Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI: ವಾಟ್ಸಾಪ್​ನಲ್ಲಿ ನಿಮ್ಮ ಎಸ್​ಬಿಐ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ

Whatsapp Banking Of SBI: ಈಗ ಬಹುತೇಕ ಎಲ್ಲಾ ಬ್ಯಾಂಕುಗಳೂ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ನೀಡುತ್ತವೆ. ಎಸ್​ಬಿಐನ ವಾಟ್ಸಾಪ್ ಬ್ಯಾಂಕಿಂಗ್​ಗೆ ನೊಂದಾಯಿಸುವುದು ಬಹಳ ಸುಲಭ. ಒಂದು ಎಸ್ಸೆಮ್ಮೆಸ್ ಮೂಲಕ ನೀವು ಈ ಕಾರ್ಯ ಮಾಡಬಹುದು.

SBI: ವಾಟ್ಸಾಪ್​ನಲ್ಲಿ ನಿಮ್ಮ ಎಸ್​ಬಿಐ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ
ಎಸ್​ಬಿಐನ ವಾಟ್ಸಾಪ್ ಬ್ಯಾಂಕಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 4:11 PM

ಭಾರತದಲ್ಲಿ ವಾಟ್ಸಾಪ್ ಬಹುತೇಕ ಪ್ರತಿಯೊಬ್ಬ ಸ್ಮಾರ್ಟ್​ಫೋನ್ ಬಳಕೆದಾರನ ಬಳಿಯೂ ಇದೆ. ಒಂದು ಅಂದಾಜು ಪ್ರಕಾರ ಭಾರತದಲ್ಲಿ 48ಕೋಟಿಗೂ ಹೆಚ್ಚು ಮಂದಿ ವಾಟ್ಸಾಪ್ ಬಳಸುತ್ತಾರೆ. ಹೀಗಾಗಿ, ವಾಟ್ಸಾಪ್ ಮೂಲಕ ಮಾಹಿತಿ ಸಂವಹನಕ್ಕೆ ಹಲವು ವ್ಯವಹಾರಗಳು ಪ್ರಯತ್ನಿಸುತ್ತವೆ. ಈ ವಿಚಾರದಲ್ಲಿ ಬ್ಯಾಂಕುಗಳೂ ಹಿಂದೆಬಿದ್ದಿಲ್ಲ. ಬಹುತೇಕ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಂವಹನದ ಬಾಗಿಲು ತೆರೆದಿವೆ. ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ಅಕೌಂಟ್ ಬ್ಯಾಲನ್ಸ್ ಪರಿಶೀಲಿಸುವುದು, ಅಕೌಂಟ್ ಸ್ಟೇಟ್ಮೆಂಟ್ (Account Statement) ಪಡೆಯುವುದು ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಭಾರತದ ನಂಬರ್ ಒನ್ ಪಿಎಸ್​ಯು ಬ್ಯಾಂಕ್ (Government Bank) ಎನಿಸಿದ ಎಸ್​ಬಿಐ ಕೂಡ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ನೀಡುತ್ತದೆ.

ಎಸ್ಸೆಮ್ಮೆಸ್ ಮೂಲಕ ಎಸ್​ಬಿಐನ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಮ್ಮ ಖಾತೆಗೆ ಜೋಡಿಸಲಾದ ಮೊಬೈಲ್ ನಂಬರ್​ನಿಂದ ಒಂದು ಮೆಸೇಜ್ ಕಳುಹಿಸುವ ಮೂಲಕ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. 7208933148 ನಂಬರ್ ಅನ್ನು ನಿಮ್ಮ ಮೊಬೈಲ್​ಗೆ ಸೇವ್ ಮಾಡಿಕೊಳ್ಳಿ. ಬಳಿಕ, WAREG <ಅಕೌಂಟ್ ನಂಬರ್> ಹೀಗೆ ಟೈಪ್ ಮಾಡಿ ಆ ಸಂಖ್ಯೆಗೆ ಎಸ್ಸೆಮ್ಮೆಸ್ ಕಳುಹಿಸಿ. ಉದಾಹರಣೆಗೆ, ನಿಮ್ಮ ಅಕೌಂಟ್ ನಂಬರ್ 1234567890 ಎಂದಿದ್ದರೆ ನೀವು WAREG 1234567890 ಎಂದು ಮೆಸೇಜ್ ಟೈಪಿಸಿ 7208933148 ನಂಬರ್​ಗೆ ಸೆಂಡ್ ಮಾಡಿ.

ಆಗ ವಾಟ್ಸಾಪ್ ಬ್ಯಾಂಕಿಂಗ್​ಗೆ ನಿಮ್ಮ ಮೊಬೈಲ್ ನಂಬರ್ ನೊಂದಾವಣಿ ಅದಂತಾಗುತ್ತದೆ. ಅದಕ್ಕೆ ದೃಢೀಕರಣದ ಮೆಸೇಜ್ ಕೂಡ ವಾಟ್ಸಾಪ್​ಗೆ ಬರುತ್ತದೆ. ಬ್ಯಾಂಕ್ ವತಿಯಿಂದ ಯಾವ ವ್ಯಕ್ತಿಯೂ ವಾಟ್ಸಾಪ್​ನಲ್ಲಿ ನಿಮ್ಮೊಂದಿಗೆ ಸಂವಹನ ನಡೆಸುವದಿಲ್ಲ. ಅದನ್ನು ಚ್ಯಾಟ್ ಬೋಟ್​ಗಳು ಮಾಡುತ್ತವೆ. ಅಂದರೆ ಎಐ ತಂತ್ರಜ್ಞಾನದ ಸಹಾಯದಿಂದ ಚ್ಯಾಟ್​ಬೋಟ್​ಗಳ ಮೂಲಕ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಲಭ್ಯ ಇರುತ್ತವೆ.

ಇದನ್ನೂ ಓದಿExpensive House: ಸ್ವಿಟ್ಜರ್​ಲ್ಯಾಂಡ್​ನಲ್ಲಿ ಭವ್ಯ ಬಂಗಲೆ ಖರೀದಿಸಿದ ಓಸ್ವಾಲ್ ಕುಟುಂಬ; ವಿಶ್ವದ 10 ದುಬಾರಿ ವಿಲ್ಲಾಗಳಲ್ಲಿ ಇದೂ ಒಂದು; ಓಸ್ವಾಲ್ ಬ್ಯುಸಿನೆಸ್ ಏನು?

ಎಸ್​ಬಿಐನ ವಾಟ್ಸಾಪ್ ಬ್ಯಾಂಕಿಂಗ್​ನಲ್ಲಿ ಏನೇನು ಸೇವೆಗಳು ಲಭ್ಯ ಇರುತ್ತವೆ?

  • ಅಕೌಂಟ್ ಬ್ಯಾಲೆನ್ಸ್ ನೋಡುವುದು
  • ಮಿನಿ ಸ್ಟೇಟ್ಮೆಂಟ್ ಪಡೆಯುವುದು
  • ಪೆನ್ಷನ್ ಸ್ಲಿಪ್
  • ವಿವಿಧ ಸಾಲಗಳ ಬಗ್ಗೆ ಮಾಹಿತಿ
  • ವಿವಿಧ ಠೇವಣಿ ಸ್ಕೀಮ್​​ಗಳ ಮಾಹಿತಿ
  • ಎನ್​ಆರ್​ಐ ಅಕೌಂಟ್ ಬಗ್ಗೆ ಮಾಹಿತಿ
  • ಇನ್​ಸ್ಟಾ ಖಾತೆಗಳನ್ನು ತೆರೆಯುವ ಬಗ್ಗೆ ಮಾಹಿತಿ
  • ದೂರು ದಾಖಲಿಸಲು ಅಥವಾ ನೆರವು ಪಡೆಯಲು ಹೆಲ್ಪ್​ಲೈನ್
  • ಪ್ರೀ ಅಪ್ರೂವ್ಡ್ ಸಾಲಗಳ ಬಗ್ಗೆ ವಿಚಾರಣೆ
  • ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ
  • ಬ್ಯಾಂಕಿಂಗ್ ಫಾರ್ಮ್​ಗಳನ್ನು ಡೌನ್​ಲೋಡ್ ಮಾಡಬಹುದು.
  • ಬ್ಯಾಂಕ್ ರಜಾದಿನಗಳ ಪಟ್ಟಿ
  • ಡೆಬಿಟ್ ಕಾರ್ಡ್ ಬಳಕೆ ಬಗ್ಗೆ ಮಾಹಿತಿ
  • ಕಳುವಾದ ಕಾರ್ಡ್ ಬಗ್ಗೆ ಮಾಹಿತಿ
  • ಸಮೀಪದ ಎಟಿಎಂ ಬಗ್ಗೆ ಮಾಹಿತಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ