AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Facebook Live | ಯಡಿಯೂರಪ್ಪ ಮಂಡನೆ ಮಾಡಿದ ಮುಂಗಡಪತ್ರದಲ್ಲಿ ಜನ ಸಾಮಾನ್ಯರಿಗೆ ಏನಿದೆ?

Karnataka Budget 2021: ನಿರ್ಭಯಾ ಯೋಜನೆ ತುಂಬಾ ಖುಷಿ ಅನಿಸಿತು. ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ನಿರ್ಭಯಾ ಯೋಜನೆಯಡಿ ಎಲ್ಲ ಕಡೆ ಸಿಸಿಟಿವಿ ಸೌಲಭ್ಯ ಕೊಡ್ತೀನಿ ಅಂದಿದ್ದು ಖುಷಿ ಕೊಟ್ಟಿದೆ

Tv9 Facebook Live | ಯಡಿಯೂರಪ್ಪ ಮಂಡನೆ ಮಾಡಿದ ಮುಂಗಡಪತ್ರದಲ್ಲಿ ಜನ ಸಾಮಾನ್ಯರಿಗೆ ಏನಿದೆ?
ಫೇಸ್ ಬುಕ್ ಲೈವ್ ನಲ್ಲಿ ಭಾಗವಹಿಸಿದ ಅತಿಥಿಗಳು
ರಶ್ಮಿ ಕಲ್ಲಕಟ್ಟ
| Edited By: |

Updated on: Mar 08, 2021 | 6:46 PM

Share

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಕರ್ನಾಟಕದ 2021-22ರ ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ಇದು ಅವರ ಎಂಟನೇ ಬಜೆಟ್​. ಈ ಮುಂಗಡಪತ್ರದಲ್ಲಿ ಸಾಮಾನ್ಯ ಜನರಿಗೆ ಏನಿದೆ ಎಂಬ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಸಂವಾದ ನಡೆಸಿತು. ಆ್ಯಂಕರ್​ ಹರಿಪ್ರಸಾದ್​ ಈ ಚರ್ಚೆಯನ್ನು ನಡೆಸಿಕೊಟ್ಟರು. ಮಹಿಳಾ ಉದ್ಯಮಿ ಅಶ್ವಿನಿ ಅನ್ವೇಕರ್, ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್.ಬಂಗೇರ, ಗೃಹಿಣಿ ದೀಪಿಕಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

2021-22ರ ಸಾಲಿನ ಬಜೆಟ್ ಬಗ್ಗೆ ಮಾತನಾಡಿದ ಬಂಗೇರಾ ಅವರು ಈ ಬಜೆಟ್ ಚೆನ್ನಾಗಿದೆ ಎಂದು ಸಮರ್ಥಿಸಿಕೊಂಡರು. ಈ ಬಜೆಟ್ ಸರ್ವವ್ಯಾಪಿ ಸರ್ವಸ್ಪರ್ಶಿ ಆಗಿದೆ. ಕೃಷಿ, ಆರೋಗ್ಯ, ಶಿಕ್ಷಣ ವಲಯ, ನಿಗಮಗಳಿಗೆ, ಮಠಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಪೀಣ್ಯ ಟೌನ್​ಶಿಪ್​ಗೆ ₹ 100 ಕೋಟಿ ಮೀಸಲಿಟ್ಟಿದ್ದಾರೆ. ಕೈಗಾರಿಕೆಗಳಿಗೆ ಒತ್ತು ಕೊಟ್ಟಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಆರೋಗ್ಯ , ಮಹಿಳೆಯರಿಗೆ ವಿಶೇಷ ಸ್ಥಾನಮಾನ. 60 ಸಾವಿರ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕೃಷಿ ಕಾಯ್ದೆ ಜಾರಿಗೆ ಬರುವ ಮುನ್ನ ಎಪಿಎಂಸಿ ಗಟ್ಟಿ ಮಾಡಲು ಪ್ರಯತ್ನಿಸಿದ್ದಾರೆ. ಯಾವುದೇ ತೆರಿಗೆ ಹೆಚ್ಚಿಸಿಲ್ಲ. ಕೈಗಾರಿಕೆಗೆ ಉತ್ತೇಜನ ಕೊಡುವುದಕ್ಕೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ ಎಂದರು.

ಬಜೆಟ್​ನಲ್ಲಿ ಮಹಿಳೆಯರಿಗೆ ನೀಡಿರುವ ಆದ್ಯತೆ ಕುರಿತು ಪ್ರತಿಕ್ರಿಯಿಸಿದ ದೀಪಿಕಾ, ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು ಖುಷಿ ಕೊಟ್ಟಿತು. ಸಾಲ ತೆಗೆದುಕೊಳ್ಳುವುದು ಸುಲಭವಲ್ಲ . ಅದು ಗ್ರಾಹಕ ಸ್ನೇಹಿ ಅಲ್ಲ. ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು. ಎಂಎಸ್​ಎಂಇ ಸಾಲ ತೆಗೆದುಕೊಳ್ಳಲು ಪ್ರಾಜೆಕ್ಟ್ ರಿಪೋರ್ಟ್ ತನ್ನಿ ಅಂತಾರೆ. ಟ್ರೈನಿಂಗ್ ತಗೊಳ್ಳುವುದು, ಆಮೇಲೆ ಸರ್ಟಿಫಿಕೇಟ್ ತೆಗೆದುಕೊಳ್ಳುವುದು ಇವೆಲ್ಲ ಪ್ರಕ್ರಿಯೆ ಇರುತ್ತದೆ. ಬಜೆಟ್​ನಲ್ಲಿ ಘೋಷಿಸಿದ ಯೋಜನೆಗಳು ಬಹುತೇಕ ಜಾರಿಗೆ ಬರುವುದಿಲ್ಲ. ಈ ಯೋಜನೆಗಳ ಲಾಭ ಪಡೆಯಬೇಕು ಎಂದಾದರೆ ಬ್ಯಾಂಕ್ ಟು ಬ್ಯಾಂಕ್ ಒಡಾಡಿಸ್ತಾರೆ. ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಮ್ಯಾನೇಜರ್ ಮಟ್ಟಕ್ಕೆ ಇದು ತಲುಪಲ್ಲ. ಕಲಿತವರಿಗೆ ಹೀಗೆ ಆದರೇ ಬಾಕಿ ಉಳಿದವರು ಏನು ಮಾಡ್ತಾರೆ . ಹೀಗಿರುವಾಗ ಮಹಿಳಾ ಉದ್ಯಮಿಗಳು ಹೇಗೆ ಮುಂದುವರಿಯುವುದು? ಈ ಬಜೆಟ್ ಬಗ್ಗೆ ಸಮಾಧಾನ ಇದೆ. ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಗೊತ್ತಿಲ್ಲ ಎಂದರು.

ಮಹಿಳೆಯರಿಗೆ ಸಾಲ ನೀಡುವ ಯೋಜನೆಗಳ ಬಗ್ಗೆ ಮಾತನಾಡಿದ ಬಂಗೇರಾ, ಮಹಿಳೆಯರ ದುಡ್ಡು ಬ್ಯಾಂಕ್​ಗೆ ಬರುವುದಿಲ್ಲ ಇದು ಕೆಎಸ್​ಎಫ್​ಸಿಗೆ ಬರುತ್ತದೆ . ಕೆಎಸ್​ಎಫ್​ಸಿಯಲ್ಲಿ ದುಡ್ಡು ಇಟ್ಟು ಅಲ್ಲಿಂದ ಮಹಿಳೆಯರಿಗೆ ಕೊಡಬೇಕಿದೆ. ಅದರಲ್ಲಿ ಶೇ 30 ಬೀಜಧನ ತೆರಬೇಕಾಗುತ್ತದೆ. ಉಳಿದ ಶೇ 70 ಅವರು ಕೊಡುತ್ತಾರೆ. ಎಂಎಸ್ಎಂಇ ಯೋಜನೆ ಮೊದಲೂ ಇತ್ತು . ಶೇ 30ರಷ್ಟು ಬೀಜಧನ ತರುವುದು ಕಷ್ಟ. ಎಲ್ಲ ಎಂಎಸ್ಎಂಇಗಳಿಗೆ ಆಗಲ್ಲ. ಹಾಗಾಗಿ ಅದನ್ನು ಶೇ 10ಕ್ಕೆ ತರಬೇಕು ಎಂಬುದು ನನ್ನ ಒತ್ತಾಯ. ಇದರಿಂದ ಸಾಕಷ್ಟು ಮಹಿಳೆಯರು ಸಣ್ಣ ಉದ್ಯಮ ಮಾಡುವುದಕ್ಕೆ ಅವಕಾಶ ಆಗುತ್ತದೆ. ಗಾರ್ಮೆಂಟ್ಸ್, ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಬಸ್​ಪಾಸ್ ನೀಡುವುದಾಗಿ ಹೇಳಲಾಗಿದೆ. ಪಾಸ್​ನಲ್ಲಿ ರಿಯಾಯಿತಿ ಕೊಡುವುದಾಗಿ ಹೇಳಿದ್ದಾರೆ. ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಿಸಿದ್ದರೆ ಅದನ್ನು ಅವಲೋಕನ ಮಾಡಬೇಕು. ಮೂರು ತಿಂಗಳಿಗೊಮ್ಮೆಯಾದರೂ ಈ ಘೋಷಣೆಗಳನ್ನು ಅವಲೋಕನ ಮಾಡಬೇಕು. ಮಾಧ್ಯಮಗಳು ಈ ರೀತಿ ಅವಲೋಕನ ಮಾಡಿ ಅದನ್ನು ಅಧಿಕಾರದಲ್ಲಿರುವವರೆಗೆ ಮುಟ್ಟಿಸಬೇಕು. ರಾಜಕಾರಣಿಗಳ ಕಿವಿಗೆ ಇದು ತಲುಪಬೇಕು. ನಾವು ಯೋಜನೆಗಳನ್ನು ಜಾರಿಗೆ ತರಲು ಒತ್ತಾಯಿಸಬೇಕು. ತೆರಿಗೆ ಜಾಸ್ತಿ ಬರಬೇಕು ಎಂದಾದರೆ ಉತ್ಪಾದನೆಗಳು ಜಾಸ್ತಿ ಆಗಬೇಕು. ಉತ್ಪಾದನೆ ಜಾಸ್ತಿ ಆಗಬೇಕು ಎಂದರೆ ಅದಕ್ಕೆ ಬೇಕಾದ ಪೂರಕ ಕೆಲಸ ಕಾರ್ಯಗಳು ಆಗಬೇಕು. ಮೂಲ ಸೌಕರ್ಯ ಅಭಿವೃದ್ಧಿ ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಆಗಿದೆ

ಮಹಿಳೆಯರಿಗೆ ಶೇ 4 ಬಡ್ಡಿದರದಲ್ಲಿ ಸಾಲ ನೀಡುವ ಬಜೆಟ್ ಘೋಷಣೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅಶ್ವಿನಿ ಅವರು ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು 4 ಬಡ್ಡಿದರದಲ್ಲಿ ಸಾಲ ಕೊಡುತ್ತೇನೆ ಅಂದಿದ್ದು ಖುಷಿಯಾಗಿದೆ. ಹುಬ್ಬಳ್ಳಿಯಲ್ಲಿಯೂ ಮಹಿಳಾ ನೌಕರರು ಇದ್ದಾರೆ. ಆದರೆ ಬಿಎಂಟಿಸಿ ಪಾಸ್ ಅನುಕೂಲ ಮಾಡಿಕೊಟ್ಟಿದ್ದು ಬೆಂಗಳೂರಿನವರಿಗೆ. ನಮ್ಮ ಕಡೆಗೆ ಅದನ್ನು ಕೊಟ್ಟಿಲ್ಲ ಎಂದು ಬೇಜಾರಾಗಿದೆ. ಬಜೆಟ್ ಎಂದು ಹೇಳುವಾಗ ರಾಜ್ಯದ ಹಿತ ದೃಷ್ಟಿಯಿಂದ ನೋಡಬೇಕು. ಬೆಂಗಳೂರನ್ನು ಮಾತ್ರ ಕೇಂದ್ರೀಕೃತವಾಗಿ ನೋಡುವುದು ಸರಿಯಲ್ಲ. ಉತ್ತರ ಕರ್ನಾಟಕದಲ್ಲಿ ಅಂಥ ಸೌಲಭ್ಯಗಳನ್ನು ಕೊಟ್ಟಿಲ್ಲ. ಮಹಿಳಾ ಉದ್ಯಮಿಗಳಿಗೆ 2 ಕೋಟಿಯಷ್ಟು ಸಾಲ ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ. ಅದು ಹೇಗೆ ಬರುತ್ತೆ? ಎಷ್ಟು ಜನರಿಗೆ ಸಿಗುತ್ತೆ ಎನ್ನುವ ಸ್ಪಷ್ಟತೆ ನಮಗೆ ಸಿಕ್ಕಿಲ್ಲ ಎಂದರು.

ನಿರ್ಭಯಾ ಯೋಜನೆ ತುಂಬಾ ಖುಷಿ ಅನಿಸಿತು. ಮಹಿಳೆಯರು ಹೊರಗೆ ಕೆಲಸಕ್ಕೆ ಹೋಗುತ್ತಾರೆ. ನಿರ್ಭಯಾ ಯೋಜನೆಯಡಿ ಎಲ್ಲ ಕಡೆ ಸಿಸಿಟಿವಿ ಸೌಲಭ್ಯ ಕೊಡ್ತೀನಿ ಅಂದಿದ್ದು ಖುಷಿ ಕೊಟ್ಟಿದೆ. 60 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡುತ್ತೇವೆ ಅಂದಿದ್ದಾರೆ. ಎಷ್ಟು ಜನರಿಗೆ ಇದು ಸಿಗುತ್ತದೆ ಎಂಬುದು ಗೊತ್ತಿಲ್ಲ. ಇಷ್ಟೊಂದು ಉದ್ಯೋಗಾವಕಾಶಗಳು ಇವೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು. ಹಳ್ಳಿಹಳ್ಳಿಗಳಿಗೆ ಈ ಮಾಹಿತಿ, ಸೌಲಭ್ಯ ತಲುಪಬೇಕು ಎಂದರು.

ಇದನ್ನೂ ಓದಿ: Karnataka Budget 2021: ಕೃಷಿ ಮತ್ತು ಪೂರಕ ಚಟುವಟಿಕೆಗೆ ₹ 31,028 ಕೋಟಿ ಅನುದಾನ, ರೈತ ಸಮುದಾಯಕ್ಕೆ ಶಕ್ತಿ ತುಂಬಲು ಹಲವು ಯೋಜನೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್