KYC Frauds: ಕೆವೈಸಿ ಅಪ್​ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್​ಬಿಐ ಸಲಹೆ, ಸೂಚನೆಗಳಿವು

Do's and Don'ts list by RBI: ಕೆವೈಸಿ ಅಪ್​ಡೇಟ್ ಮಾಡಬೇಕು ಎಂದು ಜನರ ಮೇಲೆ ಒತ್ತಡ ಹಾಕಿ ಅವರಿಂದ ಖಾತೆ ನಂಬರ್, ಕ್ರೆಡಿಟ್ ಕಾರ್ಡ್ ವಿವರ ಪಡೆದು ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಆರ್​ಬಿಐ ಕಳೆದ ವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಜನರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ. ಕೆವೈಸಿ ಅಪ್​ಡೇಟ್ ಮಾಡಬೇಕೆಂದು ಯಾರಾದರೂ ಕರೆ ಮಾಡಿದಾಗ ಗ್ರಾಹಕರು ಏನು ಮಾಡಬೇಕು, ಮಾಡಬಾರದು ಎಂಬ ಪಟ್ಟಿ ನೀಡಿದೆ.

KYC Frauds: ಕೆವೈಸಿ ಅಪ್​ಡೇಟ್ ಮಾಡಿ ಎಂದು ಕರೆ ಬಂದರೆ ಏನು ಮಾಡಬೇಕು? ಆರ್​ಬಿಐ ಸಲಹೆ, ಸೂಚನೆಗಳಿವು
ಕೆವೈಸಿ ಕರೆ
Follow us
|

Updated on: Feb 11, 2024 | 12:04 PM

ನವದೆಹಲಿ, ಫೆಬ್ರುವರಿ 11: ಕೆವೈಸಿ ಅಪ್​ಡೇಟ್ (KYC frauds) ಮಾಡಬೇಕು ಎಂದು ಹೇಳಿ ಜನರಿಂದ ಬ್ಯಾಂಕ್ ಖಾತೆ ವಿವರ, ಲಾಗಿನ್ ವಿವರ, ಒಟಿಪಿ ಇತ್ಯಾದಿ ಪಡೆದು ವಂಚಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಬಹಳಷ್ಟು ಕಡೆ ಬೆಳಕಿಗೆ ಬರುತ್ತಲೇ ಇವೆ. ಮೊಬೈಲ್ ಫೋನ್ ಕರೆಗಳ ಮೂಲಕ ನಡೆಯುವ ವಂಚಕರ ಜಾಲಕ್ಕೆ ಜನರು ಪದೇ ಪದೇ ಬೀಳುತ್ತಿದ್ದಾರೆ. ಪೊಲೀಸರು, ಸರ್ಕಾರ, ಆರ್​ಬಿಐ ಮೊದಲಾದವರು ಹಾಗು ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳೇ ಇಂಥ ವಂಚನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರಾದರೂ ಪ್ರಕರಣಗಳು ಮಾತ್ರ ಕಡಿಮೆ ಆದಂತಿಲ್ಲ. ಆರ್​ಬಿಐ ಕಳೆದ ವಾರ ಬಿಡುಗಡೆ ಮಾಡಿದ ಮಾಧ್ಯಮ ಗೋಷ್ಠಿಯಲ್ಲಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ.

ಕೆವೈಸಿ ಹೆಸರಲ್ಲಿ ವಂಚಕರ ಜಾಲ ಹೇಗಿರುತ್ತೆ?

ಕೆವೈಸಿ ಅಪ್​ಡೇಟ್ ಆಗದ ಕಾರಣ ಬ್ಯಾಂಕ್ ಖಾತೆ ಫ್ರೀಜ್ ಆಗುತ್ತದೆ ಇತ್ಯಾದಿ ಹೇಳುವ ಮೂಲಕ ವಂಚಕರು ಗ್ರಾಹಕರ ಮೇಲೆ ಖಾತೆಯ ಎಲ್ಲಾ ಮಾಹಿತಿ ನೀಡುವಂತೆ ಒತ್ತಡ ಹಾಕಬಹುದು. ಬಹಳಷ್ಟು ಸಂದರ್ಭದಲ್ಲಿ ಗ್ರಾಹಕರಿಗೆ ಯೋಚಿಸುವಷ್ಟೂ ಪುರುಸೊತ್ತು ಸಿಗದೇ ವಂಚಕರು ಹೇಳಿ ಕೆಲಸ ಮಾಡಬಹುದು.

ಇದನ್ನೂ ಓದಿ: ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ; ಎಲ್ಲಾ ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ

ಕೆವೈಸಿ ಅಪ್​ಡೇಶನ್​ಗೆ ಯಾವಾದರೂ ಕರೆ ಬಂದಾಗ ಏನು ಮಾಡಬೇಕು? ಆರ್​ಬಿಐ ಸೂಚನೆಗಳಿವು…

  • ಕೆವೈಸಿ ಅಪ್​ಡೇಟ್ ಮಾಡಬೇಕು ಎಂದು ಕೇಳಿ ಯಾವುದಾದರೂ ಕರೆ ಬಂದಾಗ, ಮೊದಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ ದೃಢಪಡಿಸಿಕೊಳ್ಳಬೇಕು.
  • ನೀವು ಬ್ಯಾಂಕನ್ನು ಆನ್​ಲೈನ್ ಅಥವಾ ಮೊಬೈಲ್​ನಲ್ಲಿ ಸಂಪರ್ಕಿಸಬೇಕೆಂದರೆ ಆ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ ಅಥವಾ ಮೂಲಗಳಿಂದ ಕಸ್ಟಮರ್ ಕೇರ್ ನಂಬರ್ ಪಡೆದುಕೊಳ್ಳಬೇಕು.
  • ಯಾವುದಾದರೂ ಸೈಬರ್ ವಂಚನೆ ಘಟನೆ ನಡೆದಿದ್ದು ಗೊತ್ತಾದ ಕೂಡಲೇ ಮೊದಲು ಬ್ಯಾಂಕ್ ಅನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.
  • ಕೆವೈಸಿ ವಿವರಗಳನ್ನು ಅಪ್​ಡೇಟ್ ಮಾಡುವ ವಿಧಾನ ಏನಿದೆ ಎಂದು ಬ್ಯಾಂಕ್​ನ ಶಾಖೆಗೆ ಹೋಗಿ ವಿಚಾರಿಸಬೇಕು.

ಇದನ್ನೂ ಓದಿ: ಭಾರತ ರತ್ನ ಪಿ.ವಿ. ನರಸಿಂಹರಾವ್ ಪಿಎಂ ಆದಾಗ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಅವರು ತಂದ ಪರಿವರ್ತನೆ ಹೇಗಿತ್ತು? ತಪ್ಪದೇ ನೋಡಿ

ಕೆವೈಸಿ ಕರೆ ಬಂದಾಗ ಈ ಕೆಲಸ ಮಾಡದಿರಿ…

  • ಕಾರ್ಡ್ ಮಾಹಿತಿ, ಪಿನ್ ನಂಬರ್, ಪಾಸ್ವರ್ಡ್, ಲಾಗಿನ್ ಇತ್ಯಾದಿ ವಿವರ ಯಾರಿಗೂ ನೀಡಬೇಡಿ.
  • ದೃಢಪಡದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನಿಮ್ಮ ಕೆವೈಸಿ ದಾಖಲೆಗಳನ್ನು ಕೊಡಬೇಡಿ.
  • ಅನಧಿಕೃತ ಆ್ಯಪ್ ಅಥವಾ ವೆಬ್​ಸೈಟ್​ಗಳಲ್ಲಿ ನಿಮ್ಮ ಸೂಕ್ಷ್ಮ ಮಾಹಿತಿ ನೀಡಬೇಡಿ.
  • ಮೊಬೈಲ್ ಅಥವಾ ಇಮೇಲ್​ನಲ್ಲಿ ಲಿಂಕ್ ಇರುವ ಮೆಸೇಜ್​ಗಳು ಬಂದಿರಬಹುದು. ಅನಧಿಕೃತ ಮೂಲಗಳಿಂದ ಈ ಸಂದೇಶ ಬಂದಿದ್ದರೆ ಆ ಲಿಂಕ್ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಅನ್ನೇ ನೇರವಾಗಿ ಸಂಪರ್ಕಿಸಿ ವಿಚಾರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ