Sign In

By signing in or creating an account, you agree with Associated Broadcasting Company's Terms & Conditions and Privacy Policy.

State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ದರ 10 ಬಿಪಿಎಸ್ ಹೆಚ್ಚಳ; ಜಾಸ್ತಿ ಆಗಲಿದೆ ಇಎಂಐ

ಮೇ 10ನೇ ತಾರೀಕಿನಿಂದ ಅನ್ವಯ ಆಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್​ಆರ್ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಇಎಂಐ ಹೆಚ್ಚು ಕಟ್ಟಬೇಕಾಗುತ್ತದೆ.

State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ದರ 10 ಬಿಪಿಎಸ್ ಹೆಚ್ಚಳ; ಜಾಸ್ತಿ ಆಗಲಿದೆ ಇಎಂಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 16, 2022 | 12:57 PM

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) 10 ಬೇಸಿಸ್ ಪಾಯಿಂಟ್ಸ್​ (ಬಿಪಿಎಸ್​) ಹೆಚ್ಚಳ ಮಾಡಿದೆ. ಎಲ್ಲ ಅವಧಿಗೂ ಅನ್ವಯ ಆಗುವಂತೆ ಮೇ 15ನೇ ತಾರೀಕಿನಿಂದ ಈ ದರ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳಲ್ಲಿ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಿಂದ ಇದು ಎರಡನೇ ಬೆಂಚ್​ಮಾರ್ಕ್​ ಸಾಲ ದರದ ಹೆಚ್ಚಳವಾಗಿದೆ. ಎಸ್​ಬಿಐನ ಒಂದು ತಿಂಗಳಿಂದ ಮೂರು ತಿಂಗಳ ಅವಧಿಯ ಎಂಸಿಎಲ್​ಆರ್​ ಈಗ ಶೇ 6.85 ಆಗಿದ್ದು, ಈ ಹಿಂದೆ 6.75 ಇತ್ತು. ಇನ್ನು ಆರು ತಿಂಗಳ ಎಂಸಿಎಲ್​ಆರ್​ ಶೇ 7.15, ಒಂದು ವರ್ಷದ ಎಂಸಿಎಲ್ಆರ್​ ಶೇ 7.20, ಎರಡು ವರ್ಷದ ಎಂಸಿಎಲ್​ಆರ್ ಶೇ 7.40, ಮೂರು ವರ್ಷದ ಎಂಸಿಎಲ್​ಆರ್​ ಶೇ 7.50 ಆಗಿದೆ.

ಹಣಕಾಸು ನೀತಿ ಸಮಿತಿ (MPC) 40 ಬೇಸಿಸ್ ಪಾಯಿಂಟ್ಸ್ ರೆಪೋ ದರ ಹೆಚ್ಚಳ ಮಾಡಿರುವುದರಿಂದ ಶೇ 4.40 ತಲುಪಿದೆ. ಆ ನಂತರ ಎಸ್​ಬಿಐ ಎಂಸಿಎಲ್ಆರ್ ದರ ಹೆಚ್ಚಿಸಿದೆ. ಈ ಹಿಂದೆ ಏಪ್ರಿಲ್​ನಲ್ಲಿ ಎಸ್​ಬಿಐ ಘೋಷಣೆ ಮಾಡಿದ್ದಂತೆ, ಆ ತಿಂಗಳ 15ನೇ ತಾರೀಕಿನಿಂದ 10 ಬೇಸಿಸ್ ಪಾಯಿಂಟ್ ಜಾಸ್ತಿ ಮಾಡಿತ್ತು.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್ಆರ್ ಹೆಚ್ಚಳ ಮಾಡುವುದರಿಂದ ಗ್ರಾಹಕರ ಮೇಲೆ ಪರಿಣಾಮ ಏನು?

– ಬ್ಯಾಂಕ್​ಗಳು ಸಾಲ ನೀಡುವುದಕ್ಕೆ ದರವನ್ನು ನಿರ್ಧರಿಸುವ ಎರಡು ಮುಖ್ಯ ಬೆಂಚ್​ಮಾರ್ಕ್​ ದರಗಳಲ್ಲಿ ಎಂಸಿಎಲ್​ಆರ್​ ಸಹ ಒಂದು.

– ಎಂಸಿಎಲ್​ಆರ್​ ಏರಿಕೆಯೊಂದಿಗೆ ಎಲ್ಲ ಬಗೆಯ ಸಾಲಗಳಲ್ಲಿ ಬಡ್ಡಿ ದರವು ಹೆಚ್ಚಳ ಆಗುವ ನಿರೀಕ್ಷೆ ಇದೆ.

– ಗೃಹ, ವಾಹನ ಮತ್ತು ವೈಯಕ್ತಿಕ ಸಾಲವನ್ನೂ ಒಳಗೊಂಡಂತೆ ಎಲ್ಲದರ ಇಎಂಐ ಮುಂಬರುವ ತಿಂಗಳಲ್ಲಿ ಏರಿಕೆ ಆಗಲಿದೆ.

– ಇದರ ಜತೆಗೆ ಕಾರ್ಪೊರೇಟ್​ಗಳು ಬ್ಯಾಂಕ್​ಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರ ಸಹ ಏರಿಕೆ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI FD Interest Rates: ಎಸ್​ಬಿಐ ಎಫ್​ಡಿ ಬಡ್ಡಿ ದರ ಮೇ 10ರಿಂದ ಹೆಚ್ಚಳ; ಇಲ್ಲಿದೆ ದರದ ಮಾಹಿತಿ

ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ