
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಲಡುತ್ತದೆ. ಅದು ಅಲ್ಲಿನ ಆಹಾರ ಪದ್ಧತಿಯ ಪ್ರಭಾವವೊ, ಆ ಮಣ್ಣಿನ ಗುಣವೋ, ಇಲ್ಲ ಶಿಕ್ಷಣದ ಗುಣಮಟ್ಟವೋ ಗೊತ್ತಿಲ್ಲ. ಪರಶುರಾಮನ ಸೃಷ್ಟಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾದ ಈ ನಾಡಿಗೆ ವಿದ್ಯೆ ವರವಾಗಿ ಬಂದಿದೆ ಎಂದೇ ಹೇಳಬಹುದು. ಇತ್ತೀಚೆಗಷ್ಟೆ ಕರ್ನಾಟದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಪಿಯುಸಿ ಮಾತ್ರವಲ್ಲ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಎರಡು ಜಿಲ್ಲೆ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಪಿಯುಸಿಯಲ್ಲಿ 97.37 ಶೇಕಡ ಫಲಿತಾಂಶ ಪಡೆದ ದಕ್ಷಿಣ ಕನ್ನಡ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 95.24 ಶೇಕಡಾ ಫಲಿತಾಂಶ ಪಡೆದು ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಪ್ರತಿಬಾರಿ ಇದೇರೀತಿಯ ಫಲಿತಾಂಶಕ್ಕೆ ಕಾರಣವೇನು?. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣವನ್ನು ಯಾವರೀತಿ ಹೇಳಿಕೊಡಲಾಗುತ್ತದೆ?, ವಿವಿಧ ರಾಜ್ಯಗಳಿಂದ ಈ ಜಿಲ್ಲೆಗೆ ಕಲಿಯಲು ಅನೇಕರು ಬರುತ್ತಾರೆ, ಇದಕ್ಕೆ ಕಾರಣವೇನು?. ಮಂಗಳೂರು ಇನ್ನೋವೇಶನ್ ಹಬ್ ಅಲ್ಲದಿರಬಹುದು, ಆದರೆ ಇದು ಭಾರತದ ವಿವಿಧ ಸ್ಥಳಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಯೋಗ್ಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತಿರುವ ನಗರವಾಗಿದೆ. ವಿಶೇಷ ಎಂದರೆ, ಇಲ್ಲಿನ ಹೆಚ್ಚಿನ ಶಿಕ್ಷಣ...
Published On - 4:10 pm, Tue, 16 April 24