AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ

SEBI looking to curb Futures and Options trading: ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಜೂಜಾಟದಂತಿರುವ ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದನ್ನು ಗಮನಿಸಿರುವ ಸೆಬಿ, ಎಫ್ ಅಂಡ್ ಒ ಟ್ರೇಡಿಂಗ್​ಗೆ ಕಡಿವಾಣ ಹಾಕಲು ಮಾರ್ಗೋಪಾಯ ಹುಡುಕಲು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಏಳು ಕ್ರಮಗಳನ್ನು ಶಿಫಾರಸು ಮಾಡಿದೆ. ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ತೀರ್ಮಾಣ ಮಾಡಲಿದೆ ಸೆಬಿ.

ಷೇರು ಮಾರುಕಟ್ಟೆಯಲ್ಲಿ ಎಫ್ ಅಂಡ್ ಒ ವ್ಯವಹಾರಕ್ಕೆ ಕಡಿವಾಣ ಹಾಕಲು ಸೆಬಿ ಕ್ರಮ; ಹೊಸ ನಿಯಮಗಳು ಸದ್ಯದಲ್ಲೇ ಜಾರಿ
ಸೆಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2024 | 4:25 PM

Share

ನವದೆಹಲಿ, ಜುಲೈ 9: ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ಈಗ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ವ್ಯವಹಾರಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಸೆಬಿ ರಚಿಸಿದ್ದ ಕಾರ್ಯಕಾರಿ ಸಮಿತಿಯೊಂದು ಎಫ್ ಅಂಡ್ ಒ ಸಂಬಂಧ ಕೆಲ ಕ್ರಮಗಳಿಗೆ ಶಿಫಾರಸು ಮಾಡಿದೆ. ಇದರಲ್ಲಿ ಡಿರೈವೇಟಿವ್ ಕಾಂಟ್ರಾಕ್ಟ್​ಗಳ ಕನಿಷ್ಠ ಲಾಟ್ ಗಾತ್ರವನ್ನು 20ರಿಂದ 30 ಲಕ್ಷಕ್ಕೆ ಏರಿಸುವ ಸಲಹೆಯೂ ಇದರಲ್ಲಿ ಇದೆ. ಸದ್ಯ ಈ ಲಾಟ್ ಸೈಜ್ ಐದು ಲಕ್ಷ ರೂ ಇದೆ. ಇದನ್ನು ಕನಿಷ್ಠ ನಾಲ್ಕು ಪಟ್ಟಾದರೂ ಹೆಚ್ಚಿಸಬೇಕು ಎಂಬುದು ಸಮಿತಿಯ ಶಿಫಾರಸಾಗಿದೆ.

ಎಫ್ ಅಂಡ್ ಒ ಎಂದೇ ಖ್ಯಾತವಾಗಿರುವ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಎಂಬುವುವು ಒಂದು ವಿಧದ ಟ್ರೇಡಿಂಗ್​ಗಳಾಗಿವೆ. ಇವನ್ನು ಡಿರವೇಟಿವ್ ಮಾರ್ಕೆಟ್ ಎಂದೂ ಕರೆಯಲಾಗುತ್ತದೆ. ಡಿರವೇಟಿವ್ ಎಂದರೆ ಒಂದು ವಸ್ತುವಿನ ಮೌಲ್ಯದ ಆಧಾರಿತವಾದುದು. ಒಂದು ರೀತಿಯಲ್ಲಿ ಬೆಟ್ಟಿಂಗ್​ನಂತೆ. ಈ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರು ಎಫ್ ಅಂಡ್ ಒ ದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೋಗಿ ಹಣ ಕಳೆದುಕೊಂಡಿರುವುದಿದೆ. ಈ ರೀತಿ ಎಫ್ ಅಂಡ್ ಒ ಟ್ರೇಡಿಂಗ್ ಮಾಡುವ ಪ್ರತೀ 10ರಲ್ಲಿ 9 ಮಂದಿ ನಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಬಜೆಟ್​ಗೆ ಮುನ್ನ ರೈಲ್ವೆ ಕ್ಷೇತ್ರದ ಷೇರುಗಳ ಬೆಲೆ ಭರ್ಜರಿ ಏರಿಕೆ; ಕಾರಣ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಫ್​ ಅಂಡ್ ಒ ಹೆಚ್ಚು ಜನಪ್ರಿಯವಾಗುತ್ತಿದೆ. ಬಹಳಷ್ಟು ರೀಟೇಲ್ ಹೂಡಿಕೆದಾರರು ಈ ರೀತಿಯ ಟ್ರೇಡಿಂಗ್​ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸೆಬಿ ಗಮನಕ್ಕೆ ಬಂದಿತ್ತು. ಹೂಡಿಕೆದಾರರ ಹಿತಾಸಕ್ತಿಗೆ ಇದು ಧಕ್ಕೆ ತರುವಂತಿರುವುದರಿಂದ ಎಫ್ ಅಂಡ್ ಒ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಳ್ಳಬಹುದು ಎಂದು ಪರಿಶೀಲಿಸಲು ಸಮಿತಿಯೊಂದನ್ನು ಸೆಬಿ ನೇಮಿಸಿತ್ತು.

ಡಿರವೇಟಿವ್ ಕಾಂಟ್ರಾಕ್ಟ್​ಗಳ ಮಿನಿಮಮ್ ಲಾಟ್ ಸೈಜ್ ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆಪ್ಷನ್ಸ್ ಕಾಂಟ್ರಾಕ್ಟ್​ಗೆ ಸ್ಟ್ರೈಕ್ ಪ್ರೈಸ್​ಗೆ ಮಿತಿ ಹಾಕಬಹುದು ಎಂದು ಈ ಸಮಿತಿ ಶಿಫಾರಸು ಮಾಡಿದೆ. ಇವೆರಡೂ ಸೇರಿದಂತೆ ಏಳು ಶಿಫಾರಸುಗಳನ್ನು ಈ ಸಮಿತಿ ಸಲ್ಲಿಸಿದೆ.

ಎಫ್ ಅಂಡ್ ಒ ನಿಯಂತ್ರಕ್ಕೆ ಸೆಬಿಗೆ ಬಂದಿರುವ ಪ್ರಸ್ತಾವಗಳಿವು

  1. ಡಿರವೇಟಿವ್ ಕಾಂಟ್ರಾಕಟ್​ಗಳ ಕನಿಷ್ಠ ಲಾಟ್ ಗಾತ್ರವನ್ನು 5 ಲಕ್ಷ ರೂನಿಂದ 30 ಲಕ್ಷ ರೂಗೆ ಹೆಚ್ಚಿಸುವುದು.
  2. ಆಪ್ಷನ್ಸ್ ಕಾಂಟ್ರಾಕ್ಟ್​ನ ಸ್ಟ್ರೈಕ್ ಪ್ರೈಸ್​ಗೆ ಮಿತಿ
  3. ವಾರದ ಆಪ್ಷನ್ಸ್ ಅನ್ನು ಒಂದಕ್ಕೆ ಮಿತಿಗೊಳಿಸುವುದು
  4. ವಾಯಿದೆ ದಿನದ ಕ್ಯಾಲಂಡರ್ ಸ್ಪ್ರೆಡ್ ಬೆನಿಫಿಟ್ ಅನ್ನು ತೆಗೆದುಹಾಕುವುದು
  5. ಅಪ್ಷನ್ಸ್​ನ ಖರೀದಿದಾರರಿಂದ ಮುಂಗಡವಾಗಿ ಪ್ರೀಮಿಯಮ್ ಸಂಗ್ರಹಿಸುವುದು.
  6. ಪೊಸಿಶನ್ ಲಿಮಿಟ್ ಮೇಲೆ ಕಣ್ಣಿಡುವುದು.
  7. ಕಾಂಟ್ರಾಕ್ಟ್ ವಾಯಿದೆ ಅಂತ್ಯ ಸಮೀಪದಲ್ಲಿ ಅಗತ್ಯವಾದ ಮಾರ್ಜಿನ್​ನಲ್ಲಿ ಹೆಚ್ಚಳ ಮಾಡುವುದು.

ಈ ಏಳು ಪ್ರಸ್ತಾಪಗಳನ್ನು ಜಾರಿ ಮಾಡುವುದರ ಅನುಕೂಲ ಮತ್ತು ಅನನುಕೂಗಳೇನು ಎಂಬ ವಿವರವನ್ನು ಸೆಬಿ ನೇಮಿತ ತಜ್ಞರ ಗುಂಪೊಂದು ಚರ್ಚಿಸಲಿದೆ.

ಇದನ್ನೂ ಓದಿ: ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

ಎಫ್ ಅಂಡ್ ಒ ಎಂದರೇನು?

ಎಫ್ ಎಂದರೆ ಫ್ಯೂಚರ್ಸ್. ಒ ಎಂದರೆ ಆಪ್ಷನ್ಸ್. ಎರಡೂ ಕೂಡ ಇಬ್ಬರ ಮಧ್ಯೆ ನಡೆಯುವ ಒಪ್ಪಂದ ಆಧಾರಿತ ಟ್ರೇಡಿಂಗ್ ಆಗಿದೆ. ಫ್ಯೂಚರ್ಸ್ ಟ್ರೇಡಿಂಗ್​ನಲ್ಲಿ ಒಂದು ಷೇರನ್ನು ನಿರ್ದಿಷ್ಟ ದಿನದಂದು ನಿರ್ದಿಷ್ಟ ಮೊತ್ತಕ್ಕೆ ಮಾರಲು ಅಥವಾ ಖರೀದಿಸಲು ಒಪ್ಪಂದ ಅಥವಾ ಕಾಂಟ್ರಾಕ್ಟ್ ನಡೆಯುತ್ತದೆ. ಆಪ್ಷನ್ಸ್​ನಲ್ಲೂ ಇದೇ ರೀತಿ ಕಾಂಟ್ರಾಕ್ಟ್ ನಡೆಯುತ್ತದೆ. ಆದರೆ, ಇಲ್ಲಿ ಹೂಡಿಕೆದಾರರಿಗೆ ಗುತ್ತಿಗೆಯಿಂದ ಹಿಂದಕ್ಕೆ ಸರಿಯುವ ಅವಕಾಶ ಇರುತ್ತದೆ. ಆದರೆ, ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಬಹಳ ಹೆಚ್ಚು ಎಫ್ ಅಂಡ್ ಒ ಟ್ರೇಡಿಂಗ್ ನಡೆಯುತ್ತಿದೆ. ಇದರಲ್ಲಿ ಫ್ಯೂಚರ್ಸ್ ಟ್ರೇಡಿಂಗ್ ಶೇ. 20, ಆಪ್ಷನ್ಸ್ ಟ್ರೇಡಿಂಗ್ ಶೇ. 80ರಷ್ಟು ಜನರು ತೊಡಗಿಸಿಕೊಂಡಿರುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ