AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕೋಟಿ ಯುವಕರಿಗೆ ಇಂಟರ್ನ್​ಶಿಪ್ ಸ್ಕೀಮ್; ಪೋರ್ಟಲ್ ಸಿದ್ಧ; ಅಕ್ಟೋಬರ್ 12ರಿಂದ ಅಭ್ಯರ್ಥಿಗಳಿಗೆ ನೊಂದಾವಣಿ ಅವಕಾಶ

PM Internship scheme: ಒಂದು ಕೋಟಿ ಯುವಜನರಿಗೆ ಅಗತ್ಯ ಉದ್ಯೋಗ ಕೌಶಲ್ಯ ಒದಗಿಸುವ ಗುರಿಯೊಂದಿಗೆ ಇಂಟರ್ನ್​ಶಿಪ್ ಸ್ಕೀಮ್ ಚಾಲನೆಗೊಳ್ಳುತ್ತಿದೆ. ಇದರ ಪೋರ್ಟಲ್​ವೊಂದು ಸಿದ್ಧವಾಗಿದ್ದು, ಆಸಕ್ತ ಅಭ್ಯರ್ಥಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಈ ಪೋರ್ಟಲ್​ನಲ್ಲಿ ನೊಂದಾಯಿಸಿಕೊಳ್ಳಬಹುದು. ಹತ್ತನೇ ತರಗತಿ ತೇರ್ಗಡೆಯಾಗಿ, ಇನ್ನೂ ಕೆಲಸ ಸಿಗದ ಯುವಕ ಯುವತಿಯರು ಈ ಸ್ಕೀಮ್​ಗೆ ಅರ್ಹರಾಗಿದ್ದಾರೆ.

ಒಂದು ಕೋಟಿ ಯುವಕರಿಗೆ ಇಂಟರ್ನ್​ಶಿಪ್ ಸ್ಕೀಮ್; ಪೋರ್ಟಲ್ ಸಿದ್ಧ; ಅಕ್ಟೋಬರ್ 12ರಿಂದ ಅಭ್ಯರ್ಥಿಗಳಿಗೆ ನೊಂದಾವಣಿ ಅವಕಾಶ
ಉದ್ಯೋಗಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2024 | 4:52 PM

Share

ನವದೆಹಲಿ, ಅಕ್ಟೋಬರ್ 1: ಬಜೆಟ್​​ನಲ್ಲಿ ಘೋಷಿಸಲಾಗಿದ್ದ ಇಂಟರ್ನ್​ಶಿಪ್ ಸ್ಕೀಮ್ ಇದೇ ತಿಂಗಳು ಚಾಲನೆಗೆ ಬರುತ್ತಿದೆ. ಈ ಸ್ಕೀಮ್​ಗೆಂದೇ ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದೆ. ಅಕ್ಟೋಬರ್ 3ರಿಂದ ಕಾರ್ಪೊರೇಟ್ ಕಂಪನಿಗಳು ಇಂಟರ್ನ್​ಶಿಪ್ ಅಗತ್ಯ ಇದ್ದರೆ ಅದನ್ನು ಪೋರ್ಟಲ್​ನಲ್ಲಿ ಕಂಪನಿಗಳು ಪೋಸ್ಟ್ ಮಾಡಬಹುದು. ಇಂಟರ್ನ್​ಶಿಪ್ ಮಾಡಲು ಬಯಸುವ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 12ರಿಂದ ಇದೇ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಏನಿದು ಪಿಎಂ ಇಂಟರ್ನ್​ಶಿಪ್ ಸ್ಕೀಮ್?

ಉದ್ಯೋಗಾವಕಾಶ ಕಡಿಮೆ ಇರುವ, ಕಡಿಮೆ ಕೌಶಲ್ಯ ಹೊಂದಿರುವ ಯುವಕರಿಗೆ ನೈಜ ಕೆಲಸದ ಅನುಭವ ಮತ್ತು ಅಗತ್ಯ ಕೌಶಲ್ಯ ಒದಗಿಸಲು ಇಂಟರ್ನ್​ಶಿಪ್ ಸ್ಕೀಮ್ ಆರಂಭಿಸಲಾಗಿದೆ. ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್​ಶಿಪ್ ಮಾಡಬಹುದು.

ಹತ್ತನೇ ತರಗತಿ ತೇರ್ಗಡೆಯಾಗಿರುವ 21 ವರ್ಷದಿಂದ 24 ವರ್ಷದ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸ್ಕೀಮ್​ಗೆ ಅರ್ಹರಿರುತ್ತಾರೆ. ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು, ಚಾರ್ಟರ್ಡ್ ಅಕೌಂಟೆಂಟ್ಸ್ ಇತ್ಯಾದಿ ವೃತ್ತಿಪರ ಪದವಿ ಪಡೆದವರು, ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದವರು, ವರ್ಷಕ್ಕೆ ಎಂಟು ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬದವರಿಗೆ ಈ ಸ್ಕೀಮ್ ಲಭ್ಯ ಇರುವುದಿಲ್ಲ.

ಇದನ್ನೂ ಓದಿ: ಆರೋಗ್ಯಕ್ಕೆ ಜನರ ಖಾಸಗಿ ವೆಚ್ಚಕ್ಕಿಂತ ಸರ್ಕಾರಿ ವೆಚ್ಚ ಅಧಿಕ; ಭಾರತದಲ್ಲಿ ಇದೇ ಮೊದಲು; ಇದು ಆಯುಷ್ಮಾನ್ ಸ್ಕೀಮ್ ಪರಿಣಾಮವಾ?

ಒಟ್ಟಾರೆ, ಉದ್ಯೋಗಾವಕಾಶ ಕಡಿಮೆ ಇರುವ ಯುವಕ ಮತ್ತು ಯುವತಿಯರನ್ನು ಕಾರ್ಪರೇಟ್ ವಲಯಕ್ಕೆ ಬೇಕಾದ ರೀತಿಯಲ್ಲಿ ಸಿದ್ಧಪಡಿಸುವುದು ಈ ಸ್ಕೀಮ್​ನ ಉದ್ದೇಶ. ಕಾರ್ಪೊರೇಟ್ ಕಂಪನಿಗಳು ಈ ಸ್ಕೀಮ್ ಅಳವಡಿಸಿವುದು ಕಡ್ಡಾಯವಲ್ಲ, ಐಚ್ಛಿಕ ಮಾತ್ರ. ಅಭ್ಯರ್ಥಿಗಳ ತರಬೇತಿಗೆ ಆಗುವ ವೆಚ್ಚಕ್ಕೆ ಸಿಎಸ್​ಆರ್ ಫಂಡ್ ಅನ್ನು ವಿನಿಯೋಗಿಸುವ ಅವಕಾಶವನ್ನು ಸರ್ಕಾರ ನೀಡಿದೆ.

ಇಂಟರ್ನ್​ಶಿಪ್​ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು, ನಿಗದಿತ ಪೋರ್ಟಲ್​ನಲ್ಲಿ ನೊಂದಾಯಿಸಿಕೊಳ್ಳಬೇಕು. ಆಧಾರ್ ದಾಖಲೆಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ತಮ್ಮ ಪ್ರೊಫೈಲ್ ರಚಿಸಬೇಕು.

ಕಾರ್ಪೊರೇಟ್ ಕಂಪನಿಗಳೂ ಕೂಡ ಪ್ರತ್ಯೇಕವಾಗಿ ಈ ಪೋರ್ಟಲ್​ನಲ್ಲಿ ತಮ್ಮ ಇಂಟರ್ನ್​ಶಿಪ್ ಅಗತ್ಯತೆಗಳನ್ನು ನಮೂದಿಸಬೇಕು. ಈ ಇಂಟರ್ನ್​ಶಿಪ್ ಕೆಲಸಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡಲಾಗುತ್ತದೆ. ಕಂಪನಿಗಳು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಇಂಟರ್ನ್​ಶಿಪ್​ನಲ್ಲಿ ಅಭ್ಯರ್ಥಿಗೆ ಏನು ಸಿಗುತ್ತೆ?

ಈ ಇಂಟರ್ನ್​ಶಿಪ್ ಸ್ಕೀಮ್​ನಲ್ಲಿ ಅಭ್ಯರ್ಥಿಗಳ ಮೇಲೆ ಸರ್ಕಾರ ಮತ್ತು ಕಾರ್ಪೊರೇಟ್ ಎರಡೂ ಕಡೆಯಿಂದ ವೆಚ್ಚ ಆಗುತ್ತದೆ. ಸರ್ಕಾರದಿಂದ ಇಂಟರ್ನ್​ಶಿಪ್ ಅಭ್ಯರ್ಥಿಗಳಿಗೆ ಏಕಕಾಲದ 6,000 ರೂ ಹಣ ನೀಡಲಾಗುತ್ತದೆ. ಮಾಸಿಕವಾಗಿ 5,000 ರೂ ಸ್ಟೈಪೆಂಡ್ ನೀಡಲಾಗುತ್ತದೆ.

ಇದನ್ನೂ ಓದಿ: Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ

ಇನ್ನು, ಇಂಟರ್ನೀಗಳಿಗೆ ತರಬೇತಿ ಇತ್ಯಾದಿ ವೆಚ್ಚವನ್ನು ಕಂಪನಿಗಳೇ ಭರಿಸುತ್ತವೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿಯಾದ ಸಿಎಸ್​ಆರ್ ಫಂಡ್​ಗಳನ್ನು ಇದಕ್ಕೆ ಬಳಸಬಹುದು.

ಇಂಟರ್ನ್​ಶಿಪ್​ನಲ್ಲಿ ಅಭ್ಯರ್ಥಿಗಳಿಗೆ ನೈಜ ಕೆಲಸದ ಅನುಭವ ಸಿಗುತ್ತದೆ. ಕಂಪನಿಗಳ ಕಚೇರಿ, ಕಾರ್ಖಾನೆ ಇತ್ಯಾದಿ ಕಾರ್ಯಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ನಿಯೋಜಿಸಿ ಕೆಲಸ ಮಾಡಿಸಲಾಗುತ್ತದೆ. ಕಂಪನಿಗಳ ಅಂಗ ಸಂಸ್ಥೆಗಳು, ಸಪ್ಲೈಯರ್ಸ್ ಇತ್ಯಾದಿ ಪೂರಕ ಕಂಪನಿಗಳಲ್ಲಿ ಅಗತ್ಯ ಬಿದ್ದರೆ ಅಭ್ಯರ್ಥಿಗಳನ್ನು ಕಳುಹಿಸಿ ಕೆಲಸ ಮಾಡಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?