AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Digital Live: 60 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಧೈರ್ಯ ತುಂಬಿದ ತಜ್ಞರು

Tv9 Digital Live: ಲಸಿಕೆ ಪಡೆದವರು ಉಳಿದವರಿಗೆ ಉತ್ತಮ ಪ್ರತಿಕ್ರಿಯೆಯ ಜೊತೆ, ಅನುಭವ ಹಂಚಿಕೊಂಡರೆ ಇತರರಿಗೂ ಲಸಿಕೆ ಪಡೆಯುವ ಉತ್ಸಾಹ ಬರುತ್ತದೆ. ಲಸಿಕೆ ಪೂರೈಕೆಯ ಬಗ್ಗೆ ಗೊಂದಲಗಳು ಇಲ್ಲ.

Tv9 Digital Live: 60 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಧೈರ್ಯ ತುಂಬಿದ ತಜ್ಞರು
ಆರೋಗ್ಯ ಇಲಾಖೆ ಉಪ ಆಯುಕ್ತೆ ರಜನಿ, ಶ್ವಾಸಕೋಶ ತಜ್ಞ ಡಾ. ಪವನ್ ಕುಮಾರ್​ ಹಾಗೂ ಕೋವಿಡ್ ಲಸಿಕೆ ಪಡೆದ ಮಸುಂಧರ ದೊರೆ ಸ್ವಾಮಿ
shruti hegde
| Edited By: |

Updated on: Mar 02, 2021 | 6:47 PM

Share

60 ವರ್ಷ ಮೇಲ್ಪಟ್ಟವರು ಮತ್ತು ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45 ವರ್ಷ ದಾಟಿದವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಿದೆ. ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಲೈವ್​ನಲ್ಲಿ (Tv9 Kannada Digital Live) ಮಂಗಳವಾರ ಸಂವಾದ ನಡೆಸಲಾಯಿತು. ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ನಡೆಸಿಕೊಟ್ಟರು. ಆರೋಗ್ಯ ಇಲಾಖೆ ಉಪ ಆಯುಕ್ತೆ ರಜನಿ, ಶ್ವಾಸಕೋಶ ತಜ್ಞ ಡಾ. ಪವನ್ ಕುಮಾರ್​ ಹಾಗೂ ಲಸಿಕೆ ಪಡೆದ ಮಸುಂಧರ ದೊರೆ ಸ್ವಾಮಿ ಪಾಲ್ಗೊಂಡಿದ್ದಾರೆ.

ಮೊದಲಿಗೆ ಆರೋಗ್ಯ ಇಲಾಖೆ ಉಪ ಆಯುಕ್ತೆ ರಜನಿ ಮಾತನಾಡಿ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯ ಬೇಕು ಎಂಬ ಆಸೆ, ನಿರೀಕ್ಷೆ ಇದೆ. ನಿನ್ನೆಯಿಂದ ಲಸಿಕೆ ಕೊಡಲು ಪ್ರಾರಂಭಿಸಿದ್ದೇವೆ. ದಿನಕಳೆದಂತೆ ಹೆಚ್ಚು ಜನರಿಗೆ ಲಸಿಕೆ ಕೊಡಲು ಪ್ರಯತ್ನಿಸುತ್ತೇವೆ. ಆನ್​ಲೈನ್ ನೋಂದಣಿಗೂ ಅವಕಾಶವಿದೆ. ಎಲ್ಲರೂ ನೋಂದಣಿ ಮಾಡಿಕೊಳ್ಳಿ. ಕೋವಿಡ್​ ಪೋರ್ಟಲ್ ನಿರ್ವಹಣೆಗೆ ನಾವೂ ಗಮನನೀಡಿದ್ದೇವೆ. ಲಸಿಕೆ ಪಡೆದವರು ಉಳಿದವರಿಗೆ ಉತ್ತಮ ಪ್ರತಿಕ್ರಿಯೆಯ ಜೊತೆ, ಅನುಭವ ಹಂಚಿಕೊಂಡರೆ ಇತರರಿಗೂ ಲಸಿಕೆ ಪಡೆಯುವ ಉತ್ಸಾಹ ಬರುತ್ತದೆ. ಲಸಿಕೆ ಪೂರೈಕೆಯ ಬಗ್ಗೆ ಗೊಂದಲಗಳು ಇಲ್ಲ ಎಂದು ಹೇಳಿದರು.

ಶ್ವಾಸಕೋಶ ತಜ್ಞ ಪವನ್ ಕುಮಾರ್ ಮಾತನಾಡಿ, ಲಸಿಕೆಯಿಂದ ಯಾರಿಗೂ ಏನೂ ತೊಂದರೆ ಆಗಲ್ಲ. ಕೆಲವರಿಗೆ ಜ್ವರ ಬರಬಹುದು. ಅದೇನೂ ತೊಂದರೆ ಇಲ್ಲ. ಈ ಕುರಿತಂತೆ ಯಾರೂ ಭಯ ಪಡುವುದು ಬೇಡ. ಲಸಿಕೆಗೆ ನೋಂದಣಿ ಮಾಡಲು ಕೋವಿನ್​ ಅಪ್ಲಿಕೇಶನ್​ ಇದೆ. ಅದರಲ್ಲಿ ತಮ್ಮ ಹೆಸರು ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಹಳ್ಳಿಗಳ ಜನರು, ರೈತರಿಗೆ ಮನವರಿಗೆ ಆಗಬೇಕಿದೆ. ಈ ಕುರಿತಂತೆ ಹೆಲ್ತ್​ ಕೇರ್ ವರ್ಕರ್ಸ್​ಗಳಿಗೆ ಕೆಲಸ ಹೆಚ್ಚಿರುತ್ತದೆ. ರೈತರಿಗೆ ಮನವರಿಕೆ ಮಾಡಿ, ಪೋರ್ಟಲ್ ಮೂಲಕ ರಿಜಿಸ್ಟರ್ ಮಾಡಿಸುವುದು ಅವರದೇ ಜವಾಬ್ದಾರಿ. ಈ ಬಗ್ಗೆ ಹಳ್ಳಿಯ ಜನರಿಗೆ ಮನವೊಲಿಸುವ ಪ್ರಯತ್ನ ನಡೆಯಬೇಕು. ಯಾರೆಲ್ಲಾ ಲಸಿಕೆ ಪಡೆದಿದ್ದೀರೀ ಅವರು, ಲಸಿಕೆ ಪಡೆಯದವರಿಗೆ ತಿಳಿ ಹೇಳುವ ಪ್ರಯತ್ನ ನಡೆಯಬೇಕು ಎಂದು ತಿಳಿಸಿದರು.

ಲಸಿಕೆ ಪಡೆದ ನಂತರ ಆರೋಗ್ಯದಲ್ಲಿನ ವ್ಯತ್ಯಾಸದ ಕುರಿತಾಗಿ ವಸುಂಧರಾ ಮಾತನಾಡಿ, ನಾನು ನಿನ್ನೆ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದ ನಂತರ ರಾತ್ರಿ ಚೂರೇ ಚೂರು ತಲೆನೋವು ಇತ್ತು. ಅಷ್ಟು ಬಿಟ್ಟರೆ ಮತ್ಯಾವುದೇ ತೊಂದರೆ ಆಗಿಲ್ಲ. ಲಸಿಕೆ ಪಡೆಯುವ ಮೊದಲು ನನಗೆ ಯಾವುದೇ ಭಯ ಇರಲಿಲ್ಲ. ಕೆಲವರಿಗೆ ಅಡ್ಡ ಪರಿಣಾಮ ಇರಬಹುದು ಎಂಬ ಭಯ ಇದೆ. ಆದರೆ ಇಂದರಿಂದ ಯಾವುದೇ ಭಯ ಇಲ್ಲ. ಜೆಎಸ್​ಎಸ್​ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದೇನೆ. ಯಾವುದೇ ಶುಲ್ಕ ಕೂಡಾ ನೀಡಿಲ್ಲ. ಎಲ್ಲರೂ ಲಸಿಕೆ ಪಡೆಯ ಬೇಕು. ಯಾವುದೇ ಭಯ ಬೇಡ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಕೂಡಾ ಇಲ್ಲ. ಯಾರೋ ಹೇಳಿದ ಮಾತಿಗೆ ಕಿವಿಕೊಡ ಬೇಡಿ ಲಸಿಕೆಯಿಂದ ಯಾವುದೇ ಅಡ್ಡ ಪಡಿಣಾಮಗಳಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: Tv9 Digital Live: ಕೊರೊನಾ ಎರಡನೇ ಅಲೆ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸುತ್ತದೆಯೇ?

ಇದನ್ನೂ ಓದಿ: TV9 Digital Live | ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ ಏಕೆ?

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್