AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ

ಕೆನರಾ ಬ್ಯಾಂಕ್​ನಿಂದ 3 ಸಾಲ ಯೋಜನೆಗಳನ್ನು ಘೋಷಿಸಲಾಗಿದೆ. ವೈಯಕ್ತಿಕವಾಗಿ ಸಾಲ ಪಡೆಯುವವರಿಗೆ, ಎಂಎಸ್​ಎಂಇಗಳಿಗೆ ಹಾಗೂ ಹೆಲ್ತ್​ಕೇರ್ ಮೂಲಸೌಕರ್ಯಕ್ಕೆ ಹೀಗೆ ಮೂರು ಬಗೆಯಲ್ಲಿ ಸಾಲ ನೀಡಲಿದೆ.

Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ
ಸಾಂದರ್ಭಿಕ ಚಿತ್ರ
Srinivas Mata
|

Updated on:May 29, 2021 | 12:31 PM

Share

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್​ನಿಂದ ಶುಕ್ರವಾರ ಮೂರು ಬಗೆಯ ಸಾಲದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕೊರೊನಾ ಬಿಕ್ಕಟ್ಟಿನ ಮಧ್ಯೆ ಗ್ರಾಹಕರಿಗೆ ನಿರಾಳ ಆಗುವುದಕ್ಕೆ ಸಹಾಯ ಆಗುತ್ತದೆ. ಬ್ಯಾಂಕ್​ನಿಂದ ಹೇಳಿರುವ ಪ್ರಕಾರ, ಹೆಲ್ತ್​ಕೇರ್ ಕ್ರೆಡಿಟ್, ವಾಣಿಜ್ಯ ಮತ್ತು ಪರ್ಸನಲ್ ಲೋನ್ ನೀಡಲಾಗುತ್ತದೆ. ಯಾವುದು ಆ ಮೂರು ಸಾಲದ ಯೋಜನೆಗಳು ಇದರಿಂದ ಗ್ರಾಹಕರಿಗೆ ಹೇಗೆ ಅನುಕೂಲ ಆಗುತ್ತದೆ ಎಂಬಿತ್ಯಾದಿ ವಿವರಗಳ ಮಾಹಿತಿಯು ಈ ಲೇಖದಲ್ಲಿದೆ. ಇನ್ನೇಕೆ ತಡ ಮುಂದೆ ಓದಿ.

* ಕೆನರಾ ಸುರಕ್ಷಾ ಪರ್ಸನಲ್ ಲೋನ್ ಯೋಜನೆ ಈ ಯೋಜನೆ ಅಡಿಯಲ್ಲಿ ಬ್ಯಾಂಕ್​ನಿಂದ 25,000 ರೂಪಾಯಿಯಿಂದ ಆರಂಭವಾಗಿ 5 ಲಕ್ಷದ ತನಕ ಕೋವಿಡ್- 19ರ ಚಿಕಿತ್ಸೆಗೆ ಹಣ ದೊರೆಯುತ್ತದೆ. ಆಸ್ಪತ್ರೆಗೆ ದಾಖಲಾಗುವುದಿಂದ ಆರಂಭವಾಗಿ, ಬಿಡುಗಡೆಯಾಗುವ ನಂತರದ ತನಕ ಆಗುವ ವೆಚ್ಚವು ಸಾಲವಾಗಿ ಸಿಗುತ್ತದೆ. ಕೆನರಾ ಸುರಕ್ಷಾ ಯೋಜನೆಯಲ್ಲಿ ಆರು ತಿಂಗಳ ಕಾಲ ಸಾಲ ಮರುಪಾವತಿ ವಿನಾಯಿತಿ ಸಿಗುತ್ತದೆ. ಮತ್ತು ಈ ಯೋಜನೆ ಸೆಪ್ಟೆಂಬರ್ 30, 2021ರ ತನಕ ಇರುತ್ತದೆ.

* ಕೆನರಾ ಚಿಕಿತ್ಸಾ ಹೆಲ್ತ್​ಕೇರ್ ಕ್ರೆಡಿಟ್ ಈ ಯೋಜನೆ ಅಡಿಯಲ್ಲಿ ಬ್ಯಾಂಕ್​ನಿಂದ ನೋಂದಾಯಿತ ಆಸ್ಪತ್ರೆಗಳು, ನರ್ಸಿಂಗ್​ ಹೋಮ್​ಗಳು, ಮೆಡಿಕಲ್ ಪ್ರಾಕ್ಟೀಷನರ್​ಗಳು, ಡಯಾಗ್ನೋಸ್ಟಿಕ್ ಸೆಂಟರ್​ಗಳು, ಲ್ಯಾಬ್​ಗಳಿಗೆ ಮತ್ತು ಯಾವುದೆಲ್ಲ ಆರೋಗ್ಯಸೇವೆ ಒದಗಿಸುತ್ತಿವೆಯೋ ಅವುಗಳ ಮೂಲಸೌಕರ್ಯಕ್ಕಾಗಿ 10 ಲಕ್ಷ ರೂಪಾಯಿಯಿಂದ 50 ಕೋಟಿಯ ತನಕ ಸಾಲ ದೊರೆಯುತ್ತದೆ. ವಿನಾಯಿತಿ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. 10 ವರ್ಷಗಳ ಅವಧಿಗೆ ನೀಡುವ ಈ ಸಾಲಕ್ಕೆ 18 ತಿಂಗಳ ತನಕ ಸಾಲ ಮರುಪಾವತಿ ವಿನಾಯಿತಿ ಇರುತ್ತದೆ. ಈ ಯೋಜನೆಯು ಮಾರ್ಚ್ 31, 2022ರ ತನಕ ಇರುತ್ತದೆ.

* ಕೆನರಾ ಜೀವನ್​ರೇಖಾ ಹೆಲ್ತ್​ಕೇರ್ ಬಿಜಿನೆಸ್ ಲೋನ್ ಈ ಯೋಜನೆ ಅಡಿಯಲ್ಲಿ ವಿನಾಯಿತಿ ಬಡ್ಡಿ ದರದಲ್ಲಿ 2 ಕೋಟಿ ರೂಪಾಯಿ ತನಕ ಸಾಲ ನೀಡಲಾಗುತ್ತದೆ. ಹೆಲ್ತ್​ಕೇರ್ ಉತ್ಪನ್ನಗಳನ್ನು ತಯಾರಿಸಿ, ನೋಂದಾಯಿತ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಅಥವಾ ಇತರ ತಯಾರಕರು ಹಾಗೂ ಪೂರೈಕೆದಾರರಿಗೆ ಸರಬರಾಜು ಮಾಡುವವರಿಗೆ ನೀಡಲಾಗುತ್ತದೆ.

ಬ್ಯಾಂಕ್​ ನೀಡಿರುವ ಮಾಹಿತಿಯಂತೆ ಈ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ. ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ (MSME) ಯಾವುದೇ ಕೊಲಾಟರಲ್ ಸೆಕ್ಯೂರಿಟಿ ಬೇಡ. ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್​ಪ್ರೈಸಸ್ (CGTMSE) ಅಡಿಯಲ್ಲಿ ಕವರ್ ಆಗುತ್ತದೆ ಮತ್ತು ಬ್ಯಾಂಕ್​ನಿಂದಲೇ ಗ್ಯಾರಂಟಿ ಪ್ರೀಮಿಯಂ ಭರಿಸಲಾಗುತ್ತದೆ. ಯಾವುದೇ ಮೂರನೇ ವ್ಯಕ್ತಿಯ ಗ್ಯಾರಂಟಿ ಅಥವಾ ಕೊಲಾಟರಲ್ ಇಲ್ಲದೆ ಹಣಕಾಸು ನೆರವು ನೀಡುವುದಕ್ಕೆ ಅಂತಲೇ ಇರುವಂಥದ್ದು CGTMSE.

ಆದರೆ, ಎಂಎಸ್​ಎಂಇ ಹೊರತಾದವಕ್ಕೆ ಕೊಲಾಟರಲ್ ಭದ್ರತೆ ಎಂದು ಕನಿಷ್ಠ ಶೇ 25ರಷ್ಟು ನೀಡಬೇಕಾಗುತ್ತದೆ. ಈ ಯೋಜನೆಯು ಮಾರ್ಚ್ 31, 2022ರ ತನಕ ಇರುತ್ತದೆ. ಇದೇ ಮೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದಿಂದ 50 ಸಾವಿರ ಕೋಟಿ ರೂಪಾಯಿಯನ್ನು ಬ್ಯಾಂಕ್​ಗಳ ಮೂಲಕ ಸಾಲ ವಿತರಿಸುವ ಯೋಜನೆಗೆ ಘೋಷಿಸಲಾಗಿದೆ. ಅದರ ಅಡಿಯಲ್ಲೇ ಈ ಮೇಲ್ಕಂಡ ಸಾಲ ಯೋಜನೆಗಳು ಬರುತ್ತವೆ.

ಇದನ್ನೂ ಓದಿ: RBI Monetary Policy Highlights: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು

(State owned Canara Bank announced 3 loan schemes for covid 19 financial need)

Published On - 12:29 pm, Sat, 29 May 21

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?