AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row: ಮಾ.9ಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ, ಹೋಳಿಯ ನಂತರ ಹಿಜಾಬ್ ವಿಚಾರಣೆ ಎಂದ ಸುಪ್ರೀಂ

ಹಿಜಾಬ್ ವಿಚಾರವಾಗಿ ನಡೆಯುತ್ತಿರುವ ಗೊಂದಲದಿಂದ ಹಾಗೂ ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿಗಳಿಗೆ ಹೋಳಿಯ ನಂತರ ಈ ಬಗ್ಗೆ ವಿಚಾರ ನಡೆಸುದಾಗಿ ಸುಪ್ರೀಂ ಹೇಳಿದೆ.

Hijab Row: ಮಾ.9ಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ, ಹೋಳಿಯ ನಂತರ ಹಿಜಾಬ್ ವಿಚಾರಣೆ ಎಂದ ಸುಪ್ರೀಂ
ಸುಪ್ರೀಂಕೋರ್ಟ್​
TV9 Web
| Edited By: |

Updated on:Mar 03, 2023 | 1:35 PM

Share

ದೆಹಲಿ: ಹಿಜಾಬ್ (Hijab) ವಿಚಾರವಾಗಿ ನಡೆಯುತ್ತಿರುವ ಗೊಂದಲದಿಂದ ಹಾಗೂ ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿಗಳಿಗೆ ಹೋಳಿಯ ನಂತರ ಈ ಬಗ್ಗೆ ವಿಚಾರ ನಡೆಸುದಾಗಿ ಸುಪ್ರೀಂ ಹೇಳಿದೆ. ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯುವಂತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ, ಆದರೆ ಈ ಬಗ್ಗೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಅಸಮಾಧನವಿದ್ದು, ಸುಪ್ರೀಂ ಮೊರೆ ಹೋಗಿದ್ದಾರೆ, ಆದರೆ ಇನ್ನೂ 5 ದಿನ ಒಳಗೆ ಅಂದರೆ ಮಾ.9ಕ್ಕೆ ಪರೀಕ್ಷೆಗಳಿದ್ದು ಹಿಜಾಬ್ ಧರಿಸಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಪರೀಕ್ಷೆಯಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಹಾಜರಾಗಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪೀಠ ರಚಿಸಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ, ಈ ವಿಷಯವನ್ನು ಹೋಳಿ ನಂತರ ವಿಚಾರಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ ಎಂದು ಎಎನ್‌ಐ ವರದಿ ಮಾಡಿದೆ.

ವಿಷಯ ಆಲಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, ಹೋಳಿ ನಂತರ ಕೂಡಲೇ ವಿಚಾರಣೆ ಮಾಡುವುದಾಗಿ ಹೇಳಿದರು. ಅರ್ಜಿಯ ಪರ ವಾದ ಮಂಡಿಸಿದ ವಕೀಲರು, ಐದು ದಿನಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಪರೀಕ್ಷೆಯ ಕೊನೆ ದಿನ ಇರಬೇಕಾದರೆ ಯಾಕೆ ಈಗ ಬಂದಿದ್ದೀರಾ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳ ಪರ ವಕೀಲರು, ಫೆಬ್ರವರಿಯಲ್ಲೂ ವಿಷಯ ತಿಳಿಸಲಾಗಿದ್ದು, ಹತ್ತು ದಿನಗಳ ಹಿಂದಷ್ಟೇ ಬಂದಿದ್ದೇವೆ ಎಂದರು. ಪರೀಕ್ಷೆಗಳು ಮತ್ತು ಅದರ ಸುತ್ತಲಿನ ಅನಿಶ್ಚಿತತೆಯ ಬಗ್ಗೆ ಅವರು ನ್ಯಾಯಾಲಯವನ್ನು ಕೇಳಿದರು. ಇದಕ್ಕೆ ಸಿಜೆಐ ಅವರು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಹೋಳಿ ಮುಗಿದ ತಕ್ಷಣ ಪಟ್ಟಿ ಮಾಡಲಾಗುವುದು ಎಂದರು.

ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ; ಮುಸ್ಲಿಂ ಸಂಘಟನೆಗಳು ಸರ್ಕಾರಕ್ಕೆ ಮನವಿ

ಬಾರ್ ಬೆಂಚ್ ಪ್ರಕಾರ, ಕರ್ನಾಟಕದಲ್ಲಿ 5 ದಿನಗಳ ನಂತರ ಮಾರ್ಚ್ 9 ರಂದು ನಡೆಯುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಹಾಜರಾಗಲು ಅನುಮತಿ ಕೋರಿ ಶರಿಯತ್ ಸಮಿತಿಯು ಮನವಿ ಸಲ್ಲಿಸಿದೆ. ಇದಕ್ಕೂ ಮುನ್ನ ಫೆ.22ರಂದು ವಿದ್ಯಾರ್ಥಿಗಳ ಪರವಾಗಿ ವಾದ ಮಂಡಿಸಿದ ವಕೀಲ ಶದನ್ ಫರಾಸತ್ ಅವರು, ಮಾರ್ಚ್ 9ರಿಂದ ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಸಲ್ಲಿಸಿದರು. ನ್ಯಾ.ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠ, ‘ಅವರಿಗೆ ಪರೀಕ್ಷೆ ಬರೆಯದಂತೆ ಏಕೆ ತಡೆಯಲಾಗಿದೆ’ ಎಂದು ವಕೀಲರನ್ನು ಪ್ರಶ್ನಿಸಿತು. ಐಎಎನ್‌ಎಸ್ ವರದಿಯ ಪ್ರಕಾರ, ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳ ಪರ ವಕೀಲರು ಈ ವಿಚಾರಚಾಗಿ ವಿದ್ಯಾರ್ಥಿಗಳು ಈಗಾಗಲೇ ಒಂದು ವರ್ಷ ಕಳೆದಿದ್ದಾರೆ. ಈಗ ಮತ್ತೆ ಹೀಗಾದರೆ ಇನ್ನೊಂದು ವರ್ಷ ಕಳೆಬೇಕಾಗುತ್ತದೆ ಎಂದು ಹೇಳಿದರು.

ವರದಿಯ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಪೂರ್ವ ವಿಶ್ವವಿದ್ಯಾಲಯದ ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಧರಿಸಿರುವ ಹಿಜಾಬ್‌ನ ಮೇಲಿನ ನಿಷೇಧದ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳ ಮೇಲೆ ವಿಭಜಿತ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ವಿಭಜನೆಯ ತೀರ್ಪು ನೀಡಿದೆ.

Published On - 1:35 pm, Fri, 3 March 23