AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Life Certificate: ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಬರುತ್ತಿದೆ ದಿನ ಹತ್ತಿರ; ಇಲ್ಲಿದೆ ಆನ್​ಲೈನ್ ಸಲ್ಲಿಕೆ ಮಾಹಿತಿ

ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದಕ್ಕೆ ಅಂತಿಮ ದಿನ ಹತ್ತಿರ ಆಗುತ್ತಿದೆ. ಆನ್​ಲೈನ್​ನಲ್ಲಿ ಸಲ್ಲಿಸುವುದು ಹೇಗೆ ಎಂಬ ಹಂತಹಂತವಾದ ವಿವರಣೆ ಇಲ್ಲಿದೆ.

Life Certificate: ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಬರುತ್ತಿದೆ ದಿನ ಹತ್ತಿರ; ಇಲ್ಲಿದೆ ಆನ್​ಲೈನ್ ಸಲ್ಲಿಕೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 23, 2022 | 11:27 AM

Share

ಪಿಂಚಣಿಯನ್ನು (Pension) ಜಮೆ ಮಾಡುವುದನ್ನು ಮುಂದುವರಿಸಲು ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು (Life Certificate) ಸಮಯಕ್ಕೆ ಸಲ್ಲಿಸುವುದು ಅತ್ಯವಶ್ಯ. ಸರ್ಕಾರಿ ಪಿಂಚಣಿದಾರರು ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಫೆಬ್ರವರಿ 28, 2022ಕ್ಕೆ ಗಡುವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವು ಪ್ರತಿ ವರ್ಷ ನವೆಂಬರ್ 30 ಆಗಿದೆ. ಆದರೆ ಸರ್ಕಾರಿ ಪಿಂಚಣಿದಾರರಿಗೆ ಪ್ರಮುಖ ಪರಿಹಾರ ಎಂಬಂತೆ ದಿನಾಂಕವನ್ನು ಈ ವರ್ಷ ಎರಡು ಬಾರಿ ವಿಸ್ತರಿಸಲಾಗಿದೆ.

ಡಿಜಿಟಲ್ ಲೈಫ್ ಸರ್ಟಿಫಿಕೇಟ್: ಪಿಂಚಣಿಗಳು ತಮ್ಮ ಬೆರಳ ತುದಿಯಲ್ಲಿ ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ್ ಪ್ರಮಾಣ) ಜನರೇಟ್ ಮಾಡಬಹುದು. ಡಿಜಿಟಲ್ ಪ್ರಮಾಣಪತ್ರವು ಬಯೋಮೆಟ್ರಿಕ್-ಸಕ್ರಿಯಗೊಳಿಸಿರುವುದರಿಂದ ಪಿಂಚಣಿದಾರರು ವಿತರಣೆ ಏಜೆನ್ಸಿಯ ಕಚೇರಿಗೆ ಹೋಗಬೇಕಾಗಿಲ್ಲ. ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ದೃಢೀಕರಣ ತಂತ್ರವನ್ನು ಬಳಸಿಕೊಂಡು ಇದನ್ನು ಜನರೇಟ್​ ಮಾಡಬಹುದು. ಜೀವನ್ ಪ್ರಮಾಣ್ ವೆಬ್‌ಸೈಟ್ ಪ್ರಕಾರ, ಜೀವನ್ ಪ್ರಮಾಣ್ ಪಿಂಚಣಿದಾರರ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಆಧಾರ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಯಶಸ್ವಿ ದೃಢೀಕರಣವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಜನರೇಟ್ ಮಾಡುತ್ತದೆ. ಅದನ್ನು ಲೈಫ್ ಸರ್ಟಿಫಿಕೇಟ್ ರೆಪೊಸಿಟರಿಯಲ್ಲಿ ಸಂಗ್ರಹಿಸಲಾಗುತ್ತದೆ. ಪಿಂಚಣಿ ವಿತರಣೆ ಏಜೆನ್ಸಿಗಳು ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಪ್ರವೇಶಿಸಬಹುದು.

ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್​ ಆಗಲು ಅಗತ್ಯಗಳು:

ಆಧಾರ್ ಸಂಖ್ಯೆ

ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ

ಪಿಂಚಣಿ ವಿತರಣೆ ಏಜೆನ್ಸಿಯೊಂದಿಗೆ (ಬ್ಯಾಂಕ್ ಪೋಸ್ಟ್ ಆಫೀಸ್ ಇತ್ಯಾದಿ) ಆಧಾರ್ ಸಂಖ್ಯೆಯನ್ನು ನೋಂದಾಯಿಸಬೇಕು.

ಬಯೋಮೆಟ್ರಿಕ್ ಸಾಧನ

ಇಂಟರ್​ನೆಟ್

ಜೀವನ್ ಪ್ರಮಾಣ್ ಆ್ಯಪ್​ನಲ್ಲಿ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಹಂತಹಂತವಾದ ವಿವರಣೆ:

ಹಂತ 1: ಸರ್ಕಾರದ ಜೀವನ್ ಪ್ರಮಾಣ್ ಅಪ್ಲಿಕೇಷನ್ ಡೌನ್‌ಲೋಡ್ ಮತ್ತು ಇನ್​ಸ್ಟಾಲ್ ಮಾಡಿ

ಹಂತ 2: ಪಿಂಚಣಿದಾರರು ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿ

ಜೀವನ್ ಪ್ರಮಾಣ ಪತ್ರ: ಪೂರ್ವಾಪೇಕ್ಷಿತ, ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ನಾಲ್ಕು ವಿಧಾನಗಳು

ಹಂತ 3: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ಪಿಂಚಣಿ ಪಾವತಿ ಆದೇಶ (PPO) ನಮೂದಿಸಿ

ಹಂತ 4: ವ್ಯಾಲಿಡೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಒಟಿಪಿ ಕಳುಹಿಸಿ ಆಯ್ಕೆ ಮಾಡಿ

ಹಂತ 5: ಒಟಿಪಿ ಸಂಖ್ಯೆಯನ್ನು ನಮೂದಿಸಿ. ಆಧಾರ್ ಬಳಸಿ ಇದನ್ನು ದೃಢೀಕರಿಸಲಾಗುತ್ತದೆ

ಹಂತ 6: ನೀವು ಒಟಿಪಿ ಅನ್ನು ಸಲ್ಲಿಸಿದ ಮೇಲೆ ಮತ್ತು ವ್ಯಾಲಿಡೇಷನ್ ಯಶಸ್ವಿಯಾದ ನಂತರ ನೀವು ಪ್ರಮಾಣ್ ಐಡಿಯನ್ನು ಸ್ವೀಕರಿಸುತ್ತೀರಿ

ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿದ ನಂತರ ಈ ಹಂತಗಳನ್ನು ಅನುಸರಿಸಿ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಜನರೇಟ್ ಮಾಡಬಹುದು:

ಹಂತ 1: ಪ್ರಮಾಣ್ ಐಡಿಯನ್ನು ಬಳಸಿ, ಜೀವನ್ ಪ್ರಮಾಣ ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡಿ ಮತ್ತು ಹೊಸ ಒಟಿಪಿ ರಚಿಸುವ ಆಯ್ಕೆಯನ್ನು ಆರಿಸಿ.

ಹಂತ 2: ‘ಜನರೇಟ್ ಜೀವನ್ ಪ್ರಮಾಣ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ.

ಹಂತ 3: Generate OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ನಮೂದಿಸಿ

ಹಂತ 4: PPO ಸಂಖ್ಯೆ, ಪಿಂಚಣಿದಾರರ ಹೆಸರು, ವಿತರಿಸುವ ಏಜೆನ್ಸಿ ಹೆಸರನ್ನು ನಮೂದಿಸಿ.

ಹಂತ 5: ಬಳಕೆದಾರರ ಬೆರಳಚ್ಚು ಅಥವಾ ಐರಿಸ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಆಧಾರ್ ಡೇಟಾವನ್ನು ಬಳಸಿಕೊಂಡು ಅದು ಅವರನ್ನು ದೃಢೀಕರಿಸುತ್ತದೆ.

ಜೀವನ್ ಪ್ರಮಾಣ ಪತ್ರವು ಡಿಸ್​ಪ್ಲೇಯಲ್ಲಿ ಕಾಣಿಸುತ್ತದೆ ಮತ್ತು ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ.

ಇದನ್ನೂ ಓದಿ: Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ