AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toolkit: ಪರಿಸರ ಹೋರಾಟಗಾರ್ತಿ ದಿಶಾ ರವಿಗೆ 3 ದಿನ ನ್ಯಾಯಾಂಗ ಬಂಧನ

ಮುಕುಲ್ ಮತ್ತು ಜೇಕಬ್ ಅವರನ್ನು ಫೆಬ್ರುವರಿ 22ರಂದು ತನಿಖಾ ಏಜೆನ್ಸಿಯೆದುರು ಹಾಜಾರಾಗುವಂತೆ ಸೂಚಿಸಲಾಗಿದೆ ಎಂದು ತನಿಖಾ ಏಜೆನ್ಸಿಯು ಕೋರ್ಟಿನ ಗಮನಕ್ಕೆ ತಂದಿತು. ಆರೋಪಿಗಳ ಪರ ವಕೀಲರು, ಪೊಲೀಸರು ನ್ಯಾಯಾಲಯಕ್ಕೆ ಮಾಡಿದ ಮನವಿಯನ್ನು ವಿರೋಧಿಸಿ ದಿಶಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

Toolkit: ಪರಿಸರ ಹೋರಾಟಗಾರ್ತಿ ದಿಶಾ ರವಿಗೆ 3 ದಿನ ನ್ಯಾಯಾಂಗ ಬಂಧನ
ದಿಶಾ ರವಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Feb 19, 2021 | 11:34 PM

Share

ನವದೆಹಲಿ: ತಿಂಗಳುಗಳಿಂದ ನಡೆಯುತ್ತಿರುವ ರೈತರ ಮಷ್ಕರಕ್ಕೆ ಸಂಬಂಧಿಸಿದಂತೆ ಟೂಲ್​ಕಿಟ್​ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಅರೋಪ ಎದುರಿಸುತ್ತಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿಯ ನ್ಯಾಯಾಲಯವೊಂದು ಮೂರು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. 21 ವರ್ಷ ವಯಸ್ಸಿನ ದಿಶಾ ಅವರ 5-ದಿನಗಳ ಪೋಲಿಸ್ ಕಸ್ಟಡಿ ಶುಕ್ರವಾರದಂದು ಕೊನೆಗೊಂಡಿದ್ದರಿಂದ ದೆಹಲಿ ಪೊಲೀಸರು ಆಕೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಆಕಾಶ್ ಜೈನ್ ಅವರ ಎದುರು ಹಾಜರುಪಡಿಸಿದ್ದರು.

ಸದ್ಯಕ್ಕೆ ದಿಶಾ ಅವರ ವಿಚಾರಣೆಯ ಅವಶ್ಯಕತೆಯಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದ ಪೊಲೀಸರು ತನಿಖೆ ನಡೆಸುತ್ತಿರುವ ಏಜೆನ್ಸಿಗೆ ಅಗತ್ಯಬಿದ್ದರೆ, ಸಹ-ಆರೋಪಿಗಳಾಗಿರುವ ಶಂತನು ಮುಕುಲ್ ಮತ್ತು ನಿಕಿತಾ ಜೇಕಬ್ ವಿವಾರಣೆಗೆ ಹಾಜರಾದ ನಂತರ ದಿಶಾ ಅವರನ್ನು ಸಹ ವಿಚಾರಣೆಯ ಭಾಗವನ್ನಾಗಿ ಮಾಡಬಹುದೆಂದು ಹೇಳಿದರು.

ಕಳೆದ ವಿಚಾರಣೆಯಲ್ಲಿ ದಿಶಾ ಅವರಯ ಹಾರಿಕೆಯ ಉತ್ತರಗಳನ್ನು ನೀಡಿದರಲ್ಲದೆ, ದೋಷವನ್ನೆಲ್ಲ ಸಹ-ಆರೋಪಿಗಳ ತಲೆಗೆ ಕಟ್ಟಲು ಪ್ರಯತ್ನಿಸಿದರು ಎಂದು ಪೊಲೀಸರು ಕೋರ್ಟಿಗೆ ತಳಿಸಿದರು.

ಮುಕುಲ್ ಮತ್ತು ಜೇಕಬ್ ಅವರನ್ನು ಫೆಬ್ರುವರಿ 22ರಂದು ತನಿಖಾ ಏಜೆನ್ಸಿಯೆದುರು ಹಾಜಾರಾಗುವಂತೆ ಸೂಚಿಸಲಾಗಿದೆ ಎಂದು ತನಿಖಾ ಏಜೆನ್ಸಿಯು ಕೋರ್ಟಿನ ಗಮನಕ್ಕೆ ತಂದಿತು.

Greta and Nikita

ಗ್ರೆಟಾ ಮತ್ತು ನಿಕಿತಾ

ಆರೋಪಿಗಳ ಪರ ವಕೀಲರು, ಪೊಲೀಸರು ನ್ಯಾಯಾಲಯಕ್ಕೆ ಮಾಡಿದ ಮನವಿಯನ್ನು ವಿರೋಧಿಸಿ ದಿಶಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ತಮ್ಮ ವಾದವನ್ನು ಮುಂದುವರಿಸಿ ಹೇಳಿದ ದಿಶಾ ಪರ ವಕೀಲರು, ಪ್ರಕರಣದ ಡೈರಿಯನ್ನು ಸೂಕ್ತವಾಗಿ ಮಾಡಿಲ್ಲದಿರುವುದರಿಂದ ಪೊಲೀಸರು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಯಿದೆ ಮತ್ತು ದಿಶಾ ಅವರನ್ನು ನ್ಯಾಯಾಂಗ ಇಲ್ಲವೇ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಯಾವುದೇ ಆಧಾರವಿಲ್ಲ; ಹಾಗಾಗಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹೇಳಿದರು.

ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಸದರಿ ಅರ್ಜಿಯ ವಿಚಾರಣೆಯು ಶನಿವಾರದಂದು ನಡೆಯಲಿದೆ. ಭಾರತ ಸರ್ಕಾರದ ವಿರುದ್ಧ ಭಾರಿ ಪಿತೂರಿ ನಡೆಸಿರುವ ಆರೋಪದ ಹಿನ್ನೆಲೆ ಮತ್ತು ದಿಶಾ ಅವರ ಖಲಿಸ್ತಾನ ಚಳವಳಿಯ ಜೊತೆ ಆರೋಪಿತ ಪಾತ್ರದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಕಳೆದ ರವಿವಾರದಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯವು ಅವರನ್ನು 5-ದಿನ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಿತ್ತು.

ದೆಹಲಿ ಪೊಲೀಸ್​ನ ಸೈಬರ್ ವಿಭಾಗದ ಅಧಿಕಾರಿಗಳು ಕಳೆದ ಶನಿವಾರದಂದು ದಿಶಾ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕೋರ್ಟೊಂದರ ಎದುರು ಹಾಜರುಪಡಿಸಿ 7 ದಿನಗಳ ಕಸ್ಟಡಿಯನ್ನು ಕೇಳಿದ್ದರು.

ಫೆಬ್ರುವರಿ 3ರಂದು ದಿಶಾ ಟೂಲ್​ಕಿಟ್​ ಅನ್ನು ಎಡಿಟ್ ಮಾಡಿದ್ದರು ಮತ್ತು ಈ ಪ್ರಕರಣದಲ್ಲಿ ಹಲವಾರು ಜನ ಭಾಗಿಯಾಗಿದ್ದಾರೆ ಎಂದು ಆಕೆಯ ಕಸ್ಟಡಿಯನ್ನು ಕೇಳುವಾಗ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಯಾವುದೇ ಒಂದು ವಿಷಯವನ್ನು ವಿವವರಿಸುವುದಕ್ಕೆ ಸಿದ್ಧಪಡಿಸಿದ ದಾಖಲೆಯನ್ನು ಟೂಲ್​ಕಿಟ್​ ಎನ್ನಲಾಗುತ್ತದೆ. ಅದರಲ್ಲಿರುವ ವಿಷಯವನ್ನು ಹೇಗೆ ಎದುರಿಸುವುದು ಎನ್ನುವ ಮಾಹಿತಿ ಟೂಲ್​ಕಿಟ್​ನಲ್ಲಿರುತ್ತದೆ. ಮನವಿಗಳು, ಜಾರಿಯಲ್ಲಿರುವ ಮುಷ್ಕರಗಳ ಬಗ್ಗೆ ವಿವರಣೆ, ಮತ್ತು ಸಾಮೂಹಿಕ ಚಳಿವಳಿ ನಡೆಸುವ ಕುರಿತು ವಿವರಗಳು ಸಹ ಅದರಲ್ಲಿರುತ್ತವೆ.

Farmer's protest

ರೈತರ ಮುಷ್ಕರ

ಇದಕ್ಕೆ ಮೊದಲು, ದೆಹಲಿ ಪೊಲೀಸ್, ಸ್ವೀಡನ್ನಿನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಅವರು ಶೇರ್ ಮಾಡಿದ ಟೂಲ್​ಕಿಟ್​ ಸೃಷ್ಟಿಸದವರ ಈಮೇಲ್ ಐಡಿ, ಯೂಆರ್​ಎಲ್ ಮತ್ತು ಅವರೆಲ್ಲ ಸಂಬಂಧವಿಟ್ಟುಕೊಂಡಿರುವ ಕೆಲ ಸಾಮಾಜಿಕ ಜಾಲತಾಣಗಳ ಅಡ್ರೆಸ್ ಒದಗಿಸುವಂತೆ ಗೂಗಲ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಕೋರಿತ್ತು. ರೈತರ ಚಳಿವಳಿಯ ಬಗ್ಗೆ ಟ್ವಿಟ್ಟರ್​ನಲ್ಲಿ ಸಕ್ರಿಯರಾಗಿದ್ದವರ ಬಗ್ಗೆಯೂ ಮಾಹಿತಿಯನ್ನು ಕೇಳಲಾಗಿತ್ತು.

ದೆಹಲಿ ಪೊಲೀಸ್​ನ ಸೈಬರ್ ಸೆಲ್, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಿರುವ ಖಲಿಸ್ತಾನ್-ಪರ ಟೂಲ್​ಕಿಟ್​ ಸೃಷ್ಟಿಸಿದವರ ವಿರುದ್ಧ ಎಫ್​ಐಆರ್ ಒಂದನ್ನು ದಾಖಲಿಸಿತ್ತು.

ಇಂಡಿಯನ್ ಪೀನಲ್ ಕೋಡ್​ನ ಹಲವಾರು ಸೆಕ್ಷನ್​ಗಳ ಅನ್ವಯ ಅನಾಮಧೇಯು ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕುತಂತ್ರ, ರಾಜದ್ರೋಹ ಮತ್ತು ಇತರ ಆರೋಪಗಳನ್ನು ಮಾಡಲಾಗಿದೆ.

ಭಾರತ ಸರ್ಕಾರದ ವಿರುದ್ಧ ವೈಷಮ್ಯ, ಮತ್ತು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಪಂಗಡಗಳ ನಡುವೆ ಅಶಾಂತಿ ಹಬ್ಬಿಸಲು ಟೂಲ್​ಕಿಟ್​ ಅನ್ನು ಬಳಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.

ಇದನ್ನೂ ಓದಿToolkit Case: ದಿಶಾ ರವಿ ಪ್ರಕರಣದ ಖಾಸಗಿ ಚಾಟ್ ಸೋರಿಕೆ ಮಾಡದಂತೆ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ನೋಟೀಸ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು