ಕೊವಿಡ್ನಿಂದ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಚಿತ್ರರಂಗ ಕೂಡ ಕೊವಿಡ್ ಎರಡನೇ ಅಲೆಗೆ ತತ್ತರಿಸಿದೆ. ಶೂಟಿಂಗ್ ನಿಂತಿದ್ದ ಕಾರಣ ಸಾಕಷ್ಟು ಜನರುಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿದೆ. ಈಗ ಬೆಂಗಾಲಿ ಕಿರುತೆರೆ ನಟ ಅರಿಂದಮ್ ಪ್ರಾಮಾಣಿಕ್ ಮೀನು ಮಾರಾಟಕ್ಕೆ ಇಳಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ.
‘ಸುವರ್ಣಲತಾ’ ಸೇರಿ ಕೆಲ ಧಾರಾವಾಹಿಗಳಲ್ಲಿ ಅರಿಂದಮ್ ಅಭಿನಯಿಸಿದ್ದಾರೆ. ಆದರೆ, ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಅವರು ಮೀನು ಮಾರಾಟ ಆರಂಭಿಸಿದ್ದಾರೆ. ಅದರಿಂದ ಬಂದ ಹಣದಿಂದ ಬದುಕು ನಡೆಸುತ್ತಿದ್ದಾರೆ. ಕೊವಿಡ್ ಮೊದಲನೇ ಅಲೆ ಕಾಣಿಸಿಕೊಂಡಾಗಲೇ ಅರಿಂದಮ್ ಕೆಲಸ ಕಳೆದುಕೊಂಡಿದ್ದರು. ನಂತರ ಅವರಿಗೆ ಯಾವುದೇ ಧಾರಾವಾಹಿ ಆಫರ್ ಸಿಕ್ಕಿಲ್ಲ. ಹೀಗಾಗಿ ನಟನೆ ಬಿಟ್ಟು ತಮ್ಮ ಊರಿಗೆ ಹೋಗುವ ನಿರ್ಧಾರಕ್ಕೆ ಬಂದಿದ್ದರು. ನಂತರ ಹಾಗೆಯೇ ಮಾಡಿದ್ದಾರೆ. ಈಗ ಅವರು ನಟನೆಯಿಂದ ಸಂಪೂರ್ಣ ದೂರವಾಗಿದ್ದು, ಮೀನು ಮಾರಾಟ ವೃತ್ತಿ ಆಯ್ದುಕೊಂಡಿದ್ದಾರೆ.
ಬಣ್ಣದ ಲೋಕದಲ್ಲಿ ಮಿಂಚಬೇಕು ಎನ್ನುವ ಕಾರಣಕ್ಕೆ ಅರಿಂದಮ್ ಕೋಲ್ಕತ್ತಾಗೆ ಬಂದಿದ್ದರು. ‘ರಾಶಿ’, ‘ಅಗ್ನಿ ಪರೀಕ್ಷಾ’ ಟಿವಿ ಶೋಗಳಲ್ಲಿ ಅವರು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಅರಿಂದಮ್ ‘ಸುವರ್ಣಲತಾ’ ಧಾರಾವಾಹಿಯಲ್ಲಿ ನಟಿಸಿದರು. ಇತ್ತೀಚೆಗೆ ಅವರಿಗೆ ಯಾವುದೇ ಆಫರ್ ಬಂದಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲೂ ಅವರಿಗೆ ಯಾರೂ ಅವಕಾಶ ನೀಡಿಲ್ಲ. ಈ ಕಾರಣಕ್ಕೆ ಅರಿಂದಮ್ ಈ ನಿರ್ಧಾರಕ್ಕೆ ಬರೋದು ಅನಿವಾರ್ಯವಾಗಿದೆ.
ಅರಿಂದಮ್ ಮೀನು ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಶಾಕ್ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಶ್ರೀಕಾಂತ್ ಮನ್ನಾ ಎಂಬುವವರು ಕೂಡ ಇದೇ ಮಾರ್ಗ ಅನುಸರಿಸಿದ್ದರು. ಚಿತ್ರರಂಗದಲ್ಲಿ ಅವಕಾಶ ಸಿಗದೇ ಮೀನು ಮಾರಾಟಕ್ಕೆ ಮುಂದಾಗಿದ್ದರು.
ಕೊವಿಡ್ ಎರಡನೇ ಅಲೆಸಾಕಷ್ಟು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅನೇಕ ಹಿರಿಯ ನಟರು, ಅನಾರೋಗ್ಯಕ್ಕೆ ತುತ್ತಾಗಿ, ಚಿಕಿತ್ಸೆಗೂ ಹಣವಿಲ್ಲದೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅನೇಕರು ಬಣ್ಣದ ಲೋಕ ತೊರೆದು ಬೇರೆ ವೃತ್ತಿ ಆಯ್ದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅನುಷ್ಕಾ ಶರ್ಮಾ ಚಿತ್ರರಂಗ ತೊರೆಯುತ್ತಾರಾ? ಅವರು ಒಪ್ಪಿಕೊಂಡ ಸಿನಿಮಾ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್ಡೇಟ್
ಜುಲಾನ್ ಗೋಸ್ವಾಮಿ ಬಯೋಪಿಕ್ನಲ್ಲಿ ಅನುಷ್ಕಾ ಶರ್ಮಾ; ಸಿನಿಮಾದ ಚಿತ್ರೀಕರಣ ಯಾವಾಗಿನಿಂದ ಆರಂಭ ಗೊತ್ತಾ?