ಮಂಗಳೂರು: ಮಳೆ ಬಂತೆಂದರೆ ಕಲ್ಲಡ್ಕ ಪೇಟೆ ಕೆಸರುಮಯ, ವಾಹನ ಸಂಚಾರಕ್ಕೆ ಪರದಾಟ
ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಮಳೆ ಬಂದರೆ ಸಾಕು ಇಡೀ ರಸ್ತೆ ಕೆಸರುಮಯವಾಗುತ್ತದೆ. ಇದರಿಂದಾಗಿ ಸಚಾರರು ವಾಹನ ಚಲಾಯಿಸಲು ಹರಸಾಹರಪಡಬೇಕಾಗುತ್ತದೆ. ಕಳೆದ ವಾರಾಂತ್ಯದಲ್ಲಿ ಸರಣಿ ರಜಾ ದಿನಗಳಿಂದಾಗಿ ವಾಹನ ಸಂಚಾರ ಹೆಚ್ಚಿದ್ದರಿಂದ ಹೆದ್ದಾರಿ ಸಂಪೂರ್ಣ ಕೆಸರಾಗಿತ್ತು.
ಮಂಗಳೂರು, ಅ.5: ಬೆಂಗಳೂರು ಮತ್ತು ಮಂಗಳೂರು (Mangaluru) ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕದಲ್ಲಿ (Kalladka) ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಮಳೆ ಬಂದರೆ ಸಾಕು ಇಡೀ ರಸ್ತೆ ಕೆಸರುಮಯವಾಗುತ್ತದೆ. ಸರಣಿ ರಜೆ ಕಾರಣದಿಂದ ಕಳೆದ ವಾರಾಂತ್ಯದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಸಂಪೂರ್ಣ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿ ಸವಾರರು ವಾಹನ ಸಂಚಾರಕ್ಕೆ ಪರದಾಟ ನಡೆಸಿದರು.
ಪಟ್ಟಣದ 2.1 ಕಿ.ಮೀ ಮೇಲ್ಸೇತುವೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ಸರ್ವಿಸ್ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ. ಜನನಿಬಿಡ ಪೇಟೆಯಲ್ಲಿ ಪಾದಚಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ನಡೆದುಕೊಂಡು ಹೋಗುವುದು ಅಥವಾ ಹೆದ್ದಾರಿ ದಾಟುವುದು ಕೂಡ ತ್ರಾಸದಾಯಕವಾಗಿದೆ ಎಂದು ಪಟ್ಟಣದ ನಿವಾಸಿ ಜಾಫರ್ ಕಲ್ಲಡ್ಕ ಹೇಳಿದ್ದಾಗಿ ಸುದ್ದಿಸಂಸ್ಥೆ ದಿ ಹಿಂದೂ ವರದಿ ಮಾಡಿದೆ.
ಮೇಲ್ಸೇತುವೆಯ ಉದ್ದಕ್ಕೂ ಇರುವ ಕ್ಯಾರೇಜ್ವೇಗಳು ಯಾವುದೇ ಮಳೆನೀರಿನ ಒಳಚರಂಡಿಯನ್ನು ಹೊಂದಿಲ್ಲ. ಹೀಗಾಗಿ ರಸ್ತೆಗಳು ಜಲಾವೃತವಾಗುತ್ತವೆ. ಇದರಿಂದ ವಾಹನ ಸವಾರರು ಮತ್ತು ನಿವಾಸಿಗಳಿಗೆ ಅಪಾಯ ಎದುರಾಗಿದೆ ಎಂದು ಜಾಫರ್ ಹೇಳಿದ್ದಾರೆ.
ಅಕ್ಟೋಬರ್ 1 ರಂದು ಕಲ್ಲಡ್ಕದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಮಂಗಳೂರಿನಿಂದ ಪುತ್ತೂರು-ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಕೆಲವು ಕೆಎಸ್ಆರ್ಟಿಸಿ ಬಸ್ಗಳು ಎರಡು ಗಂಟೆಗೂ ಹೆಚ್ಚು ತಡವಾಗಿ ಬಂದಿದ್ದವು ಎಂದು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪುತ್ತೂರಿನ ಬಿ.ಶ್ರೀಕರ ಹೇಳಿದ್ದಾರೆ.
ಕಲ್ಲಡ್ಕ ಪಟ್ಟಣದಲ್ಲಿ ಕೇವಲ 40 ಮೀಟರ್ ಬಲ ಮಾರ್ಗವಿರುವುದರಿಂದ ಫ್ಲೈಓವರ್ ಗರ್ಡರ್ಗಳ ಅಳವಡಿಕೆ ಕಾರ್ಯ ಪ್ರಾರಂಭಿಸಲು ಪ್ರಾಧಿಕಾರಕ್ಕೆ ಕಷ್ಟವಾಗುತ್ತಿದೆ ಎಂದು ಎನ್ಎಚ್ಎಐ ಮಂಗಳೂರು ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಘಟಕದ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು ಹೇಳಿದ್ದಾಗಿ ವರದಿ ಮಾಡಿದೆ.
ಕ್ಯಾರೇಜ್ವೇಗೆ ಕಡಿಮೆ ಸ್ಥಳಾವಕಾಶವಿರುವುದರಿಂದ ಮಳೆನೀರಿನ ಒಳಚರಂಡಿಯನ್ನು ನಿರ್ಮಿಸುವುದು ಕಷ್ಟಕರವಾಗಿದೆ. ಗರ್ಡರ್ಗಳನ್ನು ಅಳವಡಿಸಲು ಸಿದ್ಧಪಡಿಸಲಾಗಿದೆ. ಸದ್ಯ ಇವುಗಳನ್ನು ಸಿಟಿಯ ಹೊರಗೆ ಇರಿಸಲಾಗಿದೆ ಎಂದು ಅಜ್ಮಿ ಹೇಳಿದ್ದಾರೆ.
ಎಲ್ಲಾ ನಿರ್ಬಂಧಗಳ ನಡುವೆ, ಪ್ರಾಧಿಕಾರವು ನವೆಂಬರ್ ಅಂತ್ಯದೊಳಗೆ ಬಂಟ್ವಾಳ ಕಡೆಯಿಂದ ಕಲ್ಲಡ್ಕ-ವಿಟ್ಲ ಜಂಕ್ಷನ್ವರೆಗೆ ಗರ್ಡರ್ ಲಾಂಚ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅದರ ನಂತರ, NHAI ಮಳೆನೀರಿನ ಒಳಚರಂಡಿ ಜೊತೆಗೆ ಉತ್ತಮ ಕ್ಯಾರೇಜ್ವೇ ಅನ್ನು ಒದಗಿಸಬಹುದು. ಮಾಣಿ ಕಡೆಗೆ ಜಂಕ್ಷನ್ ನಂತರ ರೋಡಬ್ಲ್ಯೂ ಸ್ವಲ್ಪ ಅಗಲವಾಗಿದೆ ಎಂದು ಅಜ್ಮಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ