AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಹೋ ನಂತರ ಡೆವಿಲ್ ಆಗಿ ಅಬ್ಬರಿಸುತ್ತಾರಾ ಪ್ರಭಾಸ್?

ಟಾಲಿವುಡ್ ನಟ ಪ್ರಭಾಸ್ ಬಾಹುಬಲಿ ನಂತರ ಸಾಹೋ ಆಗಿ ಅಬ್ಬರಿಸಿ ಈಗ ಜಾನ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಅವತಾರ ತಾಳಿ ಕಮಾಲ್ ಮಾಡ್ತಿರೋ ಪ್ರಭಾಸ್ ಸದ್ಯ ಡೆವಿಲ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಹಾರರ್ ಸಿನಿಮಾಗೆ ಓಕೆ ಅಂತಾರಾ ‘ಡಾಲಿಂಗ್’..? ಅಂದಹಾಗೆ ಪ್ರಭಾಸ್ ಡೆವಿಲ್ ಆಗಿ ಸಿನಿ ರಸಿಕರಿಗೆ ಕಿಕ್ ಕೊಡ್ತಾರಂತೆ. ಡೆವಿಲ್ ಆಗೋಕೆ ಓಕೆ ಅಂತಾರೆ ಅನ್ನೋ ಸುದ್ದಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಡೆವಿಲ್ ಅನ್ನೋದು […]

ಸಾಹೋ ನಂತರ ಡೆವಿಲ್ ಆಗಿ ಅಬ್ಬರಿಸುತ್ತಾರಾ ಪ್ರಭಾಸ್?
ಸಾಧು ಶ್ರೀನಾಥ್​
| Updated By: Skanda|

Updated on:Nov 24, 2020 | 7:54 AM

Share

ಟಾಲಿವುಡ್ ನಟ ಪ್ರಭಾಸ್ ಬಾಹುಬಲಿ ನಂತರ ಸಾಹೋ ಆಗಿ ಅಬ್ಬರಿಸಿ ಈಗ ಜಾನ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಅವತಾರ ತಾಳಿ ಕಮಾಲ್ ಮಾಡ್ತಿರೋ ಪ್ರಭಾಸ್ ಸದ್ಯ ಡೆವಿಲ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ಹಾರರ್ ಸಿನಿಮಾಗೆ ಓಕೆ ಅಂತಾರಾ ‘ಡಾಲಿಂಗ್’..? ಅಂದಹಾಗೆ ಪ್ರಭಾಸ್ ಡೆವಿಲ್ ಆಗಿ ಸಿನಿ ರಸಿಕರಿಗೆ ಕಿಕ್ ಕೊಡ್ತಾರಂತೆ. ಡೆವಿಲ್ ಆಗೋಕೆ ಓಕೆ ಅಂತಾರೆ ಅನ್ನೋ ಸುದ್ದಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಡೆವಿಲ್ ಅನ್ನೋದು ಸದ್ಯ ಬಾಲಿವುಡ್ ನಟ ರಣಬೀರ್ ಕಪೂರ್​ಗಾಗಿ ತಯಾರಾಗಿದ್ದ ಕಥೆ. ರಣಬೀರ್ ಕಪೂರ್​ಗೆ ಕಥೆ ಹೇಳಿ ನಟಿಸೋದು ಕೂಡ ಕನ್ಫರ್ಮ್ ಆಗಿತ್ತು. ಅರ್ಜುನ್ ರೆಡ್ಡಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಸಿನಿಮಾಗೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳೋಕೆ ಕೂಡ ರೆಡಿಯಾಗಿದ್ರು. ಆದ್ರೀಗ ಕಾರಣಾಂತರದಿಂದ ರಣಬೀರ್ ಕಪೂರ್ ಈ ಸಿನಿಮಾದಲ್ಲಿ ನಟಿಸ್ತಿಲ್ಲ ಅಂತ ಹೇಳಲಾಗ್ತಿದೆ.

ಹೀಗಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಕತೆಯನ್ನ ಪ್ರಭಾಸ್​​ ಗೆ ಹೇಳಿದ್ದಾರಂತೆ. ಇನ್ನು ಈ ಕಥೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದ್ದು ಪ್ರಭಾಸ್ ಕೂಡ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಎಲ್ಲಾ ಅಂದ್ಕೊಡಂತೆ ಆದ್ರೆ, ಜಾನ್ ನಂತರ ಪ್ರಭಾಸ್ ಡೆವಿಲ್ ಅವತಾರ ತಾಳಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಲವಾಗಿ ಹರಿದಾಡ್ತಿದೆ.

ಒಟ್ಟಿನಲ್ಲಿ ಟೈಟಲ್​ನಲ್ಲಿಯೇ ನೆಗೆಟೀವ್ ಶೇಡ್ ಇದ್ದು, ಡೆವಿಲ್ ಹಾರರ್ ಕಥೆ ಎನ್ನಲಾಗಿದೆ. ಆದ್ರೆ, ಡೆವಿಲ್ ಆಗಿ ಪ್ರಭಾಸ್ ಅಬ್ಬರಿಸುತ್ತಾರಾ..? ಇಲ್ವಾ ಅನ್ನೋದಕ್ಕೆ ಇನ್ನೂ ಅಧಿಕೃತ ಮುದ್ರೆ ಬೀಳಬೇಕಿದೆ.

Published On - 9:26 am, Thu, 26 December 19

ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ