AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕನೇ ಕಿಂಗ್; ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ಬಡ್ಡಿದರ ವಿಚಾರದಲ್ಲಿ ಆರ್​ಬಿಐ ತರಲಿದೆ ಮಹತ್ವದ ನಿಯಮ

RBI Rule on Floating Rate Loans: ಫ್ಲೋಟಿಂಗ್ ರೇಟ್ ಸಾಲದ ವಿಚಾರದಲ್ಲಿ ಆರ್​ಬಿಐ ಕೆಲವಿಷ್ಟು ಮಹತ್ವದ ನಿಯಮ ರೂಪಿಸಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಸಾಲದ ಕಂತುಗಳನ್ನು ಕಟ್ಟುವ ಹಣ, ಕಂತುಗಳ ಸಂಖ್ಯೆಯಲ್ಲಿ ಬದಲಾವಣೆ ಆಗುವುದಿದ್ದರೆ ಗ್ರಾಹಕರ ಗಮನಕ್ಕೆ ತಂದೇ ಮಾಡಬೇಕು ಎಂದು ತಿಳಿಸಲಾಗಿದೆ.

ಗ್ರಾಹಕನೇ ಕಿಂಗ್; ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ಬಡ್ಡಿದರ ವಿಚಾರದಲ್ಲಿ ಆರ್​ಬಿಐ ತರಲಿದೆ ಮಹತ್ವದ ನಿಯಮ
ಆರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2023 | 1:06 PM

ನವದೆಹಲಿ, ಆಗಸ್ಟ್ 10: ಭಾರತೀಯ ರಿಸರ್ವ್ ಬ್ಯಾಂಕ್​ನ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ಕೆಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ರೆಪೋ, ರಿವರ್ಸ್ ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಿದೆಯಾದರೂ ಸಿಆರ್​ಆರ್ ಇತ್ಯಾದಿ ಅಂಶಗಳಲ್ಲಿ ಆರ್​ಬಿಐ ಬದಲಾವಣೆಗಳನ್ನು ಮಾಡಿದೆ. ಈ ಪೈಕಿ ಬ್ಯಾಂಕ್ ಸಾಲ ಪಡೆಯುವವರಿಗೆ ತುಸು ನಿರಾಳ ತರುವ ಕ್ರಮವನ್ನು ಆರ್​ಬಿಐ ಪ್ರಸ್ತಾಪಿಸಿದೆ. ಬ್ಯಾಂಕ್ ಸಾಲ ವಿಚಾರದಲ್ಲಿ ಕೆಲ ನಿಯಮಗಳನ್ನು ರೂಪಿಸಲು ಯೋಜಿಸಿದೆ. ಈ ಪ್ರಸ್ತಾಪದ ಪ್ರಕಾರ, ಗ್ರಾಹಕರು ತಮ್ಮ ಅನುಕೂಲತೆಗೆ ತಕ್ಕಂತೆ ಲೋನ್ ಬಡ್ಡಿದರ (Bank Loan Rates) ನೀತಿಯ ಆಯ್ಕೆಗಳನ್ನು ಮಾಡಬಹುದು. ಬ್ಯಾಂಕ್ ಸಾಲದ ವಿಚಾರದಲ್ಲಿ ಹೆಚ್ಚು ಪಾರದರ್ಶಕತೆ ಬರಲಿದೆ.

ಏನಿದು ಫ್ಲೋಟಿಂಗ್ ಲೋನ್ ರೇಟ್?

ಫ್ಲೋಟಿಂಗ್ ಲೋನ್ ರೇಟ್ ಎಂಬುದು ಬ್ಯಾಂಕ್ ಸಾಲದ ಮೇಲಿನ ಬಡ್ಡಿಹೊಂದಿಕೆ ವ್ಯವಸ್ಥೆ. ಆರ್​ಬಿಐ ರೆಪೋ ದರ ಹೆಚ್ಚಿಸಿದರೆ ಬ್ಯಾಂಕುಗಳೂ ಬಡ್ಡಿದರ ಹೆಚ್ಚಿಸುತ್ತವೆ. ಬ್ಯಾಂಕುಗಳು ಬೇರೆ ಕಾರಣಕ್ಕೂ ಬಡ್ಡಿದರ ಹೆಚ್ಚಿಸಬಹುದು. ಈಗಾಗಲೇ ಸಾಲ ಪಡೆದು ಕಂತುಗಳನ್ನು (ಇಎಂಐ) ಕಟ್ಟುತ್ತಿರುವವರಿಗೂ ಬಡ್ಡಿದರ ಪರಿಷ್ಕೃತಗೊಳ್ಳುತ್ತದೆ. ಅದರ ಪರಿಣಾಮವಾಗಿ ಇಎಂಐ ಮೊತ್ತ ಅಥವಾ ಇಎಂಐ ಸಂಖ್ಯೆ ಹೆಚ್ಚಾಗುತ್ತದೆ. ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದಿದ್ದರೆ ಇದು ಅನ್ವಯ ಆಗುತ್ತದೆ.

ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ

ಫಿಕ್ಸೆಡ್ ಇಂಟರೆಸ್ಟ್ ರೇಟ್ ಮೇಲೆ ಸಾಲ ಪಡೆದಿದ್ದರೆ ಕೊನೆಯವರೆಗೂ ಬಡ್ಡಿದರ ಯಥಾಸ್ಥಿತಿಯಲ್ಲಿರುತ್ತದೆ. ಬ್ಯಾಂಕ್​ನ ಬಡ್ಡಿದರ ಏರಲಿ, ಬಿಡಲಿ ಇವರ ಸಾಲಕ್ಕೆ ಪೂರ್ವದಲ್ಲಿ ನಿಶ್ಚಿತವಾದ ಬಡ್ಡಿದರವೇ ಅನ್ವಯ ಆಗುತ್ತದೆ.

ಸಾಲ ಪಡೆದವರಿಗೆ ಅಥವಾ ಸಾಲ ಪಡೆಯುವವರಿಗೆ ಆರ್​ಬಿಐ ಹೊಸ ಕ್ರಮದಿಂದ ಏನು ಪ್ರಯೋಜನ?

ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದ ಗ್ರಾಹಕರಿಗೆ ಅವರ ಗಮನಕ್ಕೆ ತಾರದೆಯೇ ಇಎಂಐಗಳಲ್ಲಿ ಬದಲಾವಣೆ ಮಾಡಲಾಗಿರುವ ಹಲವು ಪ್ರಕರಣಗಳು ಆರ್​ಬಿಐ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಕೆಲ ನಿಯಮಗಳನ್ನು ರೂಪಿಸುವ ಪ್ರಸ್ತಾಪ ನಮ್ಮ ಮುಂದಿದೆ ಎಂದು ಆರ್​ಬಿಐ ತಿಳಿಸಿದೆ. ಈ ನಿಯಮಗಳು ಹೀಗಿವೆ:

  • ಬ್ಯಾಂಕುಗಳು ಇಎಂಐನಲ್ಲಿ ಬದಲಾವಣೆ ಮಾಡುವಾಗ ಗ್ರಾಹಕರಿಗೆ ಮಾಹಿತಿ ನೀಡಬೇಕು.
  • ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದವರು ಫಿಕ್ಸೆಡ್ ರೇಟ್​ಗೆ ಬದಲಾವಣೆ ಮಾಡಿಕೊಳ್ಳುವ ಆಯ್ಕೆ ನೀಡಬೇಕು.
  • ಸಾಲವನ್ನು ಮುಂಗಡವಾಗಿ ತೀರಿಸಲು ಅವಕಾಶ ಕೊಡಬೇಕು.
  • ಈ ಮೇಲಿನ ಆಯ್ಕೆಗಳನ್ನು ಗ್ರಾಹಕರು ಆಯ್ದುಕೊಂಡರೆ ಅದಕ್ಕೆ ವಿಧಿಸಬಹುದಾದ ಶುಲ್ಕದ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿರಬೇಕು.

ಇದನ್ನೂ ಓದಿ: ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು?

ಗ್ರಾಹಕರಿಗೆ ಲಾಭವೇನು?

ಫ್ಲೋಟಿಂಗ್ ರೇಟ್ ಮೇಲೆ ಸಾಲ ಪಡೆದ ಬಳಿಕ ಬಡ್ಡಿದರ ಹೆಚ್ಚಾಗುವಂತಿದ್ದಾಗ ಗ್ರಾಹಕರು ಫಿಕ್ಸೆಡ್ ರೇಟ್ ಅವಕಾಶವನ್ನು ಆರಿಸಿಕೊಳ್ಳಬಹುದು. ಇದರಿಂದ ಬಡ್ಡಿದರ ಹೆಚ್ಚಳದ ಬಿಸಿ ತಾಕದಂತೆ ನೋಡಿಕೊಳ್ಳಬಹುದು. ಇದು ಬ್ಯಾಂಕುಗಳಿಗೆ ತುಸು ಹಿನ್ನಡೆ ತರಬಹುದಾದರೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ. ಆರ್​ಬಿಐನ ಈ ಪ್ರಸ್ತಾವಗಳಿಗೆ ಬ್ಯಾಂಕುಗಳ ಸ್ಪಂದನೆ ಏನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅದಾದ ಬಳಿಕ ಹೊಸ ನಿಯಮಗಳು ಜಾರಿಗೆ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ