Expiry Date ದಾಟಿದ ಆಹಾರ ಪದಾರ್ಥ ತಿನ್ನಬಹುದಾ? ಸುರಕ್ಷಿತವಾ? ಬಿಸಾಡಬೇಕಾ? ತಜ್ಞರು ಹೇಳುವುದೇನು?

Expiry date ಗಳು ಉಪಯುಕ್ತ ಮಾರ್ಗಸೂಚಿಗಳಾಗಿವೆ. ಆದರೆ ಆಹಾರ ಪದಾರ್ಥವನ್ನು ತಿನ್ನಲು ಸುರಕ್ಷಿತವಾಗಿದೆಯೇ ಎಂಬುದರ ಕುರಿತು ಇದೇ ಅಂತಿಮ ತೀರ್ಮಾನವಾಗಬಾರದು. ವಿಭಿನ್ನ ಲೇಬಲ್‌ಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ನಿಮ್ಮ ಇಂದ್ರಿಯಗಳನ್ನು ಸಶಕ್ತವಾಗಿ ಬಳಸುವ ಮೂಲಕ, ಯಾವುದನ್ನು ಬಳಸಬೇಕು ಮತ್ತು ಯಾವುದನ್ನು ಬಿಸಾಡಬೇಕು ಎಂಬುದರ ಕುರಿತು ನೀವು ಚುರುಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಲ್ಲಿ ಆಹಾರವನ್ನು ಬಿಸಾಡಬಾರದು ಎನ್ನುವುದು ಮುಖ್ಯವಾಗಿದ್ದರೂ ಅಂತಿಮವಾಗಿ ನಿಮ್ಮ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂಬುದನ್ನು ಮನಗಾಣಿ.

Expiry Date ದಾಟಿದ ಆಹಾರ ಪದಾರ್ಥ ತಿನ್ನಬಹುದಾ? ಸುರಕ್ಷಿತವಾ? ಬಿಸಾಡಬೇಕಾ? ತಜ್ಞರು ಹೇಳುವುದೇನು?
ಅವಧಿ ಮೀರಿದ ಆಹಾರ ಪದಾರ್ಥವನ್ನು ತಿನ್ನಬಹುದಾ, ಬಿಸಾಡಬೇಕಾ?
Follow us
|

Updated on:Sep 12, 2024 | 4:38 PM

Expiry Date ಮೀರಿದ ಆಹಾರ ಪದಾರ್ಥ ತಿನ್ನಬಹುದಾ? ಅದು ಸುರಕ್ಷಿತವಾ? ತಜ್ಞರು ಹೇಳುವುದೇನು? ಎಂದು ಪರಿಮಿತಿಗಳನ್ನು ಕೆದಕಿ ನೋಡಿದಾಗ… ಬಳಕೆ ಯೋಗ್ಯ ಅವಧಿ ಮುಕ್ತಾಯವಾದ ಆಹಾರ ಉತ್ಪನ್ನವನ್ನು ನೋಡಿದಾಗ ನೀವು ಒಮ್ಮೆಗೆ ಎಚ್ಚರಗೊಳ್ಳುತ್ತೀರಿ. ಅಯ್ಯೋ ಅದನ್ನು ತಿನ್ನಬಹುದಾ ಬೇಡಾವಾ? ಎಂದು ಅಂದತಹ ಸಂದರ್ಭದಲ್ಲಿ ತಜ್ಞರು ಸೂಚಿಸುವ ಈ ಪರಿಮಿತಿಗಳು ಮತ್ತು ವಿನಾಯಿತಿಗಳನ್ನು ಗಮನಿಸಿ.

ನೀವು ಡಿಪಾರ್ಟಮೆಂಟಲ್ ಸ್ಟೋರ್‌ನಲ್ಲಿರುವಾಗ, ಆಹಾರ ಪದಾರ್ಥಗಳಿಗಾಗಿ ಕಣ್ಣು ಹಾಯಿಸುವಾಗ ಖರೀದಿ ಕುರಿತಾದ ಕೆಲವು ವಿಷಯಗಳು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ. ನೀವು ಪೌಷ್ಠಿಕಾಂಶದ ಬಗ್ಗೆ ಜಾಗರೂಕರಾಗಿದ್ದರೆ, ಪದಾರ್ಥಗಳು, ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕಾಂಶದ ವಿವರಗಳನ್ನು ಪರಿಶೀಲಿಸಲು ಉತ್ಪನ್ನವನ್ನು ಕಣ್ಣಂಚಿನಲ್ಲಿ ತಿರುಗಿಸಿ, ಅಳೆಯಬಹುದು. ಆದರೆ ನೀವು ನಿರ್ಲರ್ಕ್ಷಿಸಲು ಆಗದ ಒಂದು ಅಂಶವಿದೆ. ಅದನ್ನು ಆಹಾರ ಉತ್ಪನ್ನ ಖರೀದಿಸುವ ಮೊದಲು ಎಲ್ಲರೂ ಕಡ್ಡಾಯವಾಗಿ ಪರಿಶೀಲಿಸುತ್ತಾರೆ – ಅದೇ ಅವಧಿ ಮುಕ್ತಾಯ ದಿನಾಂಕ. ಅಂದರೆ ಉತ್ಪನ್ನದ Expiry Date!

ಮಾರಾಟಗಾರರು ಉತ್ಪನ್ನವೊಂದು ಅದರ Expiry Date ಅವಧಿ ಸಮೀಪಿಸುತ್ತಿದ್ದರೂ ಅದನ್ನು ಮತ್ತೆ ಶೆಲ್ಫ್‌ನಲ್ಲಿ ಇರಿಸುವ ಸಾಧ್ಯತೆಗಳಿವೆ. ಹಾಗಾದರೆ ಈ Expiry Date ಅವಧಿಯನ್ನು ಪರಿಗಣಿಸಿದಾಗ ವಾಸ್ತವದಲ್ಲಿ ಆ ಆಹಾರವನ್ನು ಸೇವಿಸಲು ಸುರಕ್ಷಿತವಲ್ಲ ಎಂದು ಅರ್ಥವೇ ಅಥವಾ ಇದು ಕೇವಲ ಮುನ್ನೆಚ್ಚರಿಕೆಯೇ? ಎಂಬುದು ಇಲ್ಲಿ ಬಿಲಿಯನ್ ಡಾಲರ್​ ಪ್ರಶ್ನೆಯಾಗುತ್ತದೆ.

Expiry Date ನಂತರ ಏನಾಗುತ್ತದೆ? ಈ Expiry Date ಸಮ್ಮುಖದಲ್ಲಿ ವಿಚಾರಣೆ ಮಾಡಿದಾಗ ಆಹಾರ ಉತ್ಪನ್ನವು ಅದರ ಮುಕ್ತಾಯ ದಿನಾಂಕವನ್ನು ದಾಟಿದಾಗ ನಿಜವಾಗಿಯೂ ಏನಾಗುತ್ತದೆ? ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಅದು ತಕ್ಷಣವೇ ಹಾನಿಕಾರಕವಾಗಿ ರೂಪಾಂತರಗೊಳ್ಳುವುದಿಲ್ಲ. ಅನೇಕ non-perishable ವಸ್ತುಗಳಿಗೆ, Expiry Date ಎಂಬುದು ಸುರಕ್ಷತೆಯ ಮಾನದಂಡಕ್ಕಿಂತ ಅದರ ಗುಣಮಟ್ಟದ ವಿಷಯ ಪ್ರಧಾನವಾಗುತ್ತದೆ. ಗರಿಗರಿಯಾದ ಉತ್ಪನ್ನವು ಅದರ ತಾಜಾ ಕ್ರಿಸ್ಪಿ ಅಂಶವನ್ನು ಕಳೆದುಕೊಳ್ಳಬಹುದು, ಕುರುಕುರೆ ಚಿಪ್ಸ್​​​ ಅದರ ಗರಿಗರಿತನ ಕಳೆದುಕೊಂಡು ತಾಜಾ ಸ್ವಾದಿಷ್ಟ ಕೊಡದಿರಬಹುದು, ಇನ್ನು ಬಿಸ್ಕತ್ತುಗಳು ಮೆತ್ತಗಾಗಿ ಸ್ವಲ್ಪ ಹಳೆಯ ರುಚಿಯನ್ನು ಹೊಂದಿರಬಹುದು, ಆದರೆ ಅವು ನಿಮಗೆ ಅನಾರೋಗ್ಯವನ್ನುಂಟುಮಾಡುವುದಿಲ್ಲ ಎಂಬುದನ್ನು ಗಮನಿಸಬಹುದು.

ಅದೇ ಹಾಲು, ಮಾಂಸ ಮತ್ತು ಮೊಟ್ಟೆಗಳಂತಹ (Perishable Items) ಹಾಳಾಗುವ ವಸ್ತುಗಳ ವಿಷಯದಲ್ಲಿ ಭಿನ್ನ ಪರಿಸ್ಥಿತಿಯಿದ್ದು, ಅದು ಹೆಚ್ಚು ಗಂಭೀರವಾಗಿದೆ. ಈ ಆಹಾರಗಳಿಗೆ ಬ್ಯಾಕ್ಟೀರಿಯಾ ಮುತ್ತಿಕೊಳ್ಳಬಹುದು. Expiry Date ನಂತರ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತಾ ಸಾಗುತ್ತದೆ. ಅಂತಹ ಆಹಾರ ಸೇವಿಸಿದಾಗ ಮುಂದೆ ಅದರಿಂದ ಕಾಯಿಲೆ ಹರಡುವುದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಸಾವಿರಾರು ವರ್ಷಗಳ ಹಿಂದೆಯೇ ಮಳೆ ಕೊಯ್ಲು ಅಳವಡಿಸಿಕೊಂಡು ನಿರ್ಮಿಸಿರುವ ಈ ದೇವಾಲಯಕ್ಕೆ ಹೋಗೋಣಾ ಬನ್ನೀ!

ಕ್ಲಿನಿಕಲ್ ಡಯೆಟಿಷಿಯನ್ ಸಲಹೆಗಾರ್ತಿಯೊಬ್ಬರ ಪ್ರಕಾರ ಭಾರತೀಯ ಗ್ರಾಹಕರು ಸಾಮಾನ್ಯವಾಗಿ ಗೋಧಿ ಹಿಟ್ಟು, ಕಡಲೆ ಹಿಟ್ಟು, ಇತರೆ ಸಂಸ್ಕರಿಸಿದ ಹಿಟ್ಟು ಮತ್ತು ರವೆ ಪ್ಯಾಕೆಟ್‌ಗಳಲ್ಲಿರುವ ಆಹಾರ ಪದಾರ್ಥವನ್ನು ಅದರ Expiry Date ನಂತರವೂ ಬಳಸುತ್ತಾರೆ. ಆದರೆ ಇದು ಸುರಕ್ಷಿತವಲ್ಲ. ಪ್ಯಾಕೆಟ್​​ ಒಳಗಡೆ ಸೂಕ್ಷ್ಮ ಜೀವಿಗಳ ಬೆಳವಣಿಗೆ ಗೋಚರಿಸದೇ ಇದ್ದರು, ತಜ್ಞರು ಅದನ್ನು ಬಳಕೆಗೆ ಶಿಫಾರಸು ಮಾಡುವುದಿಲ್ಲ ಎಂದು ವಿವರಿಸುತ್ತಾರೆ.

ಇನ್ನು ದ್ವಿದಳ ಧಾನ್ಯಗಳು, ಕಾಳುಗಳು ಮತ್ತು ಅಕ್ಕಿ ಬೇಳೆಯಂತಹ ಕೊಳೆಯದ ಆಹಾರಗಳನ್ನು (Non-perishable foods) ಒಣ ಜಾಗದಲ್ಲಿ, ಗಾಳಿಯಾಡುವ ಕೋಣೆಗಳಲ್ಲಿ ಸಂಗ್ರಹಿಸಿದರೆ ಅವುಗಳ Expiry Date ನಂತರವೂ ಅವು ಬಳಕೆ ಯೋಗ್ಯವಾಗಿ ಉತ್ತಮ ಸ್ಥಿತಿಯಲ್ಲಿ ಉಳಿಯಬಹುದು. ಇನ್ನು ಈ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟರೆ ಬೀಜಗಳು, ಎಣ್ಣೆಕಾಳುಗಳು ಮತ್ತು ರವೆಯಂತಹ ವಸ್ತುಗಳ ಶೆಲ್ಫ್ ಜೀವಿತಾವಧಿಯು ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಬಹುದು. ಆದಾಗ್ಯೂ, Expiry Date ಮೀರಿದ ಮೇಲೆ ಯಾವುದೇ ಆಹಾರ ಪದಾರ್ಥವನ್ನು ಅದರ ವಾಸನೆ, ರುಚಿ ಅಥವಾ ಹೊರ ನೋಟದಿಂದ ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ಅವರು ಹೇಳುತ್ತಾರೆ.

Expiry Dateಗಳು ಎಷ್ಟು ವಿಶ್ವಾಸಾರ್ಹವಾಗಿವೆ? ಇನ್ನು ಖಾಸಗಿ ಆಸ್ಪತ್ರೆಯೊಂದರ ಕ್ಲಿನಿಕಲ್ ಪೌಷ್ಟಿಕ ತಜ್ಞರು ಈ ಬಗ್ಗೆ ಹೀಗೆ ವಿವರಿಸುತ್ತಾರೆ: ಆಹಾರ ಪ್ಯಾಕೆಟ್​​ನ Expiry Date ಅವಧಿಯನ್ನು ಆಹಾರ ಪದಾರ್ಥಕ್ಕೆ ಅನುಗುಣವಾಗಿ ಬಳಸಿದ ಪ್ಯಾಕೇಜಿಂಗ್, ಉತ್ಪಾದನಾ ಪ್ರಕ್ರಿಯೆ ಮತ್ತು ನಿಯಂತ್ರಕ ಮಾರ್ಗಸೂಚಿಗಳು ಸೇರಿದಂತೆ ಹಲವಾರು ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಿರ್ದಿಷ್ಟ ಶೇಖರಣಾ ಪರಿಸ್ಥಿತಿಗಳಲ್ಲಿ ಉತ್ಪನ್ನದ ಶೆಲ್ಫ್ ಜೀವನವನ್ನು ಅಂದಾಜು ಮಾಡಲು ತಯಾರಕರು ಪರೀಕ್ಷೆಗಳು ಮತ್ತು ಪ್ರಯೋಗಗಳನ್ನು ನಡೆಸುತ್ತಾರೆ. ಈ ಪರೀಕ್ಷೆಗಳ ಆಧಾರದ ಮೇಲೆ Expiry Date ಅನ್ನು ಹೊಂದಿಸಲಾಗುತ್ತದೆ. Expiry Date ಸೂಚಿಸಿದ ದಿನಾಂಕದವರೆಗೆ ಉತ್ಪನ್ನವು ಸುರಕ್ಷಿತವಾಗಿ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂದು ಅದು ಖಚಿತಪಡಿಸುತ್ತದೆ.

ಆಸ್ಪತ್ರೆಯೊಂದರ ಮತ್ತೊಬ್ಬ ಹಿರಿಯ ಆಹಾರ ತಜ್ಞರ ಪ್ರಕಾರ Expiry Date ಗಳು ನಿಖರವಾಗಿ ಸುರಕ್ಷತೆಯ ಮಾನದಂಡಕ್ಕಿಂತ ಹೆಚ್ಚಾಗಿ ಆಹಾರದ ಗುಣಮಟ್ಟದ ಸೂಚಕವಾಗಿದೆ. ಆಹಾರವು ಅದರ Expiry Date ನಂತವೂ ಉತ್ತಮವಾಗಿ ಕಾಣುತ್ತಾ, ಅಡ್ಡ ವಾಸನೆಯನ್ನು ಹೊಂದಿಲ್ಲದಿದ್ದರೆ ತಿನ್ನಲು ಅದಿನ್ನೂ ಸುರಕ್ಷಿತವಾಗಿದೆ. Expiry Date ವಿಷಯದಲ್ಲಿ ಬಹುತೇಕ ಬಾರಿ ಅದರ ಸುರಕ್ಷತೆಗಿಂತ ಉತ್ಪನ್ನದ ತಾಜಾತನ ಮತ್ತು ಗುಣಮಟ್ಟದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿವೆ. ಗುಣಮಟ್ಟ ಕ್ಷೀಣತೆ ಅಥವಾ ಅಹಿತಕರ ವಾಸನೆಯ ಯಾವುದೇ ಸ್ಪಷ್ಟ ಲಕ್ಷಣಗಳು ಇಲ್ಲದಿದ್ದರೆ ತಿನ್ನಲು ಆ ಆಹಾರ ಇನ್ನೂ ಸುರಕ್ಷಿತವಾಗಿದೆ ಎನ್ನಬಹುದು. ಅದರ Expiry Date ಮುಕ್ತಾಯ ದಿನಾಂಕವನ್ನು ದಾಟಿದ ಆಹಾರವನ್ನು ಮೌಲ್ಯಮಾಪನ ಮಾಡುವಾಗ, ಗ್ರಾಹಕರು ಈ ಮಾನದಂಡಗಳನ್ನು ನಂಬಬೇಕು ಎಂದು ಅವರು ಹೇಳುತ್ತಾರೆ.

ಮಾರಾಟ ಮಳಿಗೆಗಳಲ್ಲಿ ಪದಾರ್ಥಗಳನ್ನು ಸಂಗ್ರಹಿಸಿಡುವುದರ ಪಾತ್ರವೇನು? ನಮ್ಮ ಭಾರತೀಯರ ಬಹುತೇಕ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ಪ್ರವೃತ್ತಿಯೆಂದರೆ ತಾಯಂದಿರು ವಸ್ತುಗಳನ್ನು ಗಾಳಿಯಾಡುವ ಜಾಗದಲ್ಲಿ ಹಾಗೆಯೇ ಸಂಗ್ರಹಿಸಿಡುವ ಅಥವಾ ಫ್ರಿಜ್‌ನಲ್ಲಿ ಸಂಗ್ರಹಿಸುವ ಮತ್ತು ಆ ಪದಾರ್ಥಗಳೆಲ್ಲವೂ ಚೆನ್ನಾಗಿದೆ ಎಂದು ನಂಬುವ ಅಭ್ಯಾಸವನ್ನು ನಾವು ಗಮನಿಸಿರುತ್ತೇವೆ.

ಹಾಗಂತ, ಭಾರತೀಯ ತಾಯಂದಿರ ಈ ವಿಷಯಕ್ಕೆ ಬಂದಾಗ Expiry Date ಪರಿಕಲ್ಪನೆಯು ಕೆಲವೊಮ್ಮೆ ಅಸ್ಪಷ್ಟತೆಯಿಂದ ಕೂಡಿದೆ ಎಂದು ತೋರುತ್ತದೆ ಅಲ್ಲವೇ!? ಅವರು ಫ್ರಿಜ್‌ನಲ್ಲಿ ವಸ್ತುಗಳನ್ನು ಸಂಗ್ರಹಿಸುವುದರಿಂದ ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳಬಹುದು ಎಂದು ಹೇಳಿದಂತಾಗುವುದಿಲ್ಲವೇ? ಇದು ಸಂಪೂರ್ಣವಾಗಿ ತಪ್ಪಾಗಿಲ್ಲ ಎಂದೂ ಹೇಳಬಹುದು.

ಇದನ್ನೂ ಓದಿ:  Tirumala Venkateswara Swamy Idol – ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ತಿರುಪತಿ ತಿಮ್ಮಪ್ಪನ ವಿಗ್ರಹ ಕುರಿತಾದ ಈ ಮಾಹಿತಿ ನಿಮಗೆ ಗೊತ್ತಾ?

ನಿಮ್ಮ ಆಹಾರವನ್ನು ನೀವು ಹೇಗೆ ಸಂಗ್ರಹಿಸುತ್ತೀರಿ ಎಂಬುದು ಎಷ್ಟು ಸಮಯದವರೆಗೆ ಅದು ಸುರಕ್ಷಿತವಾಗಿ ಮತ್ತು ರುಚಿಕರವಾಗಿರುತ್ತದೆ ಎಂಬುದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ನಿಮ್ಮ ಫ್ರಿಜ್ ಅನ್ನು ಸರಿಯಾದ ತಾಪಮಾನದಲ್ಲಿ ಇರಿಸುವುದು (5°C ಗಿಂತ ಕಡಿಮೆ), ಪ್ಯಾಕೇಜುಗಳನ್ನು ಬಿಗಿಯಾಗಿ ಮುಚ್ಚುವುದು ಮತ್ತು ತಂಪಾದ ಅಥವಾ ಗಾಳಿಯಾಡುವ ಸ್ಥಳಗಳಲ್ಲಿ ಒಣ ಸರಕುಗಳನ್ನು ಸಂಗ್ರಹಿಸುವುದು ಅನೇಕ ವಸ್ತುಗಳ ಶೆಲ್ಫ್ ಆಯಸ್ಸನ್ನು ಗಮನಾರ್ಹವಾಗಿ ವಿಸ್ತರಿಸಬಹುದು.

ಸಂಗ್ರಹಣೆಯ ಪರಿಸ್ಥಿತಿಗಳು Expiry Date ಗಳ ನಿಖರತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ತಾಪಮಾನ ಏರಿಳಿತಗಳು, ತೇವಾಂಶಕ್ಕೆ ಒಡ್ಡಿಕೊಳ್ಳುವುದು, ಸೂರ್ಯನ ಬೆಳಕು ಮತ್ತು ವಿಪರೀತ ತಾಪಮಾನಗಳು ಆಹಾರ ಉತ್ಪನ್ನದ ಶೆಲ್ಫ್ ಲೈಫ್​​ ಮೇಲೆ ಪರಿಣಾಮ ಬೀರಬಹುದು. ಶಿಫಾರಸು ಮಾಡಲಾದ ಷರತ್ತುಗಳಿಗೆ ಅನುಗುಣವಾಗಿ ಆಹಾರ ಉತ್ಪನ್ನವನ್ನು ಸಂಗ್ರಹಿಸದಿದ್ದಾಗ ಅದರ ಸುರಕ್ಷತೆ ಮತ್ತು ಗುಣಮಟ್ಟವು ಸೂಚಿತ Expiry Date ಗಿಂತಲೂ ಕ್ಷಿಪ್ರವಾಗಿ ಹದಗೆಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಆಹಾರ ಸುರಕ್ಷತೆಗೆ ಬಂದಾಗ ಕಾನೂನುರೀತ್ಯ ಸ್ಥಾಪಿತ ಆಹಾರ ಮತ್ತು ಔಷಧ ಕಾನೂನುಗಳಿಗೆ ಬದ್ಧವಾಗಿರುವುದು ನಿರ್ಣಾಯಕವಾಗಿದೆ. ವಿಶೇಷವಾಗಿ ಭಾರತದಂತಹ ದೇಶದಲ್ಲಿ ಗ್ರಾಹಕರನ್ನು ರಕ್ಷಿಸಲು ಈ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಮಾರ್ಗಸೂಚಿಗಳು, ವಿಶೇಷವಾಗಿ ಸಂಗ್ರಹಣೆ ಮತ್ತು ನಿರ್ವಹಣೆ ವಿಷಯಕ್ಕೆ ಬಂದಾಗ ಬಹು ಪ್ರಮುಖವಾಗಿರುತ್ತವೆ.

ಸಾಗಿಸುವಾಗ ಕೆಲವು ಉತ್ಪನ್ನಗಳನ್ನು ಶೈತ್ಯೀಕರಿಸಿದ ಅಥವಾ ಹೆಪ್ಪುಗಟ್ಟಿದ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ಈ ಕ್ರಮಗಳನ್ನು ಉಲ್ಲಂಘಿಸಿದರೆ ಆಹಾರ ಉತ್ಪನ್ನವು ಅವಧಿಗೆ ಮುಂಚೆಯೇ ಹಾಳಾಗುತ್ತದೆ. ಆಹಾರ ಉತ್ಪನ್ನಗಳನ್ನು ಶೀತಲ ಅಥವಾ ಹೆಪ್ಪುಗಟ್ಟಿದ ಸಂಗ್ರಹಣೆಯಿಂದ ತೆಗೆದಾಗ ಅದನ್ನು ಸೇವಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ನಿಮ್ಮ ವಾಸನೆ ಮತ್ತು ದೃಗ್ಗೋಚರ ಪ್ರಜ್ಞೆಯನ್ನು ಅವಲಂಬಿಸಿ. ಕ್ಯಾನ್‌ಗಳು ಅಥವಾ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲಾದ ಆಹಾರಗಳು ಉಬ್ಬರಿಸಿಬರುವುದು ಅಥವಾ ಹಾಳಾಗುವುದು ಕಂಡುಬಂದಿದ್ದರೆ ಆ ಆಹಾರ ಉತ್ಪನ್ನವು Expiry Date ಒಳಗಿದ್ದರೂ ಸಹ ಅದನ್ನು ತಿರಸ್ಕರಿಸಬೇಕು.

ಬಳಸಬೇಕಾ ಅಥವಾ ಬಿಸಾಡಬೇಕಾ? Expiry date ಗಳು ಉಪಯುಕ್ತ ಮಾರ್ಗಸೂಚಿಗಳಾಗಿವೆ. ಆದರೆ ಆಹಾರ ಪದಾರ್ಥವನ್ನು ತಿನ್ನಲು ಸುರಕ್ಷಿತವಾಗಿದೆಯೇ ಎಂಬುದರ ಕುರಿತು ಇದೇ ಅಂತಿಮ ತೀರ್ಮಾನವಾಗಬಾರದು. ವಿಭಿನ್ನ ಲೇಬಲ್‌ಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ನಿಮ್ಮ ಇಂದ್ರಿಯಗಳನ್ನು ಸಶಕ್ತವಾಗಿ ಬಳಸುವ ಮೂಲಕ, ಯಾವುದನ್ನು ಬಳಸಬೇಕು ಮತ್ತು ಯಾವುದನ್ನು ಬಿಸಾಡಬೇಕು ಎಂಬುದರ ಕುರಿತು ನೀವು ಚುರುಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಲ್ಲಿ ಆಹಾರವನ್ನು ಬಿಸಾಡಬಾರದು ಎನ್ನುವುದು ಮುಖ್ಯವಾಗಿದ್ದರೂ ಅಂತಿಮವಾಗಿ ನಿಮ್ಮ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂಬುದನ್ನು ಮನಗಾಣಿ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:06 pm, Wed, 11 September 24

ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ