ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು

SIP in SBI balanced advantage fund: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯೂಚುವಲ್ ಫಂಡ್ ಸಂಸ್ಥೆ ನಿರ್ವಹಿಸುವ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಮೂರು ವರ್ಷದಲ್ಲಿ ಸಖತ್ ಜನಪ್ರಿಯತೆ ಪಡೆದಿದೆ. ಶೇ. 18.56 ಸಿಎಜಿಆರ್​ನಲ್ಲಿ ಈ ಫಂಡ್ ಲಾಭ ತಂದಿದೆ. 2021ರ ಆಗಸ್ಟ್ 31ರಂದು ಆರಂಭವಾದ ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ ಆರಂಭಿಸಿದ್ದರೆ ಇವತ್ತು ಆ ಹೂಡಿಕೆ 4.8 ಲಕ್ಷ ರೂ ಆಗಿರುತ್ತಿತ್ತು.

ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು
ಮ್ಯೂಚುವಲ್ ಫಂಡ್

Updated on: Sep 11, 2024 | 6:19 PM

ಎಸ್​ಐಪಿ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಜನಪ್ರಿಯ ಆಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಲವು ಮ್ಯುಚುವಲ್ ಫಂಡ್​ಗಳು ಉತ್ತಮ ರಿಟರ್ನ್ಸ್ ನೀಡಿವೆ. ಎಸ್​ಬಿಐ ಮ್ಯೂಚುವಲ್ ಫಂಡ್ ಸಂಸ್ಥೆ ಪ್ರಕಟಿಸಿರುವ ಫ್ಯಾಕ್ಟ್​ಶೀಟ್ ಮಾಹಿತಿ ಪ್ರಕಾರ ಅದರ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ (SBI Balanced Advantage Fund) ಕಳೆದ ಮೂರು ವರ್ಷದಲ್ಲಿ ಶೇ. 18.56ರ ಸಿಎಜಿಆರ್​ನಲ್ಲಿ ಹೂಡಿಕೆಯ ಮೌಲ್ಯ ಹೆಚ್ಚಿಸಿದೆ. ಈ ಮಟ್ಟದ ಸಿಎಜಿಆರ್ ಉತ್ತಮ ದರ ಎನಿಸುತ್ತದೆ.

ಮೂರು ವರ್ಷಗಳ ಹಿಂದೆ ನೀವು ಈ ಮ್ಯೂಚುವಲ್ ಫಂಡ್​ನಲ್ಲಿ 10,000 ರೂಗಳ ಎಸ್​ಐಪಿ ಆರಂಭಿಸಿದ್ದರೆ ಇವತ್ತು ನಿಮ್ಮ ಹೂಡಿಕೆ 4.80 ಲಕ್ಷ ರೂ ಆಗಿರುತ್ತಿತ್ತು. ನಿಮ್ಮ 3.60 ಲಕ್ಷ ರೂ ಹೂಡಿಕೆಗೆ ಕೇವಲ ಮೂರು ವರ್ಷದಲ್ಲಿ ಒಂದೂಕಾಲು ಲಕ್ಷ ರೂ ಲಾಭ ಸಿಗುವುದು ಸಣ್ಣ ವಿಷಯವಲ್ಲ. ಇಷ್ಟೇ ಮೊತ್ತದ ಹಣವನ್ನು ನೀವು ಬ್ಯಾಂಕ್ ಆರ್​ಡಿ ಸ್ಕೀಮ್​ಗೆ ಹಾಕಿದ್ದರೆ 4 ಲಕ್ಷ ರೂ ಸಿಗುತ್ತಿತ್ತು.

ಎಸ್​ಬಿಐನ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಆರಂಭವಾಗಿದ್ದೇ ಮೂರು ವರ್ಷದ ಹಿಂದೆ. 2021ರ ಆಗಸ್ಟ್ 31ರಂದು ಈ ಫಂಡ್ ಶುರುವಾಗಿದೆ. ಮೂರು ವರ್ಷದಲ್ಲಿ ಈ ಫಂಡ್ ನಿರ್ವಹಿಸುತ್ತಿರುವ ಒಟ್ಟು ನಿಧಿ 32,440 ಕೋಟಿ ರೂ ಎಂದು ತಿಳಿದುಬಂದಿದೆ. ಅಲ್ಪ ಅವಧಿಯಲ್ಲಿ ಇಷ್ಟು ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಿರುವುದು ಸಾಮಾನ್ಯವಲ್ಲ.

ಇದನ್ನೂ ಓದಿ: ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?

ಎಸ್​ಬಿಐ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಈಕ್ವಿಟಿ ಮತ್ತು ಡೆಟ್ ವಿಭಾಗಗಳಲ್ಲಿ ಹೂಡಿಕೆ ಮಾಡುತ್ತದೆ. ಶೇ. 39.01ರಷ್ಟು ಫಂಡ್ ಕ್ಯಾಷ್ ಸೆಕ್ಟರ್​ನಲ್ಲಿ ಹಂಚಿಕೆ ಆಗುತ್ತದೆ. ಈಕ್ವಿಟಿಯಲ್ಲಿ ಶೇ. 30.37 ಮತ್ತು ಡೆಟ್​ನಲ್ಲಿ ಶೇ. 27.07 ಫಂಡ್ ಹೂಡಿಕೆ ಆಗುತ್ತದೆ. ಶೇ. 3.54ರಷ್ಟು ಹೂಡಿಕೆ ರಿಯಲ್ ಎಸ್ಟೇಟ್​ಗೆ ಹಾಕುತ್ತದೆ. ಈ ಮೂಲಕ ಮ್ಯೂಚುವಲ್ ಫಂಡ್ ಸಮತೋಲನದ ಹೂಡಿಕೆ ಮಾಡುತ್ತದೆ. ತೀರಾ ರಿಸ್ಕಿ ಎನಿಸುವ ಹೂಡಿಕೆ ಅದರದ್ದಲ್ಲ. ಹೀಗಾಗಿ, ದಿನೇ ದಿನೇ ಈ ಮ್ಯುಚುವಲ್ ಫಂಡ್ ಹೆಚ್ಚು ಜನರ ವಿಶ್ವಾಸ ಗಳಿಸುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us