ಒಂದು ಕೋಟಿ ಯುವಕರಿಗೆ ಇಂಟರ್ನ್​ಶಿಪ್ ಸ್ಕೀಮ್; ಪೋರ್ಟಲ್ ಸಿದ್ಧ; ಅಕ್ಟೋಬರ್ 12ರಿಂದ ಅಭ್ಯರ್ಥಿಗಳಿಗೆ ನೊಂದಾವಣಿ ಅವಕಾಶ

PM Internship scheme: ಒಂದು ಕೋಟಿ ಯುವಜನರಿಗೆ ಅಗತ್ಯ ಉದ್ಯೋಗ ಕೌಶಲ್ಯ ಒದಗಿಸುವ ಗುರಿಯೊಂದಿಗೆ ಇಂಟರ್ನ್​ಶಿಪ್ ಸ್ಕೀಮ್ ಚಾಲನೆಗೊಳ್ಳುತ್ತಿದೆ. ಇದರ ಪೋರ್ಟಲ್​ವೊಂದು ಸಿದ್ಧವಾಗಿದ್ದು, ಆಸಕ್ತ ಅಭ್ಯರ್ಥಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಈ ಪೋರ್ಟಲ್​ನಲ್ಲಿ ನೊಂದಾಯಿಸಿಕೊಳ್ಳಬಹುದು. ಹತ್ತನೇ ತರಗತಿ ತೇರ್ಗಡೆಯಾಗಿ, ಇನ್ನೂ ಕೆಲಸ ಸಿಗದ ಯುವಕ ಯುವತಿಯರು ಈ ಸ್ಕೀಮ್​ಗೆ ಅರ್ಹರಾಗಿದ್ದಾರೆ.

ಒಂದು ಕೋಟಿ ಯುವಕರಿಗೆ ಇಂಟರ್ನ್​ಶಿಪ್ ಸ್ಕೀಮ್; ಪೋರ್ಟಲ್ ಸಿದ್ಧ; ಅಕ್ಟೋಬರ್ 12ರಿಂದ ಅಭ್ಯರ್ಥಿಗಳಿಗೆ ನೊಂದಾವಣಿ ಅವಕಾಶ
ಉದ್ಯೋಗಿಗಳು
Follow us
|

Updated on: Oct 01, 2024 | 4:52 PM

ನವದೆಹಲಿ, ಅಕ್ಟೋಬರ್ 1: ಬಜೆಟ್​​ನಲ್ಲಿ ಘೋಷಿಸಲಾಗಿದ್ದ ಇಂಟರ್ನ್​ಶಿಪ್ ಸ್ಕೀಮ್ ಇದೇ ತಿಂಗಳು ಚಾಲನೆಗೆ ಬರುತ್ತಿದೆ. ಈ ಸ್ಕೀಮ್​ಗೆಂದೇ ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದೆ. ಅಕ್ಟೋಬರ್ 3ರಿಂದ ಕಾರ್ಪೊರೇಟ್ ಕಂಪನಿಗಳು ಇಂಟರ್ನ್​ಶಿಪ್ ಅಗತ್ಯ ಇದ್ದರೆ ಅದನ್ನು ಪೋರ್ಟಲ್​ನಲ್ಲಿ ಕಂಪನಿಗಳು ಪೋಸ್ಟ್ ಮಾಡಬಹುದು. ಇಂಟರ್ನ್​ಶಿಪ್ ಮಾಡಲು ಬಯಸುವ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 12ರಿಂದ ಇದೇ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಏನಿದು ಪಿಎಂ ಇಂಟರ್ನ್​ಶಿಪ್ ಸ್ಕೀಮ್?

ಉದ್ಯೋಗಾವಕಾಶ ಕಡಿಮೆ ಇರುವ, ಕಡಿಮೆ ಕೌಶಲ್ಯ ಹೊಂದಿರುವ ಯುವಕರಿಗೆ ನೈಜ ಕೆಲಸದ ಅನುಭವ ಮತ್ತು ಅಗತ್ಯ ಕೌಶಲ್ಯ ಒದಗಿಸಲು ಇಂಟರ್ನ್​ಶಿಪ್ ಸ್ಕೀಮ್ ಆರಂಭಿಸಲಾಗಿದೆ. ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್​ಶಿಪ್ ಮಾಡಬಹುದು.

ಹತ್ತನೇ ತರಗತಿ ತೇರ್ಗಡೆಯಾಗಿರುವ 21 ವರ್ಷದಿಂದ 24 ವರ್ಷದ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸ್ಕೀಮ್​ಗೆ ಅರ್ಹರಿರುತ್ತಾರೆ. ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು, ಚಾರ್ಟರ್ಡ್ ಅಕೌಂಟೆಂಟ್ಸ್ ಇತ್ಯಾದಿ ವೃತ್ತಿಪರ ಪದವಿ ಪಡೆದವರು, ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದವರು, ವರ್ಷಕ್ಕೆ ಎಂಟು ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬದವರಿಗೆ ಈ ಸ್ಕೀಮ್ ಲಭ್ಯ ಇರುವುದಿಲ್ಲ.

ಇದನ್ನೂ ಓದಿ: ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?

ಒಟ್ಟಾರೆ, ಉದ್ಯೋಗಾವಕಾಶ ಕಡಿಮೆ ಇರುವ ಯುವಕ ಮತ್ತು ಯುವತಿಯರನ್ನು ಕಾರ್ಪರೇಟ್ ವಲಯಕ್ಕೆ ಬೇಕಾದ ರೀತಿಯಲ್ಲಿ ಸಿದ್ಧಪಡಿಸುವುದು ಈ ಸ್ಕೀಮ್​ನ ಉದ್ದೇಶ. ಕಾರ್ಪೊರೇಟ್ ಕಂಪನಿಗಳು ಈ ಸ್ಕೀಮ್ ಅಳವಡಿಸಿವುದು ಕಡ್ಡಾಯವಲ್ಲ, ಐಚ್ಛಿಕ ಮಾತ್ರ. ಅಭ್ಯರ್ಥಿಗಳ ತರಬೇತಿಗೆ ಆಗುವ ವೆಚ್ಚಕ್ಕೆ ಸಿಎಸ್​ಆರ್ ಫಂಡ್ ಅನ್ನು ವಿನಿಯೋಗಿಸುವ ಅವಕಾಶವನ್ನು ಸರ್ಕಾರ ನೀಡಿದೆ.

ಇಂಟರ್ನ್​ಶಿಪ್​ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು, ನಿಗದಿತ ಪೋರ್ಟಲ್​ನಲ್ಲಿ ನೊಂದಾಯಿಸಿಕೊಳ್ಳಬೇಕು. ಆಧಾರ್ ದಾಖಲೆಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ತಮ್ಮ ಪ್ರೊಫೈಲ್ ರಚಿಸಬೇಕು.

ಕಾರ್ಪೊರೇಟ್ ಕಂಪನಿಗಳೂ ಕೂಡ ಪ್ರತ್ಯೇಕವಾಗಿ ಈ ಪೋರ್ಟಲ್​ನಲ್ಲಿ ತಮ್ಮ ಇಂಟರ್ನ್​ಶಿಪ್ ಅಗತ್ಯತೆಗಳನ್ನು ನಮೂದಿಸಬೇಕು. ಈ ಇಂಟರ್ನ್​ಶಿಪ್ ಕೆಲಸಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಇಂಟರ್ನ್​ಶಿಪ್​ನಲ್ಲಿ ಅಭ್ಯರ್ಥಿಗೆ ಏನು ಸಿಗುತ್ತೆ?

ಈ ಇಂಟರ್ನ್​ಶಿಪ್ ಸ್ಕೀಮ್​ನಲ್ಲಿ ಅಭ್ಯರ್ಥಿಗಳ ಮೇಲೆ ಸರ್ಕಾರ ಮತ್ತು ಕಾರ್ಪೊರೇಟ್ ಎರಡೂ ಕಡೆಯಿಂದ ವೆಚ್ಚ ಆಗುತ್ತದೆ. ಸರ್ಕಾರದಿಂದ ಇಂಟರ್ನ್​ಶಿಪ್ ಅಭ್ಯರ್ಥಿಗಳಿಗೆ ಏಕಕಾಲದ 6,000 ರೂ ಹಣ ನೀಡಲಾಗುತ್ತದೆ. ಮಾಸಿಕವಾಗಿ 5,000 ರೂ ಸ್ಟೈಪೆಂಡ್ ನೀಡಲಾಗುತ್ತದೆ.

ಇದನ್ನೂ ಓದಿ: Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ

ಇನ್ನು, ಇಂಟರ್ನೀಗಳಿಗೆ ತರಬೇತಿ ಇತ್ಯಾದಿ ವೆಚ್ಚವನ್ನು ಕಂಪನಿಗಳೇ ಭರಿಸುತ್ತವೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿಯಾದ ಸಿಎಸ್​ಆರ್ ಫಂಡ್​ಗಳನ್ನು ಇದಕ್ಕೆ ಬಳಸಬಹುದು.

ಇಂಟರ್ನ್​ಶಿಪ್​ನಲ್ಲಿ ಅಭ್ಯರ್ಥಿಗಳಿಗೆ ನೈಜ ಕೆಲಸದ ಅನುಭವ ಸಿಗುತ್ತದೆ. ಕಂಪನಿಗಳ ಕಚೇರಿ, ಕಾರ್ಖಾನೆ ಇತ್ಯಾದಿ ಕಾರ್ಯಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ನಿಯೋಜಿಸಿ ಕೆಲಸ ಮಾಡಿಸಲಾಗುತ್ತದೆ. ಕಂಪನಿಗಳ ಅಂಗ ಸಂಸ್ಥೆಗಳು, ಸಪ್ಲೈಯರ್ಸ್ ಇತ್ಯಾದಿ ಪೂರಕ ಕಂಪನಿಗಳಲ್ಲಿ ಅಗತ್ಯ ಬಿದ್ದರೆ ಅಭ್ಯರ್ಥಿಗಳನ್ನು ಕಳುಹಿಸಿ ಕೆಲಸ ಮಾಡಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ