AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ: ದಕ್ಷಿಣ ಭಾರತದ ಮೊದಲ ಹವಾ ನಿಯಂತ್ರಿತ ನೆಲ ಮಾಳಿಗೆ ಹೇಗಿದೆ? ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಗ್ರಾಹಕರು ಹೇಳಿದ್ದೇನು?

ದೆಹಲಿ ಮಾದರಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ದಕ್ಷಿಣ ಭಾರತ ಮೊಟ್ಟ ಮೊದಲ ಹವಾ ನಿಯಂತ್ರಿತ ನೆಲ ಮಾರಾಟ ಮಳಿಗೆಯನ್ನ ಕಳೆದ ಆಗಷ್ಟ ತಿಂಗಳಲ್ಲಿ ಸಿಎಂ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಿದ್ರು. ಇದೀಗ ಬಜಾರ್ ಹೇಗೆ ನಡೆಯುತ್ತಿದೆ? ವ್ಯಾಪಾರಸ್ಥರು, ಗ್ರಾಹಕರು ಏನಂತಾರೆ? ಈ ಕುರಿತು ಟಿವಿ9 ರಿಯಾಲಿಟಿ ಚೆಕ್ ನಡೆಸಿದೆ.

ವಿಜಯನಗರ: ದಕ್ಷಿಣ ಭಾರತದ ಮೊದಲ ಹವಾ ನಿಯಂತ್ರಿತ ನೆಲ ಮಾಳಿಗೆ ಹೇಗಿದೆ? ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಗ್ರಾಹಕರು ಹೇಳಿದ್ದೇನು?
ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್
Vinayak Hanamant Gurav
| Edited By: |

Updated on:Sep 12, 2024 | 8:33 AM

Share

ಬೆಂಗಳೂರು, ಸೆ.12: ದೆಹಲಿ ಬಳಿಕ‌ ದಕ್ಷಿಣ ಭಾರತದಲ್ಲೆ ಮೊದಲ ಹವಾ ನಿಯಂತ್ರಿತ ನೆಲ ಮಾಳಿಗೆ ಕಾಂಪ್ಲೆಕ್ಸ್ ಕಟ್ಟಲಾಗಿದೆ (First Air-Conditioned Underground Market). ದೆಹಲಿಯಲ್ಲಿ ರಾಜೀವ್ ಚೌಕ್ ಮೆಟ್ರೋ ಬಳಿಯೇ ಪಾಲಿಕೆ ಬಜಾರ್ ನಿರ್ಮಿಸಲಾಗಿದೆ, ಬೆಂಗಳೂರಿನಲ್ಲಿಯೂ ವಿಜಯನಗರದ ನಮ್ಮ ಮೆಟ್ರೊ ಮತ್ತು ಬಿಎಂಟಿಸಿ ನಿಲ್ದಾಣಗಳ ಬಳಿಯೇ ಪಾಲಿಕೆ ಬಜಾರ್‌ನ್ನ 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಇನ್ನೂ ಹವಾನಿಯಂತ್ರಿತ ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್ ಸಕ್ಸಸ್ ಆದರೆ ನಗರದ ಇತರೆ ಸ್ಥಳಗಳಲ್ಲಿ ಇದೇ ಮಾದರಿಯಲ್ಲಿ ಬಜಾರ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಕಳೆದ ಆಗಷ್ಟ 25ರಂದು ಸಿಎಂ ಸಿದ್ಧರಾಮಯ್ಯ ಪಾಲಿಕೆ ಬಜಾರ್ ಲೋಕಾರ್ಪಣೆಗೊಳಿಸಿದ್ದಾರೆ. ಒಟ್ಟು 81 ಕೊಠಡಿಗಳಿದ್ದು ಈ ಪೈಕಿ 79 ಕಾಂಪ್ಲೆಕ್ಸ್ ಗಳು ವ್ಯಾಪಾರಸ್ಥರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಪಾಲಿಕೆ ಬಜಾರ್‌ನಲ್ಲಿ ಕೆಲ‌ ಬೀದಿ ಬದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲಾಗಿದ್ದು ಕೆಲ ಅಂಗಡಿಗಳಲ್ಲಿ‌ ವ್ಯಾಪಾರ ಆರಂಭವಾಗಿದೆ ಹೊರಗಡೆ ಬೀದಿ ಬದಿ ವ್ಯಾಪಾರ ಮಾಡಲು ಅನಾನೂಕೂಲ ಆಗ್ತಿತ್ತು. ಇದೀಗ ನೆಲ ಮಾಳಿಗೆ ಬಜಾರ್ ಮಾಡಿ ಕೊಡಲಾಗಿದೆ. ಆದರೆ ಇನ್ನೂ ತಕ್ಕ ಮಟ್ಟಿಗೆ ಗ್ರಾಹಕರು ಬರುತ್ತಿಲ್ಲ. ಎಲ್ಲ ಕಾಂಪ್ಲೆಕ್ಸ್ ಗಳಲ್ಲಿ ವ್ಯಾಪಾರಸ್ಥರು ಬಂದರೆ ಆಗ ವ್ಯಾಪಾರ ಚೆನ್ನಾಗಿ ಆಗುತ್ತೆ ಅಂತಾರೆ ವ್ಯಾಪಾರಸ್ಥರು.

ಇದನ್ನೂ ಓದಿ: ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿದ್ದಾರೆ: ಕುಮಾರಸ್ವಾಮಿ ಕಿಡಿ

ಪ್ರತಿಯೊಂದು ಅಂಗಡಿಗಳಿಗೆ ಬೆಂಕಿ ಅನಾಹುತ ಆದರೆ ತಡೆಗಟ್ಟಲು ಅಗ್ನಿಶಾಮಕ ಉಪಕರಣ ಅಳವಡಿಸಲಾಗಿದೆ. ಇನ್ನೂ ಗ್ರಾಹಕರು ಕೂಡ ಬಜಾರ್ ಗೆ ಬರುತ್ತಿದ್ದಾರೆ ಮುಂಚೆ ಮಳೆ ಬಂದರೆ ತೊಂದರೆ ಆಗುತ್ತಿತ್ತು. ಟ್ರಾಫಿಕ್ ಸಮಸ್ಯೆ ಕೂಡ ಎದುರಿಸುತ್ತಿದ್ವಿ, ಇದೀಗ ಈ ಬಜಾರ್ ನಿರ್ಮಾಣದಿಂದ ಒಂದೆ ಕಡೆಗಳಲ್ಲಿ ಖರೀದಿ ಮಾಡಬಹುದು. ಇದೇ ರೀತಿಯಾಗಿ ನಗರದ ಹಲವೆಡೆ ಏರಿಯಾಗಳಲ್ಲಿ ಇದೆ ಮಾದರಿಯಲ್ಲಿ ಬಜಾರ್ ನಿರ್ಮಾಣವಾದರೆ ತುಂಬಾ ಅನುಕೂಲ ಆಗುತ್ತೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

ಸಧ್ಯ 79 ಬಜಾರ್ ಕಾಂಪ್ಲೆಕ್ಸ್ ಪೈಕಿ ಬೆರಳೆಣಿಕೆಯಷ್ಟು ಮಾತ್ರ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಕೊಡಲಾಗಿದೆ. ಆದಷ್ಟು ಬೇಗನೆ ಇನ್ನೂಳಿದ ಮಳಿಗೆಗಳಲ್ಲಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಟ್ರೆ ವ್ಯಾಪಾರ ಆಗಲಿದ್ದು, ಬೆಳೆಯುತ್ತಿರೋ ಬೆಂಗಳೂರಿನ ಹಲವೆಡೆ ಇಂತಹ ನೆಲ ಮಳಿಗೆಗಳ ಅವಶ್ಯಕತೆ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:32 am, Thu, 12 September 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್