AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಸಹಕಾರಿ ಬ್ಯಾಂಕುಗಳಿಗೂ ಲೋನ್ ರೈಟಾಫ್, ರಾಜೀ ಸಂಧಾನಕ್ಕೆ ಸಿಗಲಿದೆ ಅವಕಾಶ; ಎನ್​ಪಿಎ, ರೈಟ್ ಆಫ್, ಸಾಲಮನ್ನಾ ಏನು ವ್ಯತ್ಯಾಸ?

RBI Decision on NPA: ಈಗ ಸಹಕಾರಿ ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಿಗೂ ಕೂಡ ಎನ್​ಪಿಎ ಸಾಲಗಳನ್ನು ಕೈಬಿಡುವ ಅವಕಾಶ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಯೋಜಿಸಿದೆ. ಸಂಕಷ್ಟದ ಆಸ್ತಿಗಳ ಸಮಸ್ಯೆ ಇತ್ಯರ್ಥಕ್ಕೆ ರೂಪಿಸಿರುವ ಚೌಕಟ್ಟಿನ ವ್ಯಾಪ್ತಿಯನ್ನು ಹೆಚ್ಚಿಸಲು ಆರ್​ಬಿಐ ನಿರ್ಧರಿಸಿದೆ.

RBI: ಸಹಕಾರಿ ಬ್ಯಾಂಕುಗಳಿಗೂ ಲೋನ್ ರೈಟಾಫ್, ರಾಜೀ ಸಂಧಾನಕ್ಕೆ ಸಿಗಲಿದೆ ಅವಕಾಶ; ಎನ್​ಪಿಎ, ರೈಟ್ ಆಫ್, ಸಾಲಮನ್ನಾ ಏನು ವ್ಯತ್ಯಾಸ?
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2023 | 4:25 PM

ಮುಂಬೈ: ಎನ್​ಪಿಎ ಅಥವಾ ಅನುತ್ಪಾದಕ ಸಾಲವು (NPA- Non Performing Assets) ಯಾವುದೇ ಬ್ಯಾಂಕುಗಳಿಗೆ ತಲೆನೋವಾಗುವ ಆಸ್ತಿ. ಇದರ ಹೊರೆ ಹೆಚ್ಚಿದಷ್ಟೂ ಬ್ಯಾಂಕುಗಳು ಬಳಲಿ ಬೆಂಡಾಗುತ್ತವೆ. ಮರುಪಾವತಿ ಆಗದೇ ಉಳಿದ ಸಾಲವನ್ನು ತಾಂತ್ರಿಕವಾಗಿ ಕೈಬಿಡಲು, ಅಂದರೆ ರೈಟ್ ಆಫ್ (Loan Write Off) ಮಾಡಲು ಬ್ಯಾಂಕುಗಳಿಗೆ ಅವಕಾಶ ಇದೆ. ಎಲ್ಲಾ ಬ್ಯಾಂಕುಗಳು ಹಾಗೆಯೇ ಮಾಡುತ್ತವೆ. ಆದರೆ ಸಹಕಾರಿ ಬ್ಯಾಂಕುಗಳಿಗೆ ಈ ಅವಕಾಶ ಇಲ್ಲ. ಅದರ ಕಡತಗಳಲ್ಲಿ ಇದು ನಷ್ಟ ಎಂದು ದಾಖಲಾಗುತ್ತಲೇ ಇರುತ್ತದೆ. ಈಗ ಸಹಕಾರಿ ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳಿಗೂ ಕೂಡ ಎನ್​ಪಿಎ ಸಾಲಗಳನ್ನು ಕೈಬಿಡುವ ಅವಕಾಶ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಯೋಜಿಸಿದೆ. ಸಂಕಷ್ಟದ ಆಸ್ತಿಗಳ ಸಮಸ್ಯೆ ಇತ್ಯರ್ಥಕ್ಕೆ ರೂಪಿಸಿರುವ ಚೌಕಟ್ಟಿನ ವ್ಯಾಪ್ತಿಯನ್ನು ಹೆಚ್ಚಿಸಲು ಆರ್​ಬಿಐ ನಿರ್ಧರಿಸಿದೆ. ಅದರಂತೆ ಅನುತ್ಪಾದಕ ಸಾಲವನ್ನು ತಾಂತ್ರಿಕವಾಗಿ ಕೈಬಿಡಲು ಮತ್ತು ಸಾಲ ಪಡೆದವರ ಜೊತೆ ಮರುಪಾವತಿಗೆ ರಾಜೀ ಸಂಧಾನ ಮಾಡಿಕೊಳ್ಳಲು ಎಲ್ಲಾ ಆರ್​ಬಿಐ ನಿಯಂತ್ರಿತ ಸಂಸ್ಥೆಗಳಿಗೆ ಅವಕಾಶ ಇದೆ. ಇದರಲ್ಲಿ ಸಹಕಾರಿ ಸಂಸ್ಥೆಗಳೂ ಒಳಗೊಂಡಿರುತ್ತವೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.

ಇಲ್ಲಿಯವರೆಗೂ ಎನ್​ಪಿಎ ಸಾಲಗಳನ್ನು ರೈಟ್ ಮಾಡುವ ಮತ್ತು ರಾಜೀ ಸಂಧಾನ ಮಾಡಿಕೊಳ್ಳುವ ಅವಕಾಶ ಸ್ಕೆಡ್ಯೂಲ್ಡ್ ಕಮರ್ಷಿನ್ ಬ್ಯಾಂಕುಗಳು ಹಾಗೂ ಕೆಲ ಆಯ್ದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್​ಬಿಎಫ್​ಸಿ) ಮಾತ್ರ ಇತ್ತು. ಈಗ ಈ ಅವಕಾಶ ಎಲ್ಲಾ ರೆಗ್ಯುಲೇಟೆಡ್ ಬ್ಯಾಂಕುಗಳಿಗೂ ಸಿಗಲಿದೆ. ಈ ಸಂಬಂಧ ಆರ್​ಬಿಐ ಶೀಘ್ರದಲ್ಲೇ ಸಮಗ್ರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.

ಎನ್​ಪಿಎ ಎಂದರೆ ಏನು?

ಎನ್​ಪಿಎ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಎಂದರೆ ಅನುತ್ಪಾದಕ ಸಾಲ. ಒಂದು ಬ್ಯಾಂಕಿಗೆ ಆದಾಯ ತರದ ಸಾಲ ಇದು. ಈ ಸಾಲದಿಂದ ತನಗೆ ಯಾವುದೇ ಆದಾಯ ಸಿಗಬಹುದು ಎಂಬ ನಿರೀಕ್ಷೆಯನ್ನು ಬ್ಯಾಂಕು ಕೈಬಿಟ್ಟಿದ್ದರೆ ಅದು ಎನ್​ಪಿಎ ಎನಿಸುತ್ತದೆ.

ಇದನ್ನೂ ಓದಿRepo Rate: ರೆಪೋ ದರ ಶೇ. 6.5ರಲ್ಲೇ ಮುಂದುವರಿಕೆ; ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರ್ಥಿಕ ಬೆಳವಣಿಗೆ ಬಗ್ಗೆ ಸಮಾಧಾನಕರ ಮಾತು

ಆರ್​ಬಿಐ ನೀಡಿರುವ ಅಧಿಕೃತ ವಿವರಣೆ ಪ್ರಕಾರ ತಾಂತ್ರಿಕವಾಗಿ ಒಂದು ಸಾಲವು ಎನ್​ಪಿಎ ಎನಿಸಿಕೊಳ್ಳಬೇಕಾದರೆ 90 ದಿನಗಳಿಂದ, ಅಂದರೆ 3 ತಿಂಗಳಿಂದ ಸಾಲದ ಬಡ್ಡಿ ಅಥವಾ ಅಸಲು ಯಾವುದೂ ಕೂಡ ಪಾವತಿಯಾಗದೇ ಹಾಗೇ ನಿಷ್ಕ್ರಿಯವಾಗಿದ್ದರೆ ಅದು ಅನುತ್ಪಾದಕ ಸಾಲ ಎನಿಸುತ್ತದೆ.

ಲೋನ್ ರೈಟ್ ಆಫ್​ಗೂ ಸಾಲ ಮನ್ನಾಕ್ಕೂ ಏನು ವ್ಯತ್ಯಾಸ

ಒಂದು ಬ್ಯಾಂಕು ಸಾಲವನ್ನು ಕೈಬಿಟ್ಟಾಗ ಅಥವಾ ಲೋನ್ ರೈಟಾಫ್ ಮಾಡಿದಾಗ ಬಹಳ ಮಂದಿ ಇದನ್ನು ಸಾಲ ಮನ್ನಾ (Loan Waiver) ಎಂದೇ ತಪ್ಪಾಗಿ ಭಾವಿಸುವುದುಂಟು. ರೈಟ್ ಆಫ್ ಎಂಬುದು ಬ್ಯಾಂಕ್​ನ ಕಡತಗಳ ಲೆಕ್ಕಾಚಾರಕ್ಕೆ ಬಳಸುವ ಪದವಷ್ಟೇ ಆಗಿರುತ್ತದೆ. ಆದಾಯ ತರದ ಈ ಆಸ್ತಿಯನ್ನು ತಾಂತ್ರಿಕವಾಗಿ ಪಕ್ಕಕ್ಕೆ ತೆಗೆದಿರಿಸಲಾಗುತ್ತದೆ ಅಷ್ಟೇ.

ಒಂದು ಬ್ಯಾಂಕು ನಿಮ್ಮ ಸಾಲವನ್ನು ಕೈಬಿಟ್ಟಿತು ಎಂದರೆ ಅದು ನಿಮ್ಮ ಸಾಲ ಮನ್ನಾ ಮಾಡಿದಂತಲ್ಲ. ನೀವು ಸಾಲದ ಋಣದಿಂದ ಮುಕ್ತರಾದಂತಲ್ಲ. ನಿಮ್ಮ ಲೋನ್ ಅಕೌಂಟ್ ಜೀವಂತವಾಗಿರುತ್ತದೆ. ಕಾನೂನಾತ್ಮಕವಾಗಿ ನಿಮ್ಮ ಸಾಲವನ್ನು ಬ್ಯಾಂಕು ವಸೂಲಿ ಮಾಡಬಹುದು. ನೀವು ಯಾವುದಾದರೂ ಆಸ್ತಿಯನ್ನು ಅಡಮಾನವಾಗಿಟ್ಟಿದ್ದರೆ ಅದನ್ನು ಬಳಸಿ ಬ್ಯಾಂಕು ತನ್ನ ಹಣ ಪಡೆಯಬಹುದು.

ಇದನ್ನೂ ಓದಿe-RUPI: ಬ್ಯಾಂಕೇತರ ಸಂಸ್ಥೆಗಳಿಂದಲೂ ಇ-ರುಪೀ ವೋಚರ್ ವಿತರಣೆಗೆ ಅವಕಾಶ; ಏನಿದು ಇ-ರುಪೀ?

ಸಾಲ ಮನ್ನಾ ಅಥವಾ ಲೋನ್ ವೈವರ್ ಎಂದರೆ ಏನು?

ಸಾಲ ಮನ್ನಾ ಎಂಬುದು ತಾಂತ್ರಿಕವಾಗಿ ನೀವು ಸಾಲದ ಋಣದಿಂದ ಮುಕ್ತರಾದಂತೆ. ನಿಮ್ಮ ಲೋನ್ ಅಕೌಂಟ್ ಸಮಾಪ್ತಿ ಆಗುತ್ತದೆ. ಬ್ಯಾಂಕು ಮತ್ತೆ ನಿಮ್ಮಿಂದ ಸಾಲ ವಸೂಲಿ ಮಾಡಲು ಯತ್ನಿಸುವುದಿಲ್ಲ.

ಲೋನ್ ರೈಟ್ ಆಫ್ ಆದರೆ ನಿಮ್ಮ ಹಣಕಾಸು ವ್ಯವಹಾರಕ್ಕೆ ಕಪ್ಪುಚುಕ್ಕೆ

ಒಂದು ಬ್ಯಾಂಕು ನಿಮ್ಮ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಿಬಿಟ್ಟರೆ ಆಗ ಭವಿಷ್ಯದಲ್ಲಿ ನಿಮಗೆ ಬೇರೆ ಬ್ಯಾಂಕುಗಳು ಸಾಲ ಕೊಡಲು ನಿರಾಕರಿಸಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಪಾತಾಳ ತಲುಪಬಹುದು. ನೀವು ಯಾವುದಾದರೂ ಆಸ್ತಿಯನ್ನು ಅಡಮಾನವಾಗಿ ಇಟ್ಟು ಸೆಕ್ಯೂರ್ಡ್ ಲೋನ್ ಪಡೆಯಬಹುದು ಅಷ್ಟೇ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್