AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಾರು ಮ್ಯೂಚುವಲ್ ಫಂಡ್​​ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್

Investment tips: ಹೆಚ್ಚೆಚ್ಚು ಫಂಡ್​ಗಳಲ್ಲಿ, ಹೆಚ್ಚೆಚ್ಚು ಹಣ ಹೂಡಿಕೆ ಮಾಡುವುದು ನಿಮ್ಮ ಗುರಿಯಾಗಿರಬಾರದು. ನಿಮ್ಮ ಮ್ಯುಚುವಲ್ ಫಂಡ್​ಗಳು ಒಂದೆರಡು ಸೆಕ್ಟರ್​​ಗಳಿಗೆ ಸೀಮಿತವಾಗಿರಬಾರದು. ನೀವು ಎಲ್ಲಾ ಸೆಕ್ಟರ್​​ಗಳಲ್ಲಿ ಇರುವ ಮ್ಯೂಚುವಲ್ ಫಂಡ್​​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಈಕ್ವಿಟಿ ಫಂಡ್ ಮಾತ್ರವಲ್ಲ ಡೆಟ್ ಫಂಡ್​ಗಳಲ್ಲೂ ಹೂಡಿಕೆ ಇರಬೇಕು. ಚಿನ್ನ, ಎಫ್​​ಡಿ ಇತ್ಯಾದಿಯಲ್ಲೂ ಹೂಡಿಕೆ ಇರಬೇಕು ಎನ್ನುತ್ತಾರೆ ತಜ್ಞರು.

ಹತ್ತಾರು ಮ್ಯೂಚುವಲ್ ಫಂಡ್​​ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್
ಮ್ಯುಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2025 | 6:12 PM

Share

ಹೂಡಿಕೆಯಲ್ಲಿ ಕೆಲ ಮೂಲಭೂತ ಪಾಠಗಳಿವೆ. ನೀವು ದೀರ್ಘಾವಧಿ ಹೂಡಿಕೆ (long term investment) ಮಾಡಬೇಕು, ಹೆಚ್ಚೆಚ್ಚು ಹಣ ಹೂಡಿಕೆ ಮಾಡಬೇಕು. ಇವಿಷ್ಟನ್ನೇ ತಿಳಿದು ಹೂಡಿಕೆಗೆ ಮುಂದಾದರೆ ಅಗಾಧ ಮಾರುಕಟ್ಟೆಯಲ್ಲಿ ದಾರಿ ಕಾಣದಾಗಬಹುದು. ನೀವು ತುಂಬಾ ವರ್ಷಗಳಿಂದ ಹೂಡಿಕೆ ಮಾಡಿದಾಗ, ಅಥವಾ ಸತತವಾಗಿ ಹೂಡಿಕೆಗಳನ್ನು ಮಾಡುತ್ತಾ ಬಂದಾಗ ಅದ್ಭುತ ರಿಟರ್ನ್ ಸಿಗುತ್ತೆ ಎನ್ನಲು ಗ್ಯಾರಂಟಿ ಇಲ್ಲ.

ಎಲ್​​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಮಾಜಿ ಸಿಒಒ ಅಶ್ವನಿ ಘಾಯ್ ಅವರು ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು, ಒಂದು ನಿದರ್ಶನದ ಮೂಲಕ ಹೂಡಿಕೆಯ ಸಮಸ್ಯೆ ವಿವರಿಸಿದ್ದಾರೆ.

ಅವರಿಗೆ ಗೊತ್ತಿರುವ ಹೂಡಿಕೆದಾರರೊಬ್ಬರು ಬರೋಬ್ಬರಿ 16 ಮ್ಯೂಚುವಲ್ ಫಂಡ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬೇರೆ ಬೇರೆ ಫಂಡ್​​ಗಳಾದ್ದರಿಂದ ಹೂಡಿಕೆಯ ವಿಸ್ತಾರ ಹೆಚ್ಚಿರುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಆ ಹೆಚ್ಚಿನ ಮ್ಯೂಚುವಲ್ ಫಂಡ್​​ಗಳು ಲಾರ್ಜ್ ಕ್ಯಾಪ್ ಸೆಗ್ಮೆಂಟ್​ನಲ್ಲಿ ಇರುವಂಥವು. ಅಂದರೆ, ಅಲ್ಲಿ ಹೂಡಿಕೆ ವಿಸ್ತಾರ ಬಹುತೇಕ ಇಲ್ಲವೇ ಇಲ್ಲ. ಯಾವ ಅವಲೋಕನೆ ಮಾಡದೆಯೇ ಅವರು ಈ 16 ಮ್ಯುಚುವಲ್ ಫಂಡ್​​ಗಳ್ಲಲಿ ಹೂಡಿಕೆ ಮಾಡಿದ್ದಾರೆ ಎಂದು ಅಶ್ವನಿ ಘಾಯ್ ಹೇಳಿದ್ಧಾರೆ.

ಇದನ್ನೂ ಓದಿ: ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ

ಹೂಡಿಕೆಯಲ್ಲಿ ವೈವಿಧ್ಯತೆ ಅಥವಾ ವಿಸ್ತಾರ ತರುವುದು ಹೇಗೆ?

ತಜ್ಞರ ಪ್ರಕಾರ, ಷೇರು, ಚಿನ್ನ, ಡೆಟ್, ಎಫ್​​​ಡಿ, ರಿಯಲ್ ಎಸ್ಟೇಟ್ ಇತ್ಯಾದಿ ಕಡೆ ಹರಡಿರಬೇಕು. ಇಲ್ಲಿ ಷೇರು ವಿಚಾರಕ್ಕೆ ಬಂದಾಗಲೂ ಕೂಡ ಅಲ್ಲೂ ಹೂಡಿಕೆ ಚದುರಿ ಹೋಗಿರಬೇಕು. ಅಂದರೆ, ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಅದಕ್ಕಾಗಿ, ಆಯಾ ಇಂಡೆಕ್ಸ್ ಫಂಡ್​ಗಳನ್ನು ಆಯ್ದುಕೊಳ್ಳಬಹುದು. ಹೈಬ್ರಿಡ್ ಫಂಡ್​ಗಳನ್ನು ಆಯ್ದುಕೊಳ್ಳಬಹುದು.

ಇಂಡೆಕ್ಸ್​​ಗಳಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಬದಲು ಇಟಿಎಫ್ ಅನ್ನೂ ಕೂಡ ಆಯ್ದುಕೊಳ್ಳಬಹುದು. ಚಿನ್ನ, ಬೆಳ್ಳಿ ಇತ್ಯಾದಿ ಸರಕುಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಡಿಜಿಟಲ್ ಪ್ಲಾಟ್​​ಫಾರ್ಮ್​​ಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಕಾರ್ಪೊರೇಟ್ ಬಾಂಡ್, ಗವರ್ನ್ಮೆಂಟ್ ಬಾಂಡ್​​ಗಳಲ್ಲಿ ಹಣ ತೊಡಗಿಸುವ ಡೆಟ್ ಫಂಡ್​​ಗಳಲ್ಲಿ ಹೂಡಿಕೆ ಮಾಡಬಹುದು. ರಿಯಲ್ ಎಸ್ಟೇಟ್​ಗೆ ಜೋಡಿತವಾದ ಆರ್​ಐಇಟಿಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಒಬ್ಬ ವ್ಯಕ್ತಿ ಎಷ್ಟು ಸಾಲ ಮಾಡಬಹುದು? ಮಿತಿ ಎಷ್ಟಿರಬೇಕು?

ಎಮರ್ಜೆನ್ಸಿ ಫಂಡ್ ಇಟ್ಟಿರಬೇಕು…

ಹೂಡಿಕೆ ದೀರ್ಘಕಾಲ ಇರಬೇಕೆಂದರೆ ನಿಮ್ಮ ಇತರ ಜೀವನ ಅಗತ್ಯಗಳ ಪೂರೈಕೆಗೆ ಬ್ಯಾಕಪ್ ಹಣ ಇರಬೇಕು. ಅದಕ್ಕಾಗಿ ಎಮರ್ಜೆನ್ಸಿ ಫಂಡ್ ಸ್ಥಾಪಿಸಬೇಕು. ನಿಮ್ಮ ಅಗತ್ಯಗಳಿಗೆ ತಕ್ಕಷ್ಟು ಹಣವನ್ನು ಅದರಲ್ಲಿ ಇರಿಸಬಹುದು. ಎಫ್​​ಡಿ ರೂಪದಲ್ಲೋ, ಆರ್​​ಡಿ ರೂಪದಲ್ಲೋ ನೀವು ಎಮರ್ಜೆನ್ಸಿ ಫಂಡ್ ಸ್ಥಾಪಿಸಬಹುದು. ಅಥವಾ ಸೇವಿಂಗ್ಸ್ ಅಕೌಂಟ್​​ನಲ್ಲಿ ಹಾಗೇ ಒಂದಷ್ಟು ಹಣ ಬಿಟ್ಟರೂ ಸಮಸ್ಯೆ ಇಲ್ಲ. ಒಟ್ಟಿನಲ್ಲಿ, ನೀವು ದೀರ್ಘಾವಧಿಗೆಂದು ಮಾಡಿದ್ದ ಹೂಡಿಕೆಯನ್ನು ಒಂದು ವರ್ಷಕ್ಕೋ, ಎರಡು ವರ್ಷಕ್ಕೋ ಮಾರುವ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!