ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್

Nirmala Sitharaman stumped by questions at BSE Event: ಮುಂಬೈನ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಬಹುತೇಕ ನಿರುತ್ತರಿಯನ್ನಾಗಿಸಿದ ಎರಡು ಪ್ರಶ್ನೆಗಳನ್ನು ಸಭಿಕರೊಬ್ಬರು ಕೇಳಿದ ಘಟನೆ ನಡೆದಿದೆ. ಸರ್ಕಾರ ನನಗೆ ಸ್ಲೀಪಿಂಗ್ ಪಾರ್ಟ್ನರ್ ಆಗಿದೆ. ನಾನು ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ. ಸರ್ಕಾರ ಬ್ರೋಕರ್​ಗಿಂತ ಹೆಚ್ಚು ಸಂಪಾದಿಸುತ್ತದೆ. ನನ್ನ ಆದಾಯವೆಲ್ಲವೂ ಸರ್ಕಾರಕ್ಕೆ ಹೋಗುತ್ತದೆ. ನನ್ನಂಥವರು ಏನು ಮಾಡುವುದು ಎಂದು ಆ ವ್ಯಕ್ತಿ ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಕಕ್ಕಾವಿಕ್ಕಿಯಾಗಬೇಕಾಯಿತು.

ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್
ನಿರ್ಮಲಾ ಸೀತಾರಾಮನ್
Follow us
|

Updated on: May 16, 2024 | 2:43 PM

ಮುಂಬೈ, ಮೇ 16: ಬಿಎಸ್​ಇಯಲ್ಲಿ ಇತ್ತೀಚೆಗೆ ನಡೆದ ಹೂಡಿಕೆದಾರರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕುತೂಹಲಭರಿತ ಸಂವಾದಗಳಲ್ಲಿ ತೊಡಗಿದ್ದರು. ಈ ವೇಳೆ ಸಭಿಕರೊಬ್ಬರ ಎರಡು ಪ್ರಶ್ನೆಗೆ ಅವರು ನಿರುತ್ತರರಾಗಬೇಕಾಯಿತು. ನೀವು ನನಗೆ ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್ ಎಂದು ಹೇಳಿ ಸಭಾಂಗಣದಲ್ಲಿ ಆ ವ್ಯಕ್ತಿ ನಗೆಯ ಬುಗ್ಗೆ ಹರಿಸಿದರು. ಆ ವ್ಯಕ್ತಿ ಕೇಳಿದ ಆ ಎರಡು ಪ್ರಶ್ನೆಗಳೇನು? ಅದಕ್ಕೆ ಕೊನೆಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರ ಏನು? ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತು ವಾಟ್ಸಾಪ್​ನಲ್ಲಿ ಸಾಕಷ್ಟು ಶೇರ್ ಆಗುತ್ತಿದೆ.

ಸ್ಲೀಪಿಂಗ್ ಪಾರ್ಟ್ನರ್, ವರ್ಕಿಂಗ್ ಪಾರ್ಟ್ನರ್

ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ, ಸ್ಟ್ಯಾಂಪ್ ಡ್ಯೂಟಿ, ಎಸ್​ಟಿಟಿ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹೀಗೆ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಹೋಗುತ್ತದೆ. ಇವತ್ತು ಭಾರತ ಸರ್ಕಾರ ಬ್ರೋಕರ್​ಗಿಂತ ಹೆಚ್ಚು ಸಂಪಾದಿಸುತ್ತಿದೆ. ನಾನು ಹೂಡಿಕೆ ಮಾಡುತ್ತಿದ್ದೇನೆ. ಎಲ್ಲಾ ರೀತಿಯ ರಿಸ್ಕ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಎಲ್ಲಾ ಲಾಭವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ನನಗೆ ನೀವು (ಸರ್ಕಾರ) ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್. ನನ್ನ ಹಣ, ನನ್ನ ರಿಸ್ಕ್, ನನ್ನ ಸಿಬ್ಬಂದಿ… ಇದರ ಬಗ್ಗೆ ಏನು ಹೇಳುತ್ತೀರಿ? ಎಂದು ಅವರು ಕೇಳಿದರು.

ಮನೆ ಖರೀದಿಸಲು ಶೇ. 11 ತೆರಿಗೆ ಕಟ್ಟಬೇಕು

ಇವತ್ತು ಮುಂಬೈನಲ್ಲಿ ಯಾರಾದರು ಮನೆ ಖರೀದಿಸಲು ಹೋದರೆ ಅದು ದುಃಸ್ವಪ್ನವೇ ಆಗಿರುತ್ತದೆ. ನಾನು ಟ್ಯಾಕ್ಸ್ ಕಟ್ಟುತ್ತೇನೆ. ಇವತ್ತು ಎಲ್ಲವನ್ನೂ ಚೆಕ್​ನಲ್ಲೇ ಕೊಡಬೇಕು. ಎಲ್ಲಾ ತೆರಿಗೆ ಪಾವತಿಸಿದ ಬಳಿಕ ಉಳಿಯುವ ಹಣವು ನನ್ನ ಬ್ಯಾಂಕ್ ಬ್ಯಾಲನ್ಸ್ ಆಗಿರುತ್ತದೆ. ನಾನು ಮನೆ ಖರೀದಿಸುವಾಗ ಸ್ಟ್ಯಾಂಪ್ ಡ್ಯೂಟಿ, ಜಿಎಸ್​ಟಿ ಕಟ್ಟಬೇಕು. ಬಾಂಬೆ ನಗರದಲ್ಲಿ ಅದು ಶೇ. 11ರಷ್ಟಿದೆ. ಅಂದರೆ ಮನೆ ಖರೀದಿಸುವಾಗ ಶೇ. 11ರಷ್ಟು ಹಣ ನನ್ನ ಜೇಬಿಂದ ಹೊರಟುಹೋಗುತ್ತೆ. ಸೀಮಿತ ಸಂಪನ್ಮೂಲ ಇರುವ ಒಬ್ಬ ಸಾಧಾರಣ ವ್ಯಕ್ತಿಗೆ ನೀವು ಮನೆ ಖರೀದಿಸಲು ಹೇಗೆ ನೆರವಾಗಲ್ಲಿರಿ? ಒಬ್ಬ ಬ್ರೋಕರ್ ಇಷ್ಟೊಂದು ತೆರಿಗೆಗಳ ಮಧ್ಯೆ ಹೇಗೆ ಕೆಲಸ ಮಾಡಲು ಸಾಧ್ಯ? ಇಲ್ಲಿ ಸರ್ಕಾರ ನನಗೆ ಸ್ಲೀಪಿಂಗ್ ಪಾರ್ಟ್ನರ್ ಆಗಿದೆ. ನಾನು ಯಾವ ಆದಾಯ ಇಲ್ಲದ ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ ಎಂದು ಆ ವ್ಯಕ್ತಿ ಮತ್ತೊಂದು ಪ್ರಶ್ನೆ ಕೇಳಿದರು.

ಎನ್​ಡಿಟಿವಿ ತನ್ನ ಯೂಟ್ಯೂಬ್​ನಲ್ಲಿ ಹಾಕಿದ ವಿಡಿಯೋ

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

ನಿರ್ಮಲಾ ಸೀತಾರಾಮನ್ ಕೊಟ್ಟ ಉತ್ತರ ಇದು…

ಈ ಎರಡು ಪ್ರಶ್ನೆಗಳು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲೂ ನಗೆ ಬರಿಸಿತು. ಅಂತಿಮವಾಗಿ ಈ ಪ್ರಶ್ನೆಗಳಿಗೆ ಅವರು ಚುಟುಕಾಗಿ ಉತ್ತರ ಕೊಟ್ಟರು. ‘ಸ್ಲೀಪಿಂಗ್ ಪಾರ್ಟ್ನರ್ ಇಲ್ಲಿ ಕೂತು ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ಎನ್​ಡಿಟಿವಿಯಲ್ಲಿ ಇದರ ವಿಡಿಯೋವನ್ನು ಹಾಕಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ