AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ವ್ಯಾಕ್ಸಿನ್ ಬಳಸಬೇಡಿ; ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್​ ಬರಲಿದೆ: ದಿನೇಶ್ ಗುಂಡೂರಾವ್

ಕೋವಿಡ್ ಹರಡುವ ಭೀತಿ ನಡುವೆ ರಾಜ್ಯದಲ್ಲಿ ಮಂಗನಕಾಯಿಲೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ. ಹೊಸ ವ್ಯಾಕ್ಸಿನ್ ಬಳಕೆ ಬಗ್ಗೆ ಐಸಿಎಂಆರ್ ಜೊತೆ ಚರ್ಚೆ ನಡೆಯುತ್ತಿದೆ ಎಂದರು. ಅಲ್ಲದೆ, ರಾಜ್ಯದಲ್ಲಿ ಕೊವಿಡ್ ನಿಯಂತ್ರಣದಲ್ಲಿದೆ. ಎಳೆಪ್ರಾಯದವರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎಂದರು.

ಹಿಂದಿನ ವ್ಯಾಕ್ಸಿನ್ ಬಳಸಬೇಡಿ; ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್​ ಬರಲಿದೆ: ದಿನೇಶ್ ಗುಂಡೂರಾವ್
ಹಿಂದಿನ ವ್ಯಾಕ್ಸಿನ್ ಬಳಕೆ ಮಾಡಬೇಡಿ; ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್​ ಬರಲಿದೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: Rakesh Nayak Manchi

Updated on:Feb 10, 2024 | 5:40 PM

ಉಡುಪಿ, ಫೆ.10: ರಾಜ್ಯದಲ್ಲಿ ಮಂಗನ ಕಾಯಿಲೆ (Monkey Disease) ಹೆಚ್ಚಳವಾಗುತ್ತಿರುವ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ. ಹೊಸ ವ್ಯಾಕ್ಸಿನ್ ಬಳಕೆ ಬಗ್ಗೆ ICMR ಜೊತೆ ಚರ್ಚೆ ನಡೆಯುತ್ತಿದೆ ಎಂದರು. ಹೈದರಾಬಾದ್ ಸಂಸ್ಥೆ ಐಸಿಎಂಆರ್​ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸಲು ಒಪ್ಪಿಗೆ ನೀಡಿದೆ. ಮುಂದಿನ ವರ್ಷಕ್ಕೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದರು.

ಉಡುಪಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್ ವರೆಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ 2 ಸಾವಾಗಿದೆ, ಇಬ್ಬರು ಐಸಿಯುನಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಕೆಎಫ್​ಡಿ ಪ್ರಕರಣ ದಾಖಲಾಗಿದೆ. ಒಟ್ಟು 20 ಸಕ್ರಿಯ ಪ್ರಕರಣಗಳು ಇವೆ. ಪರಿಹಾರ ನೀಡುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿ ಕಾರ್ಯಕ್ರಮ ಕೈಗೊಳ್ಳುತ್ತೇವೆ. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ ಎಂದರು.

ಇದನ್ನೂ ಓದಿ: Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್​ನಿಂದ ಪಾರಾಗುವುದು ಹೇಗೆ?

ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಎಳೆ ಪ್ರಾಯದ ಹೃದಯಘಾತ ಪ್ರಕರಣ‌ ಹೆಚ್ಚುತ್ತದೆ. ಹೃದಯಾಘಾತಕ್ಕೆ ಬೇರೆ ಬೇರೆ ಕಾರಣಗಳು ಇರುತ್ತದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಬಿಪಿ, ಶುಗರ್ ಹೆಚ್ಚಾಗಿ ಬಾಧಿಸುತ್ತಿದೆ. ಜಂಕ್ ಫುಡ್, ಸಂಸ್ಕರಣೆ ಆದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಯುವಕರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ. ಆಹಾರ, ಸಿಹಿ ಪದಾರ್ಥ ಮಾಲಿನ್ಯದಿಂದ ಹೃದಯಾಘಾತ ಬರುವ ಸಾಧ್ಯತೆ ಹೆಚ್ಚು ಎಂದರು.

ಕೋವಿಡ್ ವ್ಯಾಕ್ಸಿನ್ ಬಗ್ಗೆ ಸಂಶಯ ಪಡುವವರು ತುಂಬಾ ಜನ ಇರುತ್ತಾರೆ. ಆದರೆ ಅಧಿಕೃತ ಆದಂತಹ ಯಾವುದೇ ವರದಿಗಳು ಇಲ್ಲ. ಕೋವಿಡ್ ಬಂದವರಿಗೆ ಸಮಸ್ಯೆ ಇರುತ್ತದೆ, ಆದರೆ ವ್ಯಾಕ್ಸಿನ್​ನಿಂದ ಅಲ್ಲ. ಕೋವಿಡ್ ಆಫ್ಟರ್ ಎಫೆಕ್ಟ್ ಹೃದಯಾಘಾತ ಆಗಬಹುದು. ಸುಸ್ತು ಮೈಕೈ ನೋವು ಸಮಸ್ಯೆಗಳು ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Sat, 10 February 24

ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ