AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್

How much safe is the investments in Bank, shares and mutual funds: ಭಾರತದಲ್ಲಿ ಅನೇಕ ರೀತಿಯ ಹೂಡಿಕೆಗಳಿಗೆ ಅವಕಾಶ ಇದೆ. ಆದರೆ, ಆರ್​ಬಿಐ, ಸೆಬಿ ಇತ್ಯಾದಿ ನಿಯಂತ್ರಕರಿಂದ ಮಾನ್ಯವಾಗಿರುವ ಸಂಸ್ಥೆಗಳ ಹೂಡಿಕೆ ಸ್ಕೀಮ್​ಗಳಲ್ಲಿ ಹಣ ತಕ್ಕಮಟ್ಟಿಗೆ ಸುರಕ್ಷಿತವಾಗಿರುತ್ತದೆ. ಅಪಾಯದಿಂದ ಹೊರತಲ್ಲವಾದರೂ, ಈ ಹೂಡಿಕೆಗಳು ಎಷ್ಟು ಸುರಕ್ಷಿತ, ಎಷ್ಟು ಅಪಾಯಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 22, 2026 | 8:00 PM

Share

ಇವತ್ತು ಹೂಡಿಕೆಗಳಿಗೆ (Investments) ಹಲವಾರು ರೀತಿಯ ಮಾರ್ಗಗಳಿವೆ. ಷೇರು, ಬ್ಯಾಂಕ್ ಡೆಪಾಸಿಟ್, ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್, ಆರ್​ಇಐಟಿ, ಮ್ಯೂಚುವಲ್ ಫಂಡ್, ಇಟಿಎಫ್ ಇತ್ಯಾದಿ ಆಯ್ಕೆಗಳಿವೆ. ದೊಡ್ಡ ದೊಡ್ಡ ಬ್ಯಾಂಕ್ ಸಂಸ್ಥೆಗಳೇ ದಿಢೀರನೇ ದಿವಾಳಿ ಎದ್ದಿದ್ದೇವೆಂದು ಘೋಷಿಸಿಕೊಳ್ಳಬಹುದು. ಅನೇಕ ಕೋಆಪರೇಟಿವ್ ಬ್ಯಾಂಕುಗಳ ನಿದರ್ಶನ ಕಣ್ಮುಂದೆ ಇದೆ. ಒಂದು ವೇಳೆ, ಹೀಗೆ ಬ್ಯಾಂಕ್​ನಂತೆ ಷೇರು ವಿನಿಮಯ ಕೇಂದ್ರವೇ ಕುಸಿದು ಹೋದರೆ ಹೂಡಿಕೆದಾರರ ಷೇರುಗಳು ಏನಾಗುತ್ತವೆ? ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಏನಾಗುತ್ತದೆ? ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ಬ್ಯಾಂಕುಗಳಲ್ಲಿ ಠೇವಣಿ ಎಷ್ಟು ಭದ್ರ?

ಯಾವುದೇ ಬ್ಯಾಂಕಲ್ಲಿ 5 ಲಕ್ಷ ರೂವರೆಗಿನ ಹಣಕ್ಕೆ ವಿಮೆ ಕವರೇಜ್ ಇರುತ್ತೆ. ಸೇವಿಂಗ್ಸ್ ಅಕೌಂಟ್, ಕರೆಂಟ್ ಅಕೌಂಟ್, ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಎಲ್ಲಾ ರೀತಿಯ ಅಕೌಂಟ್​ಗಳಿಗೆ ಇದು ಅನ್ವಯ ಆಗುತ್ತದೆ. ಒಂದು ಬ್ಯಾಂಕ್​ನಲ್ಲಿ ನೀವು ಬಹು ಅಕೌಂಟ್​ಗಳನ್ನು ಹೊಂದಿದ್ದು, ಅವೆಲ್ಲವುಗಳಿಂದ 5 ಲಕ್ಷ ರೂಗೆ ಮಾತ್ರ ಖಾತ್ರಿ ಇರುತ್ತದೆ. ಬ್ಯಾಂಕ್ ದಿವಾಳಿ ಎದ್ದರೆ ಡಿಐಸಿಜಿಸಿ ಸಂಸ್ಥೆಯು ಗ್ರಾಹಕರಿಗೆ ಐದು ಲಕ್ಷ ರೂ ಅನ್ನು ನೀಡುತ್ತವೆ. ನೀವು ಹೆಚ್ಚು ಡೆಪಾಸಿಟ್ ಮಾಡಿದ್ದರೆ ಅದಕ್ಕೆ ಖಾತ್ರಿ ಇರುವುದಿಲ್ಲ. ಅಥವಾ ಆ ಹೆಚ್ಚುವರಿ ಹಣ ಬರುವುದೇ ಇಲ್ಲ ಎಂದಲ್ಲ. ಆ ಬ್ಯಾಂಕ್​ನ ಆಸ್ತಿಪಾಸ್ತಿಗಳನ್ನು ಮಾರುವುದೋ ಇತ್ಯಾದಿ ಕಾರ್ಯಗಳಿಂದ ಆರ್​ಬಿಐಯೇನಾದರೂ ಹಣ ವಸೂಲಿ ಮಾಡಿದರೆ, ಅದನ್ನು ಗ್ರಾಹಕರಿಗೆ ಎಷ್ಟು ಸಾಧ್ಯವೋ ಅಷ್ಟು ಮರಳಿಸಲು ಯತ್ನಿಸಬಹುದು.

ಷೇರು ವಿನಿಮಯ ಕೇಂದ್ರವೇ ಕುಸಿದರೆ ಏನಾಗುತ್ತೆ?

ಷೇರುಗಳಲ್ಲಿ ಹೂಡಿಕೆ ಬಹಳ ರಿಸ್ಕಿ ಎನ್ನುತ್ತಾರೆ. ಇದು ಹೌದು. ಮಾರುಕಟ್ಟೆ ಬಿದ್ದು ಷೇರುಬೆಲೆ ಕುಸಿಯಬಹುದು. ಬೆಲೆ ಕುಸಿದಾಗ, ಕಡಿಮೆ ಬೆಲೆಗೆ ನೀವು ಷೇರು ಮಾರಿದರೆ ಅದು ನೈಜ ನಷ್ಟ. ಮಾರದೇ ಇದ್ದು, ಷೇರುಬೆಲೆ ಏರುವವರೆಗೂ ಕಾಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ; 21 ವರ್ಷದಲ್ಲಿ ಬರೋಬ್ಬರಿ 2 ಕೋಟಿ ರೂ ರಿಟರ್ನ್ಸ್

ಒಂದು ವೇಳೆ, ಷೇರು ವಿನಿಯಮ ಕೇಂದ್ರವೇ ಕುಸಿದರೆ ಅಥವಾ ದಿವಾಳಿ ಎದ್ದರೆ ಏನಾಗುತ್ತದೆ? ಷೇರು ಮೌಲ್ಯ ಕಡಿಮೆ ಆಗಬಹುದು. ಆದರೆ, ನಿಮ್ಮ ಪಾಲಿನ ಷೇರುಗಳಿಗೆ ಏನೂ ಆಗುವುದಿಲ್ಲ. ಅಂದರೆ, ನಿಮ್ಮ ಷೇರು ಮಾಲಕತ್ವ ಮುಂದುವರಿಯುತ್ತದೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳ ವಹಿವಾಟ ಮಾತ್ರವೇ ನಡೆಯುವುದು. ಎನ್​ಎಸ್​ಡಿಲ್ ಮತ್ತು ಸಿಡಿಎಸ್​ಎಲ್ ಎನ್ನುವ ಸ್ವತಂತ್ರ ಡಿಪಾಸಿಟರಿ ಕಂಪನಿಗಳು ಎಲ್ಲರ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಂಡಿರುತ್ತವೆ.

ಗ್ರೋ ಇತ್ಯಾದಿ ಬ್ರೋಕರೇಜ್ ಕಂಪನಿಗಳು ದಿವಾಳಿ ಎದ್ದರೂ ನಿಮ್ಮ ಷೇರುಗಳು ಎನ್​ಎಸ್​ಡಿಎಲ್ ಅಥವಾ ಸಿಡಿಎಸ್​ಎಲ್ ಬಳಿ ಸುರಕ್ಷಿತವಾಗಿರುತ್ತವೆ. ಸೆಬಿಯಿಂದ ಇನ್ವೆಸ್ಟರ್ ಪ್ರೊಟೆಕ್ಷನ್ ಫಂಡ್ ಸ್ಥಾಪನೆಯಾಗಿದ್ದು, ಇದು ಷೇರುದಾರರಿಗೆ ಪರಿಹಾರ ಕೊಡಲೆಂದು ಇದೆ.

ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ?

ಮ್ಯೂಚುವಲ್ ಫಂಡ್​ಗಳಲ್ಲಿ ಮಾಡುವ ಹೂಡಿಕೆಗಳ ಸುರಕ್ಷತೆಗೆ ಸೆಬಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮ್ಯೂಚುವಲ್ ಫಂಡ್​ಗಳು ಮೂರು ಸ್ತರದ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಟ್ರಸ್ಟ್, ಟ್ರಸ್ಟೀ ಮತ್ತು ಕಸ್ಟೋಡಿಯನ್ ಅನ್ನು ಒಳಗೊಂಡ ವ್ಯವಸ್ಥೆ ಇದು.

ಇದನ್ನೂ ಓದಿ: ಶೂನ್ಯದಿಂದ ಆಸ್ತಿ ಸಂಪಾದನೆ ಮಾಡುವುದು ಹೇಗೆ? ಇಲ್ಲಿದೆ ತಿಳಿದಿರಬೇಕಾದ ಸಂಗತಿಗಳು

ಎಲ್ಲಾ ಮ್ಯುಚುವಲ್ ಫಂಡ್​ಗಳು ಪಬ್ಲಿಕ್ ಟ್ರಸ್ಟ್ ಆಗಿ ಸ್ಥಾಪನೆಯಾಗಿರುತ್ತವೆ. ಈ ಫಂಡ್​ಗಳಲ್ಲಿ ಹಾಕುವ ಹಣವು ಟ್ರಸ್ಟ್​ಗೆ ಹೋಗುತ್ತದೆ. ಫಂಡ್​ನ ಎಎಂಸಿ ಬ್ಯುಸಿನೆಸ್​ಗಳಿಂದ ಈ ಟ್ರಸ್ಟ್ ಪ್ರತ್ಯೇಕವಾಗಿರುತ್ತವೆ. ಟ್ರಸ್ಟೀಗಳು ಹೂಡಿಕೆದಾರರಿಗೆ ಪಾಲಕರಂತೆ ಕಾರ್ಯನಿರ್ವಹಿಸುತ್ತವೆ.

ಮ್ಯೂಚುವಲ್ ಫಂಡ್​ನಿಂದ ಖರೀದಿಸಲಾದ ಷೇರು, ಬಾಂಡ್ ಇತ್ಯಾದಿಯನ್ನು ಎಎಂಸಿಗಳು ಇಟ್ಟುಕೊಳ್ಳುವುದಿಲ್ಲ. ಬದಲಾಗಿ, ಸೆಬಿ ನೊಂದಾಯಿತವಾಗಿರುವ ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಇತ್ಯಾದಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳು ಇಟ್ಟುಕೊಂಡಿರುತ್ತವೆ.

ಎಎಂಸಿಗಳು ದಿವಾಳಿ ಎದ್ದರೆ ಆಗ ಸೆಬಿ ಮಧ್ಯಪ್ರವೇಶಿಸಿ ಫಂಡ್ ಸಂಸ್ಥೆಯ ಸ್ಕೀಮ್​ಗಳನ್ನು ಬೇರೆಯ ಎಎಂಸಿಗೆ ವರ್ಗಾಯಿಸುತ್ತದೆ. ಇದರೊಂದಿಗೆ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳು ಸುರಕ್ಷಿತವಾಗಿ ಮುಂದುವರಿಯುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ