ನಾಗಮಂಡಲ, ಸೂರ್ಯವಂಶ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯವಾದ ನಟಿ ವಿಜಯಲಕ್ಷ್ಮಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಕೋರಿದ್ದರು. ಈಗ ಅವರು ಫೇಸ್ಬುಕ್ ಲೈವ್ನಲ್ಲಿ ಮತ್ತೊಂದಷ್ಟು ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಜಗ್ಗೇಶ್ ಅವರು ನಾನು ಚಪ್ಪಲ್ಲಿಯಲ್ಲಿ ಹೊಡೆದೆ ಎಂಬುದನ್ನು ರಾಯರ ಮೇಲೆ ಆಣೆ ಇಟ್ಟು ಹೇಳಲಿ. ಅವರು ಹಾಗೆ ಹೇಳುವುದಿಲ್ಲ. ಏಕೆಂದರೆ ಅದು ಸುಳ್ಳು ಎಂಬುದು ಅವರಿಗೂ ಗೊತ್ತಿದೆ ಎಂದಿದ್ದಾರೆ ವಿಜಯಲಕ್ಷ್ಮಿ.
ಇದನ್ನೂ ಓದಿ: ‘ನೀವು ಇಲ್ಲದೆ ಇದ್ದರೆ ನಾನು ಅನಾಥೆ’; ಜನರಿಗೆ, ವಿನೋದ್ ರಾಜ್ಗೆ ಧನ್ಯವಾದ ಹೇಳಿದ ನಟಿ ವಿಜಯಲಕ್ಷ್ಮೀ