AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಮೇಲೆ ತಾಲಿಬಾನಿಗಳ ದೌರ್ಜನ್ಯ ಎಂಥದ್ದು? ಮಂಗಳೂರು ವಿವಿಯ ಆಫ್ಘನ್ ವಿದ್ಯಾರ್ಥಿ ಬಿಚ್ಚಿಟ್ಟ ವಿಚಾರ ಇದು

Afghanistan: ಅಫ್ಘಾನಿಸ್ತಾನದ ಪರಿಸ್ಥಿತಿ, ಆಡಳಿತ, ಅವರ ಕಾನೂನು, ಹಿಂಸಾಚಾರ, ಭಯೋತ್ಪಾದನೆ, ಆರ್ಥಿಕತೆ, ವಿದೇಶ ನೀತಿ ಇತ್ಯಾದಿಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅಷ್ಟೇ ಮುಖ್ಯವಾಗಿ ಮತ್ತು ಘನವಾಗಿ ಚರ್ಚೆ ಆಗುತ್ತಿರುವುದು ಅಲ್ಲಿನ ಮಹಿಳೆಯರ ಸ್ಥಿತಿಗತಿ.

ಮಹಿಳೆಯರ ಮೇಲೆ ತಾಲಿಬಾನಿಗಳ ದೌರ್ಜನ್ಯ ಎಂಥದ್ದು? ಮಂಗಳೂರು ವಿವಿಯ ಆಫ್ಘನ್ ವಿದ್ಯಾರ್ಥಿ ಬಿಚ್ಚಿಟ್ಟ ವಿಚಾರ ಇದು
ಮಂಗಳೂರಿನಲ್ಲಿ ಕಲಿಯುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿನಿ
TV9 Web
| Edited By: |

Updated on: Aug 21, 2021 | 5:35 PM

Share

ಮಂಗಳೂರು: ಅಫ್ಘಾನಿಸ್ತಾನದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಂಥದ್ದು ಎಂದು ಕಳೆದ ಕೆಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲಿನ ಆಡಳಿತವನ್ನು ತಾವೇ ನೋಡಿಕೊಳ್ಳುವುದಾಗಿ ಹಾಗೂ ಮಹಿಳೆಯರಿಗೂ ಉತ್ತಮ ಜೀವನ ನಡೆಸುವ ಆಯ್ಕೆ ನೀಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದಾರೆ. ಆದರೆ, ಹೀಗೆ ಹೇಳಿದ ಬಳಿಕವೂ ಮಹಿಳೆಯರ ಮೇಲಿನ ಅನೇಕ ದೌರ್ಜನ್ಯ, ವಿಕೃತಿ, ಹಿಂಸಾಚಾರದ ದೃಶ್ಯಗಳನ್ನು ನಾವು ನೋಡುತ್ತಲೇ ಇದ್ದೇವೆ. ವಿಮಾನದ ಮೇಲ್ಮೈಯಲ್ಲಾದರೂ ಸರಿ ಬೇರೆ ಕಡೆ ಹೋಗಿ ಬದುಕೋಣ ಎಂಬ ಜನರ ಭಾವವೇ ಅಲ್ಲಿನ ಭಯವನ್ನು ತೋರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಅಲ್ಲಿಂದ ಹೊರ ಹೋಗುತ್ತಿರುವವರಲ್ಲಿ ಕೇವಲ ಪುರುಷರೇ ಕಾಣಿಸುತ್ತಿದ್ದಾರೆ. ಮಹಿಳೆಯರು ಎಲ್ಲಿದ್ದಾರೆ? ಅವರ ಮೇಲಿನ ದೌರ್ಜನ್ಯ ಅಥವಾ ಹಿಂಸಾಚಾರ ಎಂಥದ್ದು ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿ, ಆಡಳಿತ, ಅವರ ಕಾನೂನು, ಹಿಂಸಾಚಾರ, ಭಯೋತ್ಪಾದನೆ, ಆರ್ಥಿಕತೆ, ವಿದೇಶ ನೀತಿ ಇತ್ಯಾದಿಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅಷ್ಟೇ ಮುಖ್ಯವಾಗಿ ಮತ್ತು ಘನವಾಗಿ ಚರ್ಚೆ ಆಗುತ್ತಿರುವುದು ಅಲ್ಲಿನ ಮಹಿಳೆಯರ ಸ್ಥಿತಿಗತಿ. ಮಕ್ಕಳ ಜೀವನ. ಮಾನವ ಹಕ್ಕುಗಳು ಇತ್ಯಾದಿ. ಈ ಬಗ್ಗೆ ಸ್ವತಃ ಅಫ್ಘಾನಿಸ್ತಾನದ ಮತ್ತು ಈಗ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕ್ರಿಸ್ಮಾ ರಸೂಲಿ ಟಿವಿ9 ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತಾಲಿಬಾನಿಗಳ ಈ ಹಿಂಸಾಚಾರವನ್ನು ಯಾವತ್ತೂ ಕ್ಷಮಿಸಲ್ಲ. ತಾಲಿಬಾನಿಗಳಿಂದ ಆಫ್ಘನ್‌ ಮಹಿಳೆಯರಿಗೆ ಭಾರಿ ರಣಹಿಂಸೆ ನೀಡಲಾಗುತ್ತದೆ. ಬುರ್ಖಾ ಧರಿಸಿಯೇ ಮನೆಯಿಂದ ಹೊರಬರುವಂತೆ ಹಿಂಸೆ ನೀಡುತ್ತಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯಕ್ಕೆ ಭಯ ಆಗ್ತಿದೆ. ಆಫ್ಘನ್‌ನ ಶಿಕ್ಷಿತ ಸಮುದಾಯಕ್ಕೆ ಭವಿಷ್ಯದ ಬಗ್ಗೆ ದಿಗಿಲು ಇದ್ದೇ ಇದೆ. ಅವರು ಮನೆ ಬಿಟ್ಟು ಹೊರಗೆ ಬಾರದಂತೆ ಮಹಿಳೆಯರಿಗೆ ದಿಗ್ಬಂಧನ ಹೇರುತ್ತಾರೆ. ತಾಲಿಬಾನಿ ರಕ್ಕಸ ರೂಪಕ್ಕೆ ಏರ್‌ಪೋರ್ಟ್‌ ದೃಶ್ಯಗಳೇ ಸಾಕ್ಷಿ ಎಂದು ಮಾಹಿತಿ ನೀಡಿದ್ದಾರೆ. ಅಲ್ಲಿನ ದೈಹಿಕ ಹಿಂಸೆಗಿಂತ ಮಾನಸಿಕ ಭಯ, ಆತಂಕ, ದೌರ್ಜನ್ಯವನ್ನು ಸಹಿಸಿರುವುದು ಕಷ್ಟ. ಆ ಜೀವನ ಯಾರಿಗೂ ಬೇಡ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ

ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಐಎಂಎಫ್ ನಿರ್ಧಾರ; ಆರ್ಥಿಕ ಬಲ ಇಲ್ಲದೆ ತಾಲಿಬಾನಿಗಳು ಕಂಗಾಲು

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು