AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ದರ 10 ಬಿಪಿಎಸ್ ಹೆಚ್ಚಳ; ಜಾಸ್ತಿ ಆಗಲಿದೆ ಇಎಂಐ

ಮೇ 10ನೇ ತಾರೀಕಿನಿಂದ ಅನ್ವಯ ಆಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್​ಆರ್ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಇಎಂಐ ಹೆಚ್ಚು ಕಟ್ಟಬೇಕಾಗುತ್ತದೆ.

State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್​ಆರ್ ದರ 10 ಬಿಪಿಎಸ್ ಹೆಚ್ಚಳ; ಜಾಸ್ತಿ ಆಗಲಿದೆ ಇಎಂಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 16, 2022 | 12:57 PM

Share

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) 10 ಬೇಸಿಸ್ ಪಾಯಿಂಟ್ಸ್​ (ಬಿಪಿಎಸ್​) ಹೆಚ್ಚಳ ಮಾಡಿದೆ. ಎಲ್ಲ ಅವಧಿಗೂ ಅನ್ವಯ ಆಗುವಂತೆ ಮೇ 15ನೇ ತಾರೀಕಿನಿಂದ ಈ ದರ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳಲ್ಲಿ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಿಂದ ಇದು ಎರಡನೇ ಬೆಂಚ್​ಮಾರ್ಕ್​ ಸಾಲ ದರದ ಹೆಚ್ಚಳವಾಗಿದೆ. ಎಸ್​ಬಿಐನ ಒಂದು ತಿಂಗಳಿಂದ ಮೂರು ತಿಂಗಳ ಅವಧಿಯ ಎಂಸಿಎಲ್​ಆರ್​ ಈಗ ಶೇ 6.85 ಆಗಿದ್ದು, ಈ ಹಿಂದೆ 6.75 ಇತ್ತು. ಇನ್ನು ಆರು ತಿಂಗಳ ಎಂಸಿಎಲ್​ಆರ್​ ಶೇ 7.15, ಒಂದು ವರ್ಷದ ಎಂಸಿಎಲ್ಆರ್​ ಶೇ 7.20, ಎರಡು ವರ್ಷದ ಎಂಸಿಎಲ್​ಆರ್ ಶೇ 7.40, ಮೂರು ವರ್ಷದ ಎಂಸಿಎಲ್​ಆರ್​ ಶೇ 7.50 ಆಗಿದೆ.

ಹಣಕಾಸು ನೀತಿ ಸಮಿತಿ (MPC) 40 ಬೇಸಿಸ್ ಪಾಯಿಂಟ್ಸ್ ರೆಪೋ ದರ ಹೆಚ್ಚಳ ಮಾಡಿರುವುದರಿಂದ ಶೇ 4.40 ತಲುಪಿದೆ. ಆ ನಂತರ ಎಸ್​ಬಿಐ ಎಂಸಿಎಲ್ಆರ್ ದರ ಹೆಚ್ಚಿಸಿದೆ. ಈ ಹಿಂದೆ ಏಪ್ರಿಲ್​ನಲ್ಲಿ ಎಸ್​ಬಿಐ ಘೋಷಣೆ ಮಾಡಿದ್ದಂತೆ, ಆ ತಿಂಗಳ 15ನೇ ತಾರೀಕಿನಿಂದ 10 ಬೇಸಿಸ್ ಪಾಯಿಂಟ್ ಜಾಸ್ತಿ ಮಾಡಿತ್ತು.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು ಎಂಸಿಎಲ್ಆರ್ ಹೆಚ್ಚಳ ಮಾಡುವುದರಿಂದ ಗ್ರಾಹಕರ ಮೇಲೆ ಪರಿಣಾಮ ಏನು?

– ಬ್ಯಾಂಕ್​ಗಳು ಸಾಲ ನೀಡುವುದಕ್ಕೆ ದರವನ್ನು ನಿರ್ಧರಿಸುವ ಎರಡು ಮುಖ್ಯ ಬೆಂಚ್​ಮಾರ್ಕ್​ ದರಗಳಲ್ಲಿ ಎಂಸಿಎಲ್​ಆರ್​ ಸಹ ಒಂದು.

– ಎಂಸಿಎಲ್​ಆರ್​ ಏರಿಕೆಯೊಂದಿಗೆ ಎಲ್ಲ ಬಗೆಯ ಸಾಲಗಳಲ್ಲಿ ಬಡ್ಡಿ ದರವು ಹೆಚ್ಚಳ ಆಗುವ ನಿರೀಕ್ಷೆ ಇದೆ.

– ಗೃಹ, ವಾಹನ ಮತ್ತು ವೈಯಕ್ತಿಕ ಸಾಲವನ್ನೂ ಒಳಗೊಂಡಂತೆ ಎಲ್ಲದರ ಇಎಂಐ ಮುಂಬರುವ ತಿಂಗಳಲ್ಲಿ ಏರಿಕೆ ಆಗಲಿದೆ.

– ಇದರ ಜತೆಗೆ ಕಾರ್ಪೊರೇಟ್​ಗಳು ಬ್ಯಾಂಕ್​ಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ದರ ಸಹ ಏರಿಕೆ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI FD Interest Rates: ಎಸ್​ಬಿಐ ಎಫ್​ಡಿ ಬಡ್ಡಿ ದರ ಮೇ 10ರಿಂದ ಹೆಚ್ಚಳ; ಇಲ್ಲಿದೆ ದರದ ಮಾಹಿತಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ