮೇ ತಿಂಗಳ ಹಣದುಬ್ಬರ ಬಂದು ನಿಂತಿದೆ. ತರಕಾರಿ, ಬೇಳೆ ಕಾಳು, ಇಂಧನ ಬೆಲೆಗಳು ಕಡಿಮೆಗೊಂಡ ಪರಿಣಾಮವಾಗಿ ಹಣದುಬ್ಬರವು ಇಳಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿGST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು

ಗ್ರಾಹಕ ಬೆಲೆಗಳ ಅನುಸೂಚಿ ಆಧಾರಿತವಾಗಿ ಹಣದುಬ್ಬರವನ್ನು ಅಳೆಯಲಾಗುತ್ತದೆ. ಇದರಲ್ಲಿ ಗ್ರಾಹಕ ಆಹಾರ ಬೆಲೆ ಸೂಚಿ (ಸಿಎಫ್​ಪಿಐ) ಏಪ್ರಿಲ್​ನಲ್ಲಿ ಶೇ. 3.84ರಷ್ಟು ಇದ್ದದ್ದು ಮೇ ತಿಂಗಳಲ್ಲಿ ಶೇ. 2.91ಕ್ಕೆ ಇಳಿದಿದೆ. ಇದು ಒಟ್ಟಾರೆ ರೀಟೇಲ್ ಇನ್​ಫ್ಲೇಷನ್ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ. ಇನ್ನು, ಗ್ರಾಮೀಣ ಭಾಗದ ಹಣದುಬ್ಬರ ಶೇ. 4.17 ಇದ್ದರೆ ನಗರ ಭಾಗದ ಹಣದುಬ್ಬರ ಶೇ. 4.27ರಷ್ಟಿದೆ.

ಮೂರು ದಿನಗಳ ಹಿಂದೆ ರಾಯ್ಟರ್ನ್ಸ್ ನಡೆಸಿದ ಸಮೀಕ್ಷೆಯಲ್ಲಿ 45 ಆರ್ಥಿಕ ತಜ್ಞರು ಮೇ ತಿಂಗಳಲ್ಲಿ ಹಣದುಬ್ಬರ ಶೇ. 4.42ರಷ್ಟು ಇರಬಹುದು ಎಂದು ಶುಭ ಸೂಚನೆ ನೀಡಿದ್ದರು. ಆದರೆ, ಅದನ್ನೂ ಮೀರಿಸಿ ಹಣದುಬ್ಬರ ದರ ಕಡಿಮೆ ಆಗಿರುವುದು ಗಮನಾರ್ಹ.

ಇದನ್ನೂ ಓದಿPoor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ

ಆರ್ಥಿಕತೆಯ ಸ್ವಾಸ್ಥ್ಯ ದೃಷ್ಟಿಯಿಂದ ಹಣದುಬ್ಬರವನ್ನು ನಿರ್ದಿಷ್ಟ ಮಟ್ಟಕ್ಕೆ ಸೀಮಿತಗೊಳಿಸಲು ಪ್ರಯತ್ನಿಸಲಾಗುತ್ತದೆ. ಹಣದುಬ್ಬರ ಶೇ. 4 ರ ಆಸುಪಾಸಿನಲ್ಲಿ ಇರಬೇಕು. ಶೇ. 2ರಿಂದ ಶೇ. 6ರ ತಾಳಿಕೆಯ ಪರಿಮಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್​ಬಿಐಗೆ ಗುರಿಕೊಟ್ಟಿದೆ. ಆದರೆ, ಹಣದುಬ್ಬರ ಹಲವು ತಿಂಗಳು ತಾಳಿಕೆಯ ಮಿತಿ ಮೀರಿ ಮೇಲೆ ಹೋಗಿತ್ತು. ಅದಕ್ಕೆ ಕಡಿವಾಣ ಹಾಕಲು ಆರ್​ಬಿಐ ಬಡ್ಡಿದರಗಳನ್ನು ಸತತವಾಗಿ ಹೆಚ್ಚಿಸುತ್ತಾ ಬಂದಿತ್ತು. ಕಳೆದ 2 ತಿಂಗಳಿಂದ ಹಣದುಬ್ಬರ ಶೇ. 6ಕ್ಕಿಂತ ಕಡಿಮೆ ಇದೆ. ಆರ್​ಬಿಐ ತನ್ನ ಬಡ್ಡಿ ದರ ಏರಿಕೆ ಕ್ರಮಕ್ಕೂ ಅಲ್ಪವಿರಾಮ ಹಾಕಿದೆ. ಹಣದುಬ್ಬರ ಹೀಗೇ ಕೆಳಗೆ ಇಳಿಯುತ್ತಾ ಹೋದರೆ ಆರ್​ಬಿಐ ಕೂಡ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ