SBI vs Post Office FD: ಪೋಸ್ಟ್ ಆಫೀಸ್​ಗಿಂತ ಉತ್ತಮವಾಗಿದೆಯಾ ಎಸ್​ಬಿಐ ಎಫ್​ಡಿ ಯೋಜನೆ? ಇಲ್ಲಿದೆ ಒಂದು ಹೋಲಿಕೆ

Fixed Deposit Rate Comparison: ಬ್ಯಾಂಕುಗಳ ಎಫ್​ಡಿ ದರಗಳಿಗೆ ಪೋಸ್ಟ್ ಆಫೀಸ್ ಎಫ್​ಡಿಗಳು ಪೈಪೋಟಿ ನಡೆಸುವಷ್ಟು ಆಕರ್ಷಕ ಎನಿಸಿವೆ. ಅಂಚೆ ಕಚೇರಿಯಲ್ಲಿನ ಎಫ್​ಡಿ ಯೋಜನೆಗಳಿಂದ ಇನ್ನೂ ಹಲವು ಹೆಚ್ಚುವರಿ ಪ್ರಯೋಜನಗಳುಂಟು.

SBI vs Post Office FD: ಪೋಸ್ಟ್ ಆಫೀಸ್​ಗಿಂತ ಉತ್ತಮವಾಗಿದೆಯಾ ಎಸ್​ಬಿಐ ಎಫ್​ಡಿ ಯೋಜನೆ? ಇಲ್ಲಿದೆ ಒಂದು ಹೋಲಿಕೆ
ಎಸ್​ಬಿಐ
Follow us
|

Updated on:Apr 24, 2023 | 1:52 PM

ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್​ಗಳು (Term Deposits) ಹಣ ಉಳಿತಾಯಕ್ಕೆ ಪ್ರಮುಖ ಸಾಧನಗಳೆನಿಸಿವೆ. ಈಗಂತೂ ವರ್ಷಕ್ಕೆ ಶೇ. 8ರವರೆಗೂ ವಾರ್ಷಿಕ ಬಡ್ಡಿ ತಂದುಕೊಡುತ್ತವೆ ಬಹುತೇಕ ಎಫ್​ಡಿ ಯೋಜನೆಗಳು. ಕಮರ್ಷಿಯಲ್ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಜನರು ಇರಿಸುವುದು ಸಾಮಾನ್ಯ. ಆರ್​ಬಿಐ ರೆಪೋ ದರಗಳನ್ನು (Repo Rate) ಏರಿಕೆ ಮಾಡಿದ ಬಳಿಕ ಬ್ಯಾಂಕುಗಳು ಎಫ್​ಡಿ ದರಗಳನ್ನು ಗಮನಾರ್ಹ ಎನಿಸುವ ಮಟ್ಟಕ್ಕೆ ಹೆಚ್ಚಿಸಿವೆ. ಹಾಗೆಯೇ, ಅಂಚೆ ಕಚೇರಿಯ ಎಫ್​ಡಿ ಯೋಜನೆಗಳೂ (Post Office FD Schemes) ಈಗ ಜನಪ್ರಿಯವಾಗತೊಡಗಿವೆ. ಬ್ಯಾಂಕುಗಳ ಎಫ್​ಡಿ ದರಗಳಿಗೆ ಪೋಸ್ಟ್ ಆಫೀಸ್ ಎಫ್​ಡಿಗಳು ಪೈಪೋಟಿ ನಡೆಸುವಷ್ಟು ಆಕರ್ಷಕ ಎನಿಸಿವೆ. ಅಂಚೆ ಕಚೇರಿಯಲ್ಲಿನ ಎಫ್​ಡಿ ಯೋಜನೆಗಳಿಂದ ಇನ್ನೂ ಹಲವು ಹೆಚ್ಚುವರಿ ಪ್ರಯೋಜನಗಳುಂಟು. ಹೀಗಾಗಿ, ಬಹಳ ಮಂದಿ ಎಫ್​ಡಿ ಇಡಲು ಅಂಚೆ ಕಚೇರಿ ಬಳಿ ಎಡತಾಕುವುದಿದೆ. ಇದೇ ವೇಳೆ, ಎಸ್​ಬಿಐನ ಎಫ್​ಡಿ ಸ್ಕೀಮ್​ಗಳು (SBI FD Schemes) ಬಹಳ ಬೇಡಿಕೆ ಪಡೆದುಕೊಳ್ಳುತ್ತಿವೆ.

ಎಫ್​ಡಿಗೆ ಅಂಚೆ ಕಚೇರಿಯೋ, ಎಸ್​ಬಿಐಯೋ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10 ವರ್ಷದವರೆಗೂ ನಿಶ್ಚಿತ ಠೇವಣಿ ಇರಿಸಬಹುದು. ವಾರ್ಷಿಕ ಶೇ. 7ರವರೆಗೂ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ. ಅಮೃತ ಕಳಶ ಸ್ಕೀಮ್​ನಲ್ಲಿ 400 ದಿನಗಳ ನಿಶ್ಚಿತ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿEPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ

ಅಂಚೆ ಕಚೇರಿಯ ನಿಶ್ಚಿತ ಠೇವಣಿಗಳಿಗೆ ಶೇ. 6.8ರಿಂದ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇಲ್ಲಿ ಹಿರಿಯ ನಾಗರಿಕರಿಗೂ ಇತರರಿಗೂ ಬಡ್ಡಿಯಲ್ಲಿ ವ್ಯತ್ಯಾಸ ಇಲ್ಲ. ಅಂಚೆ ಕಚೇರಿಯ ಎಫ್​ಡಿಗಳ ಅವಧಿಯಲ್ಲಿ ಹೆಚ್ಚು ಅಯ್ಕೆಗಳಿಲ್ಲ. ಬ್ಯಾಂಕುಗಳಲ್ಲಾದರೆ ಎಫ್​ಡಿಯನ್ನು 7 ದಿನಗಳ ಅವಧಿಯಿಂದ ಆರಂಭಿಸಬಹುದು. 10 ವರ್ಷದಲ್ಲಿ ಯಾವ ಅವಧಿಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಬೇರೆ ಬೇರೆ ಅವಧಿಗೆ ಬೇರೆ ಬೇರೆ ಬಡ್ಡಿ ದರಗಳು ಅನ್ವಯ ಆಗುತ್ತವೆ.

ಅಂಚೆ ಕಚೇರಿ ಎಫ್​ಡಿಗಳು 1, 2, 3 ಮತ್ತು 5 ವರ್ಷಗಳ ಅವಧಿಯದ್ದು ಮಾತ್ರವಾಗಿರುತ್ತವೆ. ಆದರೆ, ಠೇವಣಿ ಇರಿಸಿ 6 ತಿಂಗಳ ಬಳಿಕ ಅಂಚೆ ಕಚೇರಿಯಲ್ಲಿ ಠೇವಣಿ ಹಿಂಪಡೆಯಲು ಸಾಧ್ಯ. ಒಂದು ವರ್ಷದೊಳಗೆ ನೀವು ಠೇವಣಿ ಹಿಂಪಡೆದರೆ ದಂಡ ವಿಧಿಸಲಾಗುವುದಿಲ್ಲ. ಬದಲಾಗಿ ಉಳಿತಾಯ ಖಾತೆಗೆ ನೀಡುವ ಬಡ್ಡಿಯನ್ನು ಎಫ್​ಡಿ ಮೊತ್ತಕ್ಕೆ ನೀಡಲಾಗುತ್ತದೆ. ಎಸ್​ಬಿಐನ ಎಫ್​ಡಿಯನ್ನೂ ಅವಧಿಗೆ ಮುನ್ನ ಹಿಂಪಡೆಯಬಹುದು. ಆದರೆ, ದಂಡ ಹಾಕಲಾಗುತ್ತದೆ.

ಇದನ್ನೂ ಓದಿFD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ

ಅಲ್ಪಾವಧಿಯ ಠೇವಣಿಯಾದರೆ ಎಸ್​ಬಿಐ ಎಫ್​ಡಿ ಉತ್ತಮ ಆಯ್ಕೆಯಾ?

ಎಫ್​ಡಿ ವಿಚಾರದಲ್ಲಿ ಎಸ್​ಬಿಐ ಮತ್ತು ಅಂಚೆ ಕಚೇರಿ ಸ್ಕೀಮ್​ಗಳೆರಡೂ ಬಹುತೇಕ ಸಮ ನಿಲ್ಲುತ್ತವೆ. ಎರಡೂ ಕೂಡ ಸರ್ಕಾರೀ ಸಂಸ್ಥೆಗಳೇ ಆಗಿವೆ. ಹೀಗಾಗಿ, ಠೇವಣಿ ಹಣ ಮಾಯವಾಗುತ್ತದೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ, ತಜ್ಞರ ಲೆಕ್ಕಾಚಾರದ ಪ್ರಕಾರ ನೀವು ಅಲ್ಪಾವಧಿಗೆ ಎಫ್​ಡಿ ಮಾಡುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಆಯ್ಕೆ ಆಗಬಹುದು.

ಹೆಚ್ಚು ವರ್ಷಗಳವರೆಗೆ ಎಫ್​ಡಿ ಇಡುವುದಾದರೆ ಬಡ್ಡಿ ದರಗಳನ್ನು ಲೆಕ್ಕ ಹಾಕಿ ನಿರ್ಧರಿಸಬಹುದು. ಹಾಗೆಯೇ, ಎಸ್​ಬಿಐ ಮತ್ತು ಪೋಸ್ಟ್ ಆಫೀಸ್​ನ ಎಫ್​ಡಿಗಳು ತೆರಿಗೆ ಉಳಿತಾಯಕ್ಕೆ ಸಹಕಾರಿ ಆಗಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Mon, 24 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ