AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರಿಗೆ ಏಪ್ರಿಲ್ 11ರಿಂದ ಈಚೆಗೆ 34 ಲಕ್ಷ ಕೋಟಿ ರೂ. ನಷ್ಟ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್​ನಲ್ಲಿ ಮೇ 12ನೇ ತಾರೀಕಿನ ಗುರುವಾರ 1000 ಪಾಯಿಂಟ್ಸ್​​ಗೂ ಹೆಚ್ಚು ಕುಸಿತ ಕಂಡಿದ್ದು, ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

Sensex: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರಿಗೆ ಏಪ್ರಿಲ್ 11ರಿಂದ ಈಚೆಗೆ 34 ಲಕ್ಷ ಕೋಟಿ ರೂ. ನಷ್ಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 12, 2022 | 1:13 PM

Share

ಭಾರತದ ಷೇರು ಮಾರುಕಟ್ಟೆ (stock market) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ ವಹಿವಾಟಿನಲ್ಲಿ 1000 ಪಾಯಿಂಟ್ಸ್​ ಇಳಿಕೆ ಕಂಡಿದ್ದು, ಎಲ್ಲ ವಲಯದ ಷೇರುಗಳಲ್ಲೂ ಮಾರಾಟ ಆಗಿದೆ. ಇದರಿಂದಾಗಿ ಮೇ 12ನೇ ತಾರೀಕು ಒಂದೇ ದಿನ ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಇನ್ನು ಏಪ್ರಿಲ್ 11ನೇ ತಾರೀಕಿನ ಗರಿಷ್ಠ ಮಟ್ಟದ ಹಂತದಿಂದ ನೋಡಿದರೆ 34 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟವಾಗಿದೆ. ದತ್ತಾಂಶಗಳ ಪ್ರಕಾರ, ಬುಧವಾರದ ದಿನದ ಕೊನೆಗೆ ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 246.31 ಲಕ್ಷ ಕೋಟಿ ಇತ್ತು. ಅದು 5.16 ಲಕ್ಷ ಕೋಟಿ ರೂಪಾಯಿ ಇಳಿದು, ಗುರುವಾರ 241.15 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ಏಪ್ರಿಲ್ 11ನೇ ತಾರೀಕಿನಂದು ಬಿಎಸ್​ಇ ಮಾರುಕಟ್ಟೆ ಬಂಡವಾಳ ಮೌಲ್ಯ 275.17 ಲಕ್ಷ ಕೋಟಿ ರೂಪಾಯಿ ಇತ್ತು.

ಮೇ 12ನೇ ತಾರೀಕಿನಂದು ಭಾರೀ ಕುಸಿತಕ್ಕೆ ಕಾರಣವಾದ ಅಂಶಗಳು ಇಲ್ಲಿವೆ:

ಅಮೆರಿಕದ ಹಣದುಬ್ಬರ ಅಂದಾಜಿಗಿಂತ ಕಡಿಮೆ- ದತ್ತಾಂಶದ ಪ್ರಕಾರ ಅಮೆರಿಕದ ಸಿಪಿಐ ಏಪ್ರಿಲ್​ನಲ್ಲಿ ಶೇ 8.3ಕ್ಕೆ ಇಳಿದಿದೆ. ಮಾರ್ಚ್​ನಲ್ಲಿ ಇದು ಶೇ 8.5ರಷ್ಟಿತ್ತು. ಆದರೆ ನಿರೀಕ್ಷೆ ಮಾಡಿದಂತೆ ಶೇ 8.1ಕ್ಕೆ ಬಂದಿಲ್ಲ. ಈ ಮೂಲಕ ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ ಎಂಬುದನ್ನು ಸೂಚಿಸುತ್ತಿದೆ. ಹಣದುಬ್ಬರ ಇನ್ನಷ್ಟು ಕಡಿಮೆ ಆಗಬೇಕು ಎಂದಾದಲ್ಲಿ ಅದು ನಿಧಾನ ಗತಿಯಲ್ಲಿ ಆಗುತ್ತದೆ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್​ನ ಆಕ್ರಮಣಕಾರಿ ನಿಲುವು ಮುಂದುವರಿಯಬಹುದು.

ಡಾಲರ್ ಏರಿಕೆ, ಏಷ್ಯಾ ಮಾರ್ಕೆಟ್ ಕುಸಿತ- ಅಮೆರಿಕದ ಹಣದುಬ್ಬರ ಅಂಕಿ-ಅಂಶ ಬಿಡುಗಡೆ ನಂತರ ಉದಯೋನ್ಮುಖ ಈಕ್ವಿಟಿ ಮಾರುಕಟ್ಟೆಗಳಿಗೆ ಪೆಟ್ಟು ನೀಡಿದ ಮೇಲೆ, ಡಾಲರ್ ಮೌಲ್ಯ ಎರಡು ದಶಕದ ಗರಿಷ್ಠ ಮಟ್ಟದಲ್ಲಿದೆ. ವಿಶ್ವದ ಆರು ಪ್ರಮುಖ ಕರೆನ್ಸಿಗಳ ಬ್ಯಾಸ್ಕೆಟ್​ಗಳ ವಿರುದ್ಧ ಗ್ರೀನ್​ಬ್ಯಾಕ್​ನ ಅಳೆಯುವ ಡಾಲರ್ ಸೂಚ್ಯಂಕವು 103.92ರಲ್ಲಿದೆ. ಬಹುತೇಕ ಏಷ್ಯನ್ ಸ್ಟಾಕ್​ಗಳು ಇಳಿಕೆ ಹಾದಿಯಲ್ಲಿವೆ. ಎಂಎಸ್​ಸಿಐ ಶೇ 0.92ರಷ್ಟು, ಜಪಾನ್​ನ ನಿಕೈ ಶೇ 1.01ರಷ್ಟು, ಹಾಂಕಾಂಗ್​ನ ಹ್ಯಾಂಗ್​ ಸೆಂಗ್ ಶೇ 1.05ರಷ್ಟು ಮತ್ತು ದಕ್ಷಿಣ ಕೊರಿಯಾದ ಕೊಸ್ಪಿ ಶೇ 0.36ರಷ್ಟು ಕುಸಿದಿದೆ.

ಮುಂದುವರಿದ ವಿದೇಶೀ ಪೋರ್ಟ್​ಫೋಲಿಯೊ ಹೊರಹರಿವು- ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬುಧವಾರದಂದು ರೂ. 3,609.35 ಕೋಟಿಗಳಷ್ಟು ದೇಶೀಯ ಷೇರುಗಳ ನಿವ್ವಳ ಮಾರಾಟಗಾರರಾಗಿದ್ದಾರೆ ಎಂದು ತಾತ್ಕಾಲಿಕ ಡೇಟಾ ಸೂಚಿಸಿದೆ. ಎಫ್​ಪಿಐ ಹೊರಹರಿವು ಮೇ ತಿಂಗಳಲ್ಲಿ 17,403 ಕೋಟಿ ರೂಪಾಯಿ ಮತ್ತು 2022ರಲ್ಲಿ ಇದುವರೆಗೆ 1,44,565 ಕೋಟಿ ರೂ. ಆಗಿದೆ. “ಡಾಲರ್ ಸೂಚ್ಯಂಕ 104ರಲ್ಲಿ ಇದೆ ಮತ್ತು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯೊಂದಿಗೆ ಭಾರತೀಯ ಮೌಲ್ಯಮಾಪನವು ಆಕರ್ಷಕ ಆಗುವವರೆಗೆ ಎಫ್‌ಐಐಗಳು ಮಾರಾಟವನ್ನು ಮುಂದುವರಿಸುವ ಸಾಧ್ಯತೆಯಿದೆ. ಡಿಐಐ ಖರೀದಿಯು ಈಗ ಎಫ್‌ಐಐ ಮಾರಾಟಕ್ಕಿಂತ ಹೆಚ್ಚಿದ್ದರೂ ಸಹ ಮಾರುಕಟ್ಟೆಯಲ್ಲಿ ಭಾವನೆಗಳನ್ನು ಸಕಾರಾತ್ಮಕ ಆಗಿಸಲು ಸಾಕಾಗುವುದಿಲ್ಲ,” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞರಾದ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಗ್ರಾಹಕ ದರ ಸೂಚ್ಯಂಕ ಮೇಲೆ ಹೂಡಿಕೆದಾರರ ಕಣ್ಣು- ಭಾರತದಲ್ಲಿ ಗ್ರಾಹಕ ದರ ಸೂಚ್ಯಂಕದ ಮೇಲೆ ಆತಂಕದಿಂದ ಹೂಡಿಕೆದಾರರು ಕಣ್ಣು ನೆಟ್ಟು ಕೂತಿದ್ದಾರೆ. ಆ ಅಂಶ ಕೂಡ ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆಗೆ ಕಾರಣವಾಗಿದೆ.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1075.05 ಪಾಯಿಂಟ್ಸ್ ಅಥವಾ ಶೇ 1.99ರಷ್ಟು ಕುಸಿದು, 53,013.34 ಪಾಯಿಂಟ್ಸ್​ನಲ್ಲಿ ವ್ಯವಹರಿಸುತ್ತಿದ್ದರೆ, ನಿಫ್ಟಿ 341.10 ಪಾಯಿಂಟ್ಸ್ ಅಥವಾ ಶೇ 2.11ರಷ್ಟು ನೆಲ ಕಚ್ಚಿ, 15,826 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Published On - 1:13 pm, Thu, 12 May 22

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ