AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Fever: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ

ಎನ್ಸೆಫಾಲಿಟಿಸ್ ಒಮ್ಮೆ ವೈರಸ್ ರಕ್ತದೊಳಗೆ ಪ್ರವೇಶಿಸುತ್ತದ್ದಂತೆ ಅದು ಮೆದುಳಿನ ಅಂಗಾಂಶಗಳಿಗೆ ಹಾನಿಗೊಳಿಸುತ್ತಾ ಹೋಗುತ್ತದೆ. ಈ ರೋಗದ ಬ್ಯಾಕ್ಟೀರಿಯಾ ಮೊದಲು ಮೂಗು ಮತ್ತು ಗಂಟಲಿಗೆ ಹೋಗಿ, ಅಲ್ಲಿಂದ ಮೆದುಳಿನ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. ಬ್ಯಾಕ್ಟೀರಿಯಾ ಮೆದುಳನ್ನು ತಲುಪಿತೆಂದರೆ ಬೆನ್ನುನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.ಇದಾದ 2ರಿಂದ 3 ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವೂ ಸಂಭವಿಸಬಹುದು.

Brain Fever: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ
Brain Infection
Follow us
ಅಕ್ಷತಾ ವರ್ಕಾಡಿ
| Updated By: Digi Tech Desk

Updated on: Nov 07, 2023 | 5:26 PM

ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್ ಎರಡೂ ಮೆದುಳಿನ ಸೋಂಕುಗಳು, ಆದರೆ ಅವು ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ಮೆನಿಂಜೈಟಿಸ್ ಎನ್ನುವುದು ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳಲ್ಲಿನ ಸೋಂಕು. ಎನ್ಸೆಫಾಲಿಟಿಸ್ ಮೆದುಳಿನ ಅಂಗಾಂಶಗಳ ಉರಿಯೂತವಾಗಿದೆ. ಎರಡೂ ಪರಿಸ್ಥಿತಿಗಳು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದು. ಈ  ಎರಡೂ ಮೆದುಳಿನ ಸೋಂಕುಗಳು, ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದರಿಂದ ರೋಗನಿರ್ಣಯ ಪರೀಕ್ಷೆಗಳು ಒಂದೇ ಆಗಿರುತ್ತದೆ. ಡೆಂಗ್ಯೂ ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು, ಇದು 3 ತಿಂಗಳ ವಯಸ್ಸಿನ ಮಕ್ಕಳಿಂದ 60 ವರ್ಷ ವಯಸ್ಸಿನ ಎಲ್ಲಾ ವಯಸ್ಸಿನ ಜನರಲ್ಲಿ ನರವೈಜ್ಞಾನಿಕ ತೊಡಕುಗಳಿಗೆ ಕಾರಣವಾಗುತ್ತದೆ.

ಎನ್ಸೆಫಾಲಿಟಿಸ್ ಒಮ್ಮೆ ವೈರಸ್ ರಕ್ತದೊಳಗೆ ಪ್ರವೇಶಿಸುತ್ತದ್ದಂತೆ ಅದು ಮೆದುಳಿನ ಅಂಗಾಂಶಗಳಿಗೆ ಹಾನಿಗೊಳಿಸುತ್ತಾ ಹೋಗುತ್ತದೆ. ಈ ರೋಗದ ಬ್ಯಾಕ್ಟೀರಿಯಾ ಮೊದಲು ಮೂಗು ಮತ್ತು ಗಂಟಲಿಗೆ ಹೋಗಿ, ಅಲ್ಲಿಂದ ಮೆದುಳಿನ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. 4 ರಿಂದ 5 ದಿನಗಳ ನಂತರ ಈ ರೋಗದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ.ಮೊದಲು ಗಂಟಲು ಕೆರೆತವಾಗುತ್ತದೆ.ಅನಂತರ ಮೂಗಿನಲ್ಲಿ ನೀರು ಸುರಿಯುತ್ತದೆ.ವಾಂತಿ, ಅನಂತರ ಜ್ವರ ಬರುತ್ತದೆ.ಬ್ಯಾಕ್ಟೀರಿಯಾ ಮಿದುಳನ್ನು ತಲುಪಿತೆಂದರೆ ಬೆನ್ನುನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.ಇದಾದ 2ರಿಂದ 3 ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವೂ ಸಂಭವಿಸಬಹುದು.

ಎನ್ಸೆಫಾಲಿಟಿಸ್ನ ಲಕ್ಷಣಗಳು:

  • ಹಠಾತ್ ಜ್ವರ
  • ತಲೆನೋವು
  • ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು
  • ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು
  • ವಾಂತಿ
  • ಕುತ್ತಿಗೆ ಮತ್ತು ಬೆನ್ನು ಬಿಗಿತ
  • ಗೊಂದಲ,ಕಿರಿಕಿರಿ
  • ಅರೆನಿದ್ರಾವಸ್ಥೆ
  • ದುರ್ಬಲ ಸ್ನಾಯುಗಳು.

ಮೆನಿಂಜೈಟಿಸ್‌ನ ಲಕ್ಷಣಗಳು:

  • ಆಗಾಗ್ಗೆ ಹೆಚ್ಚಿನ ಜ್ವರ
  • ತೀವ್ರ ಮತ್ತು ನಿರಂತರ ತಲೆನೋವು
  • ಕುತ್ತಿಗೆ ನೋವು
  • ವಾಕರಿಕೆ ಮತ್ತು ವಾಂತಿ
  • ಗೊಂದಲ, ನಿದ್ರಾಹೀನತೆ
  • ಮೂತ್ರಕೋಶ ಮತ್ತು ಕರುಳಿನ ತೊಂದರೆಗಳು.

ಇದನ್ನೂ ಓದಿ:  ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್​ ವೈದ್ಯರು

ರೋಗನಿರ್ಣಯ

ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್ ಎರಡೂ ಮೆದುಳಿನ ಸೋಂಕುಗಳು, ಮೆದುಳಿನ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವುದರಿಂದ ರೋಗನಿರ್ಣಯ ಪರೀಕ್ಷೆಗಳು ಒಂದೇ ಆಗಿರುತ್ತದೆ.

  • ನರವೈಜ್ಞಾನಿಕ ಪರೀಕ್ಷೆ
  • ಸೋಂಕಿನ ಚಿಹ್ನೆಗಳನ್ನು ಪರೀಕ್ಷಿಸಲು ರಕ್ತ ಅಥವಾ ಮೂತ್ರ ಪರೀಕ್ಷೆಗಳು
  • CT ಸ್ಕ್ಯಾನ್ ಅಥವಾ MRI ಸ್ಕ್ಯಾನ್
  • ಸೊಂಟದ ಪಂಕ್ಚರ್ ( ಸ್ಪೈನಲ್ ಟ್ಯಾಪ್ ) ಸೆರೆಬ್ರೊಸ್ಪೈನಲ್ ದ್ರವವನ್ನು ಪರೀಕ್ಷಿಸಲು

ಚಿಕಿತ್ಸೆ:

  • ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್ ಎರಡಕ್ಕೂ ತಕ್ಷಣದ ಗಮನ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ.
  • ಮೆದುಳಿನ ಮೇಲೆ ಪರಿಣಾಮ ಬೀರುವ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಆಂಟಿವೈರಲ್ ಔಷಧಿಗಳು
  • ಬ್ಯಾಕ್ಟೀರಿಯಾದ ಸೋಂಕನ್ನು ಪರಿಹರಿಸಲು ಪ್ರತಿಜೀವಕಗಳು
  • ಸ್ಟೀರಾಯ್ಡ್ಗಳು, ಇಮ್ಯುನೊಥೆರಪಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ