AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಕಂಡಕ್ಟರ್​ಗಳಿಗೆ ಹೊಸ ತಂತ್ರಜ್ಞಾನದ ಆಂಡ್ರಾಯ್ಡ್​ ಟಿಕೆಟ್ ಮಿಷನ್, ಮತ್ತೆ ಬೆಂಗಳೂರು ರಸ್ತೆಗೆ ಡಬ್ಬಲ್ ಡೆಕರ್ ಬಸ್

ಕಳೆದ ಐದು ವರ್ಷಗಳಲ್ಲಿ ₹ 1,324.9 ಕೋಟಿ ಸಾಲ ಪಡೆದಿರುವ ಬಿಎಂಟಿಸಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ.

ಬಿಎಂಟಿಸಿ ಕಂಡಕ್ಟರ್​ಗಳಿಗೆ ಹೊಸ ತಂತ್ರಜ್ಞಾನದ ಆಂಡ್ರಾಯ್ಡ್​ ಟಿಕೆಟ್ ಮಿಷನ್, ಮತ್ತೆ ಬೆಂಗಳೂರು ರಸ್ತೆಗೆ ಡಬ್ಬಲ್ ಡೆಕರ್ ಬಸ್
ಬಿಎಂಟಿಸಿ ಬಸ್ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Nov 22, 2022 | 10:50 AM

Share

ಬೆಂಗಳೂರು: ಪದೇಪದೆ ಹಾಳಾಗುತ್ತಿದ್ದ ಹಳೇ ಇಟಿಎಂ (Electronic Ticketing Machine – ETM) ಯಂತ್ರಗಳಿಂದ ಬಿಎಂಟಿಸಿ ನಿರ್ವಾಹಕರು ಸತತ ಕಿರಿಕಿರಿ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಬಿಎಂಟಿಸಿ ಆಡಳಿತ ಮಂಡಳಿಯು ಹೊಸ ಮಾದರಿಯ ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲು ನಿರ್ಧರಿಸಿದೆ. ಅದರಂತೆ ಪೈನ್​ಲ್ಯಾಬ್ಸ್​ ಕಂಪನಿಯಿಂದ ಹೊಸ ತಂತ್ರಜ್ಞಾನ ಹೊಂದಿರುವ 8 ಸಾವಿರ ಇಟಿಎಂಗಳನ್ನು ಖರೀದಿಸಿದೆ. ನಿರ್ವಾಹಕರು ವೇಗವಾಗಿ ಟಿಕೆಟ್ ನೀಡಲು ಸಹಕರಿಸುವ ಈ ಯಂತ್ರಗಳಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದ ಮೇಲೆ ಇಟಿಎಂಗಳನ್ನು ಬಿಎಂಟಿಸಿ ಪಡೆದುಕೊಂಡಿದೆ. ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಮೂಲಕ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ನೂತನ ಇಟಿಎಂ ಕಾರ್ಯನಿರ್ವಹಣೆ ಬಗ್ಗೆ ಕಂಡಕ್ಟರ್​ಗಳಿಗೆ ಬಿಎಂಟಿಸಿ ಸಂಚಾರ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ಡಿಸೆಂಬರ್ 10ರ ಒಳಗೆ ಹೊಸ ಇಟಿಎಂಗಳು ಕಂಡಕ್ಟರ್​ಗಳ ಕೈ ಸೇರಬಹುದು ಎಂದು ಮೂಲಗಳು ಹೇಳಿವೆ.

ಕಂಡಕ್ಟರ್ ರಹಿತ ಬಸ್​ಗಳ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರಿನಲ್ಲಿ ಶೀಘ್ರ 10 ಕಂಡಕ್ಟರ್ ರಹಿತ ಡಬ್ಬಲ್ ಡೆಕರ್ ಬಸ್​ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಕಂಡಕ್ಟರ್​ ಇಲ್ಲದಿರುವ 100 ಮಿನಿ ಬಸ್​ಗಳನ್ನೂ ಮೆಟ್ರೋ ಫೀಡರ್​ಗಳಾಗಿ ಓಡಿಸಲು ಬಿಎಂಟಿಸಿ ಮುಂದಾಗಿದೆ. ಡೀಸೆಲ್ ಬಸ್​ಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ತರಲು ಬಿಎಂಟಿಸಿ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್​ಗಳ ಖರೀದಿ ಪ್ರಕ್ರಿಯೆ ನಡೆಯಲಿದೆ.

ಸಾಲಬಾಧೆಯಿಂದ ಬಿಎಂಟಿಸಿ ಕಂಗಾಲು

ಕಳೆದ ಐದು ವರ್ಷಗಳಲ್ಲಿ ₹ 1,324.9 ಕೋಟಿ ಸಾಲ ಪಡೆದಿರುವ ಬಿಎಂಟಿಸಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಾರಿಗೆ ಸಚಿವ ಬಿ.ಶ್ರೀರಾಮುಲು ಈ ಮಾಹಿತಿ ಬಹಿರಂಗಪಡಿಸಿದ್ದರು. ಬಸ್ ನಿಲ್ದಾಣ ನಿರ್ಮಾಣ, ಡಿಪೊ ಸ್ಥಾಪನೆ, ಬಸ್ ಖರೀದಿ, ನಿವೃತ್ತಿ ಸಂದರ್ಭದಲ್ಲಿ ಉದ್ಯೋಗಿಗಳ ಹಣಕಾಸು ಇತ್ಯರ್ಥಪಡಿಸುವುದೂ ಸೇರಿದಂತೆ ಹಲವು ಕಾರಣಗಳಿಗೆ ಬಿಎಂಟಿಸಿ ಸಾಲ ಪಡೆದುಕೊಂಡಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಕೆನರಾ ಬ್ಯಾಂಕ್​ಗಳು ಬಿಎಂಟಿಸಿಗೆ ಅತಿಹೆಚ್ಚಿನ ಪ್ರಮಾಣದ ಸಾಲ ನೀಡಿವೆ. 1997ರಿಂದ 2012ರವರೆಗೂ ಬಿಎಂಟಿಸಿ ಸತತ ಲಾಭದಲ್ಲಿಯೇ ನಡೆಯುತ್ತಿತ್ತು. ಆದರೆ ಎಸಿ ಬಸ್​ಗಳ ಖರೀದಿಗೆ ಬಂಡವಾಳ ಹೂಡಿದ್ದು ದುಬಾರಿಯಾಗಿ ಪರಿಣಮಿಸಿತು. ನಿರೀಕ್ಷೆಯಂತೆ ಜನರು ಈ ಬಸ್​ಗಳನ್ನು ಸ್ವೀಕರಿಸಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಕೊವಿಡ್​ ಸಂಕಷ್ಟವು ನಿಗಮವನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.

Published On - 10:50 am, Tue, 22 November 22

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ