AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

E Rupee to Cash: ನಿಮಗಿದು ತಿಳಿದಿರಲಿ; ಇ-ರೂಪಾಯಿಯನ್ನು ನೇರವಾಗಿ ನಗದಾಗಿ ಪರಿವರ್ತಿಸಲು ಸದ್ಯಕ್ಕೆ ಸಾಧ್ಯವಿಲ್ಲ

ಸದ್ಯ ಬ್ಯಾಂಕ್​ ಗ್ರಾಹಕರಿಗೆ ಮಾತ್ರ ಡಿಜಿಟಲ್ ವಾಲೆಟ್ ಇನ್​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿದೆ. ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಮಾತ್ರ ಇನ್​ಸ್ಟಾಲ್ ಅನುವು ಮಾಡಿಕೊಡಲಾಗಿದೆ. ಒಂದು ಬಾರಿ ವಾಲೆಟ್​ ಇನ್​ಸ್ಟಾಲ್ ಮಾಡಿಕೊಂಡರೆ ಅಂಥ ಗ್ರಾಹಕರು ಯಾವ ಬ್ಯಾಂಕ್​ನಿಂದ ಬೇಕಿದ್ದರೂ ವಾಲೆಟ್​ಗೆ ಇ-ರೂಪಾಯಿಯನ್ನು ಆ್ಯಡ್ ಮಾಡಿಕೊಳ್ಳಬಹುದು.

E Rupee to Cash: ನಿಮಗಿದು ತಿಳಿದಿರಲಿ; ಇ-ರೂಪಾಯಿಯನ್ನು ನೇರವಾಗಿ ನಗದಾಗಿ ಪರಿವರ್ತಿಸಲು ಸದ್ಯಕ್ಕೆ ಸಾಧ್ಯವಿಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 19, 2023 | 12:17 PM

ಮುಂಬೈ: ಕೇಂದ್ರೀಯ ಬ್ಯಾಂಕ್​​ ಡಿಜಿಟಲ್ ಕರೆನ್ಸಿ (CBDC) ಅಥವಾ ಇ-ರೂಪಾಯಿಯನ್ನು (eRupee) ಸದ್ಯದ ಮಟ್ಟಿಗೆ ನೇರವಾಗಿ ನಗದಾಗಿ ಪರಿವರ್ತಿಸಲು ಸಾಧ್ಯವಾಗದು. ಆರ್​ಬಿಐ (RBI) ಬ್ಯಾಂಕ್​ ಠೇವಣಿಗಳ ಮೇಲೆ ಮಾತ್ರ ಇ-ರೂಪಾಯಿಯನ್ನು ನೀಡುತ್ತಿದ್ದು, ಈ ರೀತಿಯ ಡಿಜಿಟಲ್ ಕರೆನ್ಸಿಯನ್ನು ನಗದಾಗಿ ಪರಿವರ್ತಿಸಲು ಅವಕಾಶ ನೀಡುತ್ತಿದೆ. ಇ-ರೂಪಾಯಿಯ ಪ್ರಾಯೋಗಿಕ ಯೋಜನೆ ತೃಪ್ತಿಕರವಾಗಿ ಸಾಗುತ್ತಿದೆ. ನಿರ್ದಿಷ್ಟ ಗ್ರಾಹಕ ತಂಡಗಳ ನಡುವೆ ವಹಿವಾಟು ನಡೆಸಲಾಗುತ್ತಿದೆ. ಬಳಕೆದಾರರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ಆರ್​ಬಿಐ ತಿಳಿಸಿದೆ. ಸಾಮಾನ್ಯ ಕರೆನ್ಸಿಗಳಂತೆಯೇ ಇ-ರೂಪಾಯಿ ಕೂಡ ಆಗಿರುವುದರಿಂದ ಅದರ ನಿರ್ವಹಣೆಗೆ ಸಂಬಂಧಿಸಿದ ವೆಚ್ಚವನ್ನು ಆರ್​ಬಿಐಯೇ ಭರಿಸಲಿದೆ. ಸಾರ್ವಜನಿಕ ಹಿತಕ್ಕಾಗಿ ಆರ್​ಬಿಐ ಇದರ ನಿರ್ವಹಣೆ ಮಾಡಲಿದೆ ಎಂದು ಕೇಂದ್ರೀಯ ಬ್ಯಾಂಕ್​ನ ಫಿನ್​ಟೆಕ್ ಡಿಪಾರ್ಟ್​​ಮೆಂಟ್​​ನ ಚೀಫ್ ಜನರಲ್ ಮ್ಯಾನೇಜರ್ ಅನುಜ್ ರಂಜನ್ ‘ಇಂಡಿಯನ್ ಮರ್ಚೆಂಟ್ಸ್ ಚೇಂಬರ್​’ನ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಬ್ಯಾಂಕ್​ಗಳು ಈಗಾಗಲೇ ಗೂಗಲ್ ಪ್ಲೇ ಸ್ಟೋರ್​ ಮತ್ತು ಆ್ಯಪಲ್ ಆ್ಯಪ್ ಸ್ಟೋರ್​ಗಳಲ್ಲಿ ಡಿಜಿಟಲ್ ವಾಲೆಟ್​ ಲಭ್ಯವಾಗುವಂತೆ ಮಾಡಿವೆ ಎಂದು ಯೆಸ್​​ ಬ್ಯಾಂಕ್​​ನ ಟ್ರಾನ್ಸಾಕ್ಷನ್ ಬ್ಯಾಕಿಂಗ್ ಮುಖ್ಯಸ್ಥ ಅಜಯ್ ರಾಜನ್ ತಿಳಿಸಿದ್ದಾರೆ. ಸದ್ಯ ಬ್ಯಾಂಕ್​ ಗ್ರಾಹಕರಿಗೆ ಮಾತ್ರ ಡಿಜಿಟಲ್ ವಾಲೆಟ್ ಇನ್​ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಿದೆ. ಬ್ಯಾಂಕ್​ನಲ್ಲಿ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಮಾತ್ರ ಇನ್​ಸ್ಟಾಲ್ ಅನುವು ಮಾಡಿಕೊಡಲಾಗಿದೆ. ಒಂದು ಬಾರಿ ವಾಲೆಟ್​ ಇನ್​ಸ್ಟಾಲ್ ಮಾಡಿಕೊಂಡರೆ ಅಂಥ ಗ್ರಾಹಕರು ಯಾವ ಬ್ಯಾಂಕ್​ನಿಂದ ಬೇಕಿದ್ದರೂ ವಾಲೆಟ್​ಗೆ ಇ-ರೂಪಾಯಿಯನ್ನು ಆ್ಯಡ್ ಮಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Digital Rupee: ಆರ್​ಬಿಐ ಡಿಜಿಟಲ್ ಕರೆನ್ಸಿ ಪ್ರಯೋಗಕ್ಕೆ ಮುಂಬೈ ಹಣ್ಣಿನ ವ್ಯಾಪಾರಿ; ಇ-ರೂಪಾಯಿ ಬಗ್ಗೆ ಏನಂತಾರೆ ಇವರು?

ನಗದು ನಿರ್ವಹಣೆ ಉಚಿತವಾದರೂ ವ್ಯಾಪಾರಿಗಳು ನಗದು ನಿರ್ವಹಣೆ ಕಂಪನಿಗಳಿಗೆ ಶುಲ್ಕ ನೀಡಬೇಕಾಗುತ್ತದೆ. ಇ-ರೂಪಾಯಿ ಮೂಲಕ ಪಾವತಿ ಸ್ವೀಕರಿಸುವ ಬಗ್ಗೆ ಅನೇಕ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇವುಗಳಲ್ಲಿ ರಿಲಯನ್ಸ್ ರಿಟೇಲ್ ಮತ್ತು ನ್ಯಾಚುರಲ್ ಐಸ್​ಕ್ರೀಮ್​ ಕೂಡ ಸೇರಿವೆ ಎಂದು ಅವರು ಹೇಳಿದ್ದಾರೆ.

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾ ಬಳಕೆಯ ಪ್ರಯೋಗವನ್ನು ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಆರ್​ಬಿಐ ಇತ್ತೀಚೆಗೆ ಆರಂಭಿಸಿತ್ತು. ಇದು ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಇ-ರೂಪಾಯಿ ವಹಿವಾಟನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ