AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್

FedEx Scam: ತಮಗೆ ಬಂದಿರುವ ಪಾರ್ಸಲ್​ನಲ್ಲಿ ಮಾದಕವಸ್ತುಗಳಿರುವುದು ಕಸ್ಟಮ್ಸ್​ಗೆ ಗೊತ್ತಾಗಿದೆ. ತಮ್ಮ ಸರಕು ಏರ್​ಪೋರ್ಟ್ ಕಸ್ಟಮ್ಸ್​ನಲ್ಲಿ ಸಿಕ್ಕಿಕೊಂಡಿದೆ. ಕಾನೂನು ಕ್ರಮ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ಇಂತಿಷ್ಟು ಲಕ್ಷ ರೂ ಕೊಡಿ ಎಂದು ಫೆಡ್​ಎಕ್ಸ್ ಉದ್ಯೋಗಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಕರು ಕರೆ ಮಾಡಿ ಬೆದರಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್
ವಂಚಕ ಕರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2023 | 4:36 PM

ಬೆಂಗಳೂರು, ಆಗಸ್ಟ್ 25: ಸಿಲಿಕಾನ್ ನಗರಿಯಲ್ಲಿ ಸೈಬರ್ ಅಪರಾಧ ಘಟನೆಗಳು (Cyber Crime Incidents) ಅಗಣಿತ ರೀತಿಯಲ್ಲಿ ಹೆಚ್ಚುತ್ತಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಹಣ ಲಪಟಾಯಿಸುವುದು, ನಕಲಿ ಉದ್ಯೋಗ ಭರವಸೆ ನೀಡಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ಆನ್​ಲೈನ್​ನಲ್ಲೇ ದುಷ್ಕರ್ಮಿಗಳು ವಂಚಿಸುವುದಿದೆ. ಬೆಂಗಳೂರಿನಂಥ ಚಟುವಟಿಕೆಭರಿತ ನಗರದಲ್ಲಿ ಇಂಥ ಸೈಬರ್ ಕ್ರೈಮ್​ಗಳು ಬಹಳ ಹೆಚ್ಚೇ ಆಗುತ್ತಿವೆ. ಜನರ ಅವಸರ ಬುದ್ಧಿಯನ್ನು ಅಪರಾಧಿಗಳು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾರ್ಸಲ್ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳೂ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಫೆಡ್​ಎಕ್ಸ್ ಕೊರಿಯರ್ (FedEx Courier) ಹೆಸರಿನಲ್ಲಿ ಬೆಂಗಳೂರಿನಲ್ಲಿ ಹಲವು ಹಗರಣಗಳು ನಡೆದಿವೆ.

ಫೆಡೆಕ್ಸ್ ಕೊರಿಯರ್ ಪ್ರಕರಣಗಳು ಹೇಗೆ ಇರುತ್ತವೆ?

ಫೆಡ್​ಎಕ್ಸ್ ಎಂಬುದು ಕೊರಿಯರ್ ಕಂಪನಿ. ದುಷ್ಕರ್ಮಿಗಳು ಫೆಡೆಕ್ಸ್ ಕೊರಿಯರ್ ಕಂಪನಿಯ ಉದ್ಯೋಗಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡುತ್ತಾರೆ. ಕಸ್ಟಮ್ಸ್ ಅಫಿಶಿಯಲ್ಸ್ ಸೇರಿದಂತೆ ವಿವಿಧ ಅಧಿಕಾರಿಗಳ ಸೋಗಿನಲ್ಲೂ ಕರೆ ಮಾಡುತ್ತಾರೆ. ಜನರಿಗೆ ಅನುಮಾನ ಬರದಿರಲೆಂದು ಐವಿಆರ್ ಸಿಸ್ಟಮ್ಸ್ ವ್ಯವಸ್ಥೆಯನ್ನೂ ಹೊಂದಿರುತ್ತಾರೆ. ಫೆಡ್​ಎಕ್ಸ್ ಉದ್ಯೋಗಿಗಳು, ಕಸ್ಟಮ್ಸ್ ಅಧಿಕಾರಿಗಳು ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳ ಧ್ವನಿ ಅನುಕರಿಸುವ ಆಟೊಮೇಟೆಡ್ ಕಾಲ್ ಅನ್ನು ಈ ಐವಿಆರ್​ನಲ್ಲಿ ಅಳವಡಿಸಲಾಗಿರುತ್ತದೆ.

ಇದನ್ನೂ ಓದಿ: ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದಾಗ ಎಳನೀರು ಖರೀದಿಸಿದಾಗ, ಅಂಗಡಿಯವನ ರಿಯಾಕ್ಷನ್ ಹೇಗಿತ್ತು?

ತಮಗೆ ಕಳುಹಿಸಲಾದ ಪಾರ್ಸಲ್​ವೊಂದು ಮುಂಬೈ ಏರ್​ಪೋರ್ಟ್​ನ ಕಸ್ಟಮ್ಸ್​ನಲ್ಲಿ ಸಿಕ್ಕಿಕೊಂಡಿದೆ. ಅದನ್ನು ಪರಿಶೀಲಿಸುವ ವೇಳೆ ಮಾದಕವಸ್ತು ಇತ್ಯಾದಿ ಅಕ್ರಮ ವಸ್ತುಗಳಿರುವುದು ಗೊತ್ತಾಗಿದೆ. ಇದರಿಂದ ನಿಮಗೆ ಕಾನೂನಾತ್ಮಕ ತೊಂದರೆಗಳು ಎದುರಾಗುತ್ತವೆ. ನೀವು ತಪ್ಪಿಸಿಕೊಳ್ಳಬೇಕಾದರೆ ಇಂತಿಷ್ಟು ಲಕ್ಷ ರೂ ಹಣ ಪಾವತಿಸಿ ಎಂದು ದುಷ್ಕರ್ಮಿಗಳು ಅಮಾಯಕ ಮಂದಿಗೆ ಕರೆ ಮಾಡಿ ತಿಳಿಸುತ್ತಾರೆ. ಈ ಕರೆಯಿಂದ ಕೆಲವರು ಭಯ ಪಟ್ಟು, ಮಾನ ಮರ್ಯಾದೆಗೆ ಅಂಜಿ ಹಣ ಕಳುಹಿಸುವುದಿದೆ.

ಇದಕ್ಕೆ ಬಗ್ಗದವರಿಗೆ ನಕಲಿ ಪೊಲೀಸ್ ಅಧಿಕಾರಿಯಿಂದ ಸ್ಕೈಪ್ ವಿಡಿಯೋ ಕಾಲ್ ಕೂಡ ಬರುತ್ತದೆ. ತಮಗೆ ಕಳುಹಿಸಲಾದ ಪಾರ್ಸಲ್​ನಲ್ಲಿ ಅಕ್ರಮ ವಸ್ತುಗಳಿವೆ. ತಮ್ಮ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆ ಅಧಿಕಾರಿ ವಿಡಿಯೋ ಕಾಲ್​ನಲ್ಲಿ ಬೆದರಿಕೆ ಹಾಕುತ್ತಾನೆ. ಬಳಿಕ ಆಧಾರ್, ಪ್ಯಾನ್ ನಂಬರ್ ಇತ್ಯಾದಿ ಮಾಹಿತಿ ಪಡೆಯುತ್ತಾರೆ. ಈ ಆಧಾರ್ ನಂಬರ್​ಗೆ ಜೋಡಿತವಾದ ಬ್ಯಾಂಕ್ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗೆ ದುರ್ಬಳಕೆ ಆಗುತ್ತಿದೆ ಎಂದು ಸುಳ್ಳು ಹೇಳಿ ಹೆದರಿಸುತ್ತಾರೆ. ಮುಂದಾಗುವ ಕಾನೂನು ತೊಂದರೆಗಳನ್ನು ಊಹಿಸಿ ಜನರು ಆ ದುಷ್ಕರ್ಮಿಗಳು ಕೇಳಿದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಬಹುದು.

ಬೆಂಗಳೂರಿನಲ್ಲಿ ಈ ವರ್ಷದಲ್ಲೇ ಇಂಥ 163 ಪ್ರಕರಣಗಳು ಬೆಳಕಿಗೆ ಬಂದಿವೆ. ಇಷ್ಟೂ ಪ್ರಕರಣಗಳಿಂದ 5 ಕೋಟಿ ರೂ ಹಣವನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ.

ಇದನ್ನೂ ಓದಿ: AB-PMJAY Scheme: ಕೇಂದ್ರದ ಆಯುಷ್ಮಾನ್ ಭಾರತ್ ಕಾರ್ಡ್​ದಾರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ಮುಂದೇನು ಕ್ರಮ?

ಫೆಡ್​ಎಕ್ಸ್ ಹೆಸರಲ್ಲಿ ವಂಚಕ ಕರೆ ಬಂದರೆ ಏನು ಮಾಡಬೇಕು?

ನಿಮಗೆ ಫೆಡ್​ಎಕ್ಸ್ ಕೊರಿಯರ್ ಮೂಲಕ ಯಾವುದಾದರೂ ಪಾರ್ಸಲ್ ಬರುವುದಿದ್ದರೆ ಅದನ್ನು ಅಧಿಕೃತ ವೆಬ್​ಸೈಟ್ ಮೂಲಕವೇ ಟ್ರ್ಯಾಕ್ ಮಾಡಬಹುದು. ಆಗಂತುಕರು ಕಳುಹಿಸುವ ಎಸ್ಸೆಮ್ಮೆಸ್, ಇಮೇಲ್ ಅಥವಾ ವಾಟ್ಸಾಪ್​ಗಳಲ್ಲಿನ ಮೆಸೇಜ್​ನಲ್ಲಿನ ಲಿಂಕ್​ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ.

ದುಷ್ಕರ್ಮಿಗಳು ಕರೆ ಮಾಡಿದಾಗ, ಅವರ ಬಗ್ಗೆ ನಿಮಗೆ ಸಂಶಯ ಬಂದರೆ ಕೂಡಲೇ ಕರೆ ಕಟ್ ಮಾಡಿ. ಇಲ್ಲದಿದ್ದರೆ ಅವರು ನಿಮ್ಮನ್ನು ಭಾವನಾತ್ಮಕವಾಗಿ ಹೈಜಾಕ್ ಮಾಡಲು ಯತ್ನಿಸಬಹುದು.

ನೀವು ಈ ಹಗರಣಕ್ಕೆ ತುತ್ತಾಗಿದ್ದರೆ ಕೂಡಲೇ 112 ಅಥವಾ 1930 ನಂಬರ್​ಗೆ ಡಯಲ್ ಮಾಡಿ ದೂರು ದಾಖಲಿಸಬಹುದು. ಅಥವಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ಕೊಡಬಹುದು.

(ಮಾಹಿತಿ ಕೃಪೆ: ಸಿ.ಕೆ. ಬಾಬಾ, ಪೊಲೀಸ್ ಅಧಿಕಾರಿ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!