AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಕೀಲು, ಭುಜದ ನೋವು ಹೆಚ್ಚಾಗಲು ಕಾರಣವೇನು? ಇಲ್ಲಿದೆ ಮಾಹಿತಿ

ನೀವು ಕುಳಿತುಕೊಳ್ಳುವ ಶೈಲಿಯಿಂದ ನಿಮ್ಮ ಭುಜದ ಹಾಗೂ ಕೀಲುಗಳಲ್ಲಿ  ಅತಿಯಾಗಿ ನೋವು ಕಾಣಿಸಕೊಳ್ಳುತ್ತದೆ. ಒದೇ ಕಡೆ ಹೆಚ್ಚು ಹೊತ್ತು ಭುಜವನ್ನು ಅಲುಗಾಡಿಸದೆ ಕುಳಿತರೆ ಹಿಡಿದುಕೊಂಡಂತಾಗಿ ನೋವು ಉಲ್ಬಣವಾಗುತ್ತದೆ.

ಚಳಿಗಾಲದಲ್ಲಿ ಕೀಲು, ಭುಜದ ನೋವು ಹೆಚ್ಚಾಗಲು ಕಾರಣವೇನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 28, 2021 | 2:16 PM

Share

ಚಳಿಗಾಲದಲ್ಲಿ ದೇಹದ ವಿವಿಧ  ಭಾಗಗಳಲ್ಲಿ ಅತಿಯಾದ ನೋವು ಕಾಣಿಸಕೊಳ್ಳುವುದು ಹೆಚ್ಚು. ಅದರಲ್ಲೂ  ಸ್ನಾಯುಗಳು, ಕೀಲುಗಳಲ್ಲಿ ಹಾಗೂ ಭುಜದ ನೋವು ನಿಮಗೆ ಹಿಂಸೆ ನೀಡುತ್ತವೆ. ಯಾವ ಕೆಲಸಕ್ಕೆ ಹೋದರೂ ಅಸಾಧ್ಯ ನೋವನ್ನು ಸಹಿಸಲಾಗಿದೆ ಕೆಲಸವನ್ನು ಅರ್ಧಕ್ಕೆ ಬಿಡುವ ಸಂದರ್ಭ ಬರಬಹುದು. ಚಳಿಗಾಲದಲ್ಲಿ  ಬೆಳಗ್ಗಿನ ಮೈಕೊರೆಯುವ ಚಳಿ ನಿಮ್ಮನ್ನು ಇನ್ನಷ್ಟು ಜಡರನ್ನಾಗಿ ಮಾಡುತ್ತದೆ.ಆಗ ನೀವು ಮನೆಯಿಂದ ಹೊರಬರದೆ ಕುಳಿತಲ್ಲೇ ಕುಳಿತರೆ ನಿಮ್ಮ ಸ್ನಾಯುಗಳು ಹಿಡಿದುಕೊಳ್ಳುತ್ತವೆ. ಆಗ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ.

ಚಳಿಗಾಲದಲ್ಲಿ ಕಾಡುವ ಈ ರೀತಿ ನೋವು ಹೆಚ್ಚಾಗಲು ಕಾರಣವೇನು? ನೀವು ಕುಳಿತುಕೊಳ್ಳುವ ಶೈಲಿಯಿಂದ ನಿಮ್ಮ ಭುಜದ ಹಾಗೂ ಕೀಲುಗಳಲ್ಲಿ  ಅತಿಯಾಗಿ ನೋವು ಕಾಣಿಸಕೊಳ್ಳುತ್ತದೆ. ಒದೇ ಕಡೆ ಹೆಚ್ಚು ಹೊತ್ತು ಭುಜವನ್ನು ಅಲುಗಾಡಿಸದೆ ಕುಳಿತರೆ ಹಿಡಿದುಕೊಂಡಂತಾಗಿ ನೋವು ಉಲ್ಬಣವಾಗುತ್ತದೆ. ವಾತಾವರಣದಲ್ಲಿರುವ ಚಳಿಗೆ ದೇಹವನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದಲೂ ಈ ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಕೀಲುಗಳಲ್ಲಿ ನೋವು ಕಾಣಸಿಕೊಳ್ಳಲು ಇನ್ನೊಂದು ಮುಖ್ಯ  ಕಾರಣವೆಂದರೆ ಜಡವಾದ ದೇಹಕ್ಕೆ ಸರಿಯಾದ ವ್ಯಾಯಾಮ ಮಾಡದೇ ಇರುವುದು. ನೀವು ವ್ಯಾಯಾಮ ಮಾಡದೇ ಇರಲು ನಿಮ್ಮ ಮನಸ್ಸೂ ಕೂಡ ಕಾರಣವಾಗುತ್ತದೆ. ಹೀಗಾಗಿ, ಎಷ್ಟೇ ಚಳಿ ಇದ್ದರೂ ಮನೆಯಿಂದ ಹೊರಹೋಗಲು ಸಾಧ್ಯವಾಗದೆ ವೇಳೆ ಮನೆಯಲ್ಲೇ  ಏರೋಬಿಕ್ಸ್​ ವ್ಯಾಯಾಮವನ್ನಾದರೂ ಮಾಡಿ. ಇದು ನಿಮ್ಮ ದೇಹವನ್ನು ಬಿಸಿಗೊಳಿಸಿ ಚಳಿಯನ್ನೂ ನಿವಾರಿಸುತ್ತದೆ. ಇದರಿಂದ ನಿಮ್ಮ ಕೀಲು ಹಾಗೂ ಭುಜದ ಮೇಲಿನ ನೋವು ನಿವಾರಣೆಯಾಗುತ್ತದೆ.

ಚಳಿಗಾಲದಲ್ಲಿ ಕಾಡುವ ನೋವಿಗೆ ಪರಿಹಾರವೇನು? ಚಳಿಗಾಲದಲ್ಲಿ ಕಾಡುವ ಕೀಲು ನೋವು, ಭುಜದ ನೋವಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿದೆ ಸರಳ ಪರಿಹಾರ

ತಂಪಾದ ಸ್ಥಳ ಅಥವಾ ಎಸಿ ಇರುವ ಕಡೆ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ. ಚಳಿಗಾಲದಲ್ಲಿ ಕಚೇರಿಗಳಲ್ಲಿ ಆದಷ್ಟು ಎಸಿಯಿಂದ ದೂರವಿರಿ. ಮನೆಯೊಳಗೆ ಇರುವಾಗಲೂ ಆದಷ್ಟು ಬೆಚ್ಚಗಿರಿ. ಕಾಲುಗಳಿಗೆ ಸಾಕ್ಸ್​, ತಲೆಗೆ ಟೋಪಿಯನ್ನು ಧರಿಸಿ. ಭುಜ ಹಾಗೂ ಕೀಲುಗಳ ನೋವನ್ನು ನಿವಾರಿಸಲು ಬಿಸಿ ನೀರಿನ ಶಾಖ ನೀಡಿ. ಇದು ನಿಮ್ಮ ದೇಹವನ್ನೂ ಬೆಚ್ಚಗಾಗಿಸುತ್ತದೆ. ದೈಹಿಕ ಹಾಗೂ ಮಾನಿಸಿಕವಾಗಿ ವಿಶ್ರಾಂತಿ ಪಡೆಯುವುದನ್ನು ಅಭ್ಯಸಿಸಿಕೊಳ್ಳಿ. ಕೆಲಸದ ನಡುವೆ ಭುಜಕ್ಕ ಒಂದೈದು ನಿಮಿಷವಾದರೂ ಬ್ರೇಕ್​​ ನೀಡಿ ರಿಲಾಕ್ಸ್​ ಆಗಿ. ನೀವು ಕುಳಿತುಕೊಳ್ಳುವ ಭಂಗಿಯನ್ನು ಸರಿಪಡಿಸಿಕೊಳ್ಳಿ, ಮುದುಡಿ ಅಥವಾ ಸುರುಳಿಯಾಗಿ ಕುಳಿತುಕೊಳ್ಳುವುದನ್ನು ತಪ್ಪಸಿ. ಈಜುವ ಅಭ್ಯಾಸವಿದ್ದರೆ ತಪ್ಪದೇ ಹೋಗಿ. ಅದಿಲ್ಲದಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಅಥವಾ ಸ್ಪಾಗೆ ತೆರಳಿ ಮಸಾಜ್​ ಮಾಡಿಸಿಕೊಳ್ಳಿ. ಮನೆಯಿಂದ ಹೊರಹೋಗುವಾಗ ಬೆಚ್ಚನೆಯ ಉಡುವು ಧರಿಸಿ. ಕಿವಿಗೆ ಗಾಳಿ ಸೋಕದಂತೆ ಜಾಗೃತೆ ವಹಿಸಿ. ಖಾಲಿ ಕುಳಿತ ವೇಳೆ ಸಂಗೀತ ಆಲಿಸಿ ಅಥವಾ ನೆಚ್ಚಿನ ಹವ್ಯಾಸದಲ್ಲಿ ತೊಡಗಿಗೊಳ್ಳಿ ಇದರಿಂದ ಮನಸ್ಸು ನೋವಿನತ್ತ ಗಮನ ನೀಡದೆ ನೀವು ರಿಲಾಕ್ಸ್​ ಆಗಬಹದು.

ಇದನ್ನೂ ಓದಿ:

Immunity Power: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ರೋಗ ನಿರೋಧಕ ಶಕ್ತಿ ಕುಂದಿದೆ ಎಂದರ್ಥ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು